ಗುರುವಾರ, ಜೂನ್ 27, 2019
ಮಂಗಳವಾರ, ಜೂನ್ 25, 2019
ಮಂಗಳವಾರ, ಜೂನ್ 18, 2019
ವಿಧಾನ ಪರಿಷತ್ ಸದಸ್ಯರಾದ ಶ್ರೀ ಶರಣಪ್ಪ ಮಟ್ಟೂರ ಅವರಿಗೆ ರಂಗ ಶಿಕ್ಷಕರ ಮನವಿ
ಇಂದು ನಮ್ಮ ಶಾಲೆಗೆ ವಿಧಾನ ಪರಿಷತ್ ಸದಸ್ಯರಾದ ಶ್ರೀ ಶರಣಪ್ಪ ಮಟ್ಟೂರರವರು ನಮ್ಮ ಶಾಲೆಗೆ ಆಗಮಿಸಿದ್ದರು. ರಾಜ್ಯದಲ್ಲಿ ನಾಟಕ ಶಿಕ್ಷಕರು ಬೆರಳೆಣಿಕೆಯಷ್ಟಿದ್ದು ಎಲ್ಲರೂ ಇರುವ ಜಾಗಗಳಲ್ಲಿ ಕ್ರಿಯಾಶೀಲರಾಗಿದ್ದು ಶಾಲೆ, ಸಮುದಾಯವನ್ನು ಒಳಗೊಂಡಂತೆ ಸಾಂಸ್ಕೃತಿಕವಾಗಿ ಕಟ್ಟುವಲ್ಲಿ ನಿರತರಾಗಿದ್ದೇವೆ. ಆದರೆ ನಮ್ಮ ನೇಮಕಾತಿ, ವೇತನ ಶ್ರೇಣಿ, ವರ್ಗಾವಣೆಯಲ್ಲಿ ಆಗಿರುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಿ ನಮ್ಮ ನಾಟಕ ಶಿಕ್ಷಕ ವೃಂದದ ಸಮಸ್ಯಗಳ ಅರ್ಜಿಯೊಂದನ್ನು ಶ್ರೀ ಶರಣಪ್ಪ ಮಟ್ಟೂರ ಅವರಿಗೆ ಸಲ್ಲಿಸಲಾಯಿತು.
ಗುರುವಾರ, ಜೂನ್ 13, 2019
ಸೋಮವಾರ, ಜೂನ್ 10, 2019
ಗಿರೀಶ್ ಕಾರ್ನಾಡ ಅವರ ಜೊತೆ
ಮಿ|| ಜಂಟಲಮ್ಯಾನ್ ,
"ಆಡಾಡತ ಆಯುಷ್ಯ " ದಲ್ಲಿ ನಿಮ್ಮ ಪಯಣವನ್ನು ಓದಿ ಹೇಗೆ ಪ್ರತಿಕ್ರಿಯಿಸ ಬೇಕೆಂದು ತಿಳಿಯದೆ ನನ್ನಿಂದ ಶಬ್ದಗಳೇಹೊರಡುತ್ತಿಲ್ಲ. ನಿಮ್ಮ ಈ ಬರವಣಿಗೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಕಾರಂತರ ಪಲಾಯನ , ನಿಮ್ಮ oup ನಲ್ಲಿ ಚಿತ್ರಪಟ , ಬರವಣಿಗೆ ಹೀಗೆ ಎಲ್ಲವೂನನ್ನನ್ನು ಕಾಡುತ್ತವೆ.
ಈ ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆ. ಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿಪಯಣವಂತು ನಡದೇ ಇದೆ. ಕ್ಷಮಿಸಿ ನಾನು ನಿಮ್ಮ ಮಗಳ ವಯಸ್ಸಿನವನು. ಭರವಸೆಯನ್ನು ಗಟ್ಟಿಯಾಗಿಯೇ ಇಟ್ಟುಕೊಂಡಿದ್ದೇನೆ. ನಿಮ್ಮ ಈ ಪುಸ್ತಕದ ಓದು ನನ್ನನ್ನು ಇನ್ನುಹುರಿಗೊಳಿಸಲು
ಸಹಾಯಕವಾಗಿದೆ ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನ" ಕಾಯುತ್ತೇನೆ.
ಗುರುರಾಜ
====================================================================================
ಈ ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆ. ಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿಪಯಣವಂತು ನಡದೇ ಇದೆ. ಕ್ಷಮಿಸಿ ನಾನು ನಿಮ್ಮ ಮಗಳ ವಯಸ್ಸಿನವನು. ಭರವಸೆಯನ್ನು ಗಟ್ಟಿಯಾಗಿಯೇ ಇಟ್ಟುಕೊಂಡಿದ್ದೇನೆ. ನಿಮ್ಮ ಈ ಪುಸ್ತಕದ ಓದು ನನ್ನನ್ನು ಇನ್ನುಹುರಿಗೊಳಿಸಲು
ಸಹಾಯಕವಾಗಿದೆ ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನ" ಕಾಯುತ್ತೇನೆ.
ಗುರುರಾಜ
====================================================================================
ಪ್ರಿಯ ಗುರುರಾಜ್,
ನಿಮ್ಮ ಪತ್ರಕ್ಕಾಗಿ ಆಭಾರಿ. "ಆಡಾಡತ ಆಯುಷ್ಯ " ಓದಿ ನಿಮಗೆ ಖುಷಿ ಯಾಯಿತೆಂದು ತಿಳಿದು ಸಂತೋಷವಾಯಿತು.
ಶುಭಾಶಯಗಳೊಂದಿಗೆ,
ಗಿರೀಶ್ ಕಾರ್ನಾಡ್
====================================================================================
ಅಕ್ಟೊಬರ್ ೨೦೧೧ ರಲ್ಲಿ ಬರೆದ ಬರಹ
ಶನಿವಾರ, ಜೂನ್ 8, 2019
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)