ಮಂಗಳವಾರ, ನವೆಂಬರ್ 23, 2010

ವಲಯ ಮಟ್ಟದ ಪ್ರತಿಭಾ ಕಾರಂಜಿ









೨೩.೧೧.೨೦೧೦ ರಂದು ಜಾಹಾಗಿರಗುಡದುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯನ್ನು ನಡೆಸಲಾಯಿತು. ಇದರಲ್ಲಿ ನಮ್ಮ ಶಾಲೆಯಾ ಮಕ್ಕಳು ನಾಟಕ,ಕ್ವಿಜ್ , ಭಾಷಣ ,ಚರ್ಚಾಸ್ಪರ್ದೆ ,ಪ್ರಭಂಧ , ಹೀಗೆ ಒಟ್ಟು ಆರು ಸ್ಪರ್ದೆಗಳಲ್ಲಿ ಮೊದಲ ಬಹುಮಾನಗಳನ್ನು ಪಡೆದು ತಂದಿದ್ದಾರೆ ಅವರಿಗೆ ಶಾಲೆಯಾ ಶಿಕ್ಷಕ ವೃಂದ ಹಾಗೂ ನಮ್ಮ ಪತ್ರಿಕೆಯು ಆ ವಿಧ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತದೆ.



ಸಂಪಾದಕ
ಗುರುರಾಜ

ಭಾನುವಾರ, ನವೆಂಬರ್ 21, 2010

ಉಡುಪಿ ಮಕ್ಕಳ ಹಬ್ಬದಲ್ಲಿ






ಭಾಗವಹಿಸಿದ ರಂಗ ಗೆಳೆಯರು ( ದಿನಾಂಕ ೨೦.೧೦.೨೦೧೦)
********************************************************************

"ಆನೆ ಮತ್ತು ಕೋತಿಯಸ್ನೇಹದ ಕಥೆ "







ಒಂದನೊಂದು ಕಾಡಿನಲ್ಲಿ ಒಂದು ಮಾವಿನ ಮರವಿತ್ತು . ಆ ಮರದ ಪಕ್ಕದಲ್ಲಿ ಒಂದು ಬಾವಿಯಿತ್ತು. ಮಾವಿನ ಮರದ ಮೇಲೆ ಒಂದು ಕೋತಿ ವಾಸವಾಗಿತ್ತು. ಅದಕ್ಕೆ ಆನೆ ಆಪ್ತ ಗೆಳಯನಾಗಿತ್ತು . ನರಿ ಮತ್ತು ಮೊಸಳೆ ಅವುಗಳ ಶತ್ರುಗಳಾಗಿದ್ದವು. ಮತ್ತು ಅವುಗಳಿಂದ ಯಾವಾಗಲು ತೊಂದರೆಯನ್ನು ಅನುಭವಿಸುತ್ತಿದ್ದವು. ಆದರು ಸ್ನೇಹಿತರಿಬ್ಬರು ಸಂತೋಷ ದಿಂದ ಇದ್ದವು. ಆನೆ ಕೋತಿಯ ಮನೆಗೆ ಆಟವಾಡಲೆಂದು ಬಂದಾಗ ಆನೆ ಕೋತಿಯ ಬಳಿ ಹೀಗೆ ಮಾವಿನ ಹಣ್ಣನ್ನು ಕೇಳಿತು.
ಜಾಣ ನೀನು ಮಂಗಣ್ಣ
ಬೇಗ ಮರ ಹತ್ತಣ್ಣ
ಎರಡು ಹಣ್ಣು ಕೀಳಣ್ಣ
ನೀನು ಒಂದು ತಿನ್ನಣ್ಣ
ನನಗೂ ಒಂದು ಕೊಡಣ್ಣ
ಆಗ ಕೋತಿ ಆನೆಗೆ ಮಾವಿಅನ ಹಣ್ಣನ್ನು ನೀಡಿತು. ನಂತರ ಅವರು ಕಣ್ಣ ಮುಚ್ಚಾಲೆ ಆಟವಾಡುತ್ತಾಲಿದ್ದಾಗ ಕೋತಿ ಮರವೆರುವ ರಭಸದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಕೋತಿ ಸತ್ತು ಹೋಯಿತು. ತನ್ನ ಗೆಳೆಯನನ್ನು ಕಳೆದು ಕೊಂಡ ಆನೆಗೆ ದುಃಖವಾಯಿತು ಜೋರಾಗಿ ಅತ್ತಿತು. ಆದರೆ ಶತ್ರುಗಳಗಿದ್ದ ನರಿ ಹಾಗೂ ಮೊಸಳೆಗೆ ಖುಷಿಯಾಗಿ ಸಂತೋಷದಿಂದ ನಕ್ಕವು.

( ಉಡುಪಿ ಮಕ್ಕಳ ಹಬ್ಬದಲ್ಲಿ ಮಕ್ಕಳಿಂದಲೇ ರಚಿತವಾಗಿರುವ ಕಥೆ. ಇದು ಎರಡನೇ ಗುಂಪಿನ ಕಥೆ - ದಿನಾಂಕ ೨೦.೧೦.೨೦೧೦)



ವಿಧ್ಯಾರ್ಥಿ ಜೀವನ

ನಾವು ನಮ್ಮ ಜೀವನವನ್ನು ಯಶಸ್ವಿಯಾಗಿ ಸಾಧಿಸಲು ನಮ್ಮಲ್ಲಿ ಸತತ ಪ್ರಯತ್ನವಿರಬೇಕು. ಒಳ್ಳೆಯ ವಿಧ್ಯಾರ್ಥಿ ಎಂದು ಗುರುತಿಸಿಕೊಳ್ಳಲು ನಾವು ಎಲ್ಲಾ ರಂಗಗಗಳಲ್ಲಿ ಯು ಪ್ರವಿಣರಾಗಿರಬೇಕುಮತ್ತು ಎಲ್ಲರಿಗು ಆದರ್ಶನಾಗಿರಬೇಕು. ಆಗ ಮಾತ್ರ ಅವನು ಒಳ್ಳೆಯ ವಿಧ್ಯಾರ್ಥಿಯೆಂದು ಗುರುತಿಸಿಕೊಳ್ಳುವನುಯಾರೇ ಆಗಲಿ ಯಾವುದೇ ಕೆಲಸವನ್ನು ಬೇಜಾವಾಬ್ದಾರಿಯಿಂದ ನೋಡಿಕೊಳ್ಳಬಾರದು. ಕಾರ್ಯಾವನ್ನು ನಿರ್ವಹಿಸುತ್ತೇನೆ ಎಂಬ ಆಸಕ್ತಿ ,ಹಂಬಲವಿರಬೇಕು. ಕಾರ್ಯಾ ಅಸಪಲವಾದಾಗ ಅದನ್ನು ಮರಳಿ ಯತ್ನಿಸಿ ಸಫಲವಾಗಿ ಮಾಡಿಕೊಳ್ಳಬೇಕು ನಾವು ಒಳ್ಳೆಯನಿಯಮ ಮತ್ತು ಆದರ್ಶ ಗಳನ್ನು ನಮ್ಮಲ್ಲಿ ರುಡಿಸಿಕೊಳ್ಳಬೇಕು. ಮತ್ತು ಸಮಯ ಪ್ರಜ್ಞೆ ಯನ್ನು ಪಾಲಿಸಬೇಕು.

ವಿಧ್ಯಾರ್ಥಿ ಜೀವನ ಬಂಗಾರದ ಜೀವನ


"Student Life is Golden Life."


ಮಂಜುನಾಥ ಎಸ್.ಮುರಡಿ


೯ ನೇ ತರಗತಿ