ಸೋಮವಾರ, ಜೂನ್ 20, 2022

DEVATHAPURA


 

ಶುಕ್ರವಾರ, ಜೂನ್ 3, 2022

ಮುಖ್ಯೋಪಾಧ್ಯಾಯರ ಬಿಡುಗಡೆ

🌹🌹ಸರ್ಕಾರಿ ಪ್ರೌಢಶಾಲೆ ಜಹಗೀರಗುಡದೂರ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಶ್ರೀಶೈಲ ಸೋಮನಕಟ್ಟಿ ಯವರು ಕೆಪಿಎಸ್ಸಿ ಮುಖಾಂತರ ಜಿಲ್ಲಾ ಕಾರ್ಮಿಕ ಅಧಿಕಾರಿಯಾಗಿ (KAS) ಆಯ್ಕೆಗೊಂಡ ಪ್ರಯುಕ್ತ ನಮ್ಮ ಪ್ರೌಢಶಾಲಾ ಕರ್ತವ್ಯದಿಂದ ಅಧಿಕೃತವಾಗಿ ಬಿಡುಗಡೆ ಗೊಂಡರು. ಶಾಲಾ ವತಿಯಿಂದ ಸಿಬ್ಬಂದಿಯವರು ಆತ್ಮೀಯವಾಗಿ  ಬೀಳ್ಕೊಟ್ಟು ಶುಭಹಾರೈಕೆ ಮಾಡಿದ ಕ್ಷಣ ಹಾಗೂ ಶಾಲಾ ಮುಖ್ಯೋಪಾಧ್ಯಾಯರ ಪ್ರಭಾರತ್ವವನ್ನು ಮತ್ತೆ ಶ್ರೀ ಶಿವಪ್ಪ ಇಲಾಳ ರವರಿಗೆ ನಿರ್ವಹಿಸಿ ಕೊಡಲಾಯಿತು.🌹🌹

ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಪ್ರಶಸ್ತಿ ಪಡೆದ ರಮೇಶ ಚೌವ್ಹನ್ ಗುರುಗಳು

ಇಂದು ಜಹಗೀರಗುಡದೂರ ಪ್ರೌಢಶಾಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ  ನಮ್ಮ ಕೊಪ್ಪಳ ಜಿಲ್ಲೆಯಿಂದ ಪ್ರತಿನಿಧಿಸಿ ರಾಜ್ಯ ಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನವನ್ನು ಪಡೆದ ಬಂದಿರುವ ಶಾಲೆಯ ಸಹಶಿಕ್ಷಕರಾದ  *ಶ್ರೀ ರಮೇಶ್ ಚೌವ್ಹನ್* ಅವರಿಗೆ ಶಾಲೆಯ ಸಿಬ್ಬಂದಿ, ಎಸ್.ಡಿ.ಎಮ್.ಸಿ ಹಾಗೂ ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಲಾಯಿತು. ಜೊತೆಗೆ ಶಾಲೆಯ ಶೈಕ್ಷಣಿಕ ವರ್ಷದ  ಕ್ರೀಡಾ ಕೂಟಕ್ಕೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆಯನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಶಿವಪ್ಪ ಇಲಾಳ,  ಜಗದೀಶ ಬಾಸಿಂಗದ, ಬಸಪ್ಪ ತಳವಾರ, ಗುರುರಾಜ, ಶರಣಪ್ಪ ರಾಂಪೂರ, ರಮೇಶ ಚೌವ್ಹನ್, ಶ್ರೀಮತಿ ತನುಜಾ ಪೋಲಿಸ್, ಸುಮಿತ್ರಾ, ಹುಲಿಗೆಮ್ಮ ಹಾಗೂ ರವಿಕುಮಾರ  ಪಾಲ್ಗೊಂಡಿದ್ದರು.