ಶುಕ್ರವಾರ, ಸೆಪ್ಟೆಂಬರ್ 13, 2013

ರಂಗದ ಹಿಂದೆ


           ರಂಗಭೂಮಿಯೇ ಆಗಿರಲಿ, ಇನ್ನಾವುದೇ ರಂಗದಲ್ಲಿ ಈ ರಂಗದ ಹಿಂದೆ ನಡೆಯುವ ಕ್ರಿಯೆ, ಕಾರ್ಯಗಳು ತಿಳಿಯುವುದೇ ಇಲ್ಲ ಕಾರಣ ಅವರು  ಎಂದಿಗೂ ರಂಗದ ಮುಂಬಾಗದಲ್ಲಿ ಬರಲು ಪ್ರಯತ್ನವನ್ನೇ ಮಾಡುವುದಿಲ್ಲ ಹೀಗಾಗಿ ಎಷ್ಟೋ ಕಾರ್ಯಗಳನ್ನು ಒಂದು ಪ್ರದರ್ಶನ ಅಥಾವ ಇನ್ನಾವುದೇ ರಂಗದಲ್ಲಿಯೇ ಆಗಲಿ ತೊಡಗಿಕೊಂಡ ಶ್ರಮಗಾರರು ಎಂದಿಗೂ ಹಿಂದೆಯೇ ಇರುತ್ತಾರೆ.  ಶಶಿಧರ ಅಡಪ ಅಂಥಹ ವ್ಯಕ್ತಿಗಳು ಎಷ್ಟೋ ಶ್ರದ್ಧೆ ಹಾಗೂ ಕಾರ್ಯಚಟುವಟಿಕೆಯಿಂದ ಮುಂದೆ ಬರಲು ಸಾಧ್ಯ. ನಾನಿಲ್ಲಿ ಅಂಥಹ ಎಷ್ಟೋ ಜನರನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. 

                     ಹಳ್ಳಿಯ ಜನ, ಶಿಕ್ಷಕರು  ಹಾಗೂ ನಮ್ಮ ಮುದ್ದು ವಿದ್ಯಾರ್ಥಿಗಳು ಸಾಕಷ್ಟು ಈ ರಂಗದ ಹಿಂದೆ (Back stage work) ಕಾರ್ಯಗಳನ್ನು ಕೈಗೊಂಡಿರುವವರನ್ನು ನಾವು ನೆನೆಯಲೇ ಬೇಕು. ನಮ್ಮ ಇಡೀ ರಂಗಚಟುವಟಿಕೆಯಾಗಿರಲಿ ಅಥಾವ ಶಾಲೆಯ ಯಾವುದೇ ಕೆಲಸ ಕಾರ್ಯಗಳಲ್ಲಿ ಹಳೇಯ ವಿದ್ಯಾರ್ಥಿಗಳು ಸದಾ ಸಹಾಯಕರಾಗಿರುತ್ತರೆ. "ಮಕ್ಕಳ ಹೆಜ್ಜೆಗಳು ಜಾನಪದದತ್ತ... " ಯೋಜನೆಯಲ್ಲಿಯಂತು ವಿದ್ಯಾರ್ಥಿಗಳಿಂದಲೇ ಪ್ರಸ್ತಾವನೆಯ ಕುರಿತು ವಿಚಾರವನ್ನು ಆಲೋಚನೆ ಮಾಡಿ ಶಾಲೆಯ ವೃಂದದವರಿಂದ ಕೆಲವು ಮಾರ್ಗಗಳನ್ನು ಹಾಗೂ  ವಿವರಣೆಗಳನ್ನು ತಿಳಿದುಕೊಂಡು ಮುಂದುವರೆದರೆ, ಕಲಿಕೆಯಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಹಳ್ಳಿಯ ಪಾಲಕರೇ ಶಾಲೆಗೆ ಬಂದು ನಾವು ಊರೊಳಗೆ ತೆರಳಿ ಅವರ ಅನುಭವ ಹಾಗೂ ಚಿಂತನೆಯನ್ನು ನಾವು ನಮ್ಮೊಂದಿಗೆ ಮಕ್ಕಳ ಕೂಡಿ ಕಲಿಯವಿಕೆ ತುಂಬಾ ಉಪಯೋಗವಾಯಿತು ಎಂದು ಹೇಳಬಹುದು.