ತಿಪ್ಪಣ್ಣ ರಾಮದುರ್ಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ತಿಪ್ಪಣ್ಣ ರಾಮದುರ್ಗ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಜನವರಿ 2, 2019

ಶಾಲಾ ಶೈಕ್ಷಣಿಕ ಪ್ರವಾಸದ ಮುಂದುವರಿದ ಭಾಗ








ಶ್ರವಣ ಬೆಳಗೊಳ:----

ಗಂಗರ ಮನೆತನದಲ್ಲಿ ಬರುವ ರಾಜ ನಾಲ್ಕನೆಯ ರಾಚಮಲ್ಲ ,ಇತನ ಆಸ್ಥಾನದಲ್ಲಿದ್ದ ದಂಡನಾಯಕ ,ಕಲಿಯೂ, ಕವಿಯೂ ಆಗಿದ್ದವರು ಚಾವುಂಡರಾಯ....
ಚಾವುಂಡರಾಯನು ಕೆತ್ತಿಸಿದ ೫೮ಅಡಿ ಎತ್ತರದ ಬಾಹುಬಲಿ ವಿಗ್ರಹ ನೋಡಲು ಮನಮೋಹಕ ಮತ್ತು ಅತ್ಯಾಕರ್ಷಕ.
ಗುಡ್ಡ ಏರುವದಕ್ಕಿಂತ ಪೂರ್ವ ದಲ್ಲಿ ನಮ್ಮ ವಿದ್ಯಾರ್ಥಿಗಳು ಊಟವನ್ನು ಸವಿದರು. ನಂತರ ದರ್ಶನ ಕ್ಕೆ ಅಣಿಯಾದೆವು......
ನಮ್ಮ ಹುಡುಗರೆಲ್ಲರೂ ಅತೀವ ಆಸಕ್ತಿ ಮತ್ತು ಉತ್ಸಾಹದಿಂದ ಮೇಲೇರಿ ಕಣ್ತುಂಬಿಕೊಂಡರು.೫೮ಅಡಿ ಎತ್ತರದ ಬಾಹುಬಲಿ ಸನ್ನಿಧಿಯಲ್ಲಿ ಕಳೆದ ಕ್ಷಣಗಳು ನಮಗೆಲ್ಲಾ ಖುಷಿ ನೀಡಿದವು.
ಜೈನರ ಪುಣ್ಯಕ್ಷೇತ್ರದಲ್ಲಿ ಮಕ್ಕಳೆಲ್ಲರೂ ಶಾಪಿಂಗ್ ಮಾಡಿದರು.ಪೂರ್ವ ನಿರ್ದಾರದಂತೆ ಅಲ್ಲಿಯೇ ವಾಸ್ತವ್ಯ ಮಾಡಿದೆವು.ರಾತ್ರಿಯ ಊಟ (ರೊಟ್ಟಿ, ಚಪಾತಿ,ಅನ್ನ,ಸಾಂಬರ್,ಉಪ್ಪಿನಕಾಯಿ)ಸವಿದು ನಿದ್ರೆಗೆ ಜಾರಿದೆವು.
ಮರುದಿನ ಬೆಳಗಿನ ಜಾವದಲ್ಲಿ ತಿಂಡಿಗೆ ಉಪ್ಪಿಟ್ಟು, ಊಟಕ್ಕೆ ಫಲಾವ್ ವನ್ನು ಸಿದ್ದಪಡಿಸಿಕೊಂಡು ಎರಡನೆಯ ದಿನದ ಪ್ರವಾಸಕ್ಕೆ ಮೈಸೂರು ಕಡೆಗೆ ಪ್ರಯಾಣ
ಪ್ರಾರಂಭಿಸಿದೆವು.
ಚಾಮುಂಡೇಶ್ವರಿ ತಾಯಿಯ ದರ್ಶನದಲ್ಲಿ ಸಾಕಷ್ಟು ಸಂಖ್ಯೆಯ ಪ್ರವಾಸಿಗರು ಇದ್ದರು.ಹೊರಗಿನಿಂದಲೆ ದರ್ಶನ ಪಡೆದು ಅರಮನೆಯತ್ತ ಪ್ರಯಾಣ ಸಾಗಿತು.
ಮುಂದುವರೆಯುವದು.....

ಸೋಮವಾರ, ಡಿಸೆಂಬರ್ 31, 2018

ಶಾಲಾ ಶೈಕ್ಷಣಿಕ ಪ್ರವಾಸದ ಮುಂದುವರಿದ ಭಾಗ

ಒಗ್ಗಟ್ಟಿನಲ್ಲಿ ಬಲ ಎಂಬ ಉಕ್ತಿಯಂತೆ ನಮ್ಮ ತಂಡ ಯಶಸ್ವಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿತು.ಮೊದಲನೆ ತಂಡದಲ್ಲಿ ಶ್ರೀ ಈಶಪ್ಪ ಬಿ ತಳವಾರ -ಮುಖ್ಯ ಗುರುಗಳು,ಜಗದೀಶ್ ಬಾಸಿಂಗದ,ಮರಿಯಪ್ಪ ಜರಕುಂಟಿಯವರು ಮೇಲ್ವಿಚಾರಣೆ ವಹಿಸಿದ್ದರು.
ಎರಡನೇ ತಂಡ-ಶಿವಪ್ಪ ಇಲಾಳ, ಸಂಗನಗೌಡ ಪಾಟೀಲ್, ಶ್ರೀದೇವಿ ಗುಳಬಾಳ ಮೇಡಮ್ ಇದ್ದರು.
ಮೂರನೇ ತಂಡ-ನಾನು ಅಂದರೆ ತಿಪ್ಪಣ್ಣ ರಾಮದುರ್ಗ ಮತ್ತು ಪ್ರಶಾಂತ ಕಟ್ಟಿ ಯವರಿದ್ದರು.
ಈ ರೀತಿಯಲ್ಲಿ  ಮೂರು ವಾಹನಗಳು ಶರವೇಗದಲ್ಲಿ ಹೋರಟು ಎಡೆಯೂರು ತಲುಪಿ  ಸಿದ್ಧಲಿಂಗೇಶ್ವರನ ದರ್ಶನ ಪಡೆದೆವು. ಧಾರ್ಮಿಕವಾಗಿ ಪ್ರಮುಖ ಶಕ್ತಿಕೇಂದ್ರ ಮತ್ತು ಭಕ್ತಿಕೇಂದ್ರ ಇದಾಗಿದೆ.
ಈ ಸ್ಥಳದಲ್ಲಿ ವಿದ್ಯಾರ್ಥಿಗಳು ತಿಂಡಿ ತಿನಿಸುಗಳನ್ನು  ಸವಿದರು.ಮುಂದಿನ ಪ್ರಯಾಣವನ್ನು ಮೇಲುಕೋಟೆಯ ಕಡೆಗೆ ಬೆಳೆಸಿದೆವು
ಮೇಲುಕೋಟೆಯಲ್ಲಿ ಚೆಲುವ ನಾರಾಯಣ ಸ್ವಾಮಿ ದರ್ಶನ ಪಡೆಯುವಲ್ಲಿ ಸಮಯದ ವಿಳಂಬತೆಯಾಯಿತು .ಈಗಾಗಲೇ ನಿರ್ದರಿಸಿದಂತೆ ಮೊದಲನೆಯ ದಿನದ ವಾಸ್ತವ್ಯದ ಸ್ಥಳವಾದ ಶ್ರವಣಬೆಳಗೊಳದ ಗೊಮ್ಮಟೇಶ್ವರ ಕಡೆ ಪ್ರಯಾಣ ಬೆಳೆಯಿತು.
ಮುಂದುವರೆಯುವದು......

ಭಾನುವಾರ, ಡಿಸೆಂಬರ್ 30, 2018

ಶಾಲಾ ಶೈಕ್ಷಣಿಕ ಪ್ರವಾಸ


ಶ್ರೀ ತಿಪ್ಪಣ್ಣ  ರಾಮದುರ್ಗ
            ಸ ಶಿ(ಕಲಾ ಕನ್ನಡ)
ಸ ಪ್ರೌ ಶಾಲೆ ಜಹಗೀರ ಗುಡದೂರ
ಸೆಲ್ ನಂಬರ್-9480756727.


2018-19 ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸ ನನ್ನ ಶಾಲಾ ಜೀವನದ ನೆನಪುಗಳನ್ನು ಮರುಕಳಿಸುವದರ ಜೊತೆಗೆ ಅಚ್ಚಳಿಯದೆ ಉಳಿದಿದ್ದು ಈಗ ಇತಿಹಾಸ.......
ನಾಲ್ಕು ದಿನಗಳ ಪ್ರವಾಸ ದಿನಾಂಕ ೨೪/೧೨/೨೦೧೮ ರಂದು ರಾತ್ರಿ ೯ಗಂಟೆಗೆ ಪ್ರಾರಂಭವಾಯಿತು. ೧೪೫ ವಿದ್ಯಾರ್ಥಿಗಳ ಜೊತೆಗೆ ೧೨ ಜನ ಶಾಲಾ ಸಿಬ್ಬಂಧಿಯನ್ನು ಕರೆದೊಯ್ಯಲು ಗಜೇಂದ್ರಗಡ ಘಟಕ ದಿಂದ ೨ ಬಸ್ಸುಗಳು ಮತ್ತು ಹನಮನಾಳದಿಂದ ಮಿನಿ ಬಸ್ ಬಂದವು.
ನಮಗೆ ವಹಿಸಿದ ಜವಾಬ್ದಾರಿಯಂತೆ ಊಟದ ಸಾಮಾಗ್ರಿಗಳನ್ನು ವಾಹನಗಳಲ್ಲಿಟ್ಟು ವಿದ್ಯಾರ್ಥಿಗಳನ್ನು ವಾಹನಗಳಲ್ಲೆರಿಸಿ ನನಗೆ ಹಂಚಿಕೊಟ್ಟ ಮಿನಿ ಬಸ್ಸನೇರಿ ವಿದ್ಯಾರ್ಥಿಗಳ ರಸಭರಿತ ಉತ್ಸಾಹದೊಂದಿಗೆ ಪ್ರಯಾಣ ಆರಂಭವಾಯಿತು.
ನಮ್ಮ ಪ್ರಯಾಣದಲ್ಲಿ ಚಿಕ್ಕನಾಯಕನಹಳ್ಳಿಯ ಹತ್ತಿರ ಬೆಳಗಿನ ಜಾವ ೪ಗಂಟೆಗೆ ಚಹ ಸೇವಿಸಿ ಪ್ರಯಾಣ ಮುಂದುವರೆಸಿದೆವು...
ಮಾರ್ಗ ಮದ್ಯದಲ್ಲಿ ನೀರಿನ ಅನುಕೂಲ ವಿರುವ ಕಡೆ ನಿಲ್ಲಿಸಿ ಬೆಳಗಿನ ಕರ್ಮಗಳನ್ನು ಮುಗಿಸಿಕೊಂಡು ಕಾಲ ಭೈರವೇಶ್ವರ ದರ್ಶನ ಪಡೆಯಲು ನಾಡಿನ ಪ್ರಮುಖ ದಾರ್ಮಿಕ, ಶೈಕ್ಷಣಿಕ ಶಕ್ತಿ ಕೇಂದ್ರವಾದ ಆದಿಚುಂಚನಗಿರಿ ತಲುಪಿದಾಗ ೭ಗಂಟೆ ೪೫ನಿಮಿಷವಾಗಿತ್ತು.
ಬೆಟ್ಟದ ಮೇಲಿರುವ ಕಾಲ ಬೈರವನ ದರ್ಶನ ನಮ್ಮೆಲ್ಲರನ್ನು ಮಂತ್ರ ಮುಗ್ದರನ್ನಾಗಿಸಿತು.....
   ದೇವಾಲಯದ ಇತಿಹಾಸವನ್ನು ಅಲ್ಲಿನ ಪ್ರಮುಖರು ಅಚ್ಚು ಕಟ್ಟಾಗಿ ತಿಳಿಸಿದರು. ನಮ್ಮ ವಿದ್ಯಾರ್ಥಿಗಳು ಆಸಕ್ತಿಯಿಂದ ತಿಳಿದುಕೊಂಡರು.ಅಷ್ಟೋತ್ತಿಗೆ ಉಪಹಾರದ ಸಮಯವಾಗಿದ್ದರಿಂದ ದೇವಾಲಯದ ಭೋಜನ ಮಂದಿರಕ್ಕೆ ತೆರಳಿ "ಪುಳಿಯೊಗರೆ" ಯನ್ನು ಸವಿದು, ನಾಡಿನ ಅಮೂಲ್ಯ ರತ್ನಗಳಾದ
ಸರ್ ಎಂ ವಿಶ್ವೇಶ್ವರಯ್ಯ
ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ಮತ್ತು ಬಾಲ ಗಂಗಾಧರ ನಾಥ ಸ್ವಾಮಿಗಳ ಜೀವನ ಮತ್ತು ಸಾಧನೆಗಳನ್ನು ತಿಳಿದುಕೊಂಡು ಮುಂದಿನ ಸ್ಥಳ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನ ಪಡೆಯಲು ನಮ್ಮ  ,ನಮ್ಮ ವಾಹನಗಳನ್ನೇರಿ ಹೊರಟೆವು........
ಮುಂದುವರೆಯುವದು......