ಮಂಗಳವಾರ, ಜನವರಿ 30, 2018

ಭಾನುವಾರ, ಜನವರಿ 28, 2018

ಶನಿವಾರ, ಜನವರಿ 27, 2018

ಕಳ್ಳ ಬೆಕ್ಕು ಕಾಡು ಬೆಕ್ಕು

ಬೆಕ್ಕು ಬಂತು ಬೆಕ್ಕು
ಕಾಡು ಬೆಕ್ಕು ಬಂತು
ಒಂದು ಮನೆಯ ನುಗ್ಗಿತು
ರೊಟ್ಟಿ ತಿಂದು ಬಂದಿತು

ಸಂಜೆ ಮರಳಿ ಬಂದಿತು
ಬೆಣ್ಣೆ ಕದ್ದು ತಿಂದಿತು
ಮಜ್ಜಿಗೆ ಕುಡಿಯಲು ಹೋಯಿತು
ನಾಯಿ ನೋಡಿ ಓಡಿತು

ಮರುದಿನ ಬೆಕ್ಕು ಬಂದಿತು
ಆಕಳು ಹಾಲು ಕುಡಿಯಿತು
ಪಕ್ಕದಲ್ಲಿದ್ದ ಇಲಿಯ ಕಂಡು
ತಿನ್ನಲು ಓಡಿ ಹೋಯಿತು

ಇಲಿ ಬಿಲದೊಳಗೆ ಓಡಿತು
ಬೆಕ್ಕಿಗೆ ನಿರಾಸೆ ಆಯಿತು

ಬುಧವಾರ, ಜನವರಿ 24, 2018

ನನ್ನ ಕತೆ

ಅಜ್ಜಿ ನನ್ನ ಅಜ್ಜಿಯೆಂದರೆ ನನಗೆ ತುಂಬಾ ಇಷ್ಟ. ಅವರು ನನ್ನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಏಕೆಂದರೇ ನಾನು ಮಲುಗುವಾಗ ಊಟ ಮಾಡಿದೆಯಾ ? ಎಂದು ಕೇಳುತ್ತಾರೆ. ಹಾಗೂ ನನಗೆ ತಿನ್ನಲು ತಿಂಡಿ ತಿನಿಸುಗಳನ್ನು ಮುಚ್ಚಿಟ್ಟು ನನಗೆ ಕೊಡುತ್ತಾರೆ. ನನಗೆ ಏನಾದರೂ ಗಾಯವಾದರೇ ಔಷಧಿಯನ್ನು ಹಚ್ಚಿ, ನನ್ನನ್ನು ತುಂಬಾ ಖಾಳಜಿಯಿಂದ ನೋಡಿಕೊಳ್ಳುತ್ತಾರೆ. ನನಗೆ ಸಂಜೆಯ ಹೊತ್ತು ಒಂದು ಒಳ್ಳೆಯ ಕಥೆಯನ್ನು ಹೇಳಿ, ನನಗೆ ಬುದ್ದಿವಾದ ಹೇಳುತ್ತಾರೆ. ನೀತಿಕಥೆಯನ್ನು ಹೇಳಿ ನೀತಿಯಿಂದ ಬಾಳು ಎಂದು ಬುದ್ಧಿವಾದ ಹೇಳುತ್ತಾರೆ. ಕೆಲವು ಸಲ ನನಗೆ ಅಜ್ಜಿ ತನ್ನ ಕಷ್ಟದ ದಿನಗಳನ್ನು ಹೇಳಿದಾಗ ನನಗೆ ತುಂಬಾ ಬೇಸರವಾಗುತ್ತದೆ. ಕೆಲವು ದಿನ  ನಲಿಯುವ ಸಮಯವನ್ನು ಹೇಳಿ ಖುಷಿಯಿಂದ ನಗಲು ನನಗೆ ಹೇಳುತ್ತಾರೆ. ಆಗ ನನಗೆ ಅವರ ಕಷ್ಟದ ದಿನಗಳು ಮರೆತು, ಬದುಕುವ ಉತ್ಸಾಹವನ್ನು ತುಂಬುತ್ತಾರೆ. ಹಾಗಾಗಿ ಅಜ್ಜಿಯೆಂದರೇ ನನಗೆ ಇಷ್ಟ.                                                                    


ಪುನೀತ್ ಲಕ್ಷ್ಮಣರಾವ್, 9 ನೇ ತರಗತಿ
ಸ.ಪ್ರೌ.ಶಾಲೆ ಕುಕನೂರು 

ಒಂದು ಬೆಕ್ಕು

ಒಂದು ಬೆಕ್ಕು ಬಂದಿತ್ತು
ಮನೆಯ ಒಳಗೆ ಹೋಗಿತ್ತು
ಅತ್ತ ಇತ್ತ ನೋಡಿತ್ತು
ಯಾರು ಕಾಣಲಾಗಿತ್ತು
ಮೆಲ್ಲ ಮೆಲ್ಲ ಹೆಜ್ಜೆನಿಡುತ
ಅಡುಗೆ ಮನೆಗೆ ನುಗ್ಗಿತು
ಹಾಲನ್ನು ನೋಡಿತು
ಗಟಗಟ ಕುಡಿದಿತು
ಯಾರೋ ಬಂದಗಾಯಿತು
ಲಗುಬಗು ಓಡಿ ಹೋಯಿತು

ಮರುದಿನ ಬಂದಿತು
ಅಡುಗೆ ಮನೆಯ ನುಗ್ಗಿತು
ಮೊಸರು ರೊಟ್ಟಿ ಕಂಡಿತು
ಕಟಕಟ
ಕಚಕಚ
ಕಟಕಟ
ಕಚಕಚ
ತಿಂದು ಮತ್ತೆ ತೇಗಿತು
ಜಾಗ ಖಾಲಿ ಮಾಡಿತು

ಮತ್ತೊಂದು ಬರಲು ದಿನ
ಜಂತಿ ಮೇಲೆ ಕುಳಿತಿತು
ಇಲಿಯನೊಂದು ಕಂಡಿತು
ನುಂಗಲದನು ಜಿಗಿಯಿತು
ಇಲಿ ಹಾರಿ ಬಿಲವ ಸೇರಿ
ಸೊಂಟವದರ ಮುರಿಯಿತು
ಸಪ್ಪೆ ಮುಖವ ಮಾಡಿಕೊಂಡ
ಮನೆಯ ದಾರಿ ಹಿಡಿಯಿತು

ಭೀಮಪ್ಪ ಮುಶಿಗೇರಿ
೮ ನೆ ತರಗತಿ
ಸ.ಪ್ರೌ.ಶಾ
ಜಹಗೀರ ಗುಡದೂರ

ಮಂಗಳವಾರ, ಜನವರಿ 23, 2018

ಬೆಕ್ಕು ಬಂತು ಬೆಕ್ಕು

ಬೆಕ್ಕು ಬಂತು ಬೆಕ್ಕು
ಮ್ಯಾಂವ್ ಮ್ಯಾಂವ್ ಎನ್ನುತ
ಬೆಣ್ಣೆಯನ್ನು ತಿನ್ನುವ ಬೆಕ್ಕು
ಹಾಲನು ಕುಡಿಯುವ ಬೆಕ್ಕು

ನಾಯಿ ಕಂಡರೆ ಓಡುವ ಬೆಕ್ಕು
ಇಲಿ ಕಂಡರೆ ಹಿಡಿಯುವ ಬೆಕ್ಕು
ರೊಟ್ಟಿ ಕಂಡರೆ ತಿನ್ನುವ ಬೆಕ್ಕು
ಹಾಲು ಕಂಡರೆ ನೆಕ್ಕುವ ಬೆಕ್ಕು

ಆಹಾರ ಕಂಡರೆ ಕಳ್ಳನಾಗುವ ಬೆಕ್ಕು
ಉಂಡ ನಂತರ ರಾಜನಾಗುವ ಬೆಕ್ಕು
ಕಣ್ಣು ಮುಚ್ಚಿ ಹಾಲು ಕುಡಿದರೆ
ಜಗತ್ತಿಗೆ ಕಾಣುವುದಿಲ್ಲ ಎನ್ನುವ ಬೆಕ್ಕು

ರಂಗಪ್ಪ ರಾಮಪ್ಪ ಹಿರೇಡೋಣಿ
೮ ನೆ ತರಗತಿ

ಸೋಮವಾರ, ಜನವರಿ 22, 2018

ಬೆಕ್ಕು ಮತ್ತು ನಾಯಿ

ಬೆಕ್ಕು ಬಂತು ಬೆಕ್ಕು 
ಸಾಕೋ ಬೆಕ್ಕು ಬಂತು 
ಮ್ಯಾಂವ್ ಮ್ಯಾಂವ್ ಅಂತೂ 
ಬೆಣ್ಣೆ ಕದ್ದು ತಿಂತು 

                               ಮರಳಿ ಸಂಜೆ ಬಂದಿತು 
                               ಹಾಲು ಕದ್ದು ಕುಡಿಯಿತು 
                               ಹೊರಗೆ ಬಂದು ನಿಂತಿತು 
                               ನಾಯಿ ಕಂಡು ಓಡಿತು 

ಬೆಕ್ಕು ಇಲಿಯ ಕಂಡಿತು 
ಅದರ ಹಿಂದೆ ಓಡಿತು 
ಬಿಲಕ್ಕೆ ಇಲಿಯು ನುಗ್ಗಿತು 
ನಾಯಿ ಎದುರಿಗೆ ಕಂಡಿತು 
ಬೆಕ್ಕು ಕದ್ದು ಓಡಿತು. 

ರಚನೆ : ಮುತ್ತಪ್ಪ ಚ ಕಂಬಳಿ 
             ೮ ನೇ ತರಗತಿ 

ಕಳೆದ 2017 ಅಕ್ಟೊಬರ್ ಲ್ಲಿ ಗಜೇಂದ್ರಗಡದಲ್ಲಿ ನಮ್ಮ ಮಕ್ಕಳ ನಾಟಕ


ಶನಿವಾರ, ಜನವರಿ 20, 2018

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ 


ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ 

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ 



ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ 


ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ 


ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ 


ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ

ಮಕ್ಕಳ ಹೆಜ್ಜೆಗಳು - ಪತ್ರಿಕೆಯಲ್ಲಿ 








ಶುಕ್ರವಾರ, ಜನವರಿ 19, 2018

ಗುರುವಾರ, ಜನವರಿ 11, 2018

ಬುಧವಾರ, ಜನವರಿ 3, 2018

ಸಾವಿತ್ರಿಬಾಯಿ ಪುಲೆ ಮೊದಲ ಶಿಕ್ಷಕಿ




ಭಾರತದಲ್ಲಿ ಸಾವಿತ್ರಿಬಾಯಿ ಪುಲೆ ಅವರು ಮೊದಲ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ನಾವು ಅವರ ಜನ್ಮ ದಿನಾಚರಣೆ ಆಚರಿಸುವ ಕಾಲವಷ್ಟೇ ಆದರೆ ಅವರ ಆದರ್ಶಗಳು ಅವರ ಚಿಂತನೆಗಳು ಪುರುಷ ಸಮಾಜದಲ್ಲಿ ಕಣ್ಣಿಗೆ ಕಾಣದಷ್ಟು ಕೆಳಗೆಳಿಯುತ್ತಿದೆ. ತಾಯಿಯೇ ಮೊದಲ ಗುರು ಎಂದು ಹೇಗೆ ಕರೆಯುವೆವೋ ಹಾಗೆ ಹೆಣ್ಣಿಗೆ ತಾಳ್ಮೆ ಇರುವುದನ್ನು ಅದನ್ನು ಎಲ್ಲರಲ್ಲಿ ಬಿತ್ತುವ ಮನೋಭಾವ ಭವಿಷ್ಯದ ನಾಗರೀಕ ಸಮಾಜಕ್ಕೆ ಕೆಳ ಹಂತದಿಂದಲೇ ಗಟ್ಟಿಗೊಳಿಸುವ ದಿಕ್ಕಿನಲ್ಲಿ ಮುಂದುವರೆಯೋಣ.

ಸಾವಿತ್ರಿಬಾಯಿ ಫುಲೆ(೧೮೩೧-೧೮೯೭)ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ, ಭಾರತದ ಮೊಟ್ಟ ಮೊದಲ ಶಿಕ್ಷಕಿ, ದಣಿವರಿಯದ ಸತ್ಯಶೋಧಕಿ. ಆಧುನಿಕ ಶಿಕ್ಷಣದ ತಾಯಿ. ಸಾವಿತ್ರಿಬಾಯಿ ಅವರ ವೇಷ ಭೂಷಣ ಸರಳವಾಗಿತ್ತು. ಖಾದಿ ಸೀರೆಯನ್ನೇ ಅವರು ಧರಿಸುತ್ತಿದ್ದರು.

ಜನನ, ಜೀವನ

ಸಾವಿತ್ರಿಬಾಯಿ ಫುಲೆ ೧೮೩೧ರಲ್ಲಿ ಮಹಾರಾಷ್ಟ್ರದ ಸತಾರಜಿಲ್ಲೆಯ 'ನೈಗಾಂನ್'ನಲ್ಲಿ ಹುಟ್ಟಿದರು. ತಂದೆ ನೇವಸೆ ಪಾಟೀಲ. ಬಾಲ್ಯದಲ್ಲಿಯೇ ಸಾವಿತ್ರಿಬಾಯಿ ಫುಲೆ ಅವರು ಜ್ಯೋತಿಬಾಫುಲೆಯವರನ್ನು ಲಗ್ನವಾದರು. ಸಾವಿತ್ರಿಬಾಯಿ ಅವರ ಯಶಸ್ಸು, ಶ್ರೇಯಸ್ಸಿನ ವಿಕ್ರಮಪಾಲು ಜ್ಯೋತಿ ಬಾ ಫುಲೆ ಅವರದಾಗಿತ್ತು. ಸ್ತ್ರೀ ಶಿಕ್ಷಣವನ್ನು ತೆರೆದ ಕೀರ್ತಿ ಜ್ಯೋತಿಬಾಫುಲೆ ಅವರಿಗೆ ಸಲ್ಲಬೇಕು.

ವಿವಾಹ, ವಿದ್ಯಾಭ್ಯಾಸ

ಬಾಲ್ಯ ವಿವಾಹ ರೂಢಿಯಲ್ಲಿದ್ದ ಕಾಲದಲ್ಲಿ ಸಾವಿತ್ರಿಬಾಯಿ ಫುಲೆ ಮದುವೆಯಾದಾಗ ಅವರಿಗೆ ೮ ವರ್ಷ ವಯಸ್ಸು, ಜ್ಯೋತಿಬಾಫುಲೆ ಅವರಿಗೆ ೧೩ ವರ್ಷ ವಯಸ್ಸಾಗಿತ್ತು. ಸಾವಿತ್ರಿಬಾಯಿ ಅವರಿಗೆ ಮನೆಯೇ ಮೊದಲ ಪಾಠಶಾಲೆ, ಪತಿ ಜ್ಯೋತಿಬಾ ಅವರೇ ಗುರುಗಳು. ೧೮೪೭ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಭೇತಿ ಪಡೆದರು. ಆಗ ಅವರಿಗೆ ೧೭ ವರ್ಷ. ಹೀಗಾಗಿ ಮಹಾರಾಷ್ಟ್ರದಲ್ಲಿ ತರಭೇತಾದ ಮೊದಲ ಶಿಕ್ಷಕಿಯಾದರು.

ಶಿಕ್ಷಕಿಯಾಗಿ

ಸಾವಿತ್ರಿಬಾಯಿ ಶ್ರೀ ಭಿಡೆಯವರ ಮನೆಯಲ್ಲಿ ಆರಂಭಗೊಂಡ ಕನ್ಯಾಶಾಲೆಯ ಪ್ರಧಾನ ಶಿಕ್ಷಕಿಯಾದರು. ಆ ಕಾಲದಲ್ಲಿ ಹಿಂದೂ ಸ್ರ್ರೀಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ. ಅವರು ಪಾಠಶಾಲೆಗೆ ಹೋರಟಾಗ ಕೆಲವರು ಕೇಕೇ ಹಾಕಿ ನಗುತ್ತಿದ್ದರು, ಅವರ ಮೇಲೆ ಕೆಸರು, ಸಗಣಿ ಎರಚಿ, ಕಲ್ಲನೂ ತೂರುತ್ತಿದ್ದರು. ಇದರಿಂ ಧೃತಿಗೆಡದ ಸಾವಿತ್ರಿಬಾಯಿಯವರು ಯಾವಾಗಲೂ ಒಂದು ಸೀರೆಯೊಂದನ್ನು ತಮ್ಮ ಬ್ಯಾಗಿನಲ್ಲಿ ಇಟ್ಟುಕೊಳ್ಳುತ್ತಿದ್ದರು.ದಾರಿಯಲ್ಲಿ ಕೆಸರು, ಸಗಣಿ ಎರಚಿಸಿಕೊಂಡಾಗ, ಬೇಸರ ಗೊಳ್ಳದೆ- ನಮ್ಮ ಮೇಲೆ ಎರಚುವ ಸೆಗಣಿ, ತೂರುವ ಕಲ್ಲುಗಳನ್ನು ಹೂಗಳೆಂದು ಪರಿಭಾವಿಸಿ, ಶಾಲೆಯಲ್ಲಿ ಮಕ್ಕಳು ಬರುವುದರೊಳಗೆ ಬ್ಯಾಗಿನಲ್ಲಿ ಇಟ್ಟುಕೊಂಡಿರುತ್ತಿದ್ದ ಮತ್ತೊಂದು ಸೀರೆಯನ್ನು ಉಟ್ಟುಕೊಂಡು ಪಾಠಕ್ಕೆ ಅಣಿಯಾಗುತ್ತಿದ್ದರು. ೧೮೪೮ರಿಂದ ೧೮೫೨ರ ಅವಧಿಯಲ್ಲಿ ೧೮ ಪಾಠಶಾಲೆಗಳನ್ನು ಫುಲೆ ದಂಪತಿಗಳು ತೆರೆದರು.ಈ ಪಾಠಶಾಲೆಗಳ ಶಡಳಿತದ ಜವಾಬ್ದಾರಿಯನ್ನು ಸಾವಿತ್ರಿಬಾಯಿ ನಿರ್ವಹಿಸಬೇಕಾಗಿತ್ತು. ಶಿಕ್ಷಕಿ, ಸಂಚಾಲಕಿ, ಮುಖ್ಯೋಪಾಧ್ಯಾಯಿನಿ ಮುಂತಾದ ಕೆಲಸಗಳನ್ನು ಇವರು ಸಮರ್ಪಕವಾಗಿ ನಿಭಾಯಿಸುವುದರ ಮೂಲಕ ಜ್ಯೋತಿಬಾಫುಲೆ ಅವರಿಗೆ ನೆರವಾದರು. ಬ್ರಿಟಿಷ್ ಸರ್ಕಾರದವರು ಅವರ ಕೆಲಸ ಕಾರ್ಯಗಳನ್ನು ಕೂಲಂಕುಷವಾಗಿ ಅವಲೋಕಿಸಿ ಮೆಚ್ಚುಗೆ ಸೂಸಿದ್ದರು.ಇಂದು ಭಾರತದ ಮಹಿಳೆಯರ ಸಮಾಜದ ಎಲ್ಲಾ ಕ್ಷೇತ್ರದಲ್ಲಿ ಸಮಾನತೆಯ ಹಕ್ಕಿಗೆ ಕಾರಣರಾದವರು ಮಾತೆ ಸಾವಿತ್ರಿ ಬಾಪುಲೆ. ಇವರು ಸಮಾಜದ ಅನಿಷ್ಟ ಪದ್ದತಿಗಳಾದ ಬಾಲ್ಯ ವಿವಾಹ, ಸತಿಸಹಗಮನ ಪದ್ದತಿ, ಕೇಶ ಮುಂಡನೆ ವಿರುದ್ದ ಹೋರಾಟ ಮಾಡಿ, ಮಹಿಳೆಯರಿಗೋಸ್ಕರ ಪ್ರ ಪ್ರಥಮವಾಗಿ ಶಾಲೆಗಳು, ಅಬಲಾಶ್ರಮ ಸ್ಥಾಪನೆ ಮಾಡಿದ ಕೀತಿ೯ ಇವರಿಗೆ ಸಲ್ಲುತ್ತದೆ. ಇವರು ಒಟ್ಟು 14 ಶಾಲೆಗಳನ್ನು ಸ್ಥಾಪನೆ ಮಾಡುತ್ತಾರೆ.ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ,‌ ಬ್ರಿಟಿಷ್ ಸರಕಾರ ಇವರಿಗೆ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಕೂಡ ಕೊಟ್ಟಿದೆ. ಸ್ತ್ರೀಯರು ಕೂಡ ಪುರುಷರಂತೆ ಶಿಕ್ಷಣವನ್ನು ಪಡೆಯಬೇಕೆಂಬ ಮಹದಾಸೆಯಿಂದ ತಮಗೊದಗಿದ ಕಷ್ಟ - ಕಾರ್ಪಣ್ಯಗಳನ್ನು ಲೆಕ್ಕಿಸದೇ ಸ್ತ್ರೀ ಸಂಕುಲಕ್ಕೆ ಶೈಕ್ಷಣಿಕ ರಹದಾರಿಯನ್ನು ತೋರಿಸಿದರು.

ಲೇಖಕಿಯಾಗಿ

೧೮೫೪ರಲ್ಲಿ ಸಾವಿತ್ರಿಬಾಯಿಯವರು 'ಕಾವ್ಯಫೂಲೆ'(ಕಾವ್ಯ ಅರಳಿದೆ)ಎನ್ನುವ ಕವನಸಂಕಲನವನ್ನು ಪ್ರಕಟಿಸಿದರು. ಈ ಕಾವ್ಯವು ೧೯ನೇ ಶತಮಾನದ ಸಮಾಜವನ್ನು ದಾಖಲಿಸುವಲ್ಲಿ ಮೈಲಿಗಲ್ಲಾಗಿದೆ. ಇವರು ಈ ಕೃತಿಯನ್ನು'ಅಭಂಗ್' ಶೈಲಿಯಲ್ಲಿ ರಚಿಸಿದ್ದಾರೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. ಈ ಕೃತಿಯಿಂದಾಗಿ ಸಾವಿತ್ರಿಬಾಯಿಯವರನ್ನು ಮರಾಠಿ ಕಾವ್ಯದ ಪ್ರವರ್ತಕಿ ಎಂದು ಕರೆಯಲಾಗಿದೆ.ಅವರ ಎರಡನೇಯ ಕೃತಿ 'ಭವನಕಾಶಿ ಸುಬೋಧ ರತ್ನಾಕರ್'(ಅಪ್ಪಟ ಮುತ್ತುಗಳ ಸಾಗರ) ೧೮೯೧ರಲ್ಲಿ ಪ್ರಕಟವಾಯಿತು. ಇದು ಜ್ಯೋತಿಬಾ ಅವರನ್ನು ಒಳಗೊಂಡಂತೆ ಬರೆದ ಒಂದು ಬಯೋಗ್ರಫಿ.ಮೂರನೆಯದು ಜ್ಯೋತಿಬಾ ಅವರ ಭಾಷಣಗಳ ಸಂಪಾದಿತ ಕೃತಿಯನ್ನು ೧೮೯೨ರಲ್ಲಿ ಸಂಪಾದಿಸಲಾಯಿತು. ನಾಲ್ಕನೇ ಕೃತಿ- ಕರ್ಜೆ(ಸಾಲ) ಎಂಬುದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕೃತಿಗಳಾಗಿವೆ

ಕೃತಿಗಳು

ಕವನಸಂಕಲನ

ಕಾವ್ಯಫೂಲೆ (ಕಾವ್ಯ ಅರಳಿದೆ)-೧೮೫೪

ಆತ್ಮಕಥೆ

ಭವನಕಾಶಿ ಸುಬೋಧ ರತ್ನಾಕರ್(ಅಪ್ಪಟ ಮುತ್ತುಗಳ ಸಾಗರ)-೧೮೯೧

ಸಂಪಾದಿತ ಕೃತಿ

ಜ್ಯೋತಿಬಾ ಅವರ ಭಾಷಣಗಳು -೧೮೯೨

ಪ್ರಬಂಧ

ಕರ್ಜೆ(ಸಾಲ)

ಆದರ್ಶ ಪತ್ನೀಯಾಗಿ

ಜ್ಯೋತಿಬಾ ಅವರ ತತ್ವ್ತ ಮತ್ತು ಪ್ರಗತಿಪರ ದೃಷ್ಟಿಕೋನವನ್ನು ತಮ್ಮದಾಗಿಸಿಕೊಳ್ಳುವ ಸಾವಿತ್ರಿಬಾಯಿಯವರು ಜೀವಮಾನವಿಡೀ ಪತಿಯೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲುತ್ತಾರೆ. ಇವರಿಬ್ಬರ ನಡುವೆ ಒಂದು ಮಧುರವಾದ ಬಾಂಧವ್ಯ ಮತ್ತು ವೈಯಕ್ತಿಕ ಭಾವನೆಗಳನ್ನು ಗೌರವಿಸಿಕೊಳ್ಳುವ ಗುಣವಿತ್ತು. ಅವರಿಗೆ ಮಕ್ಕಳಿರದಿದ್ದರು ಸಂತೋಷವಾಗಿದ್ದರು. ಪತ್ನೀಯ ಮೇಲೆ ಅಗಾಧ ಪ್ರೀತಿ ಹೊಂದಿದ್ದ ಜ್ಯೋತಿಬಾ ಫುಲೆ ಅವರು ಮಕ್ಕಳಿಗಾಗಿ ಮರುಮದುವೆಯಾಗಲಿಲ್ಲ.ಮುಂದೆ ಫುಲೆ ದಂಪತಿಗಳು ೧೮೭೪ರಲ್ಲಿ ವಿಧವೆಯೊಬ್ಬಳ ಮಗನಾದ ಯಶವಂತನನ್ನು ದತ್ತು ತೆಗೆದುಕೊಂಡು, ಆತ ಸಮಾಜದಲ್ಲಿ ಸತ್ಪ್ರಜೆಯಾಗುವ ಅವಕಾಶವನ್ನು ಕಲ್ಪಿಸುತ್ತಾರೆ. ೧೮೬೩ರಲ್ಲಿ ಅನಾಥ ಮಕ್ಕಳಿಗಾಗಿ ಶಿಶುಕೇಂದ್ರವನ್ನು ತೆರೆಯುತ್ತಾರೆ. ಆ ಅನಾಥ ಮಕ್ಕಳೊಂದಿಗೆ ಪ್ರಾಂಜಲ ಮನಸ್ಸಿನಿಂದ ಬೆರೆಯುತ್ತಾರೆ.

ಸಾಮಾಜಿಕ ಕ್ರಾಂತಿಕಾರಿಯಾಗಿ

ಶಿಕ್ಷಣದ ಹಕ್ಕು, ಸರ್ವಶಿಕ್ಷಣ ಅಭಿಯಾನ ಬಿಸಿಯೂಟದ ಯೋಜನೆಗಳನ್ನು ಕ್ರಾಂತಿಕಾರಿ ಯೋಜನೆಗಳೆಂದು ಕೊಂಡಾಡಲಾಗುತ್ತಿದೆ. ೧೫೦ ವರ್ಷಗಳ ಹಿಂದೆಯೇ ಸಾವಿತ್ತಿಬಾಯಿ ಶಾಲೆಯನ್ನು ತೊರೆಯದ ವಿದ್ಯಾರ್ಥಿಗಳಿಗೆ ಸ್ಟೈಫಂಡ್ ಕೊಡುವ ಯೋಜನೆ ತಂದಿದ್ದರು. ಶಿಕ್ಷಣದಲ್ಲಿ ವೈವಿಧ್ಯತೆ ತಂದಿದ್ದರು.೧೮೬೦ರ ದಶಕದಲ್ಲಿ ವಿಧವೆಯರ ತಲೆಬೋಳಿಸುವ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ, ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಮಹಿಳೆಯರಿಗಾಗಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ವಿವಾಹಬಾಹಿರ ಸಂಬಂಧದಿಂದ ಹುಟ್ಟಿದ ಮಕ್ಕಳಿಗಾಗಿ ಭಿನ್ನವಾದ ಶಿಶುಕೇಂದ್ರಗಳನ್ನು ಸ್ಥಾಪಿಸಿದರು. ಈ ಬಗೆಯ ಸಾಮಾಜಿಕ ಸಂಘಟನೆಗಳ ಮೂಲಕ ನೂರಾರು ಮಹಿಳೆಯರ ಮತ್ತು ಮಕ್ಕಳ ಬದುಕಿಗೊಂದು ನೆಲೆ ಕೊಟ್ಟರು.ಸಾವಿತ್ರಿಬಾಯಿ 'ಸತ್ಯೋಧಕ' ಸಮಾಜದ ಅಧ್ಯಕ್ಷೆಯಾಗಿದ್ದರು. ೧೯ನೇ ಶತಮಾನದ ಇತಿಹಾಸದಲ್ಲಿ ಹಿಂದೂ ಧಾರ್ಮಿಕ ಮದುವೆಗಳನ್ನು ಪೂಜಾರಿಗಳಿಲ್ಲದೆ ನೆರವೇರಿಸಿದ್ದುದು ಒಂದು ಕ್ರಾಂತಿಕಾರಿ ಹೋರಾಟವಾಗಿದೆ. ಈ ಸಂದರ್ಭದಲ್ಲಿ ಬ್ರಾಹ್ಮಣರ ಅಧಿಪತ್ಯವಿಲ್ಲದ ಮದುವೆಗಳನ್ನು ಏರ್ಪಡಿಸಿದ್ದರು. ಅಲ್ಲದೆ ಮೊಟ್ಟ ಮೊದಲ ಬಾರಿ ಕಾನೂನಿನ ನೆರವನ್ನು ಪಡೆದು ಮದುವೆ ನೆರವೇರಿಸಿದ್ದು ಇಂದಿಗೂ ಇತಿಹಾಸದಲ್ಲಿ ದಾಖಲಾಗದೆ ಉಳಿದಿರುವ ಸಂಗತಿ.

ಬದಲಾವಣೆಯ ಹರಿಕಾರರಾಗಿ

ಮಹಿಳೆಯರ ಹಕ್ಕುಗಳಿಗಾಗಿ ನಿರಂತರ ಚಳುವಳಿ ಸಂಘಟನೆಗಳನ್ನು ಸಂಘಟಿಸಿದರು.

೧೮೪೮ ರಲ್ಲಿ ಪತಿ ಜ್ಯೋತಿಬಾ ಫುಲೆಯವರೊಂದಿಗೆ ಸೇರಿ ತಳ ಸಮುದಾಯದ ಹೆಣ್ಣುಮಕ್ಕಳಿಗಾಗಿ ಪುಣೆಯಲ್ಲಿ ಶಾಲೆಯನ್ನು ಪ್ರಾರಂಭಿಸಿದರು.೧೮೫೫ ರಲ್ಲಿ ಕೂಲಿ ಕಾರ್ಮಿಕರಿಗಾಗಿ ರಾತ್ರಿಪಾಳೆಯದ ಶಾಲೆ ಸ್ಥಾಪನೆ.೧೮೬೮ ರಲ್ಲಿ ದಲಿತರಿಗಾಗಿ ಮನೆಯ ಕುಡಿಯುವ ನೀರಿನ ಟ್ಯಾಂಕನ್ನು ಬಿಟ್ಟುಕೊಟ್ಟರು.ಬ್ರಾಹ್ಮಣ ವಿಧವೆಯ ಮಗುವೊಂದನ್ನು ದತ್ತು ತೆಗೆದುಕೊಂಡುದು.ಪಶ್ಚಿಮ ಮಹಾರಾಷ್ಟ್ರದ ಕ್ಷಾಮ ಪ್ರದೇಶಗಳಲ್ಲಿ ಎರಡು ವರ್ಷ ಸೇವೆ ಸಲ್ಲಿಸಿದುದು.

ಪ್ರಶಸ್ತಿ, ಗೌರವ

ಶಿಕ್ಷಣ ಕೇತ್ರದಲ್ಲಿನ ಸಾಧನೆಗಾಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಫುಲೆ ದಂಪತಿಗಳಿಗೆ ಸನ್ಮಾನಬ್ರಿಟಿಷ್ ಸರಕಾರ ಇವರಿಗೆ "ಇಂಡಿಯಾಸ್ ಫಸ್ಟ್ ಲೇಡಿ ಟೀಚರ್" ಎಂದು ಬಿರುದು ಕೂಡ ಕೊಟ್ಟಿದೆ

ಗಣ್ಯರ ದೃಷ್ಠಿಯಲ್ಲಿ ಸಾವಿತ್ರಿಬಾಯಿ ಫುಲೆ

ಥಾಮ್ ವುಲ್ಫ್ ಮತ್ತು ಸುಜನ ಆಂಡ್ರಡೆ - ಸಾವಿರಾರು ದೀಪಗಳನ್ನು ಹಚ್ಚಿದ ಆಧುನಿಕ ಶಿಕ್ಷಣದ ತಾಯಿ ಸಾವಿತ್ರಿಬಾಯಿ ಫುಲೆಗೆ ನೀನು ಚಿರಋಣಿಯಾಗಿರಬೇಕು. ಇಂದಿನ ಅಕ್ಷರಸ್ಥ ಭಾರತೀಯ ಪ್ರತಿಯೊಬ್ಬ ಮಹಿಳೆಯ ಮನದಲ್ಲೂ ಸಾವಿತ್ರಿಬಾಯಿ ಫುಲೆ ಇದ್ದಾರೆ.ಮುಖೇಶ್ ಮಾನಸ್ - ಶಿಕ್ಷಣದ ಕ್ಷೇತ್ರಕ್ಕೆ ಯಾವ ಬಗೆಯ ಕಾಣಿಕೆಯನ್ನೂ ನೀಡದಂತಹ ವಿದ್ವಾಂಸರ ಹೆಸರಿನಲ್ಲಿ ಇಂದು ಶಿಕ್ಷಕರ ದಿನಾಚರಣೆ ಆಚರಿಸಲಾಗುತ್ತಿದೆ. ಆದರೆ ದಮನಿತ ಸಮುದಾಯಗಳ ಶಿಕ್ಷಣಕ್ಕಾಗಿ ಪ್ರತ್ಯೇಕ ಶಾಲೆಯನ್ನು ಸ್ಥಾಪಿಸಿ, ಕ್ರಾಂತಿಕಾರಿ ಚಳುವಳಿ ಮಾಡಿದ ಸಾವಿತ್ರಿಬಾಯಿ ಫುಲೆ ಅವರ ಬಗ್ಗೆ ಎಷ್ಟು ಜನರಿಗೆ ಗೊತ್ತಿದೆ ?ಮೃದುವರ್ಮ - ೧೫೦ ವರ್ಷಗಳ ಹಿಂದೆ ಸ್ತ್ರೀ ವಿಮೋಚನೆ ಕನಸಾಗಿದ್ದ ಕಾಲದಲ್ಲಿ ಅದನ್ನು ನನಸಾಗಿಸಲು ಸಾವಿತ್ರಿಬಾಯಿ ಫುಲೆ ಶ್ರಮಿಸಿದ್ದಾರೆ. ಆದರಿಂದು ಸ್ತ್ರೀ ವಿಮೋಚನೆ ಫ್ಯಾಷನ್ ಆಗಿದೆ.ಗೋವಂಡೆ - ಫುಲೆ ದಂಪತಿಗಳ ಪ್ರಕಾರ ಹುಟ್ಟುವ ಪ್ರತಿಯೊಂದು ಮಗುವು ವಿಶೇಷವಾದುದು. ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂದಿದ್ದಾರೆ. ಅವರ ಈ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆ !

ನಿಧನ

೧೮೯೭ರಲ್ಲಿ ಪ್ಲೇಗ್ ಪೀಡಿತ ರೋಗಿಗಳ ಸೇವೆಯಲ್ಲಿ ತೊಡಗಿದ್ದಾಗ ಸ್ವತಃ ಸಾವಿತ್ರಿಬಾಯಿ ಫುಲೆ ಅವರೇ ಆ ಕಾಯಿಲೆಯ ಸೋಂಕಿಗೆ ಬಲಿಯಾಗಿ ತೀರಿಕೊಂಡರು.

ಕೃತಿ ನೆರವು

ವಿಮೋಚಕಿಯ ಕನಸುಗಳು - ಇಂಗ್ಲೀಷ್ ಮೂಲ: ಬ್ರಜ್ ರಂಜನ್ ಮಣಿ ಪಮೇಲ ಸರ್ದಾರ್, ಕನ್ನಡಕ್ಕೆ : ಬಿ.ಶ್ರೀಪಾದ್ ಭಟ್ಸಮಾಜ ಸುಧಾರಕ ಮಹಾತ್ಮ ಫುಲೆ - ಮುರಳೀಧರ ಜಗತಾಪ, ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಪ್ರಕಟವಾದ ವರ್ಷ: 2010