ಬುಧವಾರ, ಸೆಪ್ಟೆಂಬರ್ 11, 2013

ಅಭಿಪ್ರಾಯ : ಮಹಾಂತೇಶ ವತ್ತಿ

        ಆಧುನಿಕ ಜಗತ್ತಿನಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು ಮಾಧ್ಯಮಗಳಲ್ಲಿಯೇ ಪ್ರಮುಖವಾದದ್ದು  ಪತ್ರಿಕಾ ಮಾಧ್ಯಮ. ಗ್ರಾಮೀಣ ಮಕ್ಕಳಿಗೆ ದೂರದರ್ಶನ ಮಾಧ್ಯಮವೇ ಹೆಚ್ಚು ಪರಿಚಿತ. ಪತ್ರಿಕಾ ಮಾಧ್ಯಮದ ಪರಿಚಯ ಅತೀ ವಿರಳ. ಆದ್ದರಿಂದ ಪ್ರೌಢಶಾಲೆಯಲ್ಲಿ ಗುರುರಾಜ ಶಿಕ್ಷಕರು ಸಂಪಾದಕತ್ವದಲ್ಲಿ ಬರುತ್ತಿರುವ ಹಾಗೂ ಮಕ್ಕಳನ್ನೇ ಪತ್ರಿಕಾ ಬರಹಗಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಶಾಲಾ ಮಕ್ಕಳಲ್ಲಿ ಹೆಜ್ಜೆಗಳು ಪತ್ರಿಕೆ ಆಸಕ್ತಿ ಬೆಳೆಸುವಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿದೆ. 

        ಮಕ್ಕಳು ಪತ್ರಿಕೆಗಾಗಿ ಬರೆಯಬೇಕೆಂಬ ಆಸೆಯಿಂದ ವಿಷಯವನ್ನು ಕ್ರೂಢೀಕರಿಸಿಕೊಳ್ಳ ಬೇಕಾದರೆ ಸದಾ ಚಟುವಟಿಕೆಯಿಂದ ಇರಬೇಕಾಗುತ್ತದೆ. ಮಕ್ಕಳು ಸದಾ ಚಟುವಟಿಕೆಯಿಂದ ಇರುವುದರಿಂದ ಕ್ರಿಯಾಶೀಲರಾಗಿ, ಮಾನಸಿಕವಾಗಿ ಪ್ರಬುದ್ಧತೆ  ಬರುವುದೆಂಬ ವಿಶ್ವಾಸ ನನ್ನದು. 

ಮಹಾಂತೇಶ ವತ್ತಿ 
ಕೃಷಿ ಪತ್ತಿನ ಮಾಜಿ ಅಧ್ಯಕ್ಷರು,
ಜಹಗೀರಗುಡದೂರು.