ಮಂಗಳವಾರ, ಏಪ್ರಿಲ್ 18, 2017

ಆದರ್ಶ ವಿದ್ಯಾರ್ಥಿಗಳು

೨೦೧೬-೧೭ ನೇ ಸಾಲಿನಿಂದ ನಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿ ಇಬ್ಬರ (ಬಾಲಕ+ಬಾಲಕಿ) ನ್ನು ಆದರ್ಶ ವಿದ್ಯಾರ್ಥಿಗಳೆಂದು ಆಯ್ಕೆ ಮಾಡಿ ಗೌರವಿಸುವ ಹೊಸ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಕ್ಕಳನ್ನು ಈ ರೀತಿ ಪ್ರೋತ್ಸಾಹಿಸುವುದರಿಂದ ಅವರ ಭವಿಷ್ಯಕ್ಕೆ ಉತ್ತಮವಾದ ವಾತಾವರಣವನ್ನು ಸೃಷ್ಟಿಸಿದಂತೆ ಆಗುತ್ತದೆ ಎಂಬ ದೃಷ್ಟಿಯಲ್ಲಿ ನಮ್ಮೆಲ್ಲ ಶಿಕ್ಷಕ ವೃ೦ದ ನಿರ್ಧರಿಸಿ ಆಯ್ಕೆ ಮಾಡಲಾಗುತ್ತದೆ. ಮಕ್ಕಳು ಎಲ್ಲ ರೀತಿಯ ಶೈಕ್ಷಣಿಕ ಹಂತದಿಂದ ತೊಡಗಿಸಿಕೊಳ್ಳುವಿಕೆಯಲ್ಲಿ ಧನಾತ್ಮಕವಾಗಿ ಇರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮೊದಲು ಶಾಲೆಯ  ಆದರ್ಶ ವಿದ್ಯಾರ್ಥಿಗಳಾಗಿ 
ಕುಮಾರಿ ಭೀಮಾಂಬಿಕಾ ಸಣ್ಣಡೋಣಿ 
ಕುಮಾರ ಶಿವರಾಜ್ ತುಗ್ಗಲಡೋಣಿ 
ಈ ಎರಡು ಮಕ್ಕಳನ್ನು ಎಲ್ಲ ಶಿಕ್ಷಕ ಬಳಗ ಆಯ್ಕೆ ಮಾಡಿ ಅಭಿನಂದಿಸುತ್ತಿದ್ದಾರೆ.  



ಭಾನುವಾರ, ಏಪ್ರಿಲ್ 2, 2017

"ಜೀವ ಜಲ ಜೀವ ಸಂಪತ್ತು " ಮಕ್ಕಳ ಶಿಬಿರ

ಒಂದು ಬೇಸಿಗೆ ಶಿಬಿರ ವಿಶಿಷ್ಟ ರೀತಿಯಲ್ಲಿ ಉದ್ಘಾಟನೆ ನಡೆಸಿದ್ದಾರೆ ವಿಸ್ತಾರ ಅಡಿಯಲ್ಲಿ.ತುಂಬಾ ಸಂತೋಷ ಕೊಡುತ್ತದೆ ಅವರ ಚಟುವಟಿಕೆಗಳನ್ನು ಕಂಡು.