ಸೋಮವಾರ, ಜುಲೈ 29, 2013

ಎಚ್.ಎ. ಅನಿಲ್ ಕುಮಾರ ಬೇಟಿ

H.A.Anil Kumar
              
ಎಚ್.ಎ. ಅನಿಲ್  ಕುಮಾರ  ಚಿತ್ರಾಕಲಾ ಪರಿಷತ್ ನ ಪ್ರಾಧ್ಯಾಪಕರು ನಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಗಮನಿಸಲು ಆಗಮಿಸಿದ್ದರು.  ಅನುಪಮಾ ಪ್ರಕಾಶ ನಮ್ಮ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದಂತೆ ಅನಿಲ್ ಬರ್ತಾರೆ, ನೀನು ಮಾಡಿದ ಕಾರ್ಯಗಳ ಕುರಿತು ತಿಳಿಸು ಜೊತೆಗೆ ಏನೇನು ತೋರಿಸಲಿಕ್ಕೆ ಆಗುತ್ತದೆ ಅವುಗಳೆಲ್ಲವನ್ನು ಅವರಿಗೆ ತೋರಿಸು. ಎಂದಾಗ ನಾನು ಅನಿಲ್ ಕುಮಾರ ಅವರ ಕುರಿತು ತಿಳಿಯಲು ಪ್ರಯತ್ನಿಸಿದೆ. ಪ್ರಜ್ಞಾ ಹೇಳಿದ್ದು  "ಅಲ್ಲಾ ಕಣೋ ಅವರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಬಂದಿದೆಯೋ" ಎಂದಾಗ ನನ್ನ ಎದೆ ಧಸಕ್ಕೆಂದಂತಾಯಿತು. ಯಾಕೆಂದರೆ ಇಷ್ಟೆಲ್ಲ ಖ್ಯಾತ ವ್ಯಕ್ತಿಗಳು ನಮ್ಮ ಸಣ್ಣ ಹಳ್ಳಿಯ ಶಾಲೆಗೆ ಬೆಂಗಳೂರಿನಿಂದ ಬರುವಂಥಹ ವ್ಯಕ್ತಿಗೆ ಯಾವ ತರಹದಲ್ಲಿ ಉಪಚರಿಸಬೇಕು ಎಂದು ಸಂಕಷ್ಟದಲ್ಲಿ ಬಿದ್ದೆ. ಅವರ ಬರುವ ದಿನಗಳ ಲೆಕ್ಕ ಸಾಗುತ್ತಲೇ ಇತ್ತು. ಈ ಕಡೇ ನಮ್ಮ ಮಕ್ಕಳ ತಾಲೀಮು ನಡೆದಿದ್ದೆ. ಮಳೆ-ಗಾಳಿಗೆ ತಲೆ ಕೊಡದೇ ದಿನಾಲೂ ಮಧ್ಯಾಹ್ನದ ಒಂದು ಅವಧಿಯನ್ನು ಮುಗಿಸಿಕೊಂಡು ನಾಟಕದ ಅಭ್ಯಾಸ ನಡದೇ ಇತ್ತು. ಕುತೂಹಲವು ಇಲ್ಲಿ ಇದ್ದದ್ದು ಕಾಣುತ್ತಿತ್ತು ಕಾರಣ ನಾಟಕ ಅಂತ್ಯ ಹೇಗೆ ಎನ್ನುವುದು. ಶಿಕ್ಷಕರು ಕೊನೆ ಹೇಗೆ ಮಾಡುತ್ತೀರಿ ಮತ್ತು  

ಯಾವಾಗ ಎಂಬ ಪ್ರಶ್ನೆಗಳು ಸದಾ ನನ್ನ ಕಿವಿಯಲ್ಲಿ ಕೇಳುತ್ತಿದ್ದನ್ನು ಅಷ್ಟೇ ಆನಂದದಿಂದ ಆಲಿಸುವ ಕಾರ್ಯವನ್ನು ಮಾಡುತ್ತಿದ್ದೆ. ನನಗೆ ಅನಿಲ್ ಅವರು ಬಂದಾಗ ಈ ಮಕ್ಕಳ ತಾಲೀಮು ಇಷ್ಟ ಆಗಬಹುದೇ ಎಂಬುವ ಮತ್ತು ಅವರು ಬಂದ ಸಮಯದಲ್ಲಿ ಮಳೆ ಬರದೇ ಇರಲಿ ಎನ್ನುವುದು. ತಾಲೀಮನ್ನು ಕೋಣೆಯಲ್ಲಿ ತೋರಿಸಲಿಕ್ಕೆ ಆಗೋದೇ ಇಲ್ಲ. ಇರೋ ವೇದಿಕೆಯ ಕಟ್ಟೆಯ ಮೇಲೆ ನಮ್ಮ ಮಕ್ಕಳ ತಾಲೀಮಿನ ಆಯ್ದ ಭಾಗವನ್ನು ಇಡೋದು. ಸದಾ ಧಾರವಾಡದಿಂದ ಯಾರೇ ಅತಿಥಿಗಳನ್ನು ಕರೆದುಕೊಂಡು ಬರುವ ಸಾರಥಿ ರಾಮುವಿಗೆ ಬೆಳಿಗ್ಗೆನೆ ಪೋನಾಯಿಸಿದೆ. ರಾಮು ನಾನು ಇಲ್ಲಿಂದ ಬಿಡುವಾಗ ಮಿಸ್ ಕಾಲ್ ಕೊಡ್ತೀನಿ ಸಾರ್ ಅಂದ. ಇದು ನಮ್ಮ ಸಂಕೇತ ಸಿದ್ಧತೆಯಲ್ಲಿ ಇರಲು. ಗಡ ದಿಂದ ಹಿಡಿದು ಶಾಲೆಗೆ ಹೋಗುವ ವರೆವಿಗೂ ಮಳೆಯ ಹನಿ ಸುರಿಯುತ್ತಲೇ ಇತ್ತು. 




ಬಿಸಿಲೇ ಸದಾ ಇರುವ ನಮ್ಮ ಪ್ರದೇಶಗಳಲ್ಲಿ ಯಾರೋ ಬರುವ ಸಮಯಗಳಲ್ಲಿ ಮಳೆ ಅನಿರೀಕ್ಷಿತ ಎಂಬಂತೆ ಬರುವುದು ಶಿಕ್ಷಕರೆಲ್ಲರಲ್ಲೂ  ಚಿಂತೆಗೆ ಕಾರಣವಾಗಿತ್ತು. ಅನಿಲ್ ಸಾರ್ ಬಂದಾಕ್ಷಣ ನಮ್ಮ ಮಕ್ಕಳ ನೋಟವೆಲ್ಲ ಅವರತ್ತಲೇ ನೆಟ್ಟಿರುತ್ತದೆ. ಶಿಕ್ಷಕರೆಲ್ಲ ಪರಿಚಯ ಚಹಾ ಆದ ತಕ್ಷಣ ನಾವು ಕಂಪ್ಯೋಟರ್ ಕೋಣೆಗೆ ತೆರೆಳಿ ಅಲ್ಲಿ ಈಗಾಗಲೇ ಸಿದ್ಧ ಪಡಿಸಿದ್ದ ನಮ್ಮ ಇಲ್ಲಿನವರೆಗಿನ ಚಟುವಟಿಕೆಗಳ ಕುರಿತು ಅಪೂರ್ಣವಾದ ಸಾಕ್ಷ್ಯಚಿತ್ರವನ್ನು ವಿಕ್ಷಿಸಲು ಮತ್ತು ಅದು ನಮ್ಮ ವಿಕ್ಷಕರ ಇಂದಿನ  ಒಂದು ಕಾರ್ಯವೆಂದೇ ತೆರಳಿದೆವು. ಹತ್ತು ನಿಮಿಷದ ಚಿತ್ರವನ್ನು ವಿಕ್ಷೀಸಿದ ನಂತರ ಆದ ಚಟುವಟಿಕೆಗಳನ್ನು ವಿವರವಾಗಿ ಕೇಳುತ್ತಾ ನಮ್ಮ ಕೋಣೆಯ ಹಿಂಬಾಗದಿಂದ ಸಾಗಿದೆವು. ಇಲ್ಲಿ ನಮ್ಮ ಮಾತುಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದಿದ್ದು ಹತ್ತನೆಯ ತರಗತಿಯ ವಿದ್ಯಾರ್ಥಿ ಮಲ್ಲಿಕಾರ್ಜುನ ತೆಂಗಿನಕಾಯಿ. ತರಗತಿ ಕೋಣೆಯ ಹಿಂಬಾಗದಿಂದ ಸಾಗೋಣವೆಂದು ಅನಿಲ್ ಅವರು ಮಾತಾನಾಡುತ್ತಾ ತೆರಳಿದಾಗ ವಿದ್ಯಾರ್ಥಿ ಮಲ್ಲಿಕಾರ್ಜುನ ಹಾಗೂ ರುದ್ರಯ್ಯ ನಿಗೆ ಹಿಡಿಸಲಾರದಾಗಿತ್ತು. ಕಾರಣ ಅವರೇ ಹೇಳುವಂತೆ 'ಸಾರ್ ಕಸ,ಪೇಪರ್,ಎಲ್ಲವನ್ನಾ ನಾವು ಕಿಟಕಿಯಿಂದ ಹೊರ ಹಾಕ್ತೀವಿ. ಈ ಸಾರ್ ಅದೇ