ಮಂಗಳವಾರ, ಡಿಸೆಂಬರ್ 31, 2013

ಹೊಸ ವರುಷ ಆಗಮನ

ಹಳೇಯ ವರುಷವನ್ನು 
ಹಿಂದೆ ಬಿಟ್ಟು
ಹೊಸ ವರುಷದ
 ಆಗಮನಕ್ಕೆ
 ಎಲ್ಲರಿಗೂ ಹೊಸತನ್ನು ನೀಡಲಿ
 ಎಂದು ಬಯಸುವ 
ಹಾಗೂ 
ನಿರಂತರ ಹೊಸತನ್ನೇ 
ಯೋಚಿಸುವ, ಸಾಧಿಸುವ 
ಹಾದಿ ನಿಮ್ಮದಾಗಲಿ 
ಎಂದು ಹಾರೈಸುತ್ತೇವೆ. 


ವನ್ಯ ಜೀವಿಗಳಿಗೆ ನಮ್ಮ ಪತ್ರ

೨೦೧೨ ರಲ್ಲಿ ನಮ್ಮ ವನ್ಯ ಜೀವಿಗಳು ನೀಡಿದ ಸಂದೇಶಗಳಿಂದಾಗಿ ನಾವು ನಮ್ಮ ಶಾಲೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆ ನಡೆಸಿ, ಸದ್ಯ ನಾವು ನಮ್ಮ ಶಾಲೆಯ ಗಿಡ-ಮರಗಳಲ್ಲಿ ನೀರಿನ ಬಟ್ಟಲುಗಳನ್ನು, ಕಾಳುಗಳನ್ನು ತಮಗಾಗಿ ಮೀಸಲು ಇಟ್ತಿದ್ದೇವೆ. ನಮ್ಮ ಊರಿನ ಹಿರಿಯ ಧರ್ಮಪ್ಪಜ್ಜ ಯಾವಾಗಲೂ ಅತ್ಯಂತ ಖಾಳಜಿಯಿಂದ ನೀರನ್ನು ವಿನಿಯೋಗಿಸಲು ಅವು ಸಣ್ಣ ಸಣ್ನ ಸಸಿಗಳಿಗೆ ಹಾಕುತ್ತಾ ಸೂಕ್ಷ್ಮತೆಯನ್ನು ವಹಿಸುತ್ತಿದ್ದಾನೆ. ನಮ್ಮನ್ನು ನಾವು ಇದರಲ್ಲಿ ತೊಡಗಿಸಿಕೊಂಡಿದ್ದೇವೆ. 


                                                                                                                      ಇಂತಿ ನಿಮ್ಮ 
                                                                                                                    ಶಾಲಾ ಮಕ್ಕಳು


ನೀರು

ಮಂಡ ನೆ : ಕುಮಾರಿ ಭಾಗ್ಯ
ವಿಷಯ : ನೀರು
ತರಗತಿ ಗೋಷ್ಠಿ - ೦೬

                     ನಾವು ನಮ್ಮ ಶಾಲೆಯ ಪಠ್ಯಗಳಲ್ಲಿ, ಶಿಕ್ಷಕರು ಪಾಠಗಳಲ್ಲಿ ಹೇಳಿದಂತೆ ನಮಗೆ ನೀರು ದ್ರವ ರೂಪದಲ್ಲಿ ಇದೆ ಎನ್ನುವುದನ್ನು ನಾವೆಲ್ಲ ಅಭ್ಯಾಸ ಮಾಡಿದ್ದೇವೆ. ನೀರು ಪ್ರತಿಯೊಬ್ಬ ಮನುಷ, ಪ್ರಾಣಿ, ಪಕ್ಷಿ, ಗಿಡ-ಮರಗಳಿಂದ ಹಿಡಿದು ಎಲ್ಲವುಅದಕ್ಕೂ ನೀರು ಅತ್ಯಂತ ಅವಶ್ಯಕ. ನೀರಿಲ್ಲದೆ ಯಾರು ಬದುಕೋದಕ್ಕೆ ಆಗುವುದೇ ಇಲ್ಲ. ಮಳೆಯ ಕಾರಣ ಭೂಮಿಗೆ ಬರುವ ನೀರು ಕೆರೆ, ಭಾವಿ, ಹಳ್ಲ, ಕೊಳ್ಳಗಳ ಮಖಾಂತರ ಮತ್ತೇ ಹಾವಿಯಾಗಿ ಮೋಡವಾಗಿ ಸಾಗಿ ಮಳೆಯನ್ನು ಸುರಿಸುತ್ತದೆ. ಇದು ನಿರಂತರ ಪ್ರಕ್ರಿಯೆ. ನೀರು ಇಲ್ಲದೆ ಬದುಕುವುದೇ ಕಷ್ಟ. ಮಳೆ ಬರದೇ ಇದ್ದಾಗ ನಮ್ಮ ಊರಲ್ಲಿ ಗುರ್ಜಿ ಹಾಕುತ್ತಾರೆ. ಇದು ನಮ್ಮ ಜನರ ನಂಬಿಕೆಯಿಂದ ಮಳೆ ಬರಬಹುದು ಎಂಬ ಕಾರಣವು ಆಗಿದೆ.

ಶಿಕ್ಷಣ

ಮಂಡನೆ : ಕುಮಾರ ಅಮರೇಶ
ವಿಷಯ : ಶಿಕ್ಷಣ
ತರಗತಿ ಗೋಷ್ಠಿ - ೦೫

                      ಮಂಗನಿಂದ ಮಾನವನಾದ ಎಂದು ನಾವು ಇಂದು ನಮ್ಮ ಪಠ್ಯಗಳಲ್ಲಿ ಸಾಕಷ್ಟು ಬಾರಿ ಓದಿ ಅದನ್ನೇ ಪರೀಕ್ಷೆಗಳಲ್ಲಿ ಬರೆದು ಇದ್ದೇವೆ. ಹೌದು ನಾವು ಈ ನಮ್ಮ ಶಿಕ್ಷಣ ಪಡೆಯುವುದರ ಮುಖಾಂತರ ಅಂದು ಮಂಗನಿಂದ ಪ್ರಾರಂಭವಾಗಿದ್ದು ಇಂದು ಮಂಗಳಯಾನಕ್ಕೆ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಣ ಪ್ರತಿಯೊಬ್ಬರಿಗೂ ಮುಖ್ಯವಾಗಿ ಮೂಲವಾಗಿ ಬೇಕು. ಶಿಕ್ಷಣದಿಂದಾಗಿ ನಾವು ಎಲ್ಲರು ಒಂದೆಡೆ ಕುಳಿತು ಕಲಿಯುವುದರ ಜೊತೆಗೆ, ಬೇರೆ ಬೇರೆ ಭಾಷೆಗಳ ಕಲಿಯುವಿಕೆಯಿಂದಾಗಿ ಜಗತ್ತಿನೊಡನೆ ನಮ್ಮನ್ನು ನಾವು ಹಂಚಿಕೊಳ್ಳುವ ಪ್ರಸಂಗ ಒದಗಿ ಬಂದಿದೆ. ಶಿಕ್ಷಣ ಶಿಕ್ಷಣದ ಕುರಿತು ಇನ್ನೂ ಸಾಕಷ್ಟು ವಿಚಾರಗಳನ್ನು ನಾವು ನಮ್ಮ ಕಲಿಯುವಿಕೆಯಿಂದ ಪಡೆಯಬಹುದಾಗಿದೆ.

ಮೂಢನಂಬಿಕೆ

ತರಗತಿ ಗೋಷ್ಠಿ - ೦೪
ವಿಷಯ : ಮೂಢನಂಬಿಕೆ
ಮಂಡನೆ : ಕುಮಾರ ಶಶಿಧರ

           ಮೂಢನಂಬಿಕೆ ನಾವು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾನೂ ಹೆಚ್ಚು ಆಚರಿಸುವಂಥ ಪದ್ಧತಿಗಳಾಗಿವೆ. ನಾವು ಯಾವುದೇ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂತು ಅಂತಾಂದರೆ,  ಹಲ್ಲಿ ಲೊಚಗುಟ್ಟಿದಾಗ, ಬಲ-ಎಡ ಕಣ್ಣು ಹಾರಿದಾಗ ಹೀಗೆ ನಾವು ಕಾರ್ಯದ ಕುರಿತು ಯೋಚಿಸದೆ ಅಯ್ಯೋ ಏನೋ ಆಗಿ ಹೋಗುತ್ತದೆ ಎಂಬ ಭಯದಲ್ಲಿ ನಮ್ಮ ಗುರಿಗಳತ್ತ ಗಮನವನ್ನೇ ನೀಡುವುದಿಲ್ಲ.

ಸಕಾಲ - ಜಹಗೀರಗುಡದೂರ


ಸಕಾಲ - ಪ್ರೌಢಶಾಲಾ ಮಕ್ಕಳಿಗಾಗಿ ಈ ಬಾರಿ ಪ್ರತಿಭಾ ಕಾರಂಜಿಯಲ್ಲಿ  ಸಕಾಲ ಕುರಿತು ನಾಟಕಗಳ ಸ್ಪ್ರರ್ದೆಗಳು.






ಆ ದಿನದ ನೆನಪು ....




                ೧-೧೦-೨೦೧೩ ರಂದು ನಡೆದ ನಮ್ಮ ಪ್ರೌಢಶಾಲೆಯ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಗಣ್ಯವ್ಯಕ್ತಿಗಳಿಂದ ಭಾಷಣ/ಚರ್ಚೆ/ಮಂಥನ ನಡೆದವು. ನಂತರ ಸಾಂಯಕಾಲ ೪.೦೦ ಘಂಟೆಗೆ ಶಾಲೆಯಿಂದ ಊರಿನಡೆಗೆ ಹೊರಟ ಮೆರವಣಿಗೆಯಲ್ಲಿ ಬಾಲಕಿಯರ ಡೊಳ್ಳುಕುಣಿತ ಹಾಗೂ ಗ್ರಾಮದ ಯುವಕರಿಂದ ಹೆಜ್ಜೆಕುಣಿತ ಮೆರವಣಿಗೆಯಲ್ಲಿ ಗಮನ ಸೆಳೆದವು. 

                   ನಂತರ ೭.೦೦ ಘಂಟೆಗೆ ವರ್ಷ ಪೂರ್ತಿ ನಡೆಸಿದ ಸಾಂಸ್ಕೃತಿಕ ವಿಷಯಗಳನ್ನು ಛಾಯಚಿತ್ರಗಳನ್ನು ಜನರಿಗೆ ಪ್ರದರ್ಶನವನ್ನಿಟ್ಟು ೨೫ ನಿಮಿಷದ ಮಕ್ಕಳ ಕಲಿಕೆಯ ಸಾಕ್ಷ್ಯಚಿತ್ರವನ್ನು ತೋರ್ಪಡಿಸಿದರು. ಇದು ನಮಗೆ ಹೆಮ್ಮೆಯ ವಿಷಯವಾಗಿತ್ತು. ಹಾಗೆ "ನಮ್ಮೂರ ಹಬ್ಬ" ನಾಟಕದ ಮೂಲಕ ಮೊಹರಂನ್ನು ನೆನಪಿಸುವಂತೆ ವಿದ್ಯಾರ್ಥಿಗಳು ಕಲಾ ಪ್ರದರ್ಶನವನ್ನು ನೈತಿಕ ಜೀವನದಂತೆ ನಟಿಸಿದರು. ಈ ನಾಟಕಕ್ಕೆ ವಿಷಯ ಸಂಗ್ರಹಣೆ ಮಾಡಿ ನಿರ್ದೇಶಿಸಿದ ಶಿಕ್ಷಕರ ಪಾತ್ರ ಮಹತ್ವದ್ದಾಗಿತ್ತು.

                   ಆ ಕಾರ್ಯಕ್ರಮದಲ್ಲಿ ಶ್ರೀಮತಿ ಅನುಪಮಾ ಪ್ರಕಾಶರವರು ನಮ್ಮೂಎಇನ ಚಿಕ್ಕ ಮಕ್ಕಳೊಂದಿಗೆ ಕುಳಿತುಕೊಂಡು ಮಾತನಾಡುವುದು ತುಂಭಾ ಆಶ್ಚರ್ಯಕರ ಸಂಗತಿಯಾಗಿತ್ತು. ಕೆಲವು ಸಮಯ ಮಳೆರಾಯನ ಆರ್ಭಟದಿಂದ ಕಾರ್ಯಕ್ರಮ ಅಸ್ಥವ್ಯಸ್ಥವಾಗಿತ್ತು. ಇದರಿಂದ ಜನರಲ್ಲಿ ಗೊಂದಲವಾಗಿ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಯಿತು. ಇದು ನಾಟಕ ಶಿಕ್ಷಕರಾದ ಗುರುರಾಜ ಗುರುಗಳಿಗೆ ಬೇಸರವಾದ ಸಂಗತಿಯಾದರು ಕಾರ್ಯಕ್ರಮ ತುಂಭಾ ಅಚ್ಚುಕಟ್ಟಾಗಿ ನೆರವೇರಿತು. ಆಸೆಗಳು ನೂರಾರಿದ್ದು ನೆರವೇರಿಸುವ ಶಕ್ತಿಯಾದ ಶಿಕ್ಷಕ ವೃಂದಕ್ಕೆ ನಾವು ಯಾವಾಗಲು ಚಿರರುಣಿ.

ಧನ್ಯಾವಾದಗಳೊಂದಿಗೆ.

                                                                                                        ಕುಮಾರ ಯಮನೂರಪ್ಪ ಗಂಗೂರ
                                                                                                                            ಹಳೇ ವಿದ್ಯಾರ್ಥಿ

ಶುಕ್ರವಾರ, ಡಿಸೆಂಬರ್ 13, 2013

ಹೈದ್ರಾಬಾದ್ ಕರ್ನಾಟಕ

ಮಂಡನೆ : ಕುಮಾರಿ ಜಯಶ್ರೀ
ವಿಷಯ : ಹೈದ್ರಾಬಾದ್ ಕರ್ನಾಟಕ
ತರಗತಿ ಗೋಷ್ಠಿ - ೦೩

                 ಹೈದ್ರಾಬಾದ್ ಕರ್ನಾಟಕ ವಿಶೇಷ ತಿದ್ದುಪಡಿ ಕಲ್೦ ೩೭೧ ಜೆ ತಿದ್ದುಪಡಿ ನಮ್ಮ ಉತ್ತರದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರ್, ಯಾದಗಿರಿ, ಬಳ್ಳಾರಿ ಹಾಗೂ ಕೊಪ್ಪಳಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾನಗಳೇನು ಇದ್ದವು ಅವು ಸ್ವಾತಂತ್ರ್ಯ ಭಾರತದಲ್ಲಿ ಒಂದಾದಾಗ ಹೈದ್ರಾಬಾದನ ನಿಜಾಮರೌ ವಿಲೀನಕ್ಕೆ ಒಪ್ಪಲಿಲ್ಲ. ತದ ನಂತರ ಉಕ್ಕಿನ ಮನುಷ್ಯ ಎಂದೇ ಕರೆಯಿಸಿಕೊಳ್ಳುವ ಸರ್ದಾರ್ ವಲ್ಲಭಬಾಯಿ ಪಾಟೇಲ್ ಅವರ ಆಗಮನದಿಂದ ವಿಲೀನಕ್ಕೆ ಒಪ್ಪಿ ಸ್ವಾತಂತ್ರ ಭಾರತದಲ್ಲಿ ಒಂದಾಯಿತು. ಆದರೆ ಕರ್ನಾಟಕ ರಾಜ್ಯದಲ್ಲಿ ಹಿಂದಿನಿಂದಲೂ ಅತ್ಯಂತ ಕಡೇಯ ಸ್ಥಾನದಲ್ಲಿ ಇದ್ದು ಬಂದಿರುವ ನಮ್ಮ ಈ ಭಾಗ ಹಲವಾರು ಹೋರಾಟಗಳಿಂದ ಸ್ಥಾನಮಾನ ಪಡೆಯಿತು ನಿಜ ಆದರೆ ಅಷ್ಟೇ ಕಾರ್ಯ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು, ನಾವು - ನೀವು ಎಲ್ಲರೂ ಶ್ರಮ ವಹಿಸಬೇಕು. ಹೀಗಾದಾಗ ಮಾತ್ರ ನಮ್ಮ ಭಾಗ ಹಿಂದೆಯಲ್ಲ ಮುಂದೆ ಬರಲು ಸಾಧ್ಯ.

ಮಂಗಳವಾರ, ಡಿಸೆಂಬರ್ 10, 2013

ಮಕ್ಕಳ ಕಾವ್ಯ

ಮಂಡ ನೆ : ಕುಮಾರ ಮಂಜುನಾಥ
ವಿಷಯ : ಮಕ್ಕಳ ಕಾವ್ಯ
ತರಗತಿ ಗೋಷ್ಠಿ - ೦೨

ಮಕ್ಕಳ ಕಾವ್ಯದ ಕುರಿತು ನಾನು ತಿಳೀಯಲು ಬಯಸಿದಾಗ ನಮ್ಮ ಕನ್ನಡದಲ್ಲಿ ಎಷ್ಟೇ ಪುರತನದಿಂದಲೂ ಸಾಹಿತ್ಯ ಬೆಳೆದು ಬಂದರು ಮಕ್ಕಳ ಕಾವ್ಯದ ಮೇಲೆ ಬರೆದಿದ್ದು ಅತ್ಯಂತ ಕಡಿಮೆಯೇ ಎಂದು ಹೇಳಬೇಕಾಗಿ ಬಂದಿದೆ. ಕಾರಣ ಹಿರಿಯರು ಹೇಳುತ್ತಿದ್ದ ಲಾಲಿ ಹಾಡು, ಜೋಗಳಪದಗಳನ್ನು ತಾಯಿಂದರು ತತ್ ಕ್ಷಣಕ್ಕೆ ಹಾಡುತ್ತಿದ್ದರು ಆದರೆ ಅದನ್ನು ರಚಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಎಂಥೆಥ ಹಾಡಗಳನ್ನು ಕಟ್ಟಿ ಹಾಡಿದ ನಮ್ಮ ಹಿರಿಯರು ಮೌಖಿಕಕ್ಕೆ ಮಾತ್ರ ಕಾವ್ಯವನ್ನು ನಿಲ್ಲಿಸಿದರು. ಇದ್ದ ಕೆಲವು ಮಕ್ಕಳ ಕಾವ್ಯಗಳು ಅದ್ಭುತವಾದದ್ದನ್ನು ನಾವು ನಮ್ಮ ಹಿಂದಿನ ಪ್ರಾಥಮಿಕ ಪಠ್ಯಗಳಲ್ಲಿ ಕಾಣುತ್ತೇವೆ. ಗೋವಿನ ಹಾಡು ಎಂದೆಂದು ಮರೆಯುವುದಕ್ಕೆ ಸಾದ್ಯವೇ ಇಲ್ಲ.  

ಕನ್ನಡದಲ್ಲಿ ಮಕ್ಕಳ ಸಾಹಿತ್ಯ

ಮಂಡನೆ : ಕುಮಾರಿ ಶಶಿಕಲಾ
ವಿಷಯ : ಕನ್ನಡದಲ್ಲಿ ಮಕ್ಕಳ ಸಾಹಿತ್ಯ
ತರಗತಿ ಗೋಷ್ಠಿ -೦೧

ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಕುರಿತು ಹೇಳುವುದಾದರೆ ನಮ್ಮ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸುಮಾರು ೨೦೦೦ ವರ್ಷಗಳ ಹಿಂದಿನಿಂದಲೂ ಬೆಳೆದು ಬಂದಿದ್ದೆ ಎಂದು ಇತಿಹಾಸಕಾರರು ಹೇಳುತ್ತಾರೆ. ನಾನು ಓದಿದ , ಕೇಳಿದ್ದು ಸ್ವಲ್ಪನೇ ಆದರೆ ಮಕ್ಕಳ ಸಾಹಿತ್ಯವನ್ನು ಕುರಿತು ಹೇಳುವಾಗ  ನಾವು ನಮ್ಮ ಮನೆಯಿಂದ ಹಿಡಿದು ಯಾವುದೇ ಮನೆಯನ್ನು ಗಮನಿಸಬಹುದು ಮಕ್ಕಳೀಗೆ ಉಟ ಮಾಡಿಸುವಾಗ ಮಗು ಅಳುವಾಗ ತಾಯಿ ಕಥೆಯನ್ನ್ ತನ್ನದೇ ಕಲ್ಪ್ನೆಯಲ್ಲಿ ಕಟ್ಟುತ್ತಾ ಹೋಗುತ್ತಾಳೆ ಅದು ರಂಜನೀಯವಾಗಿ ಮಗುವಿನ ಗಮನವನ್ನು ಸೆಳೆಯಲು ಅದು ಆ ಕಾಲ್ಪನಿಕ ಭಾವದಲ್ಲಿಯೇ ತೇಲಿಸುತ್ತಾ ತನ್ನ ಉಣ್ಣಿಸುವ ಕೆಲಸವನ್ನು ಪೂರೈಸುತ್ತಾಳೆ. ತಾಯಿ ಎಲ್ಲಿ ಕೇಳಿದ್ದಳು, ಕಥೆಗಳನ್ನು ಹೇಗೆ ಸೃಷ್ಟಿದಳು ಎಂದು ನಾವೆಲ್ಲಿಯೂ ಯೋಚಿಸಿಲ್ಲ ಹಾಗೇಯೇ ಅಜ್ಜ-ಅಜ್ಜಿ ಕಥೆಗಳನ್ನು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಇವರೆಲ್ಲರೂ ಶಾಲೆಯೇ ಓದಿರದಿದ್ದಾಗ ಹೇಗೆ ಕಥೆಗಳನ್ನೆಲ್ಲ ಹೇಳುತ್ತಿದ್ದಾರೆ ಎಂಬ ಯೋಚನೆಗಳು ಸಹಜವಾಗಿ ಮೂಡುತ್ತವೆ. 

ಶನಿವಾರ, ಡಿಸೆಂಬರ್ 7, 2013

HEJJEGALU Hejjekunitha video clip

ಸೋಮವಾರ, ಡಿಸೆಂಬರ್ 2, 2013

ಹೊಸ ಸಿ. ಡಿ ಕವರ್ ಪೇಜ್



ಸೋಮವಾರ, ನವೆಂಬರ್ 25, 2013

ಮಕ್ಕಳ ಹೆಜ್ಜೆಗಳು - ಸಾಕ್ಷ್ಯಚಿತ್ರ

ಮುಖಪುಟ

ಹಿಂಪುಟ


ಮಂಗಳವಾರ, ನವೆಂಬರ್ 19, 2013

ಗುಡದೂರಿನ ಮೊಹರಂ ಹಬ್ಬ


     ಮೊಹರಂ ಹಬ್ಬದಲ್ಲಿ  ನಾನು ನಮ್ಮ ಹೊಸಪೇಟೆಯಲ್ಲಿ ಇದ್ದು ರಾತ್ರಿಯೆಲ್ಲ ಗೆಳೆಯರೊಂದಿಗೆ ಊರಲ್ಲಿ ಎಲ್ಲೆಲ್ಲಿ ದೇವರನ್ನು ಕೂಡಿಸಿದ್ದಾರೆ ಅಲ್ಲೆಲ್ಲ ಹೋಗಿ ನಾಲ್ಕು ಹೆಜ್ಜೆ ಹಾಕಿ ಬರುತ್ತಿದ್ದೆವು. ಹಬ್ಬದ ಹಿನ್ನಲೆಯ ಕುರಿತು ಎಂದಿಗೂ ಗಂಭೀರವಾಗಿ ಆಲೋಚಿಸಿಯೇ ಇರಲಿಲ್ಲ. ರಂಗಭೂಮಿಯಲ್ಲಿ ತೊಡಗಿಕೊಂಡರು ಹಬ್ಬವನ್ನು ನಾನು ಯಾಕೆ ನನ್ನ ದೃಷ್ಟಿಯಲ್ಲಿ ನೋಡಲಿಲ್ಲ ಎಂದು ನನಗೆ ಗೊತ್ತಾಗಲಿಲ್ಲ. ನಮ್ಮ ಉತ್ತರ ಕರ್ನಾಟಕದ ಈ ಭಾಗಗಳೆಲೆಲ್ಲ ಹೆಚ್ಚು ಪ್ರಚಲಿತ ಹಾಗೂ ಹಿಂದೂ - ಮುಸ್ಲಿಂ ಎಂಬ ಬೇದವಿಲ್ಲದೆ ಆಚರಿಸುವ ಈ ಹಬ್ಬದ ಕುರಿತು ನಾವು ನಮ್ಮಲಿಯೇ ಎಂದಿಗೂ ಚರ್ಚಿಸಲಿಲ್ಲ. ಹಿರಿಯರು ಈ ಕುರಿತು ಎಂದಿಗೂ ಹೇಳಲಿಲ್ಲ. ಇಂದು ನಾವೇ ನಮ್ಮನ್ನು ಹುಡುಕಿಕೊಳ್ಳುವಾಗ ಇದೆಲ್ಲ ಯೋಚನೆಗಳು ಸುಳಿಯುತ್ತವೆ.  ನಮ್ಮ ಶಾಲೆಯಲ್ಲಿ ಕೈಗೊಂಡ ಐ.ಎಫ್.ಎ ನ ಕಲಿ-ಕಲಿಸು ವಿಭಾಗದಡಿಯಲ್ಲಿ ಮಕ್ಕಳ ಹೆಜ್ಜೆಗಳು ಜಾನಪದದತ್ತ...  ಯೋಜನೆಯನ್ನು ಹತ್ತು ತಿಂಗಳಗಳ ಕಾಲ ನಡೆಸಿದೆವು. ಮಕ್ಕಳ ಗಮನ ಮುಖ್ಯವಾಗಿ ಹೆಜ್ಜೆಕುಣಿತದಲ್ಲಿತ್ತು. ಹೆಜ್ಜೆ ಕುಣಿತವನ್ನು ಕಲಿಯಲಿಕ್ಕಾಗಿ ಅವರು ಪಟ್ಟ ಶ್ರಮ ನಾವೆಲ್ಲೂ ಪಡೆಯಲಿಕ್ಕೆ ಆಗಲೇ ಇಲ್ಲ ಅಥಾವ ಅಂಥಹ ಅವಕಾಶವೇ ದೊರಕಲಿಲ್ಲ ತಿಳಿಯಲಿಲ್ಲ. ಹಿರಿಯರೆಲ್ಲ ನಮ್ಮ ಮಾತಿಗೆ ಬೆಲೆ ಕೊಟ್ಟು ನಮ್ಮ ವಿದ್ಯಾರ್ಥಿಗಳಿಗೆ ಹೆಜ್ಜೆ ಕುಣಿತವನ್ನು ಕಲಿಸಿ ಕೊಟ್ಟರು. ಹಾಗೆಯೇ ಆಚರಣೆಗಳ ಕುರಿತಾಗಿ ಸೂಕ್ಷ್ಮ ವಿಚಾರಗಳನ್ನು ನಮ್ಮೆಲ್ಲ ಮಕ್ಕಳ ಮುಂದೆ ವಿವರವಾಗಿ ಬಿಚ್ಚಿಟ್ಟಾಗ ಅವರು ದೈವದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಗೌರವದ ಪರಿಚಯ ನಮಗಾಯಿತು.

gururaj - Moharam
ಮೊಹರಂ  ಹಬ್ಬದ ಕತಲ್ ರಾತ್ರಿ ದಿನ ನಾನು ಜಹಗೀರ ಗುಡದೂರಿನ ಸಂಭ್ರಮವನ್ನು ಕಣ್ತುಂಬಿಕೊಂಡೆ. ಹರಕೆ ತಿರೀಸುವವರು, ದೀಡ್ ನಮಸ್ಕಾರ ಹಾಕುವವರು ಸಕ್ರೆ ಓದಿಸುವವರು, ಮನೆಗೆ -ಊರಿಗೆ ಬಂದ ಅತಿಥಿಗಳಿ ಬಿಡದೇ ಉಣ ಬಡಿಸುವ ಎಲ್ಲದರಲ್ಲೂ ಜನರ ತೊಡಗಿಕೊಳ್ಳುವಿಕೆ ನನಗೆ ಕಣ್ತುಂಬಿಕೊಳ್ಳುವ ರೀತಿಯಲ್ಲಿ ಭಾಸವಾಯಿತು. ಕಾರಣ ನಾನು  ಹಿಂದೆ ಈ ಊರನ್ನು ಇಲ್ಲಿನ ಜನರನ್ನು  ಹೀಗೆ  ಕಂಡಿರಲೇ ಇಲ್ಲ.  ಊರಿನ ಹಿರಿಯ ರಿವಾಯತ್ ಪದಗಳನ್ನು ಯುವಕರಿಗೆ ಹೇಳಿಕೊಡುವ  ಶ್ರೀಯುತ ಕನಕರಾಯ ರೆಡ್ಡಿಯವರು ಹಬ್ಬದ ಕುರಿತು ಹೇಳಿದಂತೆ ಕಳೇ ಕಟ್ಟಿರುವುದು ನನ್ನ ಮುಂದೆ ಇಂದು ಕಾಣಿಸುತ್ತಿತ್ತು. 

ಅಲೆ ಹಬ್ಬ ಬಂದು

ಮೂರು ತಿಂಗಳ ಮುಂಚೆ 

ಬದುಕು ಬಾಳೆವನೆಲ್ಲ ಬಿಡಸಿತ್ತ

ಬದುಕು ಬಾಳೆವನೆಲ್ಲ ಬಿಡಸಿತ್ತ

ತಂದೆ ತಾಯಿಗೆ ಸಿಟ್ಟು ತರಿಸಿತ್ತ

ತಂದೆ ತಾಯಿಗೆ ಸಿಟ್ಟು ತರಿಸಿತ್ತ

ಎಂದು ಪದಗಳನ್ನು ಹಾಡಿ ತಮ್ಮ ಕಾರ್ಯವನ್ನೆಲ್ಲ ಸಮಯಕ್ಕೆ ಸರಿಯಾಗಿ ಮುಗಿಸಿಕೊಂಡು ಬಂದು ಸೇರುವ ಈ ಯುವಕರು ಭಯ, ಭಕ್ತಿ ಹಿಡಿಸಿತು. ಇಂದಿನ ತಲೆಮಾರಿನವರಿಗೆ ಹಿರಿಯರ ಕುರಿತು, ನಂಬಿಕೆಯ ಕುರಿತು ಕಿಂಚಿತ್ತು ಗೌರವವನ್ನು ತೋರಿಸದೆ ಹೋಗುತ್ತಿರುವುದು. ಈ ಸಂಧರ್ಭಗಳಲ್ಲಿ ಸಹಜವಾಗಿಬಿಟ್ಟಿದೆ. ವೈಚಾರಿಕತೆ ಇರಲಿ ಆದರೆ ಇಡೀ ಪುರತನದಿಂದ ಬಂದಿರುವುದನ್ನು ನಾನು ಕಿತ್ತಿ ಹಾಕುತ್ತೇನೆ ಎಂದು ಹೋಗುವುದು ಸರಿಯಲ್ಲ. ಗೌರವಿಸಿ, ಪ್ರೀತಿಸಿ ಇಂಥಹ ಆಚರಣೆ ಪದಗಳು ಕುಣಿತ ಎಲ್ಲವೂ ಮುಂದೊಂದು ದಿನ ಹುಡುಕಿದರು ಸಿಗದಂತೆ ಕಾಣೆಯಾಗಿ ಹೋಗುತ್ತವೆ. ಹಳ್ಳಿಯಲ್ಲಿ ಮಾತ್ರ ಕಾಣುತ್ತಿರುವ ಈ ಆಚರಣೆಗಳು ಮುಂದೆ ಅವು ಇಲ್ಲದಂತೆ ಆಗುವ ಸ್ಥಿತಿ ಬರಬಹುದು.

ಹಬ್ಬವನ್ನು ಎಲ್ಲರೊಂದಿಗೆ ಬೆರೆತು ಆಚರಿಸಿದಾಗ ಮಾತ್ರ ನಮ್ಮದೆನ್ನುವ ಭಾವ ಕಾಣಲು ಸಾಧ್ಯ. ಇಡೀ ರಾತ್ರಿ ಕೂಣಿತವನ್ನು ನೋಡಲೇ ಕುಳಿತಿದ್ದ ನನಗೆ ಚಳಿಯೇ ಬಿಟ್ಟಂತೆ ಆಗಿತ್ತು. ನಾನು ಶಾಲೆಗೆ ಕರೆಯಿಸಿದಾಗ ಈ ಥರ ಕುಣಿಯದಿರುವ ಈ ಯುವಕರು ಇಂದು ಕಣ್ಣು ಬಿಟ್ಟಂತೆ ಬಿಟ್ಟು ಕುಳಿತುಕೊಳ್ಳುವ ಹಾಗೇ ಮಾಡಿದ್ದರು. ನಮ್ಮ ಶಿವಮಲ್ಲಪ್ಪ  ’ಗುರಾಜ್ ಸಾರ್ ನೀವು ಇನ್ನೂ ಮೂರು ದಿನದ ಸವಾಲ್ ಪದಗಳನ್ನು ನೋಡಬೇಕು ಸುತ್ತಲಿನ ಊರಿನವರು ಬಂದು ಹಾಡ್ತಾರೆ ’ ಎಂದು ಅವರೊಂದಿಗೆ ಬಿಸಿ ನೀರಿನ ಚಹಾದಂಥ ದ್ರವವನ್ನು ಹೊಟ್ಟೆಗೆ ಇಳಿಸಿಕೊಂಡು ಬೆಂಕಿಯ ಕೆಂಡವನ್ನು ನೋಡುತ್ತಾ ಊರಿನವರ ತಮಾಶೆಯ ಚೇಡಿಸುವ ಮಾತುಗಳನ್ನು ಆಲಿಸುತ್ತಾ ದೇವರ ಗುಡಿ ಎದುರಿನಲ್ಲಿ ಕುಳಿತೇ ಇದ್ದೆ. ಬೆಳಗಿನ ಸಂಬ್ರಮಕ್ಕೆ ಜನರೆಲ್ಲ ಸಿದ್ಧರಾಗಲು ನಾನು ಮುಖಕ್ಕೆ ನೀರನ್ನು ಬಡಿದು ತಯಾರಾದೆ. ಡೋಲಿಯ ಹೊತ್ತು ತಿರುಗುವ ಹೇಳಿಕೆಯನ್ನು ನೀಡುವುದು ಹೀಗೆ ಪ್ರತಿಯೊಂದನ್ನು ನೋಡುತ್ತಾ ಬೇಡಿಕೊಂಡವರು, ಫಲ ಪಡೆದವರು, ಬೇಡಿಕೊಳ್ಳುವವರು ಹೀಗೆ ಎಲ್ಲ ರೀತಿಯಲ್ಲಿ ಆ ಜಾಗ ತುಂಬಿ ಹೋಗಿತ್ತು. ಕಾಲಿಗೆ ನೀರು ಹಾಕುವುದು ಆಶೀರ್ವಾದ ಪಡೆಯುವುದು ಹೀಗೆ ಪ್ರತಿ ಹಂತದಲ್ಲೂ ಜನರ ಸಂಭ್ರಮ ಅವರ ಬಟ್ಟೆ, ಓಡಾಟ, ಮೊಗದಲ್ಲಿ ಸಂತೋಷಗಳೆಲ್ಲ ಸ್ಪಷ್ಟವಾಗಿ ಕಾಣುತ್ತಿದ್ದವು.


ದುಡಿಯಲಿಕ್ಕೆ ಹೋಗಿ ಮರಳಿ ಬಂದಿದ್ದ ಗೆಳೆಯರೆಲ್ಲ ತಾವು ತಂದಿದ್ದ ಬಾಟಲಿಗಳನ್ನು ಹೊಟ್ಟೆಗೆ ಇಳಸಿ ಬೇರಯದೇ ಆಕಾರ ತಳೆದಿರುವುದನ್ನು ಕಾಣಬಹುದಾಗಿತ್ತು. ಮಕ್ಕಳಲ್ಲಿ ಸಂಭ್ರಮವೇ ಬೇರೆ. ಮಾಲ್ದಿ, ಬಾಡೂಟ ಬೇರೆ ಬೇರೆ ಹಬ್ಬದ ತಿನಿಸುಗಳನ್ನು ತಿಂದು ಹಬ್ಬದಲ್ಲಿ ಬೆರೆತು ಹೋಗಿದ್ದರು. ಕೆಲೆವು ಮಹಿಳೆಯರಿಗೆ ಸಾಕಷ್ಟು ಕೆಲಸಗಳಿದ್ದರೆ ಇನ್ನೂ ಕೆಲವರಿಗೆ ಶೃಂಗಾರದಲ್ಲಿಯೇ ಹಬ್ಬವನ್ನು ಸವಿಯುತ್ತಿದ್ದರು. ಬೇಡಿಕೊಳ್ಳುವಲ್ಲಿ ಯಾರು ಹಿಂದೇಟು ಹಾಕುತ್ತಿರಲಿಲ್ಲ. ಎಲ್ಲರೂ ಹಬ್ಬದಲ್ಲಿ ಭಾಗುವಹಿಸುವಿಕೆ ಇದ್ದದ್ದನ್ನು  ನಾನು ಇಲ್ಲಿ ಕಾಣುತ್ತಿದ್ದೆ.

ಊರಿನ ಕುರಿತು ಹೇಲಿಕೆಯನ್ನು ಕೇಳುವಲ್ಲಿ ಹಿರಿಯರು ಹಾತೊರೆಯುವುದನ್ನು ಇಲ್ಲಿ ಕಾಣುತ್ತಿತ್ತು. ಅದು ಅವರ ಜವಾಬ್ದಾರಿಯು ಆಗಿತ್ತು. ಬರಬಹುದಾದ ಆಪತ್ತು, ಮಾಡಬೇಕಾದ ಕಾರ್ಯಗಳ ಕುರಿತು ಕೇಳಿದ ಹಿರಿಯರು ತೃಪ್ತಿಯ ಹೇಳಿಕೆಯನ್ನು ಪಡೆದು ನಂತರದಲ್ಲಿ ದೇವರನ್ನು ಮುಂದೆ ಸಾಗಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದರು. ಮುಸ್ಲಿಂರಿಗೆ ದುಃಖದ ಹಬ್ಬ ಆದ್ರೆ ಇಡೀ ಊರಲ್ಲಿ ಬೇರೆ ಹಬ್ಬಗಳಿಗೂ ಕೂಡದ ಜನರು ಮೋಹರಂನಲ್ಲಿ ತಪ್ಪದೆ ಸೇರುತ್ತಾರೆ. ಎರಡೆ ಕುಟುಂಬಗಳಿದ್ದ ಮುಸ್ಲಿಂರು ಇಂದು ಕುಟುಂಬ ವಿಂಗಡಣೆಯಿಂದಾಗಿ ಎಂಟು ಮನೆಗಳಾಗಿವೆ. ಆದರೂ ಹಬ್ಬಕ್ಕೆ ಎಲ್ಲೂ ಕುಂದು ಉಂಟಾಗದೇ ನಡೆಯಿಸಿಕೊಂಡು ಬಂದಿದ್ದಾರೆ ಊರಿನ ಹಿರಿಯರು. ನಾಟಕದ ಯೋಜನೆಯಿಂದಾಗಿ ಒಂದು ಹಬ್ಬದ ಪೂರ್ಣ ಹಿನ್ನಲೆಯನ್ನು ಜನರ ಪರಸ್ಪರ ಸೌಹಾರ್ದತೆಯನ್ನು ಕಣ್ಣಾರೆ ಕಾಣುವ ಅವಕಾಶ ಒಬ್ಬ ನಾಟಕಮೇಷ್ಟ್ರ ಆಗಿ ನಾನು ಕಂಡು ಕೊಂಡಿದ್ದೇನೆ. ನಮ್ಮ ವಿದ್ಯಾರ್ಥಿಗಳಿಗೆ, ಊರಿನೆಲ್ಲ ಸಮಸ್ತರಿಗೂ ನಾನು ಋಣಿಯಾಗಿದ್ದೇನೆ. ಮಹಾಂತೇಶ್, ಶಿವಮಲ್ಲಪ್ಪ, ಈರಣ್ಣ ಅಂಗಡಿ, ದತ್ತಾತ್ರೇಯ, ರಾಜಣ್ಣ ವಿಶೇಷವಾಗಿ ಶ್ರೀ ಕನಕರಾಯ ರೆಡ್ಡಿ ಅವರಿಗೆ ಧನ್ಯಾವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ. 

ಶುಕ್ರವಾರ, ನವೆಂಬರ್ 8, 2013

ಮೊಹರಂ



               ಜಾನಪದ ಹಳ್ಳಿಯ ಪ್ರಾಣ. ಅಧುನಿಕ ಶಿಕ್ಷಣವನ್ನು ಚಿಂತನೆಗೆ ಬಿಟ್ಟು ಜನರ  ಉಸಿರಿನೊಡನೆ ಬೆರೆತದ್ದು ಜಾನಪದ. ಆದರೆ ಇಂದು ನಾವು  ತಿಳಿದಂತೆ ಇದೆಯೇ ಎಂದು ಯೋಚಿಸುವಾಗ ಧನಾತ್ಮಕ ಹಾಗೂ ಋಣತ್ಮಕ ಎರಡು ಅಂಶಗಳು ಗೋಚರಿಸುತ್ತವೆ. ನಾನೊಂದು ಸಣ್ಣ ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯ ವಹಿಸುತ್ತಿರುವವ. ಇಂಥಹ ವಿಷಯಗಳು ಜಾಗತಿಕವಾಗಿ ಗಮನಿಸುವುದಕ್ಕಿಂತ ಸಾಮಾನ್ಯನಂತೆ ಕಾಣಲು ಬಯುಸುತ್ತೇನೆ. ಇಲ್ಲಿಯ ಜನರ ನಂಬಿಕೆಯಲ್ಲಿ ಆಧುನಿಕತೆ ಇಲ್ಲಿಯವರೆವಿಗೂ ಎಷ್ಟೇ ವಿಧದಲ್ಲಿ, ಯಾವುದೇ ರೀತಿಯಲ್ಲಿ ಪ್ರವೇಶ ಪಡೆದಿದ್ದರು ಅದು ಹಬ್ಬ ಹಾಗೂ ಆಚರಣೆಗಳಲ್ಲಿ ಎಲ್ಲವನ್ನು ಮೀರಿ ನಿಲ್ಲುತ್ತಿದೆ. ಮುಂದೆ ಬದಲಾವಣೆಗಳು ಕಾಣಬಹುದು, ಆದರೆ ಪ್ರಸ್ತುತವಾಗಿ ನಾವು ಕಾಣುವಾಗ ಸ್ಪಷ್ಟವಾಗಿದೆ. ಮೊಹರಂನ ಈ ದಿನಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ದಿನವೂ ಬಿಡದೆ ಸಂಘದ ಕೋಣೆಯಲ್ಲಿ ಸೇರಿ ಹೆಜ್ಜೆಕುಣಿತ, ರಿವಾಯಿತ್ ಪದಗಳನ್ನು ಬಿಡದೆ ಅಭ್ಯಾಸ ಮಾಡುತ್ತಿರುವ ಯುವಕರು ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯರನ್ನು ಕಂಡಾಗ ಮೂಲದ ಕೊಂಡಿಯ ಶಕ್ತಿಯ ಕುರಿತು ಅಶ್ಚಾರ್ಯವಾಗುತ್ತದೆ. 

                                                                                             ಮುಸ್ಲಿಂರ ಆಗಮನದಿಂದ ಅವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಚಾರಗಳು ಎಲ್ಲ ರೀತಿಯಲ್ಲಿ ನಮ್ಮ ಜನರೊಟ್ಟಿಗೆ ಬೆರೆತವು. ಇಂದು ಹೇಗಾಗಿದೆಯೆಂದರೇ ಹಸೇನ್ ಹುಸೇನ್ ( ಪೀರ) ನು ಹಾಗೂ ಊರ ದ್ಯಾಮವ್ವ ಅಣ್ಣ ತಂಗಿ ಎಂದು ಮಾತನಾಡುವ ಹಿರಿಯರು ಧರ್ಮಗಳು ಭಿನ್ನ ಎಂದು ನೋಡುವ ಆ ಕುರಿತು ಮಾತನಾಡುವ ಪ್ರಸಂಗವೇ ಉದ್ಭವವಾಗಿಯೇ ಇಲ್ಲ. ಬಿನ್ನ ಸಮುದಾಯದ ಯುವಕರು ಒಂದೆಡೆ ಕಲೆತು ಹೆಜ್ಜೆ ಹಾಕುವ ಈ ಕ್ಷಣಗಳು ಮಧುರವೆಂದು ಹೇಳುತ್ತೇನೆ.

    ನಮ್ಮ ಜಹಗೀರಗುಡದೂರಿನ ಗ್ರಾಮದಿಂದ ಬದುಕಿಗಾಗಿ 
ದೂರದ ಮಂಗಳೂರು,ಉಡುಪಿ, ಬೆಂಗಳೂರು, ಗೋವ ಹೀಗೆ ನಾನಾ ಮಹಾ ನಗರಗಳಿಗೆ ಗುಳೆ ಹೊರಟು ಹೋಗಿ ದುಡಿಯುತ್ತಿರುವ ಹಲವು ಜನರಿದ್ದಾರೆ. ಆದರೆ ನಮ್ಮದೇ ಆಗಿ ಹೋಗಿರುವ ಈ ಮೊಹರಂನ ದಿನಗಳನ್ನು ತಪ್ಪಿಸಿಕೊಳ್ಳದೆ ಅಲಾವಿ ಸುತ್ತಾ ಒಂದು ಬಾರಿ ಹೆಜ್ಜೆ ಹಾಕದಿದ್ದರೆ ಸಮಾಧಾನವಿಲ್ಲ ಎಂದು ಊರಿಗೆ ಮರಳಿ ಬರುತ್ತಿದ್ದ ಯುವಕನ ಮಾತಿನಿಂದ ತಿಳಿದುಕೊಂಡೆ. ಹಬ್ಬದ ಸಂಭ್ರಮದ ಕಾವು ನಿಧಾನವಾಗಿ ಮೇಲೇರುತ್ತಿದೆ. ಮೊಹರಂನ ಕೊನೆಯ ಕತ್ತಲ ರಾತ್ರಿಯ ದಿನ ಹೆಜ್ಜೆಕುಣಿತದ ಆಟವನ್ನು ಸವಿಯಬೇಕು. ಒಬ್ಬ ನಾಟಕ ಶಿಕ್ಷಕನಾಗಿ ಇಂಥಹ ಕ್ಷಣಗಳನ್ನು ಆಸ್ವಾದಿಸುವುದು ಖುಷಿ ಕೊಡುತ್ತದೆ. ಸಂಭ್ರಮದ ಈ ದಿನಗಳನ್ನು ನಾನು ಅವರಂತೆಯೇ ಬದಕಲು ಇಚ್ಚಿಸುತ್ತೇನೆ.
                       


ಬುಧವಾರ, ನವೆಂಬರ್ 6, 2013

ಗ್ರಂಥಾಲಯ

ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವದರಲ್ಲಿ ಓದುಗನ ಮನಸ್ಸು ಪಕ್ಷಿಯಂತೆ ಸ್ವತಂತ್ರ ಉಡ್ಡಾಣದಲ್ಲಿ ಹಾರತಿರುತ್ತದೆ. ಗ್ರಂಥಾಲಯದಲ್ಲಿ ಓದುವ ಜನರು ಸಹಸ್ರಾರು ವಿಚಾರಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆ. ಓದುಗರ ಪ್ರತಿಭೆಯನ್ನು ಉದ್ಧೀಪನಗೊಳಿಸಿ ಸಾಮರ್ಥ್ಯವನ್ನು ಹೆಚ್ಚಿಸುತ್ತಾ, ಪುಸ್ತಕಗಳು ಜ್ಞಾನವನ್ನು ಹಂಚುತ್ತವೆ. ಪುಸ್ತಕದಲ್ಲಿ ಲೀನನಾಗುವ ಮನುಷ್ಯನಿಗೆ ಸಂಪೂರ್ಣವಾದ ಅವಕಾಶವನ್ನು ಗ್ರಂಥಾಲಯ ನೀಡುತ್ತದೆ. ಪುಸ್ತಕಗಳಿಲ್ಲದ ಮನೆ, ಗ್ರಂಥಾಲಯವಿಲ್ಲದ ಶಾಲೆ - ಕಾಲೇಜು,
ದೇವರಿಲ್ಲದ ಗುಡಿಯೆಂದು ಒಬ್ಬರು ವರ್ಣಿಸುತ್ತಾರೆ. ಪುಸ್ತಕದ ಉತ್ತಮ ಅಂಶಗಳ ಕುರಿತು ಎಲ್ಲರೂ ಸದಾ ಮಾತನಾಡುವಂತೆ ಆಗಬೇಕು. ಪುಸ್ತಕದಲ್ಲಿರುವ ಜ್ಞಾನ ಎಲ್ಲರಲ್ಲೂ ಬೆಳಕಿನಂತೆ ಹರಡಬೇಕು. ಪ್ರತಿದಿನ ಹೊಸ ಪುಸ್ತಕಗಳು ಹೊರಬರುತ್ತಲೇ ಇರುತ್ತವೆ. ಕೊಂಡು ಓದುಲು ಸಾಧ್ಯಾವಾಗದೆ ಇದ್ದಾಗ ನಾವು ಗ್ರಂಥಾಲಯದ ಸದ್ಬಳಕೆ ಸಂಪೂರ್ಣವಾಗಿ ಮಾಡಿಕೊಳ್ಳಬೇಕು. ನಾಗರಿಕತೆ, ಸಂಸ್ಕೃತಿ, ವಿಜ್ಞಾನ, ಭಕ್ತಿ, ಕಥೆ-ಕವನ, ಕಾವ್ಯ, ವಿಮರ್ಶೆ ಹೀಗೆ ನಾನಾ ತರಹದ ವಿಚಾರಗಳು ನಮ್ಮೊಳಗೆ ಹೊಯ್ದಾಡುತ, ಜ್ಞಾನ ವೃದ್ಧಿಯಾಗಲು ಸಾಧ್ಯ. 

               ಅದೇ ರೀತಿ ನಮ್ಮ ಊರು, ಬದುಕು, ಜೀವನ ದಿನನಿತ್ಯದ ಘಟನೆಗಳನ್ನು  ಇಟ್ಟುಕೊಂಡು ಹೊಸತನದ ಪುಸ್ತಕ ರಚಿಸುವಂಥ ವಾತವರಣ ನಾವು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ. ನಾವು ನಮ್ಮದೇ ಪುಸ್ತಕವನ್ನು ಹೊರ ತರುವಲ್ಲಿ ಪ್ರಯತ್ನ ಮಾಡುತ್ತೇವೆ. 

ರವಿಕುಮಾರ ಬಾಳಪ್ಪ ಮುಶಿಗೇರಿ 
೧೦ ನೇ ತರಗತಿ 

ಗುರುವಾರ, ಅಕ್ಟೋಬರ್ 31, 2013

ರಾಜ್ಯೋತ್ಸವ ಪ್ರಶಸ್ತಿ



ಕೊಪ್ಪಳ ಜಿಲ್ಲೆಯ ಕುಷ್ಟಗಿಯವರಾದ ಶರಣಪ್ಪ ವಡಗೇರಿ ಜಾನಪದ ಕಲಾವಿದರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.  ನಮ್ಮ ಎಲ್ಲ ಜಹಗೀರಗುಡದೂರಿನ ಮಕ್ಕಳು, ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಜೊತೆಗೆ ನನ್ನ ವಯುಕ್ತಿಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ. 

ಭಾನುವಾರ, ಸೆಪ್ಟೆಂಬರ್ 22, 2013

ಸರ್ವರಿಗೂ ಸ್ವಾಗತ




ಗುರುವಾರ, ಸೆಪ್ಟೆಂಬರ್ 19, 2013

ಅಂತಿಮ ಘಟ್ಟದ ತಯಾರಿ

ಮಕ್ಕಳ ಹೆಜ್ಜೆಗಳು ಜಾನಪದದತ್ತ...

                           ಅಂತಿಮ ಘಟ್ಟವೆಂದರು ಅಂತಿಮವಲ್ಲ ಇದು ಆರಂಭವೆಂದೇ ಕಾಣಬಹುದು. ವಿದ್ಯಾರ್ಥಿ, ಪಾಲಕ ಹಾಗೂ ಶಿಕ್ಷಕ ಎಲ್ಲರ ಭಾಗುವಹಿಸುವಿಕೆಯ ನೆಲೆಯಿಂದಲೇ ಆರಂಭಿಸಿದರು ಸದ್ಯವಾಗಿದ್ದು ಅರ್ಧ ಸಮಯ ಕಳೆದ ಮೇಲೆಯೇ. ಇನ್ನೂ ನಾವು ಏನನ್ನೋ ಬಿಟ್ಟಿದ್ದೇವೆ ಊರಿನವರೊಂದಿಗೆ ಆದ ಸಂಪರ್ಕ ಸಾಕಾಗಲಿಲ್ಲ ಎಂದೇ ಇಂದಿನವರೆಗೂ ನನ್ನನ್ನು ಕಾಡುತ್ತಿದೆ. ಮತ್ತೊಂದಿಷ್ಟು ಯತ್ನ ಭಾಗುವಹಿಸುವಿಕೆ ಬೇಕಾಗಿ ಇತ್ತು ಎಂಬುವುದು. ನನ್ನ ಗುರು, ಅಭ್ಯಾಸದಿಂದ ಪ್ರಾರಂಭಿಸಿ ಜಗತ್ತನೆಲ್ಲ ಸುತ್ತಿ ಹಾಕಿಕೊಂಡು ಬಂದರೇ ಮಾತ್ರ ಮಕ್ಕಳನ್ನು ಅವರದೆ ಆಲೋಚನೆಗೆ ಹಚ್ಚಲು ಸಾಧ್ಯ. ಇಲ್ಲದೇ ಹೋದರೆ ಅದು ಮಕ್ಕಳೊಂದಿಗೆ  ಪ್ರಸ್ತುತ ಬದುಕಿನ ಚಿತ್ರಣಗಳನ್ನು ಹೆಕ್ಕೆಲು, ಕಟ್ಟಲು ಸುಲಭದ ಕಾರ್ಯವಲ್ಲ. ಅಂಥಹ ಘಟ್ಟದ ಕೊನೆಯೆಂದು  ಹೇಳಬೇಕೆ ? ಸಾಧ್ಯವಲ್ಲ ಕಾರಣ ನಮ್ಮ ನೋಟವೇ ಈಗ ಪ್ರಾಂಭವಾಗಿದೆ ಎನ್ನುವುದು. ನಾವು ಜಗತ್ತನ್ನು ನಮ್ಮ ಕಣ್ಣಿನಿಂದ ಈಗ ನೊಡಲು ಪ್ರಯತ್ನಿಸುತ್ತಿದ್ದೆನೆ. ಈ ನೋಟದ ವಿಸ್ತರತೆಗೆ ಹಚ್ಚಿದ ಅನುಪಮಾ ಹಾಗೂ ಸಂಸ್ಥೆಯ ಎಲ್ಲರಿಗೂ ಧನ್ಯಾವಾದಗಳನ್ನು ಸಲ್ಲಿಸಲು ಸಾಧ್ಯ

ಶುಕ್ರವಾರ, ಸೆಪ್ಟೆಂಬರ್ 13, 2013

ರಂಗದ ಹಿಂದೆ


           ರಂಗಭೂಮಿಯೇ ಆಗಿರಲಿ, ಇನ್ನಾವುದೇ ರಂಗದಲ್ಲಿ ಈ ರಂಗದ ಹಿಂದೆ ನಡೆಯುವ ಕ್ರಿಯೆ, ಕಾರ್ಯಗಳು ತಿಳಿಯುವುದೇ ಇಲ್ಲ ಕಾರಣ ಅವರು  ಎಂದಿಗೂ ರಂಗದ ಮುಂಬಾಗದಲ್ಲಿ ಬರಲು ಪ್ರಯತ್ನವನ್ನೇ ಮಾಡುವುದಿಲ್ಲ ಹೀಗಾಗಿ ಎಷ್ಟೋ ಕಾರ್ಯಗಳನ್ನು ಒಂದು ಪ್ರದರ್ಶನ ಅಥಾವ ಇನ್ನಾವುದೇ ರಂಗದಲ್ಲಿಯೇ ಆಗಲಿ ತೊಡಗಿಕೊಂಡ ಶ್ರಮಗಾರರು ಎಂದಿಗೂ ಹಿಂದೆಯೇ ಇರುತ್ತಾರೆ.  ಶಶಿಧರ ಅಡಪ ಅಂಥಹ ವ್ಯಕ್ತಿಗಳು ಎಷ್ಟೋ ಶ್ರದ್ಧೆ ಹಾಗೂ ಕಾರ್ಯಚಟುವಟಿಕೆಯಿಂದ ಮುಂದೆ ಬರಲು ಸಾಧ್ಯ. ನಾನಿಲ್ಲಿ ಅಂಥಹ ಎಷ್ಟೋ ಜನರನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. 

                     ಹಳ್ಳಿಯ ಜನ, ಶಿಕ್ಷಕರು  ಹಾಗೂ ನಮ್ಮ ಮುದ್ದು ವಿದ್ಯಾರ್ಥಿಗಳು ಸಾಕಷ್ಟು ಈ ರಂಗದ ಹಿಂದೆ (Back stage work) ಕಾರ್ಯಗಳನ್ನು ಕೈಗೊಂಡಿರುವವರನ್ನು ನಾವು ನೆನೆಯಲೇ ಬೇಕು. ನಮ್ಮ ಇಡೀ ರಂಗಚಟುವಟಿಕೆಯಾಗಿರಲಿ ಅಥಾವ ಶಾಲೆಯ ಯಾವುದೇ ಕೆಲಸ ಕಾರ್ಯಗಳಲ್ಲಿ ಹಳೇಯ ವಿದ್ಯಾರ್ಥಿಗಳು ಸದಾ ಸಹಾಯಕರಾಗಿರುತ್ತರೆ. "ಮಕ್ಕಳ ಹೆಜ್ಜೆಗಳು ಜಾನಪದದತ್ತ... " ಯೋಜನೆಯಲ್ಲಿಯಂತು ವಿದ್ಯಾರ್ಥಿಗಳಿಂದಲೇ ಪ್ರಸ್ತಾವನೆಯ ಕುರಿತು ವಿಚಾರವನ್ನು ಆಲೋಚನೆ ಮಾಡಿ ಶಾಲೆಯ ವೃಂದದವರಿಂದ ಕೆಲವು ಮಾರ್ಗಗಳನ್ನು ಹಾಗೂ  ವಿವರಣೆಗಳನ್ನು ತಿಳಿದುಕೊಂಡು ಮುಂದುವರೆದರೆ, ಕಲಿಕೆಯಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಹಳ್ಳಿಯ ಪಾಲಕರೇ ಶಾಲೆಗೆ ಬಂದು ನಾವು ಊರೊಳಗೆ ತೆರಳಿ ಅವರ ಅನುಭವ ಹಾಗೂ ಚಿಂತನೆಯನ್ನು ನಾವು ನಮ್ಮೊಂದಿಗೆ ಮಕ್ಕಳ ಕೂಡಿ ಕಲಿಯವಿಕೆ ತುಂಬಾ ಉಪಯೋಗವಾಯಿತು ಎಂದು ಹೇಳಬಹುದು. 

ಬುಧವಾರ, ಸೆಪ್ಟೆಂಬರ್ 11, 2013

ಅಭಿಪ್ರಾಯ : ಮಹಾಂತೇಶ ವತ್ತಿ

        ಆಧುನಿಕ ಜಗತ್ತಿನಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು ಮಾಧ್ಯಮಗಳಲ್ಲಿಯೇ ಪ್ರಮುಖವಾದದ್ದು  ಪತ್ರಿಕಾ ಮಾಧ್ಯಮ. ಗ್ರಾಮೀಣ ಮಕ್ಕಳಿಗೆ ದೂರದರ್ಶನ ಮಾಧ್ಯಮವೇ ಹೆಚ್ಚು ಪರಿಚಿತ. ಪತ್ರಿಕಾ ಮಾಧ್ಯಮದ ಪರಿಚಯ ಅತೀ ವಿರಳ. ಆದ್ದರಿಂದ ಪ್ರೌಢಶಾಲೆಯಲ್ಲಿ ಗುರುರಾಜ ಶಿಕ್ಷಕರು ಸಂಪಾದಕತ್ವದಲ್ಲಿ ಬರುತ್ತಿರುವ ಹಾಗೂ ಮಕ್ಕಳನ್ನೇ ಪತ್ರಿಕಾ ಬರಹಗಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಶಾಲಾ ಮಕ್ಕಳಲ್ಲಿ ಹೆಜ್ಜೆಗಳು ಪತ್ರಿಕೆ ಆಸಕ್ತಿ ಬೆಳೆಸುವಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿದೆ. 

        ಮಕ್ಕಳು ಪತ್ರಿಕೆಗಾಗಿ ಬರೆಯಬೇಕೆಂಬ ಆಸೆಯಿಂದ ವಿಷಯವನ್ನು ಕ್ರೂಢೀಕರಿಸಿಕೊಳ್ಳ ಬೇಕಾದರೆ ಸದಾ ಚಟುವಟಿಕೆಯಿಂದ ಇರಬೇಕಾಗುತ್ತದೆ. ಮಕ್ಕಳು ಸದಾ ಚಟುವಟಿಕೆಯಿಂದ ಇರುವುದರಿಂದ ಕ್ರಿಯಾಶೀಲರಾಗಿ, ಮಾನಸಿಕವಾಗಿ ಪ್ರಬುದ್ಧತೆ  ಬರುವುದೆಂಬ ವಿಶ್ವಾಸ ನನ್ನದು. 

ಮಹಾಂತೇಶ ವತ್ತಿ 
ಕೃಷಿ ಪತ್ತಿನ ಮಾಜಿ ಅಧ್ಯಕ್ಷರು,
ಜಹಗೀರಗುಡದೂರು. 

ಶನಿವಾರ, ಸೆಪ್ಟೆಂಬರ್ 7, 2013

ಮಕ್ಕಳು ರಚಿಸಿದ ಕಥೆಗಳು



ನಾನು ಹಾಗೂ ನನ್ನ ಗುರುಗಳು

ಘಟನೆ ೧         
            ಶಿಕ್ಷಕ ದಿನಾಚರಣೆ ಅಂಗವಾಗಿ ನಾನು ಯಾರನ್ನು ನೆನೆಯಲಿ ಪ್ರಾಥಮಿಕ ದಿಂದ ಹಿಡಿದು ಸ್ನಾತಕೋತ್ತರವರೆವಿಗೂ ಎಷ್ಟೋಂದು ಶಿಕ್ಷಕರು ನಮಗೆ ದಾರಿ ತೋರಿಸಿದರು, ತಿದ್ದಿದರು, ಒಂದು ಬಾರಿ ಬಯ್ದು ಹೇಳಿದರೆ ಮತ್ತೊಮ್ಮೆ ಪ್ರೀತಿಯಿಂದ ಹೇಳಿದ್ದು ಕೆಲವೊಮ್ಮೆ ನಮಗಾಗಿಯೇ (ವಿದ್ಯಾರ್ಥಿಗಳಿಗಾಗಿ) ನಿರಶನ ನಿಂತು ನಮ್ಮನ್ನು ನಾವೇ ತೆಗಳುವಿಕೆಯಿಂದ ಕಾಣುವಂತೆ ಮಾಡಿದ ಶಿಕ್ಷಕರು ನಮ್ಮನ್ನು ಸರಿ ದಾರಿಗೆ ತರುವ ಕಾರಣಗಳು ನನಗೆ ಇಂದಿಗೂ  ತಲ್ಲಣ ಉಂಟುಮಾಡುತ್ತವೆ. ನಾನೇನು ಅತ್ಯಂತ ಬುದ್ಧಿವಂತನಾಗಿ ಇಂದು ಶಿಕ್ಷಕರ ಕುರಿತಾಗಿ ಬರೆಯುತ್ತಿದ್ದೇನೆ ಎಂದು ನಾನು ನನ್ನನ್ನು ವ್ಯಕ್ತ ಪಡಿಸಲಿಕ್ಕಾಗಿ ಇಲ್ಲಿ ಬರೆಯುತ್ತಿಲ್ಲ. ಇದು ನನ್ನದೇ ಗುರುಗಳ ಕುರಿತಾಗಿ ನೆನಪಿಸಿಕೊಳ್ಳೋ ರೀತಿ ಎಂದು ತಿಳಿದುಕೊಳ್ಳಿ. ನನ್ನ ನೆನಪಿನಲ್ಲಿ ಇರುವಂತೆ  ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಗಣೇಶ ಸಾರ್, ನಿರ್ಮಾಲ ಟೀಚರ್, ಶಾಂತಾಬಾಯಿ, ದೊಡ್ಡಮನಿ, ಪರಸಪ್ಪ, ನಾಗಮ್ಮ, ಚಂದ್ರ ಶೇಖರ, ಗಿರಜಾ ,ನಾಗರತ್ನಮ್ಮ  ಹೀಗೆ  ಎಲ್ಲ ಶಿಕ್ಷಕರ ಹೆಸರು ನಮ್ಮ ನೆನಪಿಗೆ ಬರುತ್ತಾ ಅವರೊಂದಿಗೆ ಕಳೆದ ಆ ಶಾಲೆಯ ದಿನಗಳು 'ಅಯ್ಯೋ ನಾನು ಹೇಗೆ ಇರುತ್ತಿದ್ದೇ ... ?' ಎಂದು ಮನದಲ್ಲಿ ಬಂದು ಹೋಗುತ್ತವೆ. ಕೆಲವು ಘಟನೆಗಳು ಎಂದಿಗೂ ಮರೆಯದೇ ಹಾಗೇ ಉಳಿದೇ ಇರುತ್ತವೆ. ನಾನು ನನ್ನ ತಂಗಿ ಜೊತೆಯಾಗಿ ಶಾಲೆಗೆ ಹೋಗುತ್ತಿದ್ದೇವು. ಆಗ ಎರಡು ಅಂತಸ್ತಿನ ನಮ್ಮ ಶಾಲೆ ಐಸ್ ಲ್ಯಾಂಡ್ ನ ಎದುರುಗಡೆ ದೊಡ್ಡದಾಗಿ ಕಾಣುತ್ತಿತ್ತು. ಶಾಲೆ ಬಿಟ್ಟಾಗ ಮತ್ತು  ಪ್ರಾರಂಭವಾಗುವಾಗ ಆ ರಸ್ತೆ ಟ್ರಾಫಿಕ್ ಜಾಮ್ ಆಗಿ ಹೋಗುತ್ತಿತ್ತು. ಕಾರಣ ನಮ್ಮ ಶಾಲೆಯ ಹಿಂದುಗಡೆಯೇ ಬಸ್ ನಿಲ್ದಾಣ. ಶಾಲೆಯ ಮೊದಲ ಅಂತಸ್ತಿಗೆ ಹೋದರೆ ಬಸ್ ನಿಲ್ದಾಣದ ಎಲ್ಲ ಚಿತ್ರಣ ನಮ್ಮ ಕಣ್ಣೆದುರಿನಲ್ಲಿಯೇ ಕಾಣುತ್ತಿತ್ತು. 

                                 ಕಬ್ಬಿನ ಲಾರಿ, ಬಂಡಿಗಳಿಗೆ ಓಡಿ ಹೋಗಿ ಕಬ್ಬು ಕಿತ್ತಿದ್ದು ಎಲ್ಲಿಂದಲೋ ನೋಡಿದ ಶಿಕ್ಷಕರ ಕೈಯಿಂದ ಕಬ್ಬಿನಂತೆ ಸರಿಯಾಗಿಯೇ ತಿನ್ನುತ್ತಿದ್ದೇವು. ಕೆಲವೊಮ್ಮೆ ಅವರೇ ಕಬ್ಬಿನ ಗನಿಗಳನ್ನು ನೀಡುತ್ತಿದ್ದರು.  ಶಿಕ್ಷಕರು ಎಂದು ನಮ್ಮನ್ನು ಶತ್ರುಗಳಂತೆ ಕಾಣುತ್ತಿರಲಿಲ್ಲ ಕಾರಣ ನಮಗೆ ಅಂದು ಯಾಕೆ ಎಂದು ಅರ್ಥನೂ ಮಾಡಿಕೊಳ್ಳುವಂಥ ಜ್ಞಾನ ನಮ್ಮಲ್ಲಿ ಇರಲಿಲ್ಲ. ನಾಲ್ಕೋ - ಐದೋ ನೆನಪಿಲ್ಲ  ಒಮ್ಮೆ ಹಬ್ಬ ಕಳೆದ ಮರುದಿನ ನಾನು ಶಾಲೆಗೆ ಕರಿಗಡಬು ತೆಗೆದುಕೊಂಡು ಹೋಗಿದ್ದೆ. ಊಟಕ್ಕೆ ಅದನ್ನೇ ತಿನ್ನೋ ಯೋಚನೆ. ನನಗೆ ಸಿಹಿ ಪದಾರ್ಥಗಳೆಂದರೆ ತುಂಬಾ ಇಷ್ಟ. ಅಮ್ಮ ಮನೆಯಲ್ಲಿ ಮಾಡಿದ ಬುಟ್ಟಿಯ ತುಂಬಾ ಇದ್ದದ್ದನ್ನು ಪೂಜೆಯ ನಂತರ ನಮ್ಮ ಮನೆಯ ಸುತ್ತಾ-ಮುತ್ತಾ ಇರುವರಿಗೆಲ್ಲ ನೀಡುತ್ತಿದ್ದಾಗ ನನಗೆ ಸಹಿಸದಷ್ಟು ಕೋಪ ಬರುತ್ತಿತ್ತು. ನಾವು ಯಾಕೆ ನೆರೆಯವರಿಗೆ ನೀಡಬೇಕು ಎಂದು ಅನ್ನಿಸುತ್ತಿತ್ತು. ಆ ವಯಸ್ಸಿನಲ್ಲಿ ಅದು ಸಹಜವೂ ಆಗಿತ್ತು. ಸರಿ ನನ್ನ ಶಾಲೆಗೆ ಕರಿಗಡಬು ತೆಗೆದುಕೊಡು ಹೋದ ಸುದ್ದಿಯನ್ನು ನಾನು ನನ್ನ ಗೆಳೆಯರಾದ ಎರ್ರಿಸ್ವಾಮಿ, ವೆಂಕಟೇಶನಿಗೆ ಮಾತ್ರ ಗೊತ್ತಿತ್ತು. ಪಾಠ ಮಾಡುವ ಶಿಕ್ಷಕರ ಬೋರ್ಡಿನ ಕೆಳಗೆ ಇದ್ದ ಬೆಂಚಿನ ಅಡಿಯಲ್ಲಿ ನಮ್ಮೆಲ್ಲರ ಊಟದ ಬುತ್ತಿ ಇಡುತ್ತಿದ್ದೇವು. ಅಂದು ನನ್ನ ನೋಟವೆಲ್ಲ ಆ ನನ್ನ ಪೇಪರ್ ನಲ್ಲಿ ಸುತ್ತಿದ್ದ ಕರಿಗಡಬು ಕಣ್ಣಿಂದ ದೂರ ಸರಿಯದಂತೆ ಇದ್ದವು. ಆದರೆ ದೊಡ್ಡಮನಿ ಸಾರ್ ಎಂದರೇ ನನಗೆ ಎಲ್ಲಿಲ್ಲದ ಭಯ ಆ ಕಾರಣದಿಂದಾಗಿ ನಾನು ಪಾಠದ ಕಡೇ ಲಕ್ಷ್ಯ ಕೊಟ್ಟು ಕುಳಿತ್ತಿದ್ದೆ. ಹಾಗೇ ಅವರು ಕೊಟ್ಟ ಮನೆ ಪಾಠವನ್ನು ಅಲ್ಲಿಯೇ ಮಾಡಿ ಮುಗಿಸಿ ಬಿಡುತ್ತಿದ್ದೆ. 

                              ಅಂದು ನನ್ನ ಪೊಟ್ಟಣದ ಮೇಲೆ ಕಣ್ಣು  ಇಡಲು ನಾನು ಆ ನನ್ನ ಇಬ್ಬರು ಗೆಳೆಯರಿಗೂ ಹೇಳಿದ್ದೆ. ಕಾರಣ ಅವರಿಗೂ ಅರ್ಧ ನೀಡುತ್ತೇನೆ ಎಂದು ಭರವಸೆ ನೀಡಿದ್ದೆ. ಆದರೆ ನಮ್ಮ ದೊಡ್ಡಮನಿ ಸಾರ್ ಪಾಠದ ಮುಂದೆ ನನ್ನ ತಿನ್ನುವ ಮನಸ್ಸು ಕಡೇ ಮರೆತು ಓದುವದರತ್ತ ಸರೆದಿದ್ದು ನನಗೆ ತಿಳಿಯದಾಗಿತ್ತು. ಒಂದು ಭಯ ಮತ್ತೊಂದು ಇರಲಿಕ್ಕಿಲ್ಲ ಕಾರಣ ನನಗೆ ಓದು ಎಷ್ಟೇ ಓದಿದರೂ ಅಷ್ಟೇ ಅನ್ನುವ ಮಟ್ಟಿಗೆ ಇದ್ದವನು. ಅತ್ಯಂತ ಬುದ್ದಿವಂತ ಎಂದು ಇಲ್ಲವೇ ಅತ್ಯಂತ ದಡ್ಡನೆಂದೂ ನಾನು ಎರಡರಲ್ಲೂ ಕಾಣಿಸಿ ಕೊಂಡವನಲ್ಲ. ಆದರೆ ಅಂದು ಆ ಸಿಹಿ ಪದಾರ್ಥಗಳ ಮೇಲೆ ನನ್ನ ಹಾಗೂ ನನ್ನ ಗೆಳೆಯರ ಹೆಸರಿರಲಿಲ್ಲ. ಮಧ್ಯಾಹ್ನ ಊಟದ ಹೊತ್ತಿಗೆ ನನ್ನ ಪೊಟ್ಟಣ ಕಾಣೆಯಾಗಿತ್ತು. ನಾನು ತುಂಬಾ ಗೊಂದಲಕ್ಕೆ ಬಿದ್ದೆ. ದುಃಖಿತನಾದೆ. ಆದರೆ ಗೆಳೆಯರಿಂದ ತಿಳಿದಿದ್ದು ನನ್ನ ಆ ಪೊಟ್ಟಣವನ್ನು ಹಾರಿಸಿದ್ದವರು ನನ್ನ ಸಹಪಾಠಿಗಳಾದ ಶಾಂತಾಬಾಯಿ ಮತ್ತು ಗೀತಾಬಾಯಿಯೆಂದು ತಿಳಿಯಿತು. ಅವರು ಬಸ್ ನಿಲ್ದಾಣದ ಕಡೇ ಹೋಗಿರುವುದನ್ನು ತಿಳಿಸಿದರು. ಇದು ಒಂದು ದೊಡ್ಡ ವಿಷಯವಾಗಿ ಅಂದು ಅಲ್ಲಿ  ಬಿತ್ತರವಾಗಿ, ದೊಡ್ಡಮನಿ ಸಾರ್ ಗೆ ಸುದ್ದಿ ಮುಟ್ಟಿ ಅವರು ವಿಚಾರ ಮಾಡುವ ಹೊತ್ತಿಗೆ ಈ ಇಬ್ಬರ ದರ್ಶನ ಬಸ್ ನಿಲ್ದಾಣದಲ್ಲಿ ಸಾಗುತ್ತಿದ್ದದ್ದು ಕಾಣಿಸಿತು. ಅದು ನನ್ನದೇ ಪೊಟ್ಟಣವೆಂದು ನಾನು ಗುರ್ತಿಸಿದೆ. ಮತ್ತು ಇನ್ನೂ ದುಃಖಿತನಾದೆ. ದೊಡ್ಡಮನಿ ಗುರುಗಳ ನನ್ನನ್ನು ಬಯ್ದು 'ಲೇ ಅದಕ್ಕೆಲ್ಲ ಯಾಕೆ ಯೋಚನೆ ಮಾಡ್ತೀಯಾ, ಸುಮ್ಮನಿರು ಅವರ ಬಂದ ಮೇಲೆ ನಾ ವಿಚಾರ ಮಾಡ್ತೀನಿ' ಎಂದು ಏಳನೇ ತರಗತಿ ವಿದ್ಯಾರ್ಥಿಯ ಕೈಯಲ್ಲಿ ಹತ್ತು ರೂಪಾಯಿಗಳನ್ನು ನೀಡಿ ನನಗೆ ಎರಡು ಇಡ್ಲಿ ತರಲಿಕ್ಕೆ ನೀಡಿದರು. ಆ ನನ್ನ ಇಬ್ಬರೂ ಸಹಪಾಠಿಗಳಿಗೆ ಗುರುಗಳು  ಶಿಕ್ಷೆ ನೀಡಿದ್ದು, ಅವರು ನನ್ನೊಂದಿಗೆ ಎಂದು ಮಾತನಾಡಿದ್ದು ಒಂದು ನನಗೆ ನೆನಪಿನಲ್ಲಿ ಉಳಿದಿಲ್ಲ. 

         ಅಲ್ಲಿಯವರೆವಿಗೂ ನನ್ನಲ್ಲಿ ಮಡುಗಟ್ಟಿದ್ದ ದುಃಖ ಮರೆಯಾಗಿ ಸಾರ್ ಅವರು  ನನಗಾಗಿ ನೀಡಿದ್ದ ಹಣ ನನ್ನನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಕಸಿವಿಸಿ ಆಯಿತು ಆದರೂ ಆ ನನ್ನ ಸ್ಥಿತಿ ತೆಗೆದುಕೊಳ್ಳುವಂತೆ ಮಾಡಿತು. ಆ ಎರೆಡು ಇಡ್ಲಿಗಳು ನನ್ನ ಜೀವನದ ಮಹಾ ಪ್ರಸಾದವಾಗಿ ಕಾಣಿಸಿತು. ಎಲ್ಲೋ ಹೋಗಿ ದೇವಸ್ಥಾನಗಳಲ್ಲಿ ಪ್ರಸಾದ ಪಡೆದುಕೊಂಡು ಬರುವಲ್ಲಿ ಇರುವ ಆನಂದಕ್ಕಿಂತ ಹೆಚ್ಚಿನ ಆನಂದ ನನಗೆ ಅಂದು ದೊರಕಿದ್ದು. ಆ ಆನಂದ ನನ್ನ ಜೀವನದ ಪರಮಾನಂದ ಎಂದು ತಿಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಮತ್ತೇ ಅವರನ್ನು ಕಂಡಿದ್ದು ನಾನು ಶಿಕ್ಷಕನಾಗಿ ಒಂದುವರೆ ವರ್ಷಗಳ ನಂತರ. ಅದಾಗಲೇ ಅವರು ನಿವೃತ್ತಿ ಹೊಂದಿದ್ದರು  ಕುಷ್ಟಗಿಗೆ ನಾನು ಹೊರಡುವ ಬಸ್ ನಲ್ಲಿ ಸಿಟ್ ಗಾಗಿ ಹೊಡುಕುವಾಗ ನಾನೇ ಅವರನ್ನು ಮಧ್ಯದ ಸಿಟ್ ನಲ್ಲಿ ವ್ಯವಸ್ಥೆ ಮಾಡಿಕೊಟ್ಟು ಪರಿಚಯ ಮಾಡಿಕೊಂಡೆ. ಅವರು ತಲೆ ಮೇಲೆ ಕೈ ಇಟ್ಟು ಒಳ್ಳೇದಾಗಲಿ ಎಂದು ಹರಸಿದರು. ನನಗೆ ಮತ್ತೇ ಅವರ ಶಕ್ತಿಯನ್ನು ಧಾರೆ ಎರದಂತೆ ತುಂಬಿ ಹೋದೆ. 

(ತಮಗೆ ನೋವಾದರೆ ಕ್ಷಮೆ ಇರಲಿ ಶಾಂತ/ಗೀತಾ)

ಮಂಗಳವಾರ, ಸೆಪ್ಟೆಂಬರ್ 3, 2013

ಮಕ್ಕಳು ರಚಿಸಿದ ಕಥೆಗಳ ನೋಟ


ಹೆಜ್ಜೆಪದ - ಕಥೆ

ಮಂಗಳವಾರ, ಆಗಸ್ಟ್ 20, 2013

ತಾಲಿಂ

                               ಮಕ್ಕಳಲ್ಲಿ ನಾಟಕದ ಕುರಿತು ಕೊಂಚ ಹಿಂಜರಿಕೆ ಇರುವುದನ್ನು ನಾನು ಕಂಡಿದ್ದೇನೆ. ಕಾರಣ ಹಲವಾರು ಇವೆ. ಆದರೆ ನಿಜ ಅರ್ಥದಲ್ಲಿ ವಿವರಿಸುವಲ್ಲಿ ಮಕ್ಕಳಿಗೆ ಮುಟ್ಟಿಸುವ ಹಂತ ಎಲ್ಲೋ ಕಡಿಮೆಯಾಗುತ್ತಿದೆ ಎಂಬ ಭಾವ  ಯಾಕೆಂದರೆ ಅಧುನಿಕ  ರಂಗಭೂಮಿಯ  ಕುರಿತು ಲವಲೇಶ ಕಾಣದ ಈ ಪ್ರದೇಶಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಲಿ  ಅವರ ಪಾಲಕರಿಗೆ ಅರ್ಥೈಸುವ ಹೊತ್ತಿಗೆ ಸಮಯ ಮುಗಿದೇ ಹೋಗಿರುತ್ತದೆ. ವಿದ್ಯಾರ್ಥಿಯನ್ನು ಮೊದಲ ಹಂತದಲ್ಲಿಯೇ ರಂಗಭೂಮಿಯ ನಟನನ್ನಾಗಿಸಲು ನಾವಿಲ್ಲಿ  ಪ್ರಯತ್ನ ಎಂದಿಗೂ ಮಾಡಿಲ್ಲ ಕಾರಣ, ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿ ಪ್ರಪಂಚವನ್ನು ತಮ್ಮ ಕಣ್ಣುಗಳಿಂದಲೇ ನೋಡುವಂಥ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅದು ಗೂಳೆ ಹೋಗುವ ಇಂಥಹ ಸ್ಥಳಗಳ ಪೋಷಕರು ಮಕ್ಕಳ  ಶೈಕ್ಷಣಿಕ ನೆಲೆಯಲ್ಲಿ ದೃಷ್ಟಿ ಹಾಯಿಸುವುದು ತುಂಬಾ ಕಷ್ಟ. ಆದರೆ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಭಾಗುವಹಿಸುವಿಕೆ ಆರೋಗ್ಯಕರವಾಗಿ ಸ್ಪರ್ಧಾ ಸ್ಪೂರ್ತಿಯಿಂದ ಎಷ್ಟರ ಮಟ್ಟಿಗೆ ಇದ್ದು ನಾವು ಕಂಡಿದ್ದೇವೆ. ಕಾಲೇಜುಗಳಲ್ಲಿ ನಡಿಯುವ ವಿಚಾರ ಸಂಕಿರಣಗಳಲ್ಲಿ, ಗೋಷ್ಠಿಗಳಲ್ಲಿ, ಚರ್ಚೆ - ಸಂವಾದಗಳಲ್ಲಿ ನಮ್ಮ ವಿದ್ಯಾರ್ಥಿಗಳ ಭಾಗುವಹಿಸುವಿಕೆಯನ್ನು ಕಾಣಲು ಆಗುತ್ತಲೇ ಇಲ್ಲ. ಪ್ರೌಢಶಿಕ್ಷಣದ ನಂತರ ಮಕ್ಕಳಲ್ಲಿ ಸಂಘಟನಾ ಸಾಮರ್ಥ್ಯವನ್ನು ಕಾಣಲು ಇಚ್ಚಿಸುತ್ತೇನೆ. ಪ್ರಶ್ನಿಸುವ ಇಲ್ಲವೇ ಹುಡುಕಾಟವನ್ನು ನಡೆಸುವ ಛಲ ಅವರಲ್ಲಿ ಸದಾ ಕಂಡರೆ ಒಳ್ಳೆಯದು. ಆದರೆ ಅದು ಸಾಧ್ಯಾವಾಗಿದೆಯೇ ಎನುವುದು. ಮಕ್ಕಳು ತಮ್ಮ ಪೋಷಕರಿಗೆ ತಿಳಿಸಬೇಕು  ನಾನು ಸರಿಯಾದ ಮಾರ್ಗದಲ್ಲಿಯೇ ಇದ್ದೇನೆ ಎಂದು. ದುಡಿದು ಬದುಕುವ ಜನರಲ್ಲಿ ಮಗ/ಮಗಳ ಕುರಿತು ಶಿಕ್ಷಕರಲ್ಲಿ ವಿಚಾರಿಸುವ ಸಮಯವನ್ನು ಹೊಂದಿಸಿಕೊಳ್ಳದೇ ಇದ್ದರೆ ನಮ್ಮ ಮಕ್ಕಳನ್ನು ನಾವು ಎಂದಿಗೂ ದೊಡ್ಡ ಹುದ್ದೆಯಲ್ಲಿ ಕಾಣಲು ಖಂಡಿತ ಸಾಧ್ಯಾವಿಲ್ಲ. ಮಕ್ಕಳನ್ನು ಶಾಲೆಯಲ್ಲಿ ಭಾಗುವಹಿಸುವಿಕೆಯನ್ನು ಕಂಡು ಅವರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸುವ ಮಾತುಗಳನ್ನು ಆಡಿದರೆ ಮಕ್ಕಳು ಎಂದಿಗೂ ಇಂದೆ ಉಳಿಯುವುದಿಲ್ಲ ಸದಾ ಮುಂದೆ ಬರುವ ಪ್ರಯತ್ನ ಮಾಡುತ್ತಾರೆ. ಸೋತರು ಹೆದರಬೇಡ ಪ್ರಯತ್ನ ಪಡು ಮತ್ತೇ ನೀ ಗೆಲ್ಲುತ್ತೀ ಎಂದಾಗ ಕಂಡಿತ ಮಗು ತನ್ನ ಆತ್ಮ ವಿಶ್ವಾಸವನ್ನು ಕಳೆದು ಕೊಳ್ಳದೇ ಉನ್ನತದತ್ತ ಮುಖ ಮಾಡುತ್ತಾನೆ. 

ಸೋಮವಾರ, ಆಗಸ್ಟ್ 12, 2013

ಸರ್ಕಾರಿ ಶಾಲೆಯ ರಂಗ ಚಟುವಟಿಕೆಗಳು

ರಂಗ ಚಟುವಟಿಕೆಯ ಆಧಾರದಿಂದ ಮಕ್ಕಳಿಗೆ ಹೊಸತನದ ಪಾಠವನ್ನು ಹೇಳಿಕೊಡಲು ಸಾಧ್ಯವೆಂದು ಪ್ರಸ್ತುತ ನನ್ನ ಸಹೋಧ್ಯೋಗಿಗಳು ಮಾತಾನಾಡುತ್ತಿರುವುದನ್ನು ಕಂಡು ನನ್ನನ್ನು ನಾನೇ ನಂಬಲಾಗಲಿಲ್ಲ. ಈ ವಾತವರಣ ಬರಲು ನಾನು ಐದು ವರ್ಷ (ಡಿಸೆಂಬರ್ ಗೆ) ಕಾಯಬೇಕಾಯಿತು. ಆದರೆ ಇದು ಸಂಪೂರ್ಣ ಸತ್ಯವು ಅಲ್ಲ. ಆ ದಿನಗಳು ದೂರಿಲ್ಲ ಎಂಬ ಭಾವನೆಯು ನನ್ನ ಗೆಳೆಯರು, ಹಿತೈಷಿಗಳು ನನ್ನೊಂದಿಗೆ  ಹಂಚಿ ಕೊಂಡಿದ್ದು ಇದೆ. ನಾಟಕ ಎಂದರೆ ಕೇವಲವಾಗಿ ಮಾತಾನಾಡುತ್ತಿದ್ದ ನಮ್ಮ ಉತ್ತರದ ಭಾಗದಲ್ಲಿ ಹೊಸತನದ ಅಧುನಿಕ ನಾಟಕಗಳ ಕುರಿತು ಪಾಠವನ್ನು ಮಾಡುವ ನಾವು ನಿಲ್ಲಲು ಸಾಧ್ಯಾವೇ ಎಂಬ ಪ್ರಶ್ನೆಗಳು ಹುಟ್ಟಿದ್ದು ಇದೆ. ಪ್ರೌಢಶಾಲೆಗಳಲ್ಲಿ ನಾಟಕ ಶಿಕ್ಷಕರನ್ನು ೧೯೮೨ ರಲ್ಲಿಯೇ ಆಯ್ಕೆ ಪ್ರಾರಂಭಿಸಿದ್ದರೂ ಇಲ್ಲಿಯವರೆಗೂ ೬೦ ರಿಂದ ೭೦ ರ ಸಂಖ್ಯೆಯು ದಾಟಿಲ್ಲ ಆದರೆ ಇದು ಹೆಚ್ಚಿನ ಶಿಕ್ಷಕರನ್ನು  ಮೈಸೂರು ವಿಭಾಗದಲ್ಲಿ ಸರ್ಕಾರ ನಾಟಕ  ಶಿಕ್ಷಕರನ್ನು ತೆಗೆದು ಕೊಂಡಿದೆ. ಗುಲ್ಬಾರ್ಗ ಹಾಗೂ ಬೆಳಗಾವಿ ವಿಭಾಗದಲ್ಲಿ ತುಂಬಾ ಕಡಿಮೆ. 

ಕರ್ನಾಟಕ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಎಷ್ಟೇ ಹಿಂದಿನಿಂದಲೂ ಬಂದರೂ  ಸಮೃದ್ಧಿಯಾಗಿ ಇಂದಿನ  ವಿದ್ಯಾರ್ಥಿಗಳಲ್ಲಿ  ಕಾಣಲು ಸಾಧ್ಯಾವಾಗಿಲ್ಲ. ನೀನಾಸಂ,ರಂಗಾಯಣ, ಶಿವಸಂಚಾರ ರಂಗ ತಂಡಗಳು ನಿರ್ಮಾಣವು ಉತ್ತರ ಕರ್ನಾಟಕದ  ಭಾಗಗಳಲ್ಲಿ ಕಾಣಲು ಸಾಧ್ಯಾವಾಗಿಲ್ಲ. ಗುಲ್ಬಾರ್ಗದಲ್ಲಿ ರಂಗಾಯಣ ನಿರ್ಮಾಣಕ್ಕೆ ಬಡ್ಜ್ ಟ್ ನಲ್ಲಿ ಘೋಷಣೆಯನ್ನು ಮಾಡಿದ್ದಾರೆ ಆದರೆ ನಮ್ಮ ಗ್ರಾಮೀಣ ಜನರಿಗೆ ಹಾಗೂ  ಮಕ್ಕಳಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಕತ್ತಲೆಯಲ್ಲಿ ಇಡುತ್ತೇವೆ ಎಂದು  ತಿಳಿಯುತ್ತಿಲ್ಲ. ಈಗ ಇರುವ ನಾಟಕ ಶಿಕ್ಷಕರನ್ನು ಅವರ ಕಾರ್ಯಗಳನ್ನು ಅವರ ಶಾಲೆ-ಹಳ್ಳಿಗಳಿಗೆ ಬೇಟಿ ನೀಡಿ ಇಲಾಖೆಯ ತಜ್ಞರು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ರಂಗ ಚಟುವಟಿಕೆಗಳ  ಕಾರ್ಯಗಳಿಂದ ಆದ ಬದಲಾವಣೆಗಳನ್ನು ಮಕ್ಕಳಿಂದಲೇ  ಕಾಣಬಹುದು. ಸಣ್ಣ ಸಣ್ಣ ಕಾರ್ಯ ಚಟುವಟಿಕೆಗಳಿಂದ ಮಕ್ಕಳಲ್ಲಿ ಇರುವ ಉತ್ಸಾಹ ಅವರು ಒಂದು ಸಂಪೂರ್ಣ ನಾಟಕವನ್ನು ಎಲ್ಲ ಪರಿಕರ, ರಂಗ ಸಜ್ಜಿಕೆ, ರಂಗ ವಿನ್ಯಾಸ, ಬೆಳಕಿನ ಹಾಗೂ ವೇಷ ಭೂಷಣಗಳೊಂದಿಗೆ ಮಕ್ಕಳು ವೇದಿಕೆಯ ಮೇಲೆ ಕಂಡರೆ ಅವರಲ್ಲಿ ಹುಟ್ಟುವ ಅಭಿನಯವನ್ನು ಕಾಣುವ ಅವರ ತಂದೆ ತಾಯಿಗಳ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಕಾಣುವುದೇ ಬಹಳ ಮುಖ್ಯ.


ಮಂಗಳವಾರ, ಆಗಸ್ಟ್ 6, 2013

ಹಾಲು ವಿತರಣೆಯ ಮೊದಲ ದಿನ












                   ಗೆಳೆಯರೊಬ್ಬರು ಈ ಛಾಯ ಚಿತ್ರಗಳನ್ನು ನೋಡಿ ಪ್ಲಾಸ್ಟಿಕ್ ಬಳಕೆ ಮಾಡಬಾರದಿತ್ತು ಎಂದು ಸಲಹೆ ನೀಡಿದರು. ಹೌದು ಅನಿವಾರ್ಯ ಕಾರಣಗಳಿಂದ ನಮ್ಮ ಶಾಲೆಯಲ್ಲಿ ಮೊದಲದಿನ ಪ್ಲಾಸ್ಟಿಕ್ ಬಳಕೆ ಮಾಡಲೇ ಬೇಕಾಯಿತು. ಮಕ್ಕಳಲ್ಲಿ ಸರ್ಕಾರದ ಹೊಸತನಗಳು ಸಂತೋಷವನ್ನು ಉಂಟು ಮಾಡ ಬೇಕಾಗಿರುವುದು. ಹಾಲು ಹಾಲಿನಂಥಹ ಮನಸ್ಸುಗಳಿಗೆ ಉನ್ನತ ಶಿಕ್ಷಣದ ಹಾದಿಯತ್ತ ಮಕ್ಕಳು ಸಾಗಲು ಒಂದು ಒಳ್ಳೆಯ ವೇದಿಕೆಯಾಗಬೇಕಿದೆ. ಶಿಕ್ಷಕರೆಲ್ಲ ಈ ಕಾರ್ಯಕ್ರಮದಲ್ಲಿ  ಮಕ್ಕಳೊಂದಿಗೆ ಭಾಗವಹಿಸಿದ್ದು ಅದು ಯಾವಗಲೂ ನಿರಂತರವಾಗಿ  ಮಕ್ಕಳ ಶೈಕ್ಷಣಿಕ ಸಮಸ್ಯಗಳನ್ನು ಉಚಿತ ಸಮಯದಲ್ಲಿ ಬಗೆಹರಿಸುವುದು ಮಕ್ಕಳ ಜ್ಞಾನ ವೃದ್ಧಿಯಾಗಲು ಸಾಧ್ಯತೆ ಇದೆ. 


ಸೋಮವಾರ, ಜುಲೈ 29, 2013

ಎಚ್.ಎ. ಅನಿಲ್ ಕುಮಾರ ಬೇಟಿ

H.A.Anil Kumar
              
ಎಚ್.ಎ. ಅನಿಲ್  ಕುಮಾರ  ಚಿತ್ರಾಕಲಾ ಪರಿಷತ್ ನ ಪ್ರಾಧ್ಯಾಪಕರು ನಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಗಮನಿಸಲು ಆಗಮಿಸಿದ್ದರು.  ಅನುಪಮಾ ಪ್ರಕಾಶ ನಮ್ಮ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದಂತೆ ಅನಿಲ್ ಬರ್ತಾರೆ, ನೀನು ಮಾಡಿದ ಕಾರ್ಯಗಳ ಕುರಿತು ತಿಳಿಸು ಜೊತೆಗೆ ಏನೇನು ತೋರಿಸಲಿಕ್ಕೆ ಆಗುತ್ತದೆ ಅವುಗಳೆಲ್ಲವನ್ನು ಅವರಿಗೆ ತೋರಿಸು. ಎಂದಾಗ ನಾನು ಅನಿಲ್ ಕುಮಾರ ಅವರ ಕುರಿತು ತಿಳಿಯಲು ಪ್ರಯತ್ನಿಸಿದೆ. ಪ್ರಜ್ಞಾ ಹೇಳಿದ್ದು  "ಅಲ್ಲಾ ಕಣೋ ಅವರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಬಂದಿದೆಯೋ" ಎಂದಾಗ ನನ್ನ ಎದೆ ಧಸಕ್ಕೆಂದಂತಾಯಿತು. ಯಾಕೆಂದರೆ ಇಷ್ಟೆಲ್ಲ ಖ್ಯಾತ ವ್ಯಕ್ತಿಗಳು ನಮ್ಮ ಸಣ್ಣ ಹಳ್ಳಿಯ ಶಾಲೆಗೆ ಬೆಂಗಳೂರಿನಿಂದ ಬರುವಂಥಹ ವ್ಯಕ್ತಿಗೆ ಯಾವ ತರಹದಲ್ಲಿ ಉಪಚರಿಸಬೇಕು ಎಂದು ಸಂಕಷ್ಟದಲ್ಲಿ ಬಿದ್ದೆ. ಅವರ ಬರುವ ದಿನಗಳ ಲೆಕ್ಕ ಸಾಗುತ್ತಲೇ ಇತ್ತು. ಈ ಕಡೇ ನಮ್ಮ ಮಕ್ಕಳ ತಾಲೀಮು ನಡೆದಿದ್ದೆ. ಮಳೆ-ಗಾಳಿಗೆ ತಲೆ ಕೊಡದೇ ದಿನಾಲೂ ಮಧ್ಯಾಹ್ನದ ಒಂದು ಅವಧಿಯನ್ನು ಮುಗಿಸಿಕೊಂಡು ನಾಟಕದ ಅಭ್ಯಾಸ ನಡದೇ ಇತ್ತು. ಕುತೂಹಲವು ಇಲ್ಲಿ ಇದ್ದದ್ದು ಕಾಣುತ್ತಿತ್ತು ಕಾರಣ ನಾಟಕ ಅಂತ್ಯ ಹೇಗೆ ಎನ್ನುವುದು. ಶಿಕ್ಷಕರು ಕೊನೆ ಹೇಗೆ ಮಾಡುತ್ತೀರಿ ಮತ್ತು  

ಯಾವಾಗ ಎಂಬ ಪ್ರಶ್ನೆಗಳು ಸದಾ ನನ್ನ ಕಿವಿಯಲ್ಲಿ ಕೇಳುತ್ತಿದ್ದನ್ನು ಅಷ್ಟೇ ಆನಂದದಿಂದ ಆಲಿಸುವ ಕಾರ್ಯವನ್ನು ಮಾಡುತ್ತಿದ್ದೆ. ನನಗೆ ಅನಿಲ್ ಅವರು ಬಂದಾಗ ಈ ಮಕ್ಕಳ ತಾಲೀಮು ಇಷ್ಟ ಆಗಬಹುದೇ ಎಂಬುವ ಮತ್ತು ಅವರು ಬಂದ ಸಮಯದಲ್ಲಿ ಮಳೆ ಬರದೇ ಇರಲಿ ಎನ್ನುವುದು. ತಾಲೀಮನ್ನು ಕೋಣೆಯಲ್ಲಿ ತೋರಿಸಲಿಕ್ಕೆ ಆಗೋದೇ ಇಲ್ಲ. ಇರೋ ವೇದಿಕೆಯ ಕಟ್ಟೆಯ ಮೇಲೆ ನಮ್ಮ ಮಕ್ಕಳ ತಾಲೀಮಿನ ಆಯ್ದ ಭಾಗವನ್ನು ಇಡೋದು. ಸದಾ ಧಾರವಾಡದಿಂದ ಯಾರೇ ಅತಿಥಿಗಳನ್ನು ಕರೆದುಕೊಂಡು ಬರುವ ಸಾರಥಿ ರಾಮುವಿಗೆ ಬೆಳಿಗ್ಗೆನೆ ಪೋನಾಯಿಸಿದೆ. ರಾಮು ನಾನು ಇಲ್ಲಿಂದ ಬಿಡುವಾಗ ಮಿಸ್ ಕಾಲ್ ಕೊಡ್ತೀನಿ ಸಾರ್ ಅಂದ. ಇದು ನಮ್ಮ ಸಂಕೇತ ಸಿದ್ಧತೆಯಲ್ಲಿ ಇರಲು. ಗಡ ದಿಂದ ಹಿಡಿದು ಶಾಲೆಗೆ ಹೋಗುವ ವರೆವಿಗೂ ಮಳೆಯ ಹನಿ ಸುರಿಯುತ್ತಲೇ ಇತ್ತು. 




ಬಿಸಿಲೇ ಸದಾ ಇರುವ ನಮ್ಮ ಪ್ರದೇಶಗಳಲ್ಲಿ ಯಾರೋ ಬರುವ ಸಮಯಗಳಲ್ಲಿ ಮಳೆ ಅನಿರೀಕ್ಷಿತ ಎಂಬಂತೆ ಬರುವುದು ಶಿಕ್ಷಕರೆಲ್ಲರಲ್ಲೂ  ಚಿಂತೆಗೆ ಕಾರಣವಾಗಿತ್ತು. ಅನಿಲ್ ಸಾರ್ ಬಂದಾಕ್ಷಣ ನಮ್ಮ ಮಕ್ಕಳ ನೋಟವೆಲ್ಲ ಅವರತ್ತಲೇ ನೆಟ್ಟಿರುತ್ತದೆ. ಶಿಕ್ಷಕರೆಲ್ಲ ಪರಿಚಯ ಚಹಾ ಆದ ತಕ್ಷಣ ನಾವು ಕಂಪ್ಯೋಟರ್ ಕೋಣೆಗೆ ತೆರೆಳಿ ಅಲ್ಲಿ ಈಗಾಗಲೇ ಸಿದ್ಧ ಪಡಿಸಿದ್ದ ನಮ್ಮ ಇಲ್ಲಿನವರೆಗಿನ ಚಟುವಟಿಕೆಗಳ ಕುರಿತು ಅಪೂರ್ಣವಾದ ಸಾಕ್ಷ್ಯಚಿತ್ರವನ್ನು ವಿಕ್ಷಿಸಲು ಮತ್ತು ಅದು ನಮ್ಮ ವಿಕ್ಷಕರ ಇಂದಿನ  ಒಂದು ಕಾರ್ಯವೆಂದೇ ತೆರಳಿದೆವು. ಹತ್ತು ನಿಮಿಷದ ಚಿತ್ರವನ್ನು ವಿಕ್ಷೀಸಿದ ನಂತರ ಆದ ಚಟುವಟಿಕೆಗಳನ್ನು ವಿವರವಾಗಿ ಕೇಳುತ್ತಾ ನಮ್ಮ ಕೋಣೆಯ ಹಿಂಬಾಗದಿಂದ ಸಾಗಿದೆವು. ಇಲ್ಲಿ ನಮ್ಮ ಮಾತುಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದಿದ್ದು ಹತ್ತನೆಯ ತರಗತಿಯ ವಿದ್ಯಾರ್ಥಿ ಮಲ್ಲಿಕಾರ್ಜುನ ತೆಂಗಿನಕಾಯಿ. ತರಗತಿ ಕೋಣೆಯ ಹಿಂಬಾಗದಿಂದ ಸಾಗೋಣವೆಂದು ಅನಿಲ್ ಅವರು ಮಾತಾನಾಡುತ್ತಾ ತೆರಳಿದಾಗ ವಿದ್ಯಾರ್ಥಿ ಮಲ್ಲಿಕಾರ್ಜುನ ಹಾಗೂ ರುದ್ರಯ್ಯ ನಿಗೆ ಹಿಡಿಸಲಾರದಾಗಿತ್ತು. ಕಾರಣ ಅವರೇ ಹೇಳುವಂತೆ 'ಸಾರ್ ಕಸ,ಪೇಪರ್,ಎಲ್ಲವನ್ನಾ ನಾವು ಕಿಟಕಿಯಿಂದ ಹೊರ ಹಾಕ್ತೀವಿ. ಈ ಸಾರ್ ಅದೇ 






ಗುರುವಾರ, ಜುಲೈ 25, 2013

ಪತ್ರಿಕೆ



                          ಸಂತೋಷ ಗುಡ್ಡಿಯಂಗಡಿಯ ಹೊಸ ಶಾಲೆಯ ಹೊಸ ಮಕ್ಕಳ ಪತ್ರಿಕೆ ರಾಜ್ಯದ ಎಲ್ಲ  ಶಾಲೆಯ ಮಕ್ಕಳ ಬರವಣಿಗೆಗಳನ್ನು ದಾಖಲಿಸುವ ಹೊಸ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಿ  ಮಕ್ಕಳ  ಹಿತವನ್ನು ಸೃಜನಶೀಲತೆಯ ಪ್ರಯತ್ನಕ್ಕೆ ಅಣಿ ಮಾಡಬೇಕಾಗಿದೆ.   

ರಂಗ ತಾಲೀಂ ಅವಧಿಯಲ್ಲಿ ತೆಗೆದ ಚಿತ್ರಗಳು













ರಂಗ ತಾಲೀಂ ಅವಧಿಯಲ್ಲಿ ತೆಗೆದ ಚಿತ್ರಗಳು