ಶನಿವಾರ, ಡಿಸೆಂಬರ್ 25, 2010

ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ - ಶಿಬಿರದ ದಿನಗಳಲ್ಲಿ



ಮಕ್ಕಳ ನಾಟಕ 
ಗುರುರಾಜ ಅವರ ನಿರ್ಧೆಶನದಲ್ಲಿ ಉತ್ತಮವಾಗಿ ಮೂಡಿಬಂದಿದೆ.

ಶರಣಪ್ಪ ವಡಿಗೇರಿ , ಜನಪದ ಕಲಾವಿದರು




























































  ಕರ್ನಾಟಕ ಸರ್ಕಾರ

      ಕರ್ನಾಟಕ ಬಾಲ ವಿಕಾಸ ಅಕಾಡೆಮಿ-ಧಾರವಾಡ
       ಇವರ ಆಶ್ರಯದಲ್ಲಿ

       “ಅರಳು ಮೊಗ್ಗು” ಮಕ್ಕಳ ರಂಗ ಶಿಬಿರ


          ಸಮಾರೋಪ ಸಮಾರಂಭ

    ಹಾಗೂ

         ನಾಟಕ "ಕತ್ತಲೆ ನಗರ ತಲೆಕೆಟ್ಟರಾಜ"
                                                              ನಿ : ಗುರುರಾಜ, ಹೊಸಪೇಟೆ




ಉದ್ಘಾಟನೆ :  ಝಾಕೀರ ಹುಸೇನ್ ತಾ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ
ಅಧ್ಯಕ್ಷತೆ :   ಕುಮಾರಿ ರಶ್ಮೀ, ಪ್ರಾಂಶುಪಾಲರು ಮೊ.ದೇ.ವ.ಶಾಲೆ,ನಿಡಶೇಸಿ
ಅತಿಥಿಗಳು :  ಶ್ರೀ ಬಸವರಾಜ ಬಾಗಲಿ, ಶಿಕ್ಷಣ ಸಂಯೋಜಕರು
             ಶರಣಪ್ಪ ವಡಗೇರಿ, ಜಾನಪದ ಕಲಾವಿದ
             ಶ್ರೀ ಈಶಪ್ಪ ತಳವಾರ  ಮು.ಗು.ಸರ್ಕಾರಿಪ್ರೌಢಶಾಲೆ,ಜಾಹಗೀರಗುಡದೂರ
             ಶ್ರೀ ಶಿವಪುತ್ರಪ್ಪ 


ದಿನಾಂಕ 18.12.2010 ಬೆ : 11.00 ಕ್ಕೆ
ಸ್ಥಳ : ಗುರು ಭವನ, ಕುಷ್ಟಗಿ


ಸರ್ವರಿಗೂ ಸ್ವಾಗತ

ಕರ್ನಾಟಕ ಬಾಲ ವಿಕಾಸ ಅಕಾಡೆಮಿ-ಧಾರವಾಡ

ಶ್ರೀ ಮೊರಾರ್ಜ ದೇಸಾಯಿ ವಸತಿ ಶಾಲೆ,ನಿಡಶೇಸಿ, ಶಿಕ್ಷಕವರ್ಗ



ಅರಳು ಮೊಗ್ಗು - ರಂಗ ತರಬೇತಿ












ಅರಳುಮೊಗ್ಗು 

 ನಮ್ಮ ನಾಟಕ ಶಿಕ್ಷಕರಾದ ಗುರುರಾಜ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ ಏಕೆಂದರೆ ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ. ಗುರುರಾಜ್ ಸರ್ ಅವರು ನಮಗೆ 15 ದಿನಗಳವರೆಗೆ ತರಬೇತಿ ಕೊಟ್ಟು 6 ಶಾಲೆಯಲ್ಲಿ ನಾಟಕವನ್ನು ಪ್ರದರ್ಶಿಸಿದೆವು. ಈ ನಾಟಕದ ಹೆಸರು ಕತ್ತಲೆ ನಗರಿ ತಲೆಕೆಟ್ಟ ರಾಜ ಇದು 9ನೇ ತರಗತಿಯ ಹಿಂದಿ ಪಾಠ ದಲ್ಲಿದೆ.
 ಗುರುರಾಜ್ ಸರ್ ಅವರು ನಮ್ಮಲ್ಲಿ 15 ದಿನಗಳ ತರಬೇತಿಯಲ್ಲಿ ನಮಗೆ ಬಲೂನಿನ ಮುಖವಾಡಗಳ ತಯಾರಿಕೆ ಮಣ್ಣಿನ ಮುಖವಾಡಗಳ ತಯಾರಿಕೆ ತಿಳಿಸಿದರು ನಂತರ ಅನೇಕ ರೀತಿಯ ಆಟಗಳನ್ನು ಇದರಿಂದ ನಮಗೆ ಕವಿಗಳ ಹೆಸರುಗಳು ತಿಳಿದವು. ನಮ್ಮ ಪಾಠ ಪುನರಾವರ್ತನೆಯಾಯಿತು. ಕೆಲವು ದಿನಗಳ ನಂತರ ಎಲ್ಲರಿಂದ ಅನೇಕ ಚಟುವಟಿಕೆಗಳನ್ನು ಮಾಡಿಸಿದರು. ಅದರಿಂದ ಧ್ವನಿಗಳ ಆಧಾರದ ಮೇಲೆ ಅವರಿಗೆ ಪಾತ್ರಗಳನ್ನು ಹಂಚಿದರು ನಮ್ಮ ಶಾಲೆಯಲ್ಲಿನ ವಸ್ತುಗಳನ್ನೇ ಬಳಸಿ ಅನೇಕ ನಾಟಕಕ್ಕೆ ಬೇಕಾಗುವ ಪೀಠೋಪಕರಣಗಳನ್ನು ಮಾಡಿಸಿದರು. ಕೆಲವು ದಿನಗಳ ನಂತರ ನಮ್ಮ ನಾಟಕದ ಅಭ್ಯಾಸವು ಪೂರ್ಣವಾಗಿ ಮುಗಿಸಿ 6 ಶಾಲೆಗಳಿಗೆ ಭೇಟಿ ನೀಡಿದೆವು. ಅವುಗಳೆಂದರೆ ಹನುಮಸಾಗರ, ತಳವಗೇರಾ, ಕೊರಡಕೆರ, ಮಾವಿನ ಇಟಗಿ ಮಕ್ಕಳಿಗೆ ನಮ್ಮ ಗುರುಗಳು ಕಲಿಸಿದ ಪಾಠಗಳನ್ನು ಕಲಿಸಿದ ನಂತರ ಕೊನೆಯದಾಗಿ ಕುಷ್ಟಗಿಯಲ್ಲಿ ನಮ್ಮ ಪ್ರದರ್ಶನದಲ್ಲಿ ಅನೇಕ ಶಾಲಾ ಕಾಲೇಜುಗಳಿಂದ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಮ್ಮ ನಾಟಕವನ್ನು ನೋಡಿ ಆನಂದಿಸಿದರು ಇದು ನಮ್ಮ ಅನಿಸಿಕೆಯಾಗಿದೆ. 

ಕಾವ್ಯ ಬಿ ಬಿಂಗಿ ಕೊಪ್ಪದ 
9ನೇ ತರಗತಿ 
ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ,
ನಿಡಶೇಸಿ.











ಜೀವಕಳೆ ನೀಡಿದ ನಾಟಕ ಪ್ರದರ್ಶನ


ಕರ್ನಾಟಕ ಬಾಲವಿಕಾಸ ಅಕಾಡೆಮಿಯ ವತಿಯಿಂದ ಕುಷ್ಟಗಿ ತಾಲೂಕಿನ ನಿಡಶೇಸಿ ಗ್ರಾಮದಲ್ಲಿರುವ ಶ್ರೀ ಮೊರಾರ್ಜಿ ದೇಸಾಯಿವಸತಿ ಶಾಲೆಯಲ್ಲಿ೧೫ ದಿನಗಳ "ಅರಳು ಮೊಗ್ಗು " ಮಕ್ಕಳ ರಂಗ ಶಿಬಿರ ವನ್ನು ನಡೆಸಿ ಬೇರೆ ಬೇರೆ ೫ ಊರಿನ ಶಾಲೆಗಳಲ್ಲಿನಾಟಕ ಪ್ರದರ್ಶನದ ಜೊತೆಗೆ ಅಲ್ಲಿಯ ಮಕ್ಕಳಿಗೆ ನಮ್ಮ ಶಿಬಿರಾರ್ಥಿಗಳು ರಂಗಾ ಟಗಳು, ರಂಗಾ ಗಿತೆಗಳನ್ನುಹೇಳಿಕೊಟ್ಟರು. ಇಲ್ಲಿನಾವು ೧೫ ದಿನಗಳ ರಂಗಾ ತರಬೇತಿಯ ಮಕ್ಕಳ ತರಬೇತಿಯ ಛಾಯಾ ಚಿತ್ರಗಳನ್ನು ಹಾಕಿದ್ದೇನೆ.



ಗುರುರಾಜ .ಎಲ್

























ಇಂದಿನ ನಾಟಕ ಪ್ರದರ್ಶನ "ಕತ್ತಲೆ ನಗರ ತಲೆಕೆಟ್ಟ ರಾಜ " ಚೆನ್ನಾಗಿ ಮುಡಿ ಬಂದಿದೆ. ಮಕ್ಕಳ ನೈಜ ಪ್ರತಿಭೆ- ನಾಟಕ ಪಾತ್ರಕ್ಕೆ ಜೀವ ತುಂಬಿ ಜೀವಕಳೆ ನೀಡಿ ನಾಟಕ ಪ್ರದರ್ಶನ ಮಾಡಿದ್ದು ತುಂಭಾ ಶ್ಲಾಘನೀಯ. ನಿರ್ಧೇಶನ ನೀಡಿದ ಶ್ರೀ ಗುರುರಾಜ ರವರಿಗೆ ಧನ್ಯಾವಾದಗಳು.

ಶ್ರೀ ಬಸವರಾಜ ಬಾಗಲಿ
ಶಿಕ್ಷಣ ಸಂಯೋಜಕರು , ಕುಷ್ಟಗಿ

ಮಂಗಳವಾರ, ನವೆಂಬರ್ 23, 2010

ವಲಯ ಮಟ್ಟದ ಪ್ರತಿಭಾ ಕಾರಂಜಿ









೨೩.೧೧.೨೦೧೦ ರಂದು ಜಾಹಾಗಿರಗುಡದುರ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ದೆಯನ್ನು ನಡೆಸಲಾಯಿತು. ಇದರಲ್ಲಿ ನಮ್ಮ ಶಾಲೆಯಾ ಮಕ್ಕಳು ನಾಟಕ,ಕ್ವಿಜ್ , ಭಾಷಣ ,ಚರ್ಚಾಸ್ಪರ್ದೆ ,ಪ್ರಭಂಧ , ಹೀಗೆ ಒಟ್ಟು ಆರು ಸ್ಪರ್ದೆಗಳಲ್ಲಿ ಮೊದಲ ಬಹುಮಾನಗಳನ್ನು ಪಡೆದು ತಂದಿದ್ದಾರೆ ಅವರಿಗೆ ಶಾಲೆಯಾ ಶಿಕ್ಷಕ ವೃಂದ ಹಾಗೂ ನಮ್ಮ ಪತ್ರಿಕೆಯು ಆ ವಿಧ್ಯಾರ್ಥಿಗಳಿಗೆ ಅಭಿನಂದನೆಗಳನ್ನು ತಿಳಿಸುತ್ತದೆ.



ಸಂಪಾದಕ
ಗುರುರಾಜ

ಭಾನುವಾರ, ನವೆಂಬರ್ 21, 2010

ಉಡುಪಿ ಮಕ್ಕಳ ಹಬ್ಬದಲ್ಲಿ






ಭಾಗವಹಿಸಿದ ರಂಗ ಗೆಳೆಯರು ( ದಿನಾಂಕ ೨೦.೧೦.೨೦೧೦)
********************************************************************

"ಆನೆ ಮತ್ತು ಕೋತಿಯಸ್ನೇಹದ ಕಥೆ "







ಒಂದನೊಂದು ಕಾಡಿನಲ್ಲಿ ಒಂದು ಮಾವಿನ ಮರವಿತ್ತು . ಆ ಮರದ ಪಕ್ಕದಲ್ಲಿ ಒಂದು ಬಾವಿಯಿತ್ತು. ಮಾವಿನ ಮರದ ಮೇಲೆ ಒಂದು ಕೋತಿ ವಾಸವಾಗಿತ್ತು. ಅದಕ್ಕೆ ಆನೆ ಆಪ್ತ ಗೆಳಯನಾಗಿತ್ತು . ನರಿ ಮತ್ತು ಮೊಸಳೆ ಅವುಗಳ ಶತ್ರುಗಳಾಗಿದ್ದವು. ಮತ್ತು ಅವುಗಳಿಂದ ಯಾವಾಗಲು ತೊಂದರೆಯನ್ನು ಅನುಭವಿಸುತ್ತಿದ್ದವು. ಆದರು ಸ್ನೇಹಿತರಿಬ್ಬರು ಸಂತೋಷ ದಿಂದ ಇದ್ದವು. ಆನೆ ಕೋತಿಯ ಮನೆಗೆ ಆಟವಾಡಲೆಂದು ಬಂದಾಗ ಆನೆ ಕೋತಿಯ ಬಳಿ ಹೀಗೆ ಮಾವಿನ ಹಣ್ಣನ್ನು ಕೇಳಿತು.
ಜಾಣ ನೀನು ಮಂಗಣ್ಣ
ಬೇಗ ಮರ ಹತ್ತಣ್ಣ
ಎರಡು ಹಣ್ಣು ಕೀಳಣ್ಣ
ನೀನು ಒಂದು ತಿನ್ನಣ್ಣ
ನನಗೂ ಒಂದು ಕೊಡಣ್ಣ
ಆಗ ಕೋತಿ ಆನೆಗೆ ಮಾವಿಅನ ಹಣ್ಣನ್ನು ನೀಡಿತು. ನಂತರ ಅವರು ಕಣ್ಣ ಮುಚ್ಚಾಲೆ ಆಟವಾಡುತ್ತಾಲಿದ್ದಾಗ ಕೋತಿ ಮರವೆರುವ ರಭಸದಲ್ಲಿ ಕಾಲು ಜಾರಿ ಬಾವಿಗೆ ಬಿದ್ದು ಕೋತಿ ಸತ್ತು ಹೋಯಿತು. ತನ್ನ ಗೆಳೆಯನನ್ನು ಕಳೆದು ಕೊಂಡ ಆನೆಗೆ ದುಃಖವಾಯಿತು ಜೋರಾಗಿ ಅತ್ತಿತು. ಆದರೆ ಶತ್ರುಗಳಗಿದ್ದ ನರಿ ಹಾಗೂ ಮೊಸಳೆಗೆ ಖುಷಿಯಾಗಿ ಸಂತೋಷದಿಂದ ನಕ್ಕವು.

( ಉಡುಪಿ ಮಕ್ಕಳ ಹಬ್ಬದಲ್ಲಿ ಮಕ್ಕಳಿಂದಲೇ ರಚಿತವಾಗಿರುವ ಕಥೆ. ಇದು ಎರಡನೇ ಗುಂಪಿನ ಕಥೆ - ದಿನಾಂಕ ೨೦.೧೦.೨೦೧೦)



ವಿಧ್ಯಾರ್ಥಿ ಜೀವನ

ನಾವು ನಮ್ಮ ಜೀವನವನ್ನು ಯಶಸ್ವಿಯಾಗಿ ಸಾಧಿಸಲು ನಮ್ಮಲ್ಲಿ ಸತತ ಪ್ರಯತ್ನವಿರಬೇಕು. ಒಳ್ಳೆಯ ವಿಧ್ಯಾರ್ಥಿ ಎಂದು ಗುರುತಿಸಿಕೊಳ್ಳಲು ನಾವು ಎಲ್ಲಾ ರಂಗಗಗಳಲ್ಲಿ ಯು ಪ್ರವಿಣರಾಗಿರಬೇಕುಮತ್ತು ಎಲ್ಲರಿಗು ಆದರ್ಶನಾಗಿರಬೇಕು. ಆಗ ಮಾತ್ರ ಅವನು ಒಳ್ಳೆಯ ವಿಧ್ಯಾರ್ಥಿಯೆಂದು ಗುರುತಿಸಿಕೊಳ್ಳುವನುಯಾರೇ ಆಗಲಿ ಯಾವುದೇ ಕೆಲಸವನ್ನು ಬೇಜಾವಾಬ್ದಾರಿಯಿಂದ ನೋಡಿಕೊಳ್ಳಬಾರದು. ಕಾರ್ಯಾವನ್ನು ನಿರ್ವಹಿಸುತ್ತೇನೆ ಎಂಬ ಆಸಕ್ತಿ ,ಹಂಬಲವಿರಬೇಕು. ಕಾರ್ಯಾ ಅಸಪಲವಾದಾಗ ಅದನ್ನು ಮರಳಿ ಯತ್ನಿಸಿ ಸಫಲವಾಗಿ ಮಾಡಿಕೊಳ್ಳಬೇಕು ನಾವು ಒಳ್ಳೆಯನಿಯಮ ಮತ್ತು ಆದರ್ಶ ಗಳನ್ನು ನಮ್ಮಲ್ಲಿ ರುಡಿಸಿಕೊಳ್ಳಬೇಕು. ಮತ್ತು ಸಮಯ ಪ್ರಜ್ಞೆ ಯನ್ನು ಪಾಲಿಸಬೇಕು.

ವಿಧ್ಯಾರ್ಥಿ ಜೀವನ ಬಂಗಾರದ ಜೀವನ


"Student Life is Golden Life."


ಮಂಜುನಾಥ ಎಸ್.ಮುರಡಿ


೯ ನೇ ತರಗತಿ


ಶನಿವಾರ, ಆಗಸ್ಟ್ 28, 2010













ಆಗಸ್ಟ್ ೨೧ ನೇ ಶನಿವಾರದಂದು ನಮ್ಮ ಶಾಲೆಗೆ ಇಂತಹದೊಂದುಸಂಗತಿ ನಡೆಯುವುದು ಈ ತರಹದ ಸುದ್ದಿ ಬರುವುದೆಂದು ಯಾರುಊಹಿಸಿರಲಿಲ್ಲ ನಮ್ಮ ಶಾಲೆಯಾ ಅತ್ತ್ಮಿಯಾ ಶಿಕ್ಷಕರಾದ ಶ್ರೀಬಸವರಾಜ್ ಗುಣಕಿ ಯವರು ಬೆಳಗಾವಿ ಆಸ್ಪತ್ರೆಯಲ್ಲಿ ನಿಧನಹೊಂದಿದರೆಂದು. ನಂಬಲಿಕ್ಕೆ ಆಗದ ರೀತಿಯ ಕರೆಯೊಂದುಬಂದಾಗಾ ನಮ್ಮ ಶಾಲೆ, ಶಿಕ್ಷಕರು, ಮಕ್ಕಳು ಹಾಗೂ ಊರಿನಮನಗಳನ್ನೇ ಅಲುಗಾಡಿಸಿ ಬಿಟ್ಟಿತು. ನಿಜಕ್ಕೂ ಇದೊಂದು ಕಲ್ಪನೆಗೂಸಿಗದಂತಹ ದುರಂತ. ಸಾವು....... ಅನ್ನೋದು ಅವರನ್ನುನಮ್ಮೆಲ್ಲರೆಂದಲೂ ದೂರ ಮಾಡಿ ಬಿಟ್ಟಿತು. ಗುಂಕಿ ಗುರುಗಳ ಅಗಲಿಕೆನನಗೆ ಗದುಗಿನ ನಾರಣಪ್ಪನ ಸಾಲುಗಳ ನೆನಪು ತರಿಸುತ್ತದೆ.

" ಚರಮಗೀತೆಯ ನಿನಗೆ ಬರೆಯುತಚರಮಗಿತೆಯು ದೊರೆತುದುದೆನೆಗೆ,ಎಲೆ ,ಪರಮ ಪಂಚಮ ವೇದದಶ್ವತ್ತಮಚಿರವೀರ ......"
ನಿಜದಲ್ಲಿ ನಮ್ಮ ಹಾಗೂ ಮಕ್ಕಳ ಮನಸ್ಸಿನಲ್ಲಿ ಗುಣಕಿ ಗುರುಗಳು ಚಿರಂಜಿವಿಯಾಗಿದ್ದಾರೆ.

ಗುರುರಾಜ


  



ನಾ ಕಂಡಂತೆ ಶ್ರೀ ಬಸವರಾಜ ಗುಣಕಿ ಗುರುಗಳು...
   
                           ಇವರೊಬ್ಬ ಮುಕ್ತ ಮನಸಿನ, ಆತ್ಮೀಯ ಸ್ವಭಾವದ  ಸೃಜನಶೀಲ  ಸಂಪನ್ನ ಗುರು. ಇತರರಿಗೆ ಯಾವುದೇ ನೋವಾಗದಂತೆ ವರ್ತಿಸಿದ ಸಂಘಜಿವಿ. ಇಂತಹ ನನ್ನ ಪ್ರೀತಿಯ ಹಾಗು ನಮ್ಮ ಜೊತೆ ನಕ್ಕು ನಲಿಯುವ ನೆಚ್ಚಿನ ಮಿತ್ರರಾಗಿದ್ದರು. ಇವರ ಅಕಾಲಿಕ ಸಾವಿನ ವಿಷಯ ಕೇಳುತ್ತಿದ್ದಂತೆ ನನಗೆ ದಿಕ್ಕೇ ತೋಚದಾಗಿ ಮನವೆಲ್ಲ ರೋಮಾ೦ಚನಗೊಂಡು ನಡುಕ ಹುಟ್ಟಿ ಮನವೆಲ್ಲ ಕಂಬನಿ ಮಿಡಿಯಿತು.
                         ಇವರ ಕುಟುಂಬದ ಸದಸ್ಯರೆಲ್ಲರ ಅತೀವ ದುಃಖದಲ್ಲಿ ನಾನು ಪಾಲಾಗೊಂಡೆ . ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಆ ದೇವರಲ್ಲಿ  ನಾನು ಬೇಡಿಕೊಳ್ಳುತ್ತೇನೆ. 

ಶಿವಪ್ಪ ಇಲಾಳ 

ಭಾನುವಾರ, ಜುಲೈ 4, 2010


ಹೆಜ್ಜೆಗಳು ನಮ್ಮ ಶಾಲಾ ಪತ್ರಿಕೆ ಪ್ರಾರಂಭವಾಗಿ ಕೆಲವಾರು ತಿಂಗಳುಗಳು ಈಗಾಗಲೇ ಕಳೆದು ಹೋಗಿವೆ. ನಮ್ಮ ಸಾಲೆಯ ಸೂಚನಾಪತ್ರಿಕೆಯಲ್ಲಿ ಮಕ್ಕಳು ಬರೆದ ಎಲ್ಲ ಬರಹಗಳನ್ನು ಪ್ರಸ್ತುತ ಪಡಿಸಿ, ನಂತರದಲ್ಲಿ ನಾವು ಬ್ಲಾಗಿಗೆ ಸೇರಿಸುತ್ತಾ ಬಂದಿದ್ದೇವೆ. ಈಗ ನಮ್ಮ ಬ್ಲಾಗಿನಲ್ಲಿ ಬೇರೆ ಶಾಲೆಯ ಮಕ್ಕಳು ಹಾಗು ಶಿಕ್ಷಕರ ಬರಹಗಳನ್ನು ಸೇರಿಸುತ್ತಲಿದ್ದೇವೆ. ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿತಿಳಿಸಬೇಕೆಂದು ನಾನು ಕೇಳಿಕೊಳ್ಳುತ್ತೇನೆ.

ಗುರುರಾಜ

ಭಾನುವಾರ, ಜೂನ್ 27, 2010

ಧರ್ಮಾ ನದಿಯ ತಟದಲ್ಲಿ ಅರೆಮಲೆನಾಡಿನ ಒಂದೂವರೆ ಎರಡು ಸಾವಿರ ಜನಸಂಖ್ಯೆ ಇರುವ ಶಾಲೆ ಮತಂಗಿ. ಊರಿನ ಜನರ ಮಹಾತ್ವಾಕಾಂಕ್ಷೆಯಿಂದ ಪ್ರೌಡಶಾಲೆ ಪ್ರಾರಂಭವಾಯಿತು. ಮೂಲಭೂತ ಸೌಕರ್ಯಗಳಿಗು ಕಷ್ಟವಿರುವ ಊರಿನಲ್ಲಿ ಶಾಲೆ ಪ್ರಾರಂಭವಾಗಿರುವುದರಿಂದ ತಾಲುಕಾ ಸ್ಥಳಕ್ಕೆ ಶಾಲೆಗೆ ಹೋಗುವ ಇಲ್ಲದಿದ್ದರೆ , ಶಾಲೆಗೇ ಟಾ ಟಾ ಹೇಳುವ ಪ್ರಕ್ರಿಯೆಗೆ ಮೋಕ್ಷ ಸಿಕ್ಕಿದೆ.
ಹೊಸದಾಗಿ ಕಟ್ಟಡ ನಿರ್ಮಾಣ ವಾಗುತ್ತಿರುವ ಸಂದರ್ಭದಲ್ಲಿ ನವಿನ ಕನಸುಗಳೊಂದಿಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಶಾಲಾಕಾರ್ಯಗಳಲ್ಲಿ ಭಾಗವಹಿಸಲು ತೊಡಗಿಕೊಮ್ದಿದ್ದೇವೆ. ಆಟ-ಪಾಠಗಳೊಂದಿಗೆ , ಶೈಕ್ಷಣಿಕ ಪ್ರವಾಸಗಳೊಂದಿಗೆ , ಊರವರೊಂದಿಗೆಲವಲವಿಕೆಯಿಂದ ಕುಡಿದ ಬಾಗುವಹಿಸುವಿಕೆಯೊಂದಿಗೆ ..................

ಪ್ರಜ್ಞಾ ಹೆಗಡೆ, ಹಾನಗಲ್.


ಶುಕ್ರವಾರ, ಮೇ 21, 2010

ಕನಸಿನೂರು - ಅರಳುಮೊಗ್ಗು

ಶಾಲೆಯಲ್ಲಿ  ಪ್ರಥಮ ಬಾರಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ -ಧಾರವಾಡ ಇವರ ಸಹಯೋಗದಲ್ಲಿ ಅರಳುಮೊಗ್ಗು ಮಕ್ಕಳ ರಂಗಕಾರ್ಯಗಾರವನ್ನು ಶಾಲೆಯಲ್ಲಿ ನಡೆಸಿ ನಾಟಕ ಪ್ರದರ್ಶನಗಳಿಗೆ ಸ್ಥಳೀಯ ಊರಿನ ಶಾಲೆಗಳಲ್ಲಿ ಪ್ರದರ್ಶನ ನೀಡಿದೇವು. ಅದರ ಛಾಯಚಿತ್ರಗಳು ಮತ್ತು ನಾಟಕ ವೀಕ್ಷಿಸಿದವರ ಅನಿಸಿಕೆಗಳು.



ಇಂದು ದಿನಾಂಕ ೧೯.೦೨.೨೦೧೦ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಮರಿಕೊಪ್ಪದಲ್ಲಿ ಪ್ರದರ್ಶನಗೊಂಡ "ಕನಸಿನೂರು" ನಾಟಕ ಪ್ರದರ್ಶನಗೊಂಡಿದ್ದು ಅತ್ಯಂತ ಖುಷಿ ತಂದಿದೆ. ಮಕ್ಕಳ ಮೂಲಕ ಸಮಾಜದಲ್ಲಿನ ಲೋಪ ದೋಷಗಳನ್ನು ಎತ್ತಿ ತೋರಿಸಿ ಸಮಾಜವನ್ನು ಸರಿ ದಿಕ್ಕಿನೆಡೆಗೆ ಸಾಗುವಲ್ಲಿ ಇಂಥಹ ಪ್ರದರ್ಶನ - ತಿರುಗಾಟ ಅತ್ಯಂತ ಅವಶ್ಯವಾಗಿದೆ. ಇವರಿಗೆ ಬೇಕಾದ ಪ್ರೋತ್ಸಾಹ, ಸಹಕಾರ ಎಲ್ಲರಿಂದ ಸಿಗಬೇಕೆಂದು ಆಶಿಸುತ್ತೇನೆ.

ಅಧ್ಯಕ್ಷರು
ಎಸ್.ಡಿ.ಎಮ್.ಸಿ
ಸ.ಹಿ.ಪ್ರಾ.ಶಾಲೆ,
ತುಮರಿಕೊಪ್ಪ



      ನಾಟಕದ ನಿರೂಪಣೆ, ಹಾಗೂ ಪಾತ್ರಗಳು ತುಂಭಾ ಮಾರ್ಮಿಕವಾಗಿ ಮೂಢಿಬಂದವು. ಮಕ್ಕಳು ತಮ್ಮ ವಯಸ್ಸಿಗೆ ಮೀರಿ ತುಂಭಾ ಚೆನ್ನಾಗಿ ಅಭಿನಯಿಸಿದರು.

ಸಂಗಣ್ಣ ಎಸ್.ಕೆ
ಸಹ ಶಿಕ್ಷಕರು
ಸ.ಹಿ.ಪ್ರಾ.ಶಾಲೆ
ಹಿರೇಗೊಣ್ಣಗರ






ನಾಟಕ ಶಿಕ್ಷಕರಾದ ಶ್ರೀ ಗುರುರಾಜ್.ಎಲ್ ರವರು ತಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿ ಹುದುಗಿರುವ ಅಭಿನಯ ಕಲೆಯನ್ನು ಮತ್ತು ಮಕ್ಕಳ ವಯುಕ್ತಿಕ ಪ್ರತಿಭೆಯನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಾಟಕದ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕರಿಗೂ ಸ್ಪೂರ್ತಿಯಾಗುತ್ತದೆ. ಮತ್ತು ಇದರ ಜೊತೆಗೆ ಗ್ರಾಮದಲ್ಲಿನ ಹವ್ಯಾಸಿ ಕಲಾವಿದರನ್ನು ಕರೆತಂದು ಜನಪದ ಗೀತೆಗಳನ್ನು ಹಾಡಿಸಿ ಮಕ್ಕಳ ಹಾಗೂ ಗ್ರಾಮಸ್ಥರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ಗುರುರಾಜ್ ಹಾಗೂ ಅವರ ವಿದ್ಯಾರ್ಥಿ ತಂಡಕ್ಕೂ ತುಂಭು ಹೃದಯದ ಧನ್ಯವಾದಗಳು.

ಚನ್ನಪ್ಪ ಭಾವಿಕಟ್ಟಿ 
ಶಿಕ್ಷಕರು
ಸ.ಹಿ.ಪ್ರಾ.ಶಾಲೆ
ಬಾದಿಮನಾಳ








ಗುರುವಾರ, ಮೇ 20, 2010





ಶಾಲೆಯಲ್ಲಿ ಜಾನಪದ ಹಾಡುಗಳನ್ನು ಮಕ್ಕಳ ಮುಂದೆ ಹಾಡಿ ತೋರಿಸುತ್ತಿರುವ ಶ್ರೀಮತಿ ಶ್ಯಾವಂತ್ರಮ್ಮ ಹಾಗೂ ಸಂಗಡಿಗರು

ಶನಿವಾರ, ಏಪ್ರಿಲ್ 3, 2010

ನೆನಪುಗಳು



ನೆನೆಪುಗಳು ಎಂದರೇ ನಾವು ಯಾವಾಗ ಸಪ್ಪೆ ಮೂರೇ ಹಾಕಿಕೊಂದು ಕುಳಿತಾಗ ನಮ್ಮ ಮನಸಿನಲ್ಲಿ ಮೂಡುವ ಭಾವನೆಗಳೇ ನೆನಪುಗಳು. ಹಿಂದೆ ನಡೆದಂತಹ ಸಂಧರ್ಬ ಮರಳಿ ಬರುವುದು . ನೆನಪುಗಳಲ್ಲಿ ದುಖ್ಹದಾಯಕ ನೆನಪುಗಳು ಹಾಗು ಉಲ್ಲಾಸಕರ ನೆನಪುಗಳು ಇರುತ್ತವೆ.


ಮಂಜುನಾಥ. ಎಸ.ಮುರುಡಿ
ನೇ ತರಗತಿ
ಜಾ.ಗುಡದೂರ