ಶುಕ್ರವಾರ, ಮೇ 21, 2010

ಕನಸಿನೂರು - ಅರಳುಮೊಗ್ಗು

ಶಾಲೆಯಲ್ಲಿ  ಪ್ರಥಮ ಬಾರಿಗೆ ಕರ್ನಾಟಕ ಬಾಲ ವಿಕಾಸ ಅಕಾಡೆಮಿ -ಧಾರವಾಡ ಇವರ ಸಹಯೋಗದಲ್ಲಿ ಅರಳುಮೊಗ್ಗು ಮಕ್ಕಳ ರಂಗಕಾರ್ಯಗಾರವನ್ನು ಶಾಲೆಯಲ್ಲಿ ನಡೆಸಿ ನಾಟಕ ಪ್ರದರ್ಶನಗಳಿಗೆ ಸ್ಥಳೀಯ ಊರಿನ ಶಾಲೆಗಳಲ್ಲಿ ಪ್ರದರ್ಶನ ನೀಡಿದೇವು. ಅದರ ಛಾಯಚಿತ್ರಗಳು ಮತ್ತು ನಾಟಕ ವೀಕ್ಷಿಸಿದವರ ಅನಿಸಿಕೆಗಳು.



ಇಂದು ದಿನಾಂಕ ೧೯.೦೨.೨೦೧೦ ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ತುಮರಿಕೊಪ್ಪದಲ್ಲಿ ಪ್ರದರ್ಶನಗೊಂಡ "ಕನಸಿನೂರು" ನಾಟಕ ಪ್ರದರ್ಶನಗೊಂಡಿದ್ದು ಅತ್ಯಂತ ಖುಷಿ ತಂದಿದೆ. ಮಕ್ಕಳ ಮೂಲಕ ಸಮಾಜದಲ್ಲಿನ ಲೋಪ ದೋಷಗಳನ್ನು ಎತ್ತಿ ತೋರಿಸಿ ಸಮಾಜವನ್ನು ಸರಿ ದಿಕ್ಕಿನೆಡೆಗೆ ಸಾಗುವಲ್ಲಿ ಇಂಥಹ ಪ್ರದರ್ಶನ - ತಿರುಗಾಟ ಅತ್ಯಂತ ಅವಶ್ಯವಾಗಿದೆ. ಇವರಿಗೆ ಬೇಕಾದ ಪ್ರೋತ್ಸಾಹ, ಸಹಕಾರ ಎಲ್ಲರಿಂದ ಸಿಗಬೇಕೆಂದು ಆಶಿಸುತ್ತೇನೆ.

ಅಧ್ಯಕ್ಷರು
ಎಸ್.ಡಿ.ಎಮ್.ಸಿ
ಸ.ಹಿ.ಪ್ರಾ.ಶಾಲೆ,
ತುಮರಿಕೊಪ್ಪ



      ನಾಟಕದ ನಿರೂಪಣೆ, ಹಾಗೂ ಪಾತ್ರಗಳು ತುಂಭಾ ಮಾರ್ಮಿಕವಾಗಿ ಮೂಢಿಬಂದವು. ಮಕ್ಕಳು ತಮ್ಮ ವಯಸ್ಸಿಗೆ ಮೀರಿ ತುಂಭಾ ಚೆನ್ನಾಗಿ ಅಭಿನಯಿಸಿದರು.

ಸಂಗಣ್ಣ ಎಸ್.ಕೆ
ಸಹ ಶಿಕ್ಷಕರು
ಸ.ಹಿ.ಪ್ರಾ.ಶಾಲೆ
ಹಿರೇಗೊಣ್ಣಗರ






ನಾಟಕ ಶಿಕ್ಷಕರಾದ ಶ್ರೀ ಗುರುರಾಜ್.ಎಲ್ ರವರು ತಮ್ಮ ಶಾಲೆಯ ವಿದ್ಯಾರ್ಥಿಗಳಲ್ಲಿ ಹುದುಗಿರುವ ಅಭಿನಯ ಕಲೆಯನ್ನು ಮತ್ತು ಮಕ್ಕಳ ವಯುಕ್ತಿಕ ಪ್ರತಿಭೆಯನ್ನು ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಾಟಕದ ಮೂಲಕ ಸಮಾಜದಲ್ಲಿನ ಪ್ರತಿಯೊಬ್ಬ ನಾಗರಿಕರಿಗೂ ಸ್ಪೂರ್ತಿಯಾಗುತ್ತದೆ. ಮತ್ತು ಇದರ ಜೊತೆಗೆ ಗ್ರಾಮದಲ್ಲಿನ ಹವ್ಯಾಸಿ ಕಲಾವಿದರನ್ನು ಕರೆತಂದು ಜನಪದ ಗೀತೆಗಳನ್ನು ಹಾಡಿಸಿ ಮಕ್ಕಳ ಹಾಗೂ ಗ್ರಾಮಸ್ಥರ ಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಶ್ರೀ ಗುರುರಾಜ್ ಹಾಗೂ ಅವರ ವಿದ್ಯಾರ್ಥಿ ತಂಡಕ್ಕೂ ತುಂಭು ಹೃದಯದ ಧನ್ಯವಾದಗಳು.

ಚನ್ನಪ್ಪ ಭಾವಿಕಟ್ಟಿ 
ಶಿಕ್ಷಕರು
ಸ.ಹಿ.ಪ್ರಾ.ಶಾಲೆ
ಬಾದಿಮನಾಳ








ಗುರುವಾರ, ಮೇ 20, 2010





ಶಾಲೆಯಲ್ಲಿ ಜಾನಪದ ಹಾಡುಗಳನ್ನು ಮಕ್ಕಳ ಮುಂದೆ ಹಾಡಿ ತೋರಿಸುತ್ತಿರುವ ಶ್ರೀಮತಿ ಶ್ಯಾವಂತ್ರಮ್ಮ ಹಾಗೂ ಸಂಗಡಿಗರು