ಶನಿವಾರ, ಆಗಸ್ಟ್ 28, 2010













ಆಗಸ್ಟ್ ೨೧ ನೇ ಶನಿವಾರದಂದು ನಮ್ಮ ಶಾಲೆಗೆ ಇಂತಹದೊಂದುಸಂಗತಿ ನಡೆಯುವುದು ಈ ತರಹದ ಸುದ್ದಿ ಬರುವುದೆಂದು ಯಾರುಊಹಿಸಿರಲಿಲ್ಲ ನಮ್ಮ ಶಾಲೆಯಾ ಅತ್ತ್ಮಿಯಾ ಶಿಕ್ಷಕರಾದ ಶ್ರೀಬಸವರಾಜ್ ಗುಣಕಿ ಯವರು ಬೆಳಗಾವಿ ಆಸ್ಪತ್ರೆಯಲ್ಲಿ ನಿಧನಹೊಂದಿದರೆಂದು. ನಂಬಲಿಕ್ಕೆ ಆಗದ ರೀತಿಯ ಕರೆಯೊಂದುಬಂದಾಗಾ ನಮ್ಮ ಶಾಲೆ, ಶಿಕ್ಷಕರು, ಮಕ್ಕಳು ಹಾಗೂ ಊರಿನಮನಗಳನ್ನೇ ಅಲುಗಾಡಿಸಿ ಬಿಟ್ಟಿತು. ನಿಜಕ್ಕೂ ಇದೊಂದು ಕಲ್ಪನೆಗೂಸಿಗದಂತಹ ದುರಂತ. ಸಾವು....... ಅನ್ನೋದು ಅವರನ್ನುನಮ್ಮೆಲ್ಲರೆಂದಲೂ ದೂರ ಮಾಡಿ ಬಿಟ್ಟಿತು. ಗುಂಕಿ ಗುರುಗಳ ಅಗಲಿಕೆನನಗೆ ಗದುಗಿನ ನಾರಣಪ್ಪನ ಸಾಲುಗಳ ನೆನಪು ತರಿಸುತ್ತದೆ.

" ಚರಮಗೀತೆಯ ನಿನಗೆ ಬರೆಯುತಚರಮಗಿತೆಯು ದೊರೆತುದುದೆನೆಗೆ,ಎಲೆ ,ಪರಮ ಪಂಚಮ ವೇದದಶ್ವತ್ತಮಚಿರವೀರ ......"
ನಿಜದಲ್ಲಿ ನಮ್ಮ ಹಾಗೂ ಮಕ್ಕಳ ಮನಸ್ಸಿನಲ್ಲಿ ಗುಣಕಿ ಗುರುಗಳು ಚಿರಂಜಿವಿಯಾಗಿದ್ದಾರೆ.

ಗುರುರಾಜ


  



ನಾ ಕಂಡಂತೆ ಶ್ರೀ ಬಸವರಾಜ ಗುಣಕಿ ಗುರುಗಳು...
   
                           ಇವರೊಬ್ಬ ಮುಕ್ತ ಮನಸಿನ, ಆತ್ಮೀಯ ಸ್ವಭಾವದ  ಸೃಜನಶೀಲ  ಸಂಪನ್ನ ಗುರು. ಇತರರಿಗೆ ಯಾವುದೇ ನೋವಾಗದಂತೆ ವರ್ತಿಸಿದ ಸಂಘಜಿವಿ. ಇಂತಹ ನನ್ನ ಪ್ರೀತಿಯ ಹಾಗು ನಮ್ಮ ಜೊತೆ ನಕ್ಕು ನಲಿಯುವ ನೆಚ್ಚಿನ ಮಿತ್ರರಾಗಿದ್ದರು. ಇವರ ಅಕಾಲಿಕ ಸಾವಿನ ವಿಷಯ ಕೇಳುತ್ತಿದ್ದಂತೆ ನನಗೆ ದಿಕ್ಕೇ ತೋಚದಾಗಿ ಮನವೆಲ್ಲ ರೋಮಾ೦ಚನಗೊಂಡು ನಡುಕ ಹುಟ್ಟಿ ಮನವೆಲ್ಲ ಕಂಬನಿ ಮಿಡಿಯಿತು.
                         ಇವರ ಕುಟುಂಬದ ಸದಸ್ಯರೆಲ್ಲರ ಅತೀವ ದುಃಖದಲ್ಲಿ ನಾನು ಪಾಲಾಗೊಂಡೆ . ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಆ ದೇವರಲ್ಲಿ  ನಾನು ಬೇಡಿಕೊಳ್ಳುತ್ತೇನೆ. 

ಶಿವಪ್ಪ ಇಲಾಳ