ಪತ್ರಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪತ್ರಿಕೆ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಏಪ್ರಿಲ್ 28, 2024

Hejjegalu News Paper April 2024



 

ಶನಿವಾರ, ಮಾರ್ಚ್ 30, 2024

ಹೆಜ್ಜೆಗಳು : ಮಾರ್ಚ ೨೦೨೪

 




ಹೆಜ್ಜೆಗಳು : ಮಾರ್ಚ ೨೦೨೪



ವಿಶ್ವ ರಂಗಭೂಮಿ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಪತ್ರಿಕಾ ವರದಿ



ವರದಿ ಮಾಡಿದ ಪ್ರಜಾವಾಣಿಯ  ದಾದಾಪೀರ್ ಅವ್ರಿಗೆ ಧನ್ಯವಾದಗಳು 

ಗುರುವಾರ, ಮಾರ್ಚ್ 28, 2024

ವಿಶ್ವ ರಂಗಭೂಮಿ ಹಾಗೂ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದ ಪತ್ರಿಕಾ ವರದಿ

 



                          ವರದಿ ಮಾಡಿದ ಕನ್ನಡಪ್ರಭದ ಏಕನಾಥ ಅವ್ರಿಗೆ ಧನ್ಯವಾದಗಳು 

ಶನಿವಾರ, ಅಕ್ಟೋಬರ್ 14, 2023

ಬುಧವಾರ, ಮಾರ್ಚ್ 29, 2023

E Dina magzine


 




ಸೋಮವಾರ, ಸೆಪ್ಟೆಂಬರ್ 5, 2022

ಭಾನುವಾರ, ಜನವರಿ 2, 2022

Prajavani Report


 

ಗುರುವಾರ, ಏಪ್ರಿಲ್ 1, 2021

Paper Cuttings





 

ಶನಿವಾರ, ಆಗಸ್ಟ್ 29, 2020

Live Mint Magzine





 

ಶನಿವಾರ, ಫೆಬ್ರವರಿ 8, 2020

Vijaya Karnataka


Samyunktha Karnataka


Udayavani



https://uc.xyz/1up6eX?pub=link Share image

Prajavani


ಬುಧವಾರ, ಜನವರಿ 15, 2020

ಮುಖಪುಟ


ಸೋಮವಾರ, ನವೆಂಬರ್ 25, 2019

ಹೆಜ್ಜೆಗಳು

ಸರಕಾರಿ ಪ್ರೌಢಶಾಲೆ ಜಹಗೀರಗುಡದೂರಿನಲ್ಲಿ ಶಿಕ್ಷಣದ ಜೊತೆಗೆ ಸಾಂಸ್ಕøತಿಕ ಹೊಸ ಆಯಾಮವನ್ನೇ ಸೃಷ್ಟಿಯಾಗುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ. ಕಳೆದ ಹತ್ತು ವರುಷಗಳಿಂದ ರಂಗಭೂಮಿಯ ಹಲವು ಪ್ರಯೋಗಗಳ ಜೊತೆಗೆ ಕಲಿಕೆಯಲ್ಲಿ ಹೊಸ ಸಾಧ್ಯತೆಗಳನ್ನು ಹೊರ ತರುತ್ತಿರುವ ನಮ್ಮ ಶಾಲೆ ಕಳೆದ ಜನವರಿಯಲ್ಲಿ ನಮ್ಮ ಕ್ಲಸ್ಟರಿನ ಎಲ್ಲ ಶಾಲೆಗಳನ್ನು ಒಟ್ಟುಗೂಡಿಸಿ ಪಠ್ಯ ನಾಟಕೋತ್ಸವವನ್ನು ನಡೆಸಿ ಮಾದರಿ ಎನಿಸಿದೆ.
ಸರ್ಕಾರ ರಂಗ ಶಿಕ್ಷಕರನ್ನು ನೇಮಕ ಮಾಡಿದಾಗ ಇಂಥಹದೊಂದು ಹುದ್ದೆ ಶಾಲೆಗೆ ಬೇಕಾ ಎಂಬ ಪ್ರಶ್ನೇ ಕಾಡಿದ್ದು ಹಲವರಿಗೆ. ನಾಟಕ ಮಾಡಿಸಿಕೊಂಡು ಹೋದರೆ ಎಲ್ಲಿ ಮಕ್ಕಳು ದಾರಿ ತಪ್ಪುವರೋ ಎಂಬ ಹಲವರ ಅಭಿಪ್ರಾಯಗಳು ಇಂದಿಗೂ ಬದಲಾದಂತಿಲ್ಲ. ಎಲ್ಲವುದಕ್ಕೂ ಒಂದು ಮಾತು ಆಡೇ ಆಡುತ್ತಾರೆ ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಗೆಲುವು ನಮ್ಮದೇ ಎಂಬ ಆಶಯದೊಂದಿಗೆ ನಮ್ಮ ಕೆಲಸ ಸಾಗಿತು. ಮಕ್ಕಳ ರಂಗಭೂಮಿಯ ಒಂದು ಝಲಕ್ ನ್ನು ಸೃಷ್ಟಿಸಿದ್ದ ಬಿ.ವಿ.ಕಾರಂತರು, ಜಗತ್ತೇ ತಮ್ಮ ಹಳ್ಳಿಯ ಕಡೇ ನೋಡುವಂಥೆ ಮಾಡಿದ ಕೆ.ವಿ.ಸುಬ್ಬಣ್ಣನಂಥವರ ಕಾರ್ಯ-ಕನಸುಗಳನ್ನು ನಮ್ಮ ಶಾಲೆಯಲ್ಲಿ ತರುವ ಪ್ರಯತ್ನ ಸಾಗಿದೆ.
ಮೊದಲಿಗೆ ಹೆಜ್ಜೆಗಳು ಎಂಬ ಕೈ ಬರಹದ ಪತ್ರಿಕೆಯನ್ನು ತಂದು ಮಕ್ಕಳು ಬರೆಯುವುದರ ಜೊತೆಗೆ ರಂಗಭೂಮಿಯ ಪರಿಚಯವನ್ನು ಮಾಡುವ ಪ್ರಯತ್ನ ಸಾಗಿತು. ನಂತರದಲ್ಲಿ ಬ್ಲಾಗ್ (http://hejjegalushalapatrike.blogspot.com/ )ಮೂಲಕ ನಮ್ಮ ಕಾರ್ಯಗಳನ್ನೆಲ್ಲ ಒಂದೆಡೆ ಸೇರಿಸುವ ಪ್ರಯತ್ನವನ್ನು 2010 ರಿಂದಲೇ ಸಾಗಿದೆ.
ನಮ್ಮ ಪ್ರಯೋಗಗಳಿಂದ ಹೊಸ ಹುಡುಕಾಟಗಳು ಸಾಗಿದಂತೆ  ವಿದ್ಯಾರ್ಥಿಗಳ ಮನೆಯಿಂದ ಹೊಸ ಹೊಸ ಕಥೆಗಳು, ಹಾಡುಗಳು ಹೊತ್ತು ತಂದರು. ಸೋಬಾನೆ, ಬಿಸೋ, ಕುಟ್ಟೋಪದಗಳನ್ನು ತಂದು ನಮ್ಮ ಪಠ್ಯ ಪದ್ಯಗಳಿಗೆ ಹೊಂದಿಸಿ ಹಾಡಿದರು. ಇಂಡಿಯಾ ಫೌಂಡೇಶನ್ ಫಾರ್ ದಿ ಆಟ್ರ್ಸ ಸಂಸ್ಥೆಯ ಸಹಭಾಗಿತ್ವದಲ್ಲಿ ಎರಡು ವರ್ಷಗಳ ಕಾಲ ಮಕ್ಕಳಿಗೆ ಮೊಹರಂನ ಹೆಜ್ಜೆಕುಣಿತ, ರಿವಾಯತ್ ಪದಗಳು, ಸೋಬಾನೆಯ ಪದಗಳನ್ನು ಕೇಳುವುದರ ಜೊತೆಗೆ ಆ ಹಿರಿಯರ ಕಥೆಗಳನ್ನು ಕೇಳಿ ದಾಖಲಿಸುವ ಕಾರ್ಯದ ಜೊತೆಗೆ ಹಲವು ನಾಟಕಗಳನ್ನು ಸ್ಥಳೀಯತೆಯ ಹಿನ್ನಲೆಯಲ್ಲೇ ಕಟ್ಟಿ ನಾಟಕಗಳನ್ನು ಪ್ರದರ್ಶನ ನೀಡಲಾಗಿದೆ. ಈ ನಡುವೆ  ಸ್ಥಳೀಯ ವಿಷಯ ವಸ್ತುವನ್ನಿಟ್ಟುಕೊಂಡು ತರಗತಿ ಗೋಷ್ಠಿಗಳನ್ನು ಮಕ್ಕಳೇ ಮಾಡಲು ಪ್ರಾರಂಭಿಸಿದ್ದರು. ತೆಗೆದುಕೊಂಡ ವಿಷಯಗಳ ಮೇಲೆ ಮಕ್ಕಳು ಮಾತನಾಡಿದ ನಂತರ ಆ ಕುರಿತು ಇತರೇ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದರಿಂದ ಅವರ ಮಾತಾನಾಡುವ ಕಲೆ, ರಂಗಭಯ, ಭಾಷ ಶುದ್ದೀಕರಣ, ವಿಷಯ ವಸ್ತುಗಳ ಹೆಚ್ಚಿನ ಜ್ಞಾನ, ಹುಡುಕಾಟ ಹೀಗೆ ಅವರ ಕಲಿಕೆಯ ನಿರಂತರತೆ ಸಾಗಿದ್ದು ರಂಗಭೂಮಿಯ ತೊಡಗುವಿಕೆಯಿಂದ.
ರಂಗಕಲಿಕೆಯನ್ನು ನಾನು ನನ್ನ ಶಾಲೆಗೆ ಸೀಮಿತಗೊಳಿಸಿಕೊಳ್ಳಲು ಸಿದ್ದನಿರಲಿಲ್ಲ. ಹೀಗಾಗಿ ಸಮುದಾಯದತ್ತ ಕಾರ್ಯಕ್ರಮಗಳಿಗೆ ತೆರೆಳಿದಾಗ ಪ್ರಾಥಮಿಕ ಶಾಲಾ ಮಕ್ಕಳಿಗೆ ರಂಗಾಟಗಳನ್ನು ಆಡಿಸಿ ಬರುವಾಗ ಮಕ್ಕಳ ಚುರುಕುತನವನ್ನು ಕಂಡು ನಾನು ಶಿಕ್ಷಕರ ಜೊತೆ ಪಠ್ಯ ರಂಗ ಪ್ರದರ್ಶನಗಳನ್ನು ಮಾಡಿದರೆ ಚಂದ ಎಂದು ಹಂಚಿಕೊಳ್ಳತ್ತಿದ್ದೆ. ಅದರಂತೆ ಕ್ಲಸ್ಟರ್‍ನ ಎಲ್ಲ ಶಾಲೆಗಳು ತಮ್ಮ ಪಠ್ಯ ಪಾಠಗಳನ್ನು ನಾಟಕ ರೂಪಕ್ಕೆ ತಂದು ಪ್ರದರ್ಶನ ನೀಡಲು ಅಣಿಯಾದಾಗ ನಮ್ಮ ಶಾಲೆಯಲ್ಲಿ ವೇದಿಕೆಯನ್ನು ಸಿದ್ದಮಾಡಿಕೊಂಡೆವು. ಶಿಕ್ಷಕರಿಗೆ ನಮ್ಮ ಹಲವು ನಾಟಕಗಳನ್ನು ತೋರಿಸಿ ಸರಳವಾದ ರೀತಿಯ ಪರಿಕರಗಳನ್ನು ಬಳಸಿಕೊಂಡು ನಾಟಕ ಕಟ್ಟಿಕೊಳ್ಳುವುದನ್ನು  ಮೊದಲ ಹಂತದ ತರಬೇತಿ ನೀಡಿ ಅವರು ತೆಗೆದು ಕೊಂಡ ಪಾಠಗಳ ಕುರಿತು ಅವರಿಂದಲೇ ಟಿಪ್ಪಣಿ ಮಾಡಿಸಿ, ಅವುಗಳಿಗೆ ಪೂರಕವಾಗಿ ಬೇಕಾದ ಸಲಹೆ ಮಾಹಿತಿಗಳನ್ನು ನೀಡಿದೆ. ಕೊನೆಗೆ “ಹೆಜ್ಜೆಗಳು ನಾಟಕೋತ್ಸವ” ಒಂದು ಸಂಪೂರ್ಣವಾದ ಪಠ್ಯ ನಾಟಕಗಳದ್ದೇ ಉತ್ಸವ ಏರ್ಪಟ್ಟಿತು. ಅಂದಿನಿಂದ ನಮ್ಮ ಕ್ಲಸ್ಟರಿನ ಹಲವು ಶಾಲೆಗಳು ಪ್ರತಿ ವಿಷಯವಾರು ನಾಟಕಗಳನ್ನು ಮಾಡಲು ಉತ್ಸುಕರಾಗಿದ್ದಾರೆ. ಆ ಕುರಿತು ಸಲಹೆ ಸಹಕಾರ ಕೋರಿದಾಗ ನನಗೆ ರಂಗಭೂಮಿಯ ಸಾಧ್ಯತೆಗಳ ಬಗ್ಗೆ ಖುಷಿ ಎನಿಸುತ್ತದೆ.
ವೈಜ್ಞಾನಿಕ ವಿಚಾರಗಳನ್ನಿಟ್ಟುಕೊಂಡು ನಡೆಯುವ ವಿಜ್ಞಾನ ನಾಟಕಗಳನ್ನು ಸಿದ್ದ ಮಾಡಿಕೊಂಡು ಹಲವು ಬಾರಿ ವಿಭಾಗ ಹಾಗೂ ರಾಜ್ಯ ಮಟ್ಟದವರೆಗೂ ಪ್ರದರ್ಶನಗಳನ್ನು ನೀಡಿಲಾಗಿದೆ. ನೀರಿನ ಸಮಸ್ಯೆಯ ಕುರಿತು ನಾಟಕ ಸಿದ್ದಮಾಡುವಾಗ ನಾವು ರಾಜಸ್ಥಾನದ ಜಲತಜ್ಞ ರಾಜೇಂದ್ರಸಿಂಗ ಅವರ ಕೆಲಸ ಕಾರ್ಯಗಳ ಕುರಿತು ಚರ್ಚಿಸುತ್ತಾ, ಮಹಾರಾಷ್ಟ್ರದಲ್ಲಿ ನಡೆಯುವ “ವಾಟರ್ ಕಪ್” ಹಿಂದಿನ ಕಾರ್ಯಗಳನ್ನು ಹುಡುಕುವ ಮನಸ್ಥಿತಿ ನಮ್ಮ ಮಕ್ಕಳಲ್ಲಿ ಬೆಳೆದು ಬಂದಿದೆ. ಪಕ್ಷಿಗಳು ವಲಸೆ ಬರುವಾಗ ಕಂಡು ಬರುವ ಪರಿಸರದ ಹೀನಾ ಸ್ಥಿತಿಯನ್ನು ವಿಷಯವಸ್ತುವಾಗಿ ಕಟ್ಟುವಾಗು ನಮ್ಮ ವಿದ್ಯಾರ್ಥಿಗಳ ಹುಡುಕಾಡುವ ಪ್ರಯತ್ನ ತುಂಬಾ ಖುಷಿ ಕೊಡುತ್ತದೆ.
ಶಿಕ್ಷಣ ಎಂದರೇ ಬರೀ ಪಠ್ಯ ಪುಸ್ತಕಗಳ ಓದು, ಅಂಕಗಳೇ ಅಂತಿಮ ಅಲ್ಲ. ಅದರಾಚೆ ಇರುವ ಸೂಕ್ಷ್ಮತೆಯನ್ನು ನೋಡುವ ದೃಷ್ಟಿ ನಮ್ಮ ವಿದ್ಯಾರ್ಥಿಗಳಲ್ಲಿ ಒಡಮೂಡಿದೆ. ಅದು ರಂಗಕಲಿಕೆಯಿಂದ ಎಂದೇ ಹೇಳಬಹುದು. ನಮ್ಮ ಕಾರ್ಯಗಳು ಹಲವು ಶಾಲೆಗಳಲ್ಲೂ ಕಾಣಬೇಕು ಹೊಸತನದ ನೋಟಗಳು ಮಕ್ಕಳಲ್ಲಿ ಬರಬೇಕಾಗಿದೆ. ರಂಗಭೂಮಿಯ ಕಲಿಕೆ ಅತ್ಯಂತ ಪರಿಣಾಮಕಾರಿ. ಕ್ರಿಯಾಶೀಲ ರಂಗಶಿಕ್ಷಕರು ನಮ್ಮ ಸರ್ಕಾರಿ ಶಾಲೆಗಳಲ್ಲಿ ಹೆಚ್ಚಾದರೆ ಮುಂದೊಂದು ದಿನ ಮಾನವೀಯ ಮೌಲ್ಯಗಳ ಹೆಚ್ಚಿರುವ ಪ್ರತಿಭೆಗಳನ್ನು ಕಾಣಬಹುದು.

ಗುರುರಾಜ ಎಲ್  ನಾಟಕ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, ಜಹಗೀರಗುಡದೂರ. ತಾ/ಕುಷ್ಟಗಿ



ಗುರುವಾರ, ನವೆಂಬರ್ 21, 2019

ಮಕ್ಕಳ ಹಕ್ಕುಗಳ ಗ್ರಾಮ ಸಭೆ


ಪಾಲಕರ ಸಭೆ



ಗುರುವಾರ, ನವೆಂಬರ್ 7, 2019

ಹೆಜ್ಜೆಗಳು ನಾಟಕೋತ್ಸವ - ಜ್ಞಾನ ತುಂಗಾ - ಜಿಲ್ಲಾ ಶೈಕ್ಷಣಿಕ ವಾರ್ತಾ ಪತ್ರಿಕೆ






ಅವಕಾಶ ನೀಡಿದ ಡಯಟ್ ನ ಉಪನ್ಯಾಸಕರು ಹಾಗು ಪತ್ರಿಕೆಯ ಸಂಪಾದಕರಾದ ಬಸವತಯ್ಯ ಸಾರ್ ಹಾಗೂ ಪ್ರಾಂಶುಪಾಲರಾದ ಶ್ಯಾಮಸುಂದರ ಸಾರ್ ಅವರಿಗೆ ಧನ್ಯವಾದಗಳು