ಸೋಮವಾರ, ಡಿಸೆಂಬರ್ 29, 2014

ಭಾನುವಾರ, ಡಿಸೆಂಬರ್ 28, 2014

ಕಲಾ ಶಿಕ್ಷಣ ವಿಚಾರ ಸಂಕಿರಣ - ಗೋಷ್ಟಿ ೨

ಬದಲಾವಣೆಯ ಪ್ರತಿನಿಧಿಗಳಾಗಿ ಕಲಾವಿದರು ಹಾಗೂ ಶಿಕ್ಷಕರು




ರಾಜ್ಯ ಮಟ್ಟದ ಕಲಾಶಿಕ್ಷಣ ವಿಚಾರ ಸಂಕಿರಣ





ಶುಕ್ರವಾರ, ಡಿಸೆಂಬರ್ 26, 2014

ನಾಟಕ - ಹೆಜ್ಜೆಗಳು

ಶಿವನಾಯ್ಕ್ ದೊರೆ ಅವರು ನಾಟಕ ನಿರ್ದೇಶಿಸಿದ ಕೆಲವು ಚಿತ್ರಗಳು.

ಸತ್ರು ಅಂದ್ರೆ ಸಾಯ್ತಾರೆ

 ಶೂದ್ರ ತಪಸ್ವಿ

 ಸತ್ರು ಅಂದ್ರೆ ಸಾಯ್ತಾರೆ

 ಶುದ್ರ ತಪಸ್ವಿ

ಶೂದ್ರ ತಪಸ್ವಿ

kali kalisu ending function


ಗುರುವಾರ, ಡಿಸೆಂಬರ್ 18, 2014

ಪಾಕಿಸ್ತಾನದ ಆ ಕಂದಗಳು


          
      ಇಂದು ತಡೆಯಲಾರದಷ್ಟು ನೋವಾಗಿದೆ. ಆ ಮುದ್ದು ಕಂದಗಳು ಕಟುಕರಿಗೇನು ಮಾಡಿದ್ದರು. ಕೊಂದವನು ಒಬ್ಬ ಮಗುವಾಗಿಯೇ ಬಂದವನಲ್ಲವೇ? 

ರಾಕ್ಷಸ...!

      ನಿಜವಾಗಲೂ ಇಂಥವರನ್ನು ರಾಕ್ಷಸ ಎಂಬ ಶಬ್ದವೂ ಸಣ್ಣದಾಯಿತೆಂದು ತಿಳಿಯುತ್ತೇನೆ. ಆ ರಕ್ತ ದ ಮಡುವಿನಲ್ಲಿ ಮಿಂದು ಭವಿಷ್ಯವನ್ನೇ ಕಾಣದೇ ದೂರಾದ ಮಕ್ಕಳು. ಆ ಸ್ಥಿತಿಗೆ ಕಾರಣನಾದವನಿಗೆ ನನ್ನ ದಿಕ್ಕಾರ. ನಾನು ನನ್ನ ವಿದ್ಯಾರ್ಥಿ - ಶಿಕ್ಷಕರೊಡಗೂಡಿ ಆ ಮಕ್ಕಳಿಗಾಗಿ ೨ ನಿಮಿಷ ಮೌನಚಾರಣೆ ಮಾಡುವಾಗ ಎದೆ ನಡುಗಿ ಗದ್ಗದಿತನಾಗಿ ಮಾತೇ ಹೊರಡಲಿಲ್ಲ. ನನ್ನ ಮುಂದಿರುವ ಈ ಮಕ್ಕಳೇ ಅಲ್ಲಿನ ಮಕ್ಕಳೆಂದು ಊಹಿಸಿಕೊಂಡು ನಿಲ್ಲಲೂ ಆಗಲಿಲ್ಲ. ನಾನು ಆಲೋಚಿಸುತ್ತಿರುವುದು ಸರಿಯೋ ತಪ್ಪೋ ತಿಳಿದಿಲ್ಲ. ಆದರೆ ಆ ಮಕ್ಕಳಿಗೂ ನಾನು ಬೋಧಿಸುತ್ತಿದ್ದೆ, ನಾಟಕವಾಡಿಸುತ್ತಿದ್ದೆ, ರಂಗಗೀತೆಗಳನ್ನು ಹೇಳಿಕೊಡುತ್ತಿದ್ದೆ. ಎಂದು ನನ್ನೊಳಗೆ ಭಾಸವಾಗಿ ದೇಶ ದೇಶಗಳ ಕಿತ್ತಾಟ, ಧರ್ಮಗಳ ಸಂಘರ್ಷ ನನಗೆ ಯಾವುದು ತಲೆಗೆ ತೋಚದೆ ಕಂಡ ಮಕ್ಕಳೆಲ್ಲ ಆ ಬಲಿಯಾದ ಮಕ್ಕಳೇ ಎಂದೆನಿಸಿ ಜೀವ ಜೀವದೊಳಗೆ ನಿಲ್ಲದೆ ಒದ್ದಾಡುತ್ತಿರುವುದು ಯಾರಿಗೆ ಹೇಳಲಿ? ಆ ಮಕ್ಕಳು ಬದುಕಬಾರದಿತ್ತೇ... ರಾಜಕೀಯದ ಆ ಸಣ್ಣತನ ಜಗತ್ತನ್ನೇ ಬೆಚ್ಚಿಬೀಳಿಸಿತು. ಯಾಕಾಗಿ-ಯಾವುದಾಕ್ಕಾಗಿ ಜೀವವನ್ನು ತೆಗೆದು ಕೊಂಡರೋ ಆ ಮುರ್ಖರಿಗೇ ತಿಳಿಯದೇ ಹೋದರು. 

ದಿಕ್ಕಾರ

ದಿಕ್ಕಾರ.
        ನನಗೂ ಅನಿಸುತ್ತದೆ, ಆ ಕಟುಕರ ಗುಂಪೊಳಗೆ ಸೇರಬೇಕು ಎಂದು. ಸೇರಿ ಅವರ ಬಂದೂಕುಗಳಿಂದ ಅವರನ್ನೇ ಸುಡಬೇಕು ಎಂದು. ಮಕ್ಕಳನ್ನು ಬಲಿ ತೆಗೆದುಕೊಂಡ ಪ್ರತಿಯೊಬ್ಬ ಉಗ್ರಗಾಮಿಗೂ ಮನುಷ್ಯತ್ವನೇ ಇಲ್ಲದೇ ಹೋಗುವಾಗ ಭಾರತ, ಅಮೆರಿಕಾ, ಚೀನಾ, ರಷ್ಯಾ ದೇಶಗಳು ಮರುಗಿ ಸಂತಾಪ ಸೂಚಿಸುವುದರಲ್ಲಿಯೋ ಮೌನಾಚರಣೆ ಆಚರಿಸಿ ಸುಮ್ಮನಿರುವುದಲ್ಲ, ನಾಳೆ ಮತ್ತೋಂದಿಷ್ಟು ಮಕ್ಕಳು ಬಲಿಯಾಗದೇ ಇರುವ ಹಾಗೇ ಉಗ್ರವಾದಿಗಳನ್ನು ನಿರ್ಮೂಲನೆ ಮಾಡಬೇಕಾಗಿದೆ. ಮಲಾಲಳಿಗೆ ನೊಬೆಲ್ ಪ್ರಶಸ್ತಿ ಕೊಟ್ಟರಷ್ಟೇ ಅಲ್ಲ, ಅಂಥಹ ಪ್ರತಿಭಾವಂಥ ಮಕ್ಕಳ ರಕ್ಷಣೆಯು ನಮ್ಮ ಹೊಣೆಯಾಗಿದೆ. 

      ನಮ್ಮ ಮನೆಯಲ್ಲಿ, ನಮ್ಮ ಹಳ್ಳಿಯಲ್ಲಿ ಕುಳಿತು ನಾವು ಒಂದಿಷ್ಟು ಮಾತನಾಡಿ, ಹರಟೆ ಹೊಡೆದು ಮುಗಿಸಿದರಾಯಿತೇ... ಸರ್ಕಾರ ಸಂಬಳ ನೀಡುತ್ತದೆ ನಾನು ನನ್ನ ಕುಟುಂಬ ಎಂದು ಸೀಮಿತವಾಗದೇ ಇಡೀ ಮನು ಕುಲವೇ ನನ್ನ ಕುಟುಂಬ - ಬಳಗವೆಂದುಕೊಂಡು ಪ್ರತಿಕ್ರಿಯಿಸಬೇಕಾಗಿದೆ. ವಿದ್ಯಾರ್ಥಿಯೊಬ್ಬ ನನ್ನಲ್ಲಿ ಬಂದು "ಸಾರ್ ಅವರು ಅವರ ಮಕ್ಕಳನ್ನೇ ಕೊಂದುಕೊಳ್ಳುತ್ತಾರಲ್ಲ ಸಾರ್” ಎಂದು. ಮಕ್ಕಳಲ್ಲಿರುವ ಪ್ರಜ್ಞೆ ಆ ಯುವಕನಲ್ಲೋ ಜಿಹಾದ್ ಎಂದು ಬೊಬ್ಬೆ ಹಾಕುವ ಯಾವೊಬ್ಬನಲ್ಲೂ ಮಕ್ಕಳಲ್ಲಿರುವ ಮಾನವೀಯತೆ ಇಲ್ಲದಾಗಿದೆ.

ಸೋಮವಾರ, ಡಿಸೆಂಬರ್ 1, 2014

’ತಪ್ಪು ತಿದ್ದಿಕೊಳ್ಳೂವುದು ತಡವಾಯಿತು’ - ಮಂಗಳೂರಿನಿಂದ ಸಾವಿತ್ರಿ ಕಿನ್ನಾಳ


’ಪ್ರಥಮ’ ಎಂದು ನಮ್ಮ ಜಿಲ್ಲೆಯ ಹೆಸರನ್ನೇ ಕರೆಯುತ್ತಾರೆ ಎಂದು ಮನಸ್ಸಿನಲ್ಲಿ ಜಿಗುದು ಕುಣಿದಾಡೋಕೆ ತಯಾರಾದೆ.

ಆದರೆ......
ಪ್ರಥಮ ಸ್ಥಾನ...

ಉಡುಪಿ
................

ಎಂದಾಗ ನಮ್ಮ ಸಂತೋಷವೆಲ್ಲ ಅಲ್ಲೇ ಕಳಚಿ ಬಿತ್ತು. ಉಡುಪಿ ಜಿಲ್ಲೆಯವರ ಹಾರಾಟ, ಚಿರಾಟ ನೋಡಿ, ಚಿತ್ರದುರ್ಗದಲ್ಲಿ ನಮ್ಮ  ನಾಟಕ ಪ್ರಥಮ ಎಂದಾಗ ಆದ ಸಂತೋಷದ ನೆನಪಾಯಿತು. ರಾಜ್ಯ ಮಟ್ಟದಲ್ಲಿಯೂ ನಮ್ಮ ನಾಟಕ ಪ್ರಥಮ ಸ್ಥಾನ ಪಡೆದಿದ್ದರೆ ನಾವು ಯಾವ ರೀತಿ ಆ ಸಂತೋಷವನ್ನು ಆಚರಿಸುತ್ತಿದ್ದೇವು ಎಂದೂ ಕಲ್ಪನೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ ನನಗೆ. ನಾನು ಕುಳಿತಲ್ಲಿಯೇ ದುಃಖಿತಳಾದೆ. ನಾವು ಸಮಾದಾನದಿಂದ ಊರಿಗೆ ಹೋಗಲು ಸಮಾಧಾನಕರ ಬಹುಮಾನ ನೀಡಿದರು. ಪೊಂಪೈ ಪ್ರೌಢಶಾಲೆಯ ಆವರಣದಲ್ಲಿ ಒಂದು ಕ್ರೈಸ್ತ  ಚರ್ಚ ಇತ್ತು. ನನಗೆ ತುಂಭಾ ಆಸೆ ಇತ್ತು. ಅಲ್ಲಿಗೆ ಹೋಗಿ ನಮಸ್ಕರಿಸಿ ಬರಬೇಕೆಂದು. ಆದರೆ ಅಲ್ಲಿಗೆ ಹೋಗಲು ಆಗಲಿಲ್ಲ. ಕೆಲವಷ್ಟು ವಿದ್ಯಾರ್ಥಿಗಳು ಫಲೀತಾಂಶ ತಿಳಿದ ಮೇಲೆ ರಂಗಮಂದಿರದಿಂದ ಹೊರಗೆ ಬಂದು ’ರಾಜಕೀಯ ಮಾಡಿದ್ದಾರೆ, ಮೋಸ ಮಾಡಿದರು’ ಎಂದು ಮಾತಾನಾಡುತ್ತಿದ್ದರು. ಅವರು ಹಾಗೇ ಮಾತನಾಡುವುದು ತಪ್ಪು. ’ಮೊದಲು ಇನ್ನೊಬ್ಬರಲ್ಲಿನ ದೋಷಗಳಿಗಿಂತ ನಮ್ಮಲ್ಲಿರುವ ದೋಷಗಳನ್ನು ತಿಳಿದುಕೊಳ್ಳಬೇಕು. ಅದು ನಿರ್ಣಾಯಕರ ತಪ್ಪಲ್ಲ. ಅದು ನಮ್ಮ ತಪ್ಪು. ನಾವು ಸರಿಯಾಗಿ ಅಭಿನಯಿಸಿದ್ದರೆ ನಮ್ಮ ತಂಡಕ್ಕೂ ದ್ವೀತಿಯನೋ, ಪ್ರಥಮ ಸ್ಥಾನವೋ ಬರುತ್ತಿತ್ತು.ನಾವು ಚೆನ್ನಾಗಿ ಅಭಿನಯಿಸಿದಿವಿ, ಆದರೆ ನಮಗಿಂತ ಒಂದು ಕೈ ಮೇಲೆ ಇತರೆ ತಂಡಗಳು ಚೆನ್ನಾಗಿ ಅಭಿನಯಿಸಿದವು.’ ನಾವು ಇನ್ನೋಂದು ತಪ್ಪು ಮಾಡಿದಿವಿ. ನಾವು ನಮ್ಮ ಮಾರ್ಗದರ್ಶಿ ಶಿಕ್ಷಕರು ಹೇಳಿದ ಕೆಲಸವನ್ನು ಮಾಡಲಿಲ್ಲ. ನಾವು ನಮ್ಮ ಕೆಲಸ ಮಾಡದಿದ್ದರಿಂದ ಹೀಗಾಯಿತು. ನಾವು ಮುಂದೆ ಇಂಥಹ ನಾಟಕದಲ್ಲಿ ಭಾಗವಹಿಸಬೇಕೆಂದರೆ ನಮಗೆ ಮತ್ತೇ ಆ ಅವಕಾಶ ಸಿಗುವುದಿಲ್ಲ. ಏಕೆಂದರೆ, ನಾನು ಈ ಶಾಲೆಯಲ್ಲಿ ಕೊನೆಯ ವರ್ಷ ವ್ಯಾಸಂಗ ಮಾಡುತ್ತಿರುವುದು.




ನನಗೆ ಆದ ಅನುಭವದ ಒಂದು ಮಾತು ಹೇಳುತ್ತೇನೆ

’ಯಾರು ಯಾವುದೇ ಕೆಲಸವಾಗಲಿ ಹೇಳಿದರೆ, ಇಂಥಹ ಕಾರ್ಯ, ಸ್ಪರ್ಧೆ, ಆಟ, ನಾಟಕ ಸೇರಿ ಎಂದು ಶಿಕ್ಷಕರು ಹೇಳಿದರೆ ಹಿಂಜರಿಯಬೇಡಿ. ನಾನು ಏಕೆ ಹೇಳುತ್ತೇನೆ ಅಂದರೇ ಮುಂದೆ ಇಂಥಹ ಅವಕಾಶ ಬೇಕು ಎಂದರು ಸಿಗುವುದಿಲ್ಲ. ಸಿಗುತ್ತೆ, ಆದರೆ ಇಂಥಹ ಮಾರ್ಗದರ್ಶಿ ಶಿಕ್ಷಕರು ಮುಂದೆ ನನಗೆ ಸಿಗುತ್ತಾರೆಯೋ ? ಇಲ್ಲವೋ ?.......
ಇಂಥಹ ಶಾಲೆ, ಮಾರ್ಗದರ್ಶಿ ಶಿಕ್ಷಕರು ಸಿಕ್ಕಿದ್ದು ನನ್ನ ಪುಣ್ಯ. ಇಂಥ ಅವಕಾಶ ಯಾರು ಕಳೆದುಕೊಳ್ಳಬೇಡಿ. ಮಿಂಚಿ ಹೋದ ಕಾಲ ಮರಳಿ ಬರುವುದಿಲ್ಲ.

ಜೀವನದಲ್ಲಿ ಸೋಲು - ಗೆಲುವು ಸಹಜ. ನಮ್ಮ ನಾಟಕ ಮಂಗಳೂರಿನಲ್ಲಿ ಪರಾಜಯ ಹೊಂದಿದರೂ, ಆ ಜನಗಳ ನಗು, ಮಾತು ಎಲ್ಲವನ್ನು ಮರೆಸಿತು. ಅಂಥಹ ಊರು, ವ್ಯವಸ್ಥಾಪಕರು ನಮಗೆ ಪರಿಚಯವಾದದ್ದು ನಮ್ಮ ಅದೃಷ್ಟ.

ಸಾವಿತ್ರಿ ಕಿನ್ನಾಳ
೧೦ ನೇ ತರಗತಿ
ಸರಕಾರಿ ಪ್ರೌಢಶಾಲೆ
ಜಹಗೀರ ಗುಡದೂರ.