ಶುಕ್ರವಾರ, ಫೆಬ್ರವರಿ 24, 2012

ಹೊಸಪೇಟೆಯಲ್ಲಿ ರಂಗ ತರಬೇತಿ ಶಿಬಿರ


Hejjegalu

Hejjegalu

Hejjegalu

Hejjegalu

Hejjegalu

Hejjegalu

Hejjegalu

Hejjegalu

ಗುರುವಾರ, ಫೆಬ್ರವರಿ 23, 2012

ಪ್ರದರ್ಶನ



ಪಾಲಕರ ಸಭೆ





ಎಸ. ಎಸ. ಎಲ್. ಸಿ ಫಲಿತಾಂಶ ಸುಧಾರಣೆಗಾಗಿ ವಿಧ್ಯಾರ್ಥಿಗಳ ಪಾಲಕರ ಸಭೆ ನಡೆಸಲಾಯಿತು. 

ಮಂಗಳವಾರ, ಫೆಬ್ರವರಿ 21, 2012

ಅರಳು ಮೊಗ್ಗು

ಕವಿತೆ  ಬರೆಯುವುದು ಪಾಂಡಿತ್ಯ ತೋರಿಸಲಿಕ್ಕಲ್ಲ 

ಭಾವನೆಗಳನ್ನು ವ್ಯಕ್ತ ಪಡಿಸಲಿಕ್ಕೆ 

                                
                                                  ---ಜಿ.ಕೆ.ಹೆಗಡೆ.
( ಕಾರ್ನಾಡರ  "ಆಡಾಡತ ಆಯುಷ್ಯ" ದಿಂದ )


ಕಾವ್ಯ ಬಿ.ಬಿಂಗಿಕೊಪ್ಪದ

                   ನಮಗೆ ನಾಟಕ ಕಲಿಸಲು ಆಗಮಿಸಿದ ಶ್ರೀ ಗುರುರಾಜ ನಿರ್ದೇಶಕರಿಗೆ ಅಭಿನಂದನ ಸಲ್ಲಿಸ ಬಯಸುವೆ. ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ೧೫ ದಿನಗಳ ತರಬೇತಿ ಪಡೆದು ಆರು ವಿವಿಧ ಶಾಲೆಗಳಲ್ಲಿ ಪ್ರದರ್ಶಿಸಿದ ನಾಟಕ " ಕತ್ಲೆ ನಗರೀ ತಲೆಕೆಟ್ ರಾಜ " ನಮಗೊಂದು ಅದ್ಭುತ ಅನುಭವ ನೀಡಿತು. 

ತರಬೇತಿ ಸಮಯದಲ್ಲಿ ಮುಖವಾಡ ತಯಾರಿಕೆ, ರಂಗಾಟ, ಬಣ್ಣದ ಆಟ, ಆಡಿಸುತ್ತಾ ನಾಟಕ ಕಟ್ಟಿ ಕೊಟ್ಟಿದ್ದು ತಿಳಿದೇ ನಾವು ನಾಟಕದ ಒಳಗೆ ಪ್ರವೇಶ ಮಾಡಿದ್ದೆವು. ನಾಟಕಗಳ ಪ್ರದರ್ಶನ ನಂತರ ನಾವು
ನಮ್ಮ ಯೋಚನೆ, ನಡವಳಿಕೆ, ಇತರರೊಂದಿಗೆ ಸಂಬಂಧದಲ್ಲಿ ಆದ ಬದಲಾವಣೆ ಊಹಿಸದಂತೆ ಪರಿವರ್ತನೆ ಆದದ್ದು. ಇಂಥಹ ಒಂದು ವಿಷಯ ನಮ್ಮ ಪ್ರತಿಯೊಂದು ಶಾಲೆಯಲ್ಲಿ ದೊರಕಿದರೆ ನಾವು ನಾಡಿನ ಆದರ್ಶ ಸತ್ ಪ್ರಜೆ ಆಗಬಹುದು.

MASK



                              



       




ನಾಟಕದ ಮನೆಗೆ ಸ್ವಾಗತ


ನಾಟಕದ ಮನೆ ಎಂದು ನಾನು ಇಲ್ಲಿ ಬಳಸಿದ್ದೇನೆ. 
 ಶಾಲೆ ಎನ್ನುವುದಕ್ಕೆ ಮಕ್ಕಳು ದೂರ ಸರಿಯುವುದಕ್ಕಿಂತ  
ತಮ್ಮ ಮನೆಗೆ ಸಂತೋಷದಿಂದ ಮರಳಿ ಬರುವಂಥ 
ವಾತಾವರಣವನ್ನು ಸೃಷ್ಟಿಸ ಬೇಕಾಗಿದೆ. 


ಅಂಗ್ಲ ಭಾಷೆಯ ಕಾರ್ಯಗಾರ










ಉಧ್ಘಾಟನೆ  : ಶ್ರೀ ಭೀಮಪ್ಪ ಗೋನಾಳ, ಕ್ಷೇತ್ರಶಿಕ್ಷಾಣಾಧಿಕಾರಿಗಳು,ಕುಷ್ಟಗಿ 
ಅಧ್ಯಕ್ಷತೆ  :  ಶ್ರೀ ಈಶಪ್ಪ ತಳವಾರ, ಮು.ಗು, ಜಹಗೀರಗುಡದೂರ
ಮುಖ್ಯ ಅತಿಥಿ : ಶ್ರೀ ಭೀಮರಾವ ಸಾಳುಂಕಿ  ಅಧ್ಯಕ್ಷರು,ಎಸ್.ಡಿ.ಎಮ್.ಸಿ
ಸಂಪನ್ಮೂಲ ವ್ಯಕ್ತಿ  : ಶ್ರೀ ಬಸವರಾಜ ಹಂದ್ರಾಳ    
                        ಇಂಗ್ಲೀಷ ಉಪನ್ಯಾಸಕರು, ಸ.ಪ.ಪೂ.ಕಾಲೇಜು, ಭಾಗ್ಯನಗರ,ಕೊಪ್ಪಳ
ದಿನಾಂಕ :  ೦೯.೦೮.೨೦೧೧    ಸ್ಥಳ  : ಜಾಗೀರಗುಡದೂರ

ಶನಿವಾರ, ಫೆಬ್ರವರಿ 18, 2012

ಕಾರ್ನಾಡರಿಗೆ ಒಂದು ಪತ್ರ

                                 ಗಿರೀಶ್ ಕಾರ್ನಾಡ ರವರ ಆತ್ಮ ಕಥೆಯನ್ನು ಓದಿ ಕೊಂದು ಅವರಿಗೆ ಪ್ರತಿಕ್ರಿಯಿಸ ಬೇಕೆಂಬ ಉತ್ಸುಕತೆಯಲ್ಲಿ  ಕಾರ್ನಾಡ ರಿಗೆ  ಹೀಗೆ ಕೆಳಗಿನಂತೆ  ಬರೆದಾಗ 
                   
  ಮಿ|| ಜಂಟಲ್ ಮ್ಯಾನ್                                                                                                                            
                                        "ಆಡಾ ಆಯುಷ್ಯ " ದಲ್ಲಿ ನಿಮ್ಮ ಪಯಣವನ್ನು ಓದಿ ಹೇಗೆ ಪ್ರತಿಕ್ರಿಯಿಸ ಬೇಕೆಂದು ತಿಳಿಯದೆ ನನ್ನಿಂದ ಶಬ್ದಗಳೇ ಹೊರಡುತ್ತಿಲ್ಲ. ನಿಮ್ಮ ಬರವಣಿಗೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಕಾರಂತರ ಪಲಾಯನ , ನಿಮ್ಮ oup ನಲ್ಲಿ , ಚಿತ್ರಪಟ , ಬರವಣಿಗೆ ಹೀಗೆ ಎಲ್ಲವೂ ನನ್ನನ್ನು ಕಾಡುತ್ತವೆ. ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆ. ಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿ ಪಯಣವಂತು ನಡದೇ ಇದೆ.
ಕ್ಷಮಿಸಿ ನಾನು ನಿಮ್ಮ ಮಗಳ ವಯಸ್ಸಿನವನು. ಭರವಸೆಯನ್ನು ಗಟ್ಟಿಯಾಗಿಯೇ ಇಟ್ಟುಕೊಂಡಿದ್ದೇನೆ. ನಿಮ್ಮ ಪುಸ್ತಕದ ಓದು ನನ್ನನ್ನು ಇನ್ನು ಹುರಿಗೊಳಿಸಲು ಸಹಾಯಕವಾಗಿದೆ ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನ" ಕಾಯುತ್ತೇನೆ. "
       
                                                                                         ಗುರುರಾಜ್

                ಅದಕ್ಕೆ ಕಾರ್ನಾಡರು  ಪ್ರತಿಕ್ರಿಯಿಸಿದ್ದು  


ಪ್ರಿಯ ಗುರುರಾಜ್,
          ನಿಮ್ಮ ಪತ್ರಕ್ಕಾಗಿ ಆಭಾರಿ.  "ಆಡಾ  ಆಯುಷ್ಯ " ಓದಿ ನಿಮಗೆ ಖುಷಿ ಯಾಯಿತೆಂದು ತಿಳಿದು ಸಂತೋಷವಾಯಿತು.

                        ಶುಭಾಶಯಗಳೊಂದಿಗೆ

                                                                    ಗಿರೀಶ್ ಕಾರ್ನಾಡ್




                                         

ಹೊಸ ವರುಷ


ಬರುತಿದೆ ನವ ವರುಷ

ಪ್ರತಿ ದಿನಗಳಂತೆ

ನಾವುಗಳೋ

ಹುಚ್ಚೆದ್ದು 

ಕಿರುಚಾಡಿ

ಮದ್ದುಗಳನ್ನು ಸುಟ್ಟು

ಮಧ್ಯಾರಾತ್ರಿಯಲ್ಲಿ 

ಹಚ್ಸೆದ್ದ ಗಲಾಟೆಗೆ

ಪಕ್ಷಿಗಳೆಲ್ಲ ಎದ್ದು 

ಗಾಬರಿ ಗೊಂಡು  

ರೋಧಿಸುತ್ತಿವೆ

" ನವ ವರುಷಕ್ಕೆ  "


             ಸಮಯ : ೦೦.೦೦  ದಿನಾಂಕ : ೦೧.೦೧.೨೦೧೨

ಸ್ಥಳ : ರೈಲ್ವೆ  ನಿಲ್ದಾಣ, ಹೊಸಪೇಟೆ. 


ಶುಕ್ರವಾರ, ಫೆಬ್ರವರಿ 17, 2012



ಶಾಲಾ ಆವರಣದಲ್ಲಿ ಸ್ತಬ್ದ ಚಿತ್ರ ತಯಾರಿಯಲ್ಲಿ ...
 ಮಕ್ಕಳು ಮುರಿದ ಕಟ್ಟಿಗೆಯನ್ನು ಬಳಸಿ ಸುಂದರ
 ಕಲಾಕೃತಿಯಾಗಿ ಮಾಡುವತ್ತಾ
ಮಕ್ಕಳು ನಿರತರಾಗಿರುವುದು. 

ಸೋಮವಾರ, ಫೆಬ್ರವರಿ 13, 2012

ವಿದ್ಯೆ ಎಂಬುವುದು ಸಂಪತ್ತು 

ಅದು ಕದಿಯಲಾಗದ,

ಮತ್ತು 

ಅದು ದೇವರು 

ನೀಡಿದ ಗಮ್ಮತ್ತು. 

*******************

ಕಣ್ಣು ನಿನ್ನದಾದರೆ 

ಕಣ್ಣಿರು ನನ್ನದು

ಹೃದಯ ನಿನ್ನದಾದರೆ 

ಹೃದಯ ಬಡಿತ ನನ್ನದು

ದೇಹ ನಿನ್ನದಾದರೆ 

ಪ್ರಾಣ  ನನ್ನದು. 

*** ಲಿಂಗರಾಜ ಎಸ. ರೋಣದ
೮ ನೆ ತರಗತಿ.