ಶನಿವಾರ, ಮಾರ್ಚ್ 27, 2010

ಸ್ವಚ್ಚತೆ

ನಾವು ಹೇಗೆ ಸ್ವಚ್ಚವಾಗಿರಬೇಕೆಂದರೆ ನಾವು ದಿನಾಲು ಹಲ್ಲನ್ನು ಉಜ್ಜ ಬೇಕು. ತಲೆ ಬಾಚಿಕೊಳ್ಳಬೇಕು , ಸ್ನಾನ ಮಾಡಬೇಕು , ಶಿಸ್ತು ನಿಂದ ಇರಬೇಕು. ಮನೆಯನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ಮನೆಯ ಮುಂದೆ ಗಿಡ ಮರಗಳನ್ನು ಹಚ್ಚಬೇಕು. ನಾವು ಯಾವುದೇ ಕೆಲಸ ಮಾಡಿದರು ಸಹ ಸ್ವಚ್ಚವಾಗಿ ಮಾಡಬೇಕು. ಇವುಗಳೆಲ್ಲವುದಕ್ಕಿಂತ ನಮ್ಮ ಮನಸ್ಸನ್ನು ಸ್ವಚ್ಚವಾಗಿಟ್ಟುಕೊಳ್ಳಬೇಕು. ನಮಗೆ ಯಾವುದೇ ರೋಗ ಹರಡದಂತೆ ಎಚ್ಚರಿಕೆ ವಹಿಸಬೇಕು.

ಚೈತ್ರಾ . ಕೆ .ಸುಳ್ಳದ
೮ ನೇ ತರಗತಿ

ಭಾನುವಾರ, ಮಾರ್ಚ್ 21, 2010

ಸೂರ್ಯ ಬಂದ









ಯಾವುದಾದರೊಂದು ಊರಿನಲ್ಲಿ ಸೂರ್ಯನೇ ಬರದಿದ್ದರೆ ಅನೇಕ ತೊಂದರೆಗಳಾಗುತ್ತವೆ. ಊರಿನಲ್ಲಿ ಯಾವ ಚಟುವಟಿಕೆಗಳು ನಡೆಯದೇ ಎಲ್ಲ ಜನರೂ ನಿದ್ದೆ ಮಾಡುತ್ತಿದ್ದರು. ನಾಟಕ ರೀಡಿಂಗನಲ್ಲಿ ನಾನು ನನ್ನದೇ ಊರು ಹೀಗಾದರೆ ಎಂದು ಆಲೋಚಿಸಿದೆ. ಸೂರ್ಯ ಬರದೇ ಇದ್ದರೆ ಯಾವ ಸಸ್ಯಗಳು ಬೆಳೆಯುವುದಿಲ್ಲ ಊರಿನಲ್ಲಿರುವ ಅಜ್ಜ ಮತ್ತು ಮಕ್ಕಳ ತರಹ ಎಲ್ಲರೂ ಧೈರ್ಯ ಮಾಡಿದ್ದರೆ ಯಾವಾಗಲೋ ಸೂರ್ಯನನ್ನು ರಾಕ್ಷಸ ನಿಂದ ಬಿಡಿಸಬಹುದಾಗಿತ್ತು.  ಕಥೆಯಲ್ಲಿ ಮಕ್ಕಳ ಪಾತ್ರ ಅತೀ ಮುಖ್ಯವಾಗಿದೆ. ಮಕ್ಕಳೆಲ್ಲರೂ ರಾಕ್ಷಸ ನಿಗೆ ಹೆದರದೇ ಧೈರ್ಯದಿಂದ ಹೋರಾಡಿ ಸೂರ್ಯನನ್ನು ಬಿಡಿಸಿ ತಂದರು. ಊರಿನ ಜನರೆಲ್ಲಾ ಎದ್ದು ತಮ್ಮ ತಮ್ಮ ಕೆಲಸದಲ್ಲಿ ತೊಡಗಿ ಎಲ್ಲರು ಸುಖವಾಗಿ ಬಾಳ ತೊಡಗಿದರು. ಎಲ್ಲರೂ ಹೇಳುತ್ತಾರೆ ಮಕ್ಕಳೇ ಮುಖ್ಯ ಎಂದು ನಾವು ಎಷ್ಟು ಮುಖ್ಯ ಅನ್ನೋದನ್ನು ನಾವೇ ಮೊದಲು ತಿಳಿದುಕೊಳ್ಳಬೇಕು.  ಒಟ್ಟಾರೆ ಹೇಳಬೇಕಾದರೆ ನಮ್ಮ ಊರಿಗೆ ಎಂತ ದೊಡ್ಡ ತೊಂದರೆ ಬಂದರೂ ಎಲ್ಲರೂ ಸೇರಿ ಎದುರಿಸಬೇಕು ಎಂದು  ನಾಟಕದಿಂದ ತಿಳಿದು ಬರುತ್ತದೆ.

ಯಶೋಧ ಸುಳ್ಳದ , 
೯ ನೇ ತರಗತಿ
ಜಹಗೀರಗುಡದೂರ.