ಗುರುವಾರ, ನವೆಂಬರ್ 27, 2014



ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ದೆಯಲ್ಲಿ ನಾಟಕ







ನಮ್ಮ ಶಾಲೆಯ ನಾಟಕದಿಂದಾಗಿ ಬಹುಮಾನವೇನು ಬರಲಿಲ್ಲ. ಆದರೆ ರಾಜ್ಯ ಮಟ್ಟದವರೆಗೆ ಭಾಗವಹಿಸಿದ ತೃಪ್ತಿ. ನಮ್ಮ ಶಾಲೆಯ ಮಕ್ಕಳು ಚೆನ್ನಾಗಿ ಅಭಿನಯಿಸಿದರು. ಆದರೆ ಅದಕ್ಕಿಂತ ಚೆನಾಗಿ ಇತರೆ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿ ಪ್ರಶಸ್ತಿ ಪಡೆದರು. ಮಕ್ಕಳು ಭಾಗವಹಿಸುವುದು ಮುಖ್ಯ. ಅದಕ್ಕೆ ಅನುವು ಮಾಡಿಕೊಟ್ಟ ಎಲ್ಲಾ ಶಾಲಾ ವೃಂದ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ತಿಳಿಸಲೇಬೇಕು. ಆತಿಥ್ಯ ನೀಡಿ ನೆನೆಪಲ್ಲಿ ಉಳಿಯುವಂತೆ ಮಾಡಿದ ಮಂಗಳೂರಿನ DIET ನ ಪ್ರಾಂಶುಪಾಲರಿಗೂ, ದಯಾವತಿ ಹಿರಿಯ ಉಪನ್ಯಾಸಕರಿಗೂ, ಕೊಪ್ಪಳದ ಉಮಾದೇವಿ ಉಪನ್ಯಾಸಕರಿಗೂ ಹಾಗೂ ಕುಷ್ಟಗಿಯ ವೆಂಕಟೇಶ ಉಪನ್ಯಾಸಕರಿಗೂ ಧನ್ಯಾವಾದಗಳನ್ನು ತಿಳಿಸುತ್ತೇನೆ.

ಬೇಲಿ ಹೂ


ಕಲಿಸು ಗುರುವೆ ಕಲಿಸು


ಬುಧವಾರ, ನವೆಂಬರ್ 12, 2014

ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ರಾಜ್ಯ ಮಟ್ಟಕ್ಕೆ

   




  ನಮ್ಮ  ಪ್ರೌಢಶಾಲೆ ಮಕ್ಕಳು ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಚಿತ್ರದುರ್ಗದಲ್ಲಿ ದಿನಾಂಕ ೧೧.೧೧.೨೦೧೪ ನಡೆದ ವಿಭಾಗ ಮಟ್ಟದ ವಿಜ್ಜಾನ ನಾಟಕ ಸ್ಪರ್ದೆಯಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಜಹಗೀರ ಗುಡದೂರ ಪ್ರೌಡಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ನಾಟಕ ಶಿಕ್ಷಕರಾದ ಗುರುರಾಜ್ ಅವರಿಗೆ ಉತ್ತಮ ನಿರ್ಡೇಶಕ ಪ್ರಶಸ್ತಿಯು ಲಭಿಸಿದೆ.  ಶಾಲೆಯ ಸಿಬ್ಬಂದಿ ವರ್ಗ, ಎಸ್.ಡಿ.ಎಂ.ಸಿ, ಉಪನ್ಯಾಸಕರಾದ ವೆಂಕಟೇಶ, ಹಾಗೂ ಕ್ಷೇತ್ರ ಶಿಕ್ಷಣ ಇಲಾಖೆ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಅಭಿನಂದಿಸಿದ್ದಾರೆ. ರಾಜ್ಯ ಮಟ್ಟದಲ್ಲಿಯೂ ಪ್ರಶಸ್ತಿ ಪಡೆದು ರಾಷ್ಟ್ರ ಮಟ್ಟಕ್ಕೆ ಸಾಗಲಿ ಎಂದು ಹರಸಿದ್ದಾರೆ.

ಸೋಮವಾರ, ನವೆಂಬರ್ 3, 2014

ಕವಿತೆ

ಓ ಬಾನಾಡಿಗಳೆ ಎಲ್ಲಿ ಓಡುವಿರಿ
ಮುಸ್ಸಂಜೆಯಾಯಿತೆಂದು 
ಸೂರ್ಯಕಿರಣಗಳು ಸಾರಿದವೇ
ನಿಮಗೆ
ಹೊಂಗಿರಣಗಳಲಿ ಅರಳಿದ ಕುಸುಮವೇ
ಸುವಾಸನೆಯ ನಿನ್ನೊಳಗೆ ನೀ ಹೀರಿ
ಮುದುಡಿರುವೆ..... ರಾತ್ರಿಯಾಯಿತೆಂದು
ತಾ ಬರುವೆನೆಂದು ಆ ಶಶಿಯು ಹೇಳಿದನೇ
ನಿನಗೆ
ನಿಮ್ಮನೆಲ್ಲ ನೋಡುತಾ ಈ ಶುಭದಿನದ 
ಶುಭರಾತ್ರಿಗೆ ಶುಭ ಆಶಯವ ನಾ
ಸುರಿಸುವೆ ನಿಮಗೆಲ್ಲ ಓ ನನ್ನ
ಒಡನಾಡಿಗಳೇ.............!!!!!



Shreesamadarshi Honnavara ಅವರ ಕವಿತೆ