ಗುರುವಾರ, ಫೆಬ್ರವರಿ 14, 2013

ಮೊಹರಂ ಒಂದು ನೋಟ..



ಶ್ರೀ ಆನಂದಪ್ಪ ಕುರಿ 


ಮಕ್ಕಳ ಹೆಜ್ಜೆಗಳು ಯೋಜನೆಯಡಿಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಇಂದು ಶ್ರೀ ಆನಂದಪ್ಪ ನವರು "ಮೊಹರಂ" ಆಚರಣೆಯ ಹಿನ್ನಲೆ ಹುಟ್ಟು, ಬೆಳೆದು ಬಂದ ದಾರಿ ಸದ್ಯ ಪ್ರಸ್ತುತ ನಮ್ಮ ಊರು ಬೇರೆ ಬೇರೆ ಭಾಗಗಳಲ್ಲಿ ಆಚರಿಸುವ ರೀತಿಗಳನ್ನು ತಮ್ಮ ಉಪನ್ಯಾಸದಲ್ಲಿ ತಿಳಿ ಹೇಳಿದರು ಮಕ್ಕಳಿಗೆ. ನಮ್ಮೊಂದಿಗೆ ಮುಖ್ಯ ಗುರುಗಳು ಹಾಗೂ ಇತರೆ ಶಿಕ್ಷಕರು ಹಾಜರಿದ್ದರು. ಮಕ್ಕಳು ತಾವು ಆಡಿ ಬೆಳೆದ ಈ ಹಬ್ಬ ಆಚರಣೆಗಳ  ಹಿನ್ನಲೆಯನ್ನು ಕೇಳಿ ಹುಟ್ಟಿದ ಹಲವಾರು ಪ್ರಶ್ನೆಗಳಿಗೆ ಅತಿಥಿಗಳು ಉತ್ತರ ನೀಡಿದರು. ಇದು ಮಕ್ಕಳ ಜಾನಪದದ ಹುಡಕಾಟದಲ್ಲಿ ಹಿನ್ನಲೆಯ ಜ್ಞಾನ ಪಡೆದಾಗ ಹೆಚ್ಚಿನ ಹೊಳಹುಗಳು ದೊರಕುವ ಆಶಾ ಭಾವದ ಜೊತೆಗೆ ಮಕ್ಕಳಿಗೆ ಹೆಚ್ಚಿನ ಸಹಕಾರ ದೊರಕುವ ದೃಷ್ಟಿ ಇಲ್ಲಿ ಹೊಂದಲಾಗಿತ್ತು.

ಭಾನುವಾರ, ಫೆಬ್ರವರಿ 10, 2013

ದೃಶ್ಯ ಕಾರ್ಯ

ದೃಶ್ಯ ಕಾರ್ಯ (Scene work) ವನ್ನು ಎನ್.ಎಸ್. ಡಿ ಪದವೀಧರೆ  ಸಹನ.ಪಿ ಅವರು ಮೂರು ದಿನಗಳ ಕಾಲ ನಮ್ಮ ಶಾಲೆಯಲ್ಲಿ ಕಾರ್ಯಗಾರವನ್ನು ನಡೆಸಿಕೊಟ್ಟರು.