ಸೋಮವಾರ, ಆಗಸ್ಟ್ 20, 2018

ಹಸಿರು ಕರ್ನಾಟಕ ಆಂದೋಲನ

‌ಇಂದು ದಿನಾಂಕ ೨೦.೦೮. ೨೦೧೮ ರಂದು ಅರಣ್ಯ ಇಲಾಖೆಯ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಹಸಿರು ಕರ್ನಾಟಕ ಆಂದೋಲನದ ಅಡಿಯಲ್ಲಿ ಹಸಿರು ಕರ್ನಾಟಕಕ್ಕಾಗಿ ಪ್ರತಿಜ್ಞಾವಿಧಿ ಹಾಗೂ ಸಸಿ ನೆಡುವ ಕಾರ್ಯಕ್ರಮ ನೆಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಅವರು ಮರಗಳನ್ನು ಸಂರಕ್ಷಿಸುವ ಆನಿವಾರ್ಯತೆ ನಮ್ಮ ಮೇಲೆ ಬಿದ್ದಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಬಾ ಅತಂತ್ರ ಸ್ಥಿತಿಯಲ್ಲಿರುವ ಕೇರಳ ನಮ್ಮ ಕೊಡಗು ಪರಿಸ್ಥಿತಿಗೆ ಮೂಲ ಕಾರಣ ನಾವು ಪರಿಸರ ನಾಶ ಮಾಡಿರುವುದೇ. ನಮ್ಮ ಪರಿಸರವನ್ನು ನಾವು ಉಳಿಸಿಕೊಂಡು ಹೋಗದೇ ಇದ್ದರೆ ಮುಂದಿನ ದಿನಗಳಲ್ಲಿ ಅದೇ ಸ್ಥಿತಿಯನ್ನು ನಾವು ಎದುರಿಸಬೇಕಾಗುತ್ತದೆ ಎಂದು ಮಕ್ಕಳಿಗೆ ತಿಳಿಹೇಳಿದರು.  ಉಪವಲಯ ಅರಣ್ಯಾಧಿಕಾರಿಯಾದ ಶ್ರೀ ಚಿದಾನಂದ ಓಲೇಕಾರ ಮಾತನಾಡಿ ಮಕ್ಕಳು ಪರಿಸರದ ಕುರಿತು ಖಾಳಜಿವಹಿಸಿದರೆ ಮುಂದಿನ ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯ ಎನ್ನುವ ಮಾತುಗಳನ್ನು ಆಡಿದರು. ಶಾಲಾ ಮಕ್ಕಳಿಂದ ಪರಿಸರ  ಸಂರಕ್ಷಣೆ ಕುರಿತು ನಾಟಕ ಎಲ್ಲರ ಮನ ಸೆಳೆಯಿತು. ಪೆದ್ದನ  ಕೆರೆ ನಾಟಕ ದಲ್ಲಿ ಪರಿಸರ ಉಳುವಿನ ಬಗ್ಗೆ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನು ಉಳಿಸಿ ಮಳೆ ಬಿದ್ದ ನೀರನ್ನು ಸಂಗ್ರಸಿ ಅವುಗಳಿಗೆ ಕುಡಿಯಲು ಅನುಕೂಲ ಮಾಡಿ ಕೊಟ್ಟು  ಪರಿಸರವಾದಿಯೊಬ್ಬ ಕಟ್ಟಿದ ಕೆರೆಗಳ ಕುರಿತಾದ ನಾಟಕ ಹತ್ತಿರದ ಕಾಲ ಕಾಲೇಶ್ವರದ ಪರಿಸರ ಹಾಗೂ ಸುತ್ತಮುತ್ತಲಿನ ಪರಿಸರವನ್ನು ನಾವುಉಳಿಸಿಕೊಳುವ ಬಗೆಯನ್ನು  ಈ ನಾಟಕದಲ್ಲಿ ಪ್ರಸ್ತುತ ಪಡಿಸಿದರು. ನಾಟಕವನ್ನು ರಚಿಸಿ ನಿರ್ದೇಶಿಸಿದ ಗುರುರಾಜ ನಾಟಕ ಶಿಕ್ಷಕರ  ಖಾಳಜಿಯಿಂದ ನಾಟಕ  ಅಚ್ಚುಕಟ್ಟಾಗಿ ಪ್ರದರ್ಶನ ಗೊಂಡಿತು.
ಕೊನೆಯದಾಗಿ ಮಾತನಾಡಿದ ಅರಣ್ಯ  ರಕ್ಷಕರು ಶ್ರೀ ಕಳಕಪ್ಪ ಬ್ಯಾಳಿಯವರು ನೀವು ಮಕ್ಕಳು ಮಾಡಿದ   ಈ ನಾಟಕದಲ್ಲಿ ಸಾಕಷ್ಟು ವಿಚಾರಗಳು ತಿಳಿದು ಬರುತ್ತವೆ. ನಾವು ನಮ್ಮ ಪರಿಸರವನ್ನು ಯಾವ ರೀತಿ ಇಟ್ಟುಕೊಂಡು ಕಾಪಾಡಿಕೊಂಡು ಬರಬೇಕು ಅನ್ನುವುದು ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಿರಿ ಈ ವಿಚಾರಗಳು ನಿಮ್ಮ ಮನೆಯಲ್ಲಿ ತಿಳಿಸಿ ಪರಿಸರವನ್ನು ಸಂರಕ್ಷಣೆ ಮಾಡವಂತೆ ಹುರಿದುಂಬಿಸಿ ಎಂದು ಸಲಹೆಯನ್ನು ನೀಡಿದರು. ಶ್ರೀ ಶಿವಪ್ಪ  ಇಲಾಳ ಶಿಕ್ಷಕರು ಮಕ್ಕಳಿಗೆಲ್ಲ ಪ್ರಮಾಣ ವಚನ   ಬೊಧಿಸಿದರು. ಕಾರ್ಯಕ್ರಮದಲ್ಲಿ ಜಗದೀಶ ಬಾಸಿಂಗದ, ಮರಿಯಪ್ಪ ಜರಕುಂಟಿ , ಶ್ರೀದೇವಿ ಗುಳಬಾಳ ,  ತಿಪ್ಪಣ್ಣ ರಾಮದುರ್ಗ, ಪ್ರಶಾಂತ ಕಟ್ಟಿ,  ಶ್ರೀಮತಿ ಇಮಾಂಬಿ ರಾ ಯಲಬುರ್ಗಿ  ಹಾಗೂ ಗುರುರಾಜ ನಾಟಕ ಶಿಕ್ಷಕರು ಇದ್ದರು



ಶುಕ್ರವಾರ, ಆಗಸ್ಟ್ 17, 2018

ದೇವತಾಪುರದ ಮಕ್ಕಳು















ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಬೆಂಗಳೂರು ಹಾಗೂ ವಿಸ್ತಾರ ರಂಗಶಾಲೆ ಕೊಪ್ಪಳ ಇವರ ಸಹಯೋಗದಲ್ಲಿ "ಚಿಣ್ಣರ ಚಿಲುಮೆ" ಮಕ್ಕಳ ರಂಗ ತರಬೇತಿಯ ಸಮಾರೋಪ ಸಮಾರಂಭವನ್ನು ವಿಸ್ತಾರ ರಂಗಶಾಲೆಯಲ್ಲಿ ನಡೆಸಲಾಯಿತು. ಪಾರಂಪರಿಕ ರಂಗಕಲೆಗಳು ಸದಾ ಕ್ರಿಯಾಶೀಲವಾಗಿ ಮಕ್ಕಳ ಜೊತೆಗೆ ಇದ್ದಾಗ ಮಕ್ಕಳ ಮಾನಸಿಕ ವ್ಯಕ್ತಿತ್ವ ಸದೃಢವಾಗುತ್ತದೆ. ಸ್ವಸ್ಥಾ ಸಮಾಜ ನಿರ್ಮಾಣವಾಗುತ್ತದೆ ಎಂದು ರಾಜ್ಯ ಸಮನ್ವಯ ಸಂಚಾಲಕರು ಹಾಗೂ ಮಕ್ಕಳ ಸಾಹಿತಿ ಶ್ರೀ ಶಂಕರ ಹಲಗತ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅಭಿಪ್ರಾಯ ತಿಳಿಸಿದರು. ಸರ್ಕಾರ ನಿರ್ಮಿಸುವ ಈ ರೀತಿಯ ಮಕ್ಕಳ ಯೋಜನೆಯು ರಂಗಭೂಮಿಯ ಮೂಲಕ ನಡೆಸುತ್ತಿರುವುದು ಭಾರತದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವಿಸ್ತಾರನ ಉಪ ನಿರ್ದೇಶಕರಾದ ಆಶಾ ವಿ ಅವರು ನುಡಿದರು.

ಕುಮಾರಿ ವೆಣ್ಣೀಲಾ ಹಾಲ್ಕುರಿಕೆ ರಚಿತವಾದ ಈ ನಾಟಕ ಮಕ್ಕಳ ಮೂಲಭೂತ ಸಮಸ್ಯೆಗಳನ್ನು ಅರ್ಥಯಿಸುವ ಪ್ರೇಕ್ಷಕರ ಪ್ರಖರ ಚಿಂತನೆಗೊಳ ಪಡುವ ಸಂದೇಶಾತ್ಮಕ ನಾಟಕ ದೇವತಾಪುರದ ಮಕ್ಕಳು. 

 ಮಕ್ಕಳ ನಾಟಕ ಮನೋಜ್ಞ ಮಾತುಗಳಿಂದ ನೃತ್ಯ, ಸಂಗೀತದೊಂದಿಗೆ ಪ್ರದರ್ಶನಗೊಂಡಿತು. ಅಲ್ಲಲ್ಲಿ ಬೆಳಕಿನ ವಿನ್ಯಾಸ ಕುಂಟಿತಗೊಂಡಿದ್ದರು ರಂಗಸಜ್ಜಿಕೆ ಪರಿಕರ ನಿರ್ದೇಶಕರ ಅಚ್ಚುಕಟ್ಟತೆ ತಂತ್ರಜ್ಞಾನದಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಗುರುರಾಜ ಹೊಸಪೇಟೆ ನಿರ್ದೇಶನದ "ದೇವತಾಪುರದ ಮಕ್ಕಳು" ನಾಟಕ  ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ಹಿರೇಬಿಡ್ನಾಳ ಗ್ರಾಮ ಪಂಚಾಯಿತಿಯ ಉಪಧ್ಯಾಕ್ಷರಾದ ಬಸವರಾಜ ಕನಕಾಪುರ, ರಾಜ್ಯ ಸಮಿತಿ ಸದಸ್ಯರಾದ ಕಲಾವಿದೆ ಸುನಂದ ನಿಂಬನಗೌಡರ, ಯೂಸಫ್ ಜೆ ಡಿ, ವೆಣ್ಣೀಲಾ ಹಾಲ್ಕುರಿಕಿ, ನಿರ್ದೇಶಕ ಗುರುರಾಜ ಹೊಸಪೇಟೆ, ವಿಸ್ತಾರ ರಂಗಶಾಲೆಯ ಸಂಯೋಜಕರಾದ ಲಕ್ಷ್ಮಣ ಪೀರಗಾರ ಅವರು ವೇದಿಕೆ ಮೇಲಿದ್ದರು. ಸುಂಕಪ್ಪ ಮೀಸಿ ಕಾರ್ಯಕ್ರಮ ನಿರೂಪಿಸಿದರೆ ಕರಿಯಪ್ಪ ಅವರು ವಂದನಾರ್ಪಣೆ ಮಾಡಿದರು.

ಮಂಗಳವಾರ, ಆಗಸ್ಟ್ 14, 2018

ತಾಲೂಕಾ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಯ ಕುರಿತು ಪತ್ರಿಕೆಯಲ್ಲಿ


ತಾಲೂಕ ಮಟ್ಟದ ವಿಜ್ಞಾನ



ತಾಲ್ಲೂಕು ಮಟ್ಟದ ವಿಜ್ಞಾನ ನಾಟಕ, ವಸ್ತು ಹಾಗೂ ಚರ್ಚಾ ಸ್ಪರ್ಧೆಯನ್ನು  ದಿನಾಂಕ ೦೯.೦೮.೨೦೧೮ ರಂದು ಸರಕಾರಿ ಬಾಲಕರ ಪದವಿಪೂರ್ವ ಕಾಲೇಜ್ ನಲ್ಲಿ ನಡೆಸಲಾಯಿತು. 'ಪೆದ್ದನ ಕೆರೆ' ನಾಟಕವನ್ನು ಜಹಗೀರ ಗುಡದುರ ಮಕ್ಕಳು ಭಾಗವಹಿಸಿ ಮೊದಲ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.
ಪರಿಸರ ಸಂರಕ್ಷಣೆ ಕುರಿತು ನಾಟಕ ವಿಷಯ ಒಳಗೊಂಡಿದ್ದ ನಾಟಕ ಎಲ್ಲರ ಮನಸೆಳೆಯುವಲ್ಲಿ ಯಶಸ್ವಿಯಾಯಿತು.