ಶುಕ್ರವಾರ, ಸೆಪ್ಟೆಂಬರ್ 13, 2013

ರಂಗದ ಹಿಂದೆ


           ರಂಗಭೂಮಿಯೇ ಆಗಿರಲಿ, ಇನ್ನಾವುದೇ ರಂಗದಲ್ಲಿ ಈ ರಂಗದ ಹಿಂದೆ ನಡೆಯುವ ಕ್ರಿಯೆ, ಕಾರ್ಯಗಳು ತಿಳಿಯುವುದೇ ಇಲ್ಲ ಕಾರಣ ಅವರು  ಎಂದಿಗೂ ರಂಗದ ಮುಂಬಾಗದಲ್ಲಿ ಬರಲು ಪ್ರಯತ್ನವನ್ನೇ ಮಾಡುವುದಿಲ್ಲ ಹೀಗಾಗಿ ಎಷ್ಟೋ ಕಾರ್ಯಗಳನ್ನು ಒಂದು ಪ್ರದರ್ಶನ ಅಥಾವ ಇನ್ನಾವುದೇ ರಂಗದಲ್ಲಿಯೇ ಆಗಲಿ ತೊಡಗಿಕೊಂಡ ಶ್ರಮಗಾರರು ಎಂದಿಗೂ ಹಿಂದೆಯೇ ಇರುತ್ತಾರೆ.  ಶಶಿಧರ ಅಡಪ ಅಂಥಹ ವ್ಯಕ್ತಿಗಳು ಎಷ್ಟೋ ಶ್ರದ್ಧೆ ಹಾಗೂ ಕಾರ್ಯಚಟುವಟಿಕೆಯಿಂದ ಮುಂದೆ ಬರಲು ಸಾಧ್ಯ. ನಾನಿಲ್ಲಿ ಅಂಥಹ ಎಷ್ಟೋ ಜನರನ್ನು ಇಲ್ಲಿ ನೆನಪಿಸಿಕೊಳ್ಳಲು ಬಯಸುತ್ತೇನೆ. 

                     ಹಳ್ಳಿಯ ಜನ, ಶಿಕ್ಷಕರು  ಹಾಗೂ ನಮ್ಮ ಮುದ್ದು ವಿದ್ಯಾರ್ಥಿಗಳು ಸಾಕಷ್ಟು ಈ ರಂಗದ ಹಿಂದೆ (Back stage work) ಕಾರ್ಯಗಳನ್ನು ಕೈಗೊಂಡಿರುವವರನ್ನು ನಾವು ನೆನೆಯಲೇ ಬೇಕು. ನಮ್ಮ ಇಡೀ ರಂಗಚಟುವಟಿಕೆಯಾಗಿರಲಿ ಅಥಾವ ಶಾಲೆಯ ಯಾವುದೇ ಕೆಲಸ ಕಾರ್ಯಗಳಲ್ಲಿ ಹಳೇಯ ವಿದ್ಯಾರ್ಥಿಗಳು ಸದಾ ಸಹಾಯಕರಾಗಿರುತ್ತರೆ. "ಮಕ್ಕಳ ಹೆಜ್ಜೆಗಳು ಜಾನಪದದತ್ತ... " ಯೋಜನೆಯಲ್ಲಿಯಂತು ವಿದ್ಯಾರ್ಥಿಗಳಿಂದಲೇ ಪ್ರಸ್ತಾವನೆಯ ಕುರಿತು ವಿಚಾರವನ್ನು ಆಲೋಚನೆ ಮಾಡಿ ಶಾಲೆಯ ವೃಂದದವರಿಂದ ಕೆಲವು ಮಾರ್ಗಗಳನ್ನು ಹಾಗೂ  ವಿವರಣೆಗಳನ್ನು ತಿಳಿದುಕೊಂಡು ಮುಂದುವರೆದರೆ, ಕಲಿಕೆಯಲ್ಲಿ ಮಕ್ಕಳಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ಹಳ್ಳಿಯ ಪಾಲಕರೇ ಶಾಲೆಗೆ ಬಂದು ನಾವು ಊರೊಳಗೆ ತೆರಳಿ ಅವರ ಅನುಭವ ಹಾಗೂ ಚಿಂತನೆಯನ್ನು ನಾವು ನಮ್ಮೊಂದಿಗೆ ಮಕ್ಕಳ ಕೂಡಿ ಕಲಿಯವಿಕೆ ತುಂಬಾ ಉಪಯೋಗವಾಯಿತು ಎಂದು ಹೇಳಬಹುದು. 

ಬುಧವಾರ, ಸೆಪ್ಟೆಂಬರ್ 11, 2013

ಅಭಿಪ್ರಾಯ : ಮಹಾಂತೇಶ ವತ್ತಿ

        ಆಧುನಿಕ ಜಗತ್ತಿನಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾದದ್ದು ಮಾಧ್ಯಮಗಳಲ್ಲಿಯೇ ಪ್ರಮುಖವಾದದ್ದು  ಪತ್ರಿಕಾ ಮಾಧ್ಯಮ. ಗ್ರಾಮೀಣ ಮಕ್ಕಳಿಗೆ ದೂರದರ್ಶನ ಮಾಧ್ಯಮವೇ ಹೆಚ್ಚು ಪರಿಚಿತ. ಪತ್ರಿಕಾ ಮಾಧ್ಯಮದ ಪರಿಚಯ ಅತೀ ವಿರಳ. ಆದ್ದರಿಂದ ಪ್ರೌಢಶಾಲೆಯಲ್ಲಿ ಗುರುರಾಜ ಶಿಕ್ಷಕರು ಸಂಪಾದಕತ್ವದಲ್ಲಿ ಬರುತ್ತಿರುವ ಹಾಗೂ ಮಕ್ಕಳನ್ನೇ ಪತ್ರಿಕಾ ಬರಹಗಾರರನ್ನಾಗಿ ಆಯ್ಕೆ ಮಾಡಿಕೊಂಡಿರುವುದರಿಂದ ಶಾಲಾ ಮಕ್ಕಳಲ್ಲಿ ಹೆಜ್ಜೆಗಳು ಪತ್ರಿಕೆ ಆಸಕ್ತಿ ಬೆಳೆಸುವಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಿದೆ. 

        ಮಕ್ಕಳು ಪತ್ರಿಕೆಗಾಗಿ ಬರೆಯಬೇಕೆಂಬ ಆಸೆಯಿಂದ ವಿಷಯವನ್ನು ಕ್ರೂಢೀಕರಿಸಿಕೊಳ್ಳ ಬೇಕಾದರೆ ಸದಾ ಚಟುವಟಿಕೆಯಿಂದ ಇರಬೇಕಾಗುತ್ತದೆ. ಮಕ್ಕಳು ಸದಾ ಚಟುವಟಿಕೆಯಿಂದ ಇರುವುದರಿಂದ ಕ್ರಿಯಾಶೀಲರಾಗಿ, ಮಾನಸಿಕವಾಗಿ ಪ್ರಬುದ್ಧತೆ  ಬರುವುದೆಂಬ ವಿಶ್ವಾಸ ನನ್ನದು. 

ಮಹಾಂತೇಶ ವತ್ತಿ 
ಕೃಷಿ ಪತ್ತಿನ ಮಾಜಿ ಅಧ್ಯಕ್ಷರು,
ಜಹಗೀರಗುಡದೂರು. 

ಶನಿವಾರ, ಸೆಪ್ಟೆಂಬರ್ 7, 2013

ಮಕ್ಕಳು ರಚಿಸಿದ ಕಥೆಗಳು



ನಾನು ಹಾಗೂ ನನ್ನ ಗುರುಗಳು

ಘಟನೆ ೧         
            ಶಿಕ್ಷಕ ದಿನಾಚರಣೆ ಅಂಗವಾಗಿ ನಾನು ಯಾರನ್ನು ನೆನೆಯಲಿ ಪ್ರಾಥಮಿಕ ದಿಂದ ಹಿಡಿದು ಸ್ನಾತಕೋತ್ತರವರೆವಿಗೂ ಎಷ್ಟೋಂದು ಶಿಕ್ಷಕರು ನಮಗೆ ದಾರಿ ತೋರಿಸಿದರು, ತಿದ್ದಿದರು, ಒಂದು ಬಾರಿ ಬಯ್ದು ಹೇಳಿದರೆ ಮತ್ತೊಮ್ಮೆ ಪ್ರೀತಿಯಿಂದ ಹೇಳಿದ್ದು ಕೆಲವೊಮ್ಮೆ ನಮಗಾಗಿಯೇ (ವಿದ್ಯಾರ್ಥಿಗಳಿಗಾಗಿ) ನಿರಶನ ನಿಂತು ನಮ್ಮನ್ನು ನಾವೇ ತೆಗಳುವಿಕೆಯಿಂದ ಕಾಣುವಂತೆ ಮಾಡಿದ ಶಿಕ್ಷಕರು ನಮ್ಮನ್ನು ಸರಿ ದಾರಿಗೆ ತರುವ ಕಾರಣಗಳು ನನಗೆ ಇಂದಿಗೂ  ತಲ್ಲಣ ಉಂಟುಮಾಡುತ್ತವೆ. ನಾನೇನು ಅತ್ಯಂತ ಬುದ್ಧಿವಂತನಾಗಿ ಇಂದು ಶಿಕ್ಷಕರ ಕುರಿತಾಗಿ ಬರೆಯುತ್ತಿದ್ದೇನೆ ಎಂದು ನಾನು ನನ್ನನ್ನು ವ್ಯಕ್ತ ಪಡಿಸಲಿಕ್ಕಾಗಿ ಇಲ್ಲಿ ಬರೆಯುತ್ತಿಲ್ಲ. ಇದು ನನ್ನದೇ ಗುರುಗಳ ಕುರಿತಾಗಿ ನೆನಪಿಸಿಕೊಳ್ಳೋ ರೀತಿ ಎಂದು ತಿಳಿದುಕೊಳ್ಳಿ. ನನ್ನ ನೆನಪಿನಲ್ಲಿ ಇರುವಂತೆ  ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಗಣೇಶ ಸಾರ್, ನಿರ್ಮಾಲ ಟೀಚರ್, ಶಾಂತಾಬಾಯಿ, ದೊಡ್ಡಮನಿ, ಪರಸಪ್ಪ, ನಾಗಮ್ಮ, ಚಂದ್ರ ಶೇಖರ, ಗಿರಜಾ ,ನಾಗರತ್ನಮ್ಮ  ಹೀಗೆ  ಎಲ್ಲ ಶಿಕ್ಷಕರ ಹೆಸರು ನಮ್ಮ ನೆನಪಿಗೆ ಬರುತ್ತಾ ಅವರೊಂದಿಗೆ ಕಳೆದ ಆ ಶಾಲೆಯ ದಿನಗಳು 'ಅಯ್ಯೋ ನಾನು ಹೇಗೆ ಇರುತ್ತಿದ್ದೇ ... ?' ಎಂದು ಮನದಲ್ಲಿ ಬಂದು ಹೋಗುತ್ತವೆ. ಕೆಲವು ಘಟನೆಗಳು ಎಂದಿಗೂ ಮರೆಯದೇ ಹಾಗೇ ಉಳಿದೇ ಇರುತ್ತವೆ. ನಾನು ನನ್ನ ತಂಗಿ ಜೊತೆಯಾಗಿ ಶಾಲೆಗೆ ಹೋಗುತ್ತಿದ್ದೇವು. ಆಗ ಎರಡು ಅಂತಸ್ತಿನ ನಮ್ಮ ಶಾಲೆ ಐಸ್ ಲ್ಯಾಂಡ್ ನ ಎದುರುಗಡೆ ದೊಡ್ಡದಾಗಿ ಕಾಣುತ್ತಿತ್ತು. ಶಾಲೆ ಬಿಟ್ಟಾಗ ಮತ್ತು  ಪ್ರಾರಂಭವಾಗುವಾಗ ಆ ರಸ್ತೆ ಟ್ರಾಫಿಕ್ ಜಾಮ್ ಆಗಿ ಹೋಗುತ್ತಿತ್ತು. ಕಾರಣ ನಮ್ಮ ಶಾಲೆಯ ಹಿಂದುಗಡೆಯೇ ಬಸ್ ನಿಲ್ದಾಣ. ಶಾಲೆಯ ಮೊದಲ ಅಂತಸ್ತಿಗೆ ಹೋದರೆ ಬಸ್ ನಿಲ್ದಾಣದ ಎಲ್ಲ ಚಿತ್ರಣ ನಮ್ಮ ಕಣ್ಣೆದುರಿನಲ್ಲಿಯೇ ಕಾಣುತ್ತಿತ್ತು. 

                                 ಕಬ್ಬಿನ ಲಾರಿ, ಬಂಡಿಗಳಿಗೆ ಓಡಿ ಹೋಗಿ ಕಬ್ಬು ಕಿತ್ತಿದ್ದು ಎಲ್ಲಿಂದಲೋ ನೋಡಿದ ಶಿಕ್ಷಕರ ಕೈಯಿಂದ ಕಬ್ಬಿನಂತೆ ಸರಿಯಾಗಿಯೇ ತಿನ್ನುತ್ತಿದ್ದೇವು. ಕೆಲವೊಮ್ಮೆ ಅವರೇ ಕಬ್ಬಿನ ಗನಿಗಳನ್ನು ನೀಡುತ್ತಿದ್ದರು.  ಶಿಕ್ಷಕರು ಎಂದು ನಮ್ಮನ್ನು ಶತ್ರುಗಳಂತೆ ಕಾಣುತ್ತಿರಲಿಲ್ಲ ಕಾರಣ ನಮಗೆ ಅಂದು ಯಾಕೆ ಎಂದು ಅರ್ಥನೂ ಮಾಡಿಕೊಳ್ಳುವಂಥ ಜ್ಞಾನ ನಮ್ಮಲ್ಲಿ ಇರಲಿಲ್ಲ. ನಾಲ್ಕೋ - ಐದೋ ನೆನಪಿಲ್ಲ  ಒಮ್ಮೆ ಹಬ್ಬ ಕಳೆದ ಮರುದಿನ ನಾನು ಶಾಲೆಗೆ ಕರಿಗಡಬು ತೆಗೆದುಕೊಂಡು ಹೋಗಿದ್ದೆ. ಊಟಕ್ಕೆ ಅದನ್ನೇ ತಿನ್ನೋ ಯೋಚನೆ. ನನಗೆ ಸಿಹಿ ಪದಾರ್ಥಗಳೆಂದರೆ ತುಂಬಾ ಇಷ್ಟ. ಅಮ್ಮ ಮನೆಯಲ್ಲಿ ಮಾಡಿದ ಬುಟ್ಟಿಯ ತುಂಬಾ ಇದ್ದದ್ದನ್ನು ಪೂಜೆಯ ನಂತರ ನಮ್ಮ ಮನೆಯ ಸುತ್ತಾ-ಮುತ್ತಾ ಇರುವರಿಗೆಲ್ಲ ನೀಡುತ್ತಿದ್ದಾಗ ನನಗೆ ಸಹಿಸದಷ್ಟು ಕೋಪ ಬರುತ್ತಿತ್ತು. ನಾವು ಯಾಕೆ ನೆರೆಯವರಿಗೆ ನೀಡಬೇಕು ಎಂದು ಅನ್ನಿಸುತ್ತಿತ್ತು. ಆ ವಯಸ್ಸಿನಲ್ಲಿ ಅದು ಸಹಜವೂ ಆಗಿತ್ತು. ಸರಿ ನನ್ನ ಶಾಲೆಗೆ ಕರಿಗಡಬು ತೆಗೆದುಕೊಡು ಹೋದ ಸುದ್ದಿಯನ್ನು ನಾನು ನನ್ನ ಗೆಳೆಯರಾದ ಎರ್ರಿಸ್ವಾಮಿ, ವೆಂಕಟೇಶನಿಗೆ ಮಾತ್ರ ಗೊತ್ತಿತ್ತು. ಪಾಠ ಮಾಡುವ ಶಿಕ್ಷಕರ ಬೋರ್ಡಿನ ಕೆಳಗೆ ಇದ್ದ ಬೆಂಚಿನ ಅಡಿಯಲ್ಲಿ ನಮ್ಮೆಲ್ಲರ ಊಟದ ಬುತ್ತಿ ಇಡುತ್ತಿದ್ದೇವು. ಅಂದು ನನ್ನ ನೋಟವೆಲ್ಲ ಆ ನನ್ನ ಪೇಪರ್ ನಲ್ಲಿ ಸುತ್ತಿದ್ದ ಕರಿಗಡಬು ಕಣ್ಣಿಂದ ದೂರ ಸರಿಯದಂತೆ ಇದ್ದವು. ಆದರೆ ದೊಡ್ಡಮನಿ ಸಾರ್ ಎಂದರೇ ನನಗೆ ಎಲ್ಲಿಲ್ಲದ ಭಯ ಆ ಕಾರಣದಿಂದಾಗಿ ನಾನು ಪಾಠದ ಕಡೇ ಲಕ್ಷ್ಯ ಕೊಟ್ಟು ಕುಳಿತ್ತಿದ್ದೆ. ಹಾಗೇ ಅವರು ಕೊಟ್ಟ ಮನೆ ಪಾಠವನ್ನು ಅಲ್ಲಿಯೇ ಮಾಡಿ ಮುಗಿಸಿ ಬಿಡುತ್ತಿದ್ದೆ. 

                              ಅಂದು ನನ್ನ ಪೊಟ್ಟಣದ ಮೇಲೆ ಕಣ್ಣು  ಇಡಲು ನಾನು ಆ ನನ್ನ ಇಬ್ಬರು ಗೆಳೆಯರಿಗೂ ಹೇಳಿದ್ದೆ. ಕಾರಣ ಅವರಿಗೂ ಅರ್ಧ ನೀಡುತ್ತೇನೆ ಎಂದು ಭರವಸೆ ನೀಡಿದ್ದೆ. ಆದರೆ ನಮ್ಮ ದೊಡ್ಡಮನಿ ಸಾರ್ ಪಾಠದ ಮುಂದೆ ನನ್ನ ತಿನ್ನುವ ಮನಸ್ಸು ಕಡೇ ಮರೆತು ಓದುವದರತ್ತ ಸರೆದಿದ್ದು ನನಗೆ ತಿಳಿಯದಾಗಿತ್ತು. ಒಂದು ಭಯ ಮತ್ತೊಂದು ಇರಲಿಕ್ಕಿಲ್ಲ ಕಾರಣ ನನಗೆ ಓದು ಎಷ್ಟೇ ಓದಿದರೂ ಅಷ್ಟೇ ಅನ್ನುವ ಮಟ್ಟಿಗೆ ಇದ್ದವನು. ಅತ್ಯಂತ ಬುದ್ದಿವಂತ ಎಂದು ಇಲ್ಲವೇ ಅತ್ಯಂತ ದಡ್ಡನೆಂದೂ ನಾನು ಎರಡರಲ್ಲೂ ಕಾಣಿಸಿ ಕೊಂಡವನಲ್ಲ. ಆದರೆ ಅಂದು ಆ ಸಿಹಿ ಪದಾರ್ಥಗಳ ಮೇಲೆ ನನ್ನ ಹಾಗೂ ನನ್ನ ಗೆಳೆಯರ ಹೆಸರಿರಲಿಲ್ಲ. ಮಧ್ಯಾಹ್ನ ಊಟದ ಹೊತ್ತಿಗೆ ನನ್ನ ಪೊಟ್ಟಣ ಕಾಣೆಯಾಗಿತ್ತು. ನಾನು ತುಂಬಾ ಗೊಂದಲಕ್ಕೆ ಬಿದ್ದೆ. ದುಃಖಿತನಾದೆ. ಆದರೆ ಗೆಳೆಯರಿಂದ ತಿಳಿದಿದ್ದು ನನ್ನ ಆ ಪೊಟ್ಟಣವನ್ನು ಹಾರಿಸಿದ್ದವರು ನನ್ನ ಸಹಪಾಠಿಗಳಾದ ಶಾಂತಾಬಾಯಿ ಮತ್ತು ಗೀತಾಬಾಯಿಯೆಂದು ತಿಳಿಯಿತು. ಅವರು ಬಸ್ ನಿಲ್ದಾಣದ ಕಡೇ ಹೋಗಿರುವುದನ್ನು ತಿಳಿಸಿದರು. ಇದು ಒಂದು ದೊಡ್ಡ ವಿಷಯವಾಗಿ ಅಂದು ಅಲ್ಲಿ  ಬಿತ್ತರವಾಗಿ, ದೊಡ್ಡಮನಿ ಸಾರ್ ಗೆ ಸುದ್ದಿ ಮುಟ್ಟಿ ಅವರು ವಿಚಾರ ಮಾಡುವ ಹೊತ್ತಿಗೆ ಈ ಇಬ್ಬರ ದರ್ಶನ ಬಸ್ ನಿಲ್ದಾಣದಲ್ಲಿ ಸಾಗುತ್ತಿದ್ದದ್ದು ಕಾಣಿಸಿತು. ಅದು ನನ್ನದೇ ಪೊಟ್ಟಣವೆಂದು ನಾನು ಗುರ್ತಿಸಿದೆ. ಮತ್ತು ಇನ್ನೂ ದುಃಖಿತನಾದೆ. ದೊಡ್ಡಮನಿ ಗುರುಗಳ ನನ್ನನ್ನು ಬಯ್ದು 'ಲೇ ಅದಕ್ಕೆಲ್ಲ ಯಾಕೆ ಯೋಚನೆ ಮಾಡ್ತೀಯಾ, ಸುಮ್ಮನಿರು ಅವರ ಬಂದ ಮೇಲೆ ನಾ ವಿಚಾರ ಮಾಡ್ತೀನಿ' ಎಂದು ಏಳನೇ ತರಗತಿ ವಿದ್ಯಾರ್ಥಿಯ ಕೈಯಲ್ಲಿ ಹತ್ತು ರೂಪಾಯಿಗಳನ್ನು ನೀಡಿ ನನಗೆ ಎರಡು ಇಡ್ಲಿ ತರಲಿಕ್ಕೆ ನೀಡಿದರು. ಆ ನನ್ನ ಇಬ್ಬರೂ ಸಹಪಾಠಿಗಳಿಗೆ ಗುರುಗಳು  ಶಿಕ್ಷೆ ನೀಡಿದ್ದು, ಅವರು ನನ್ನೊಂದಿಗೆ ಎಂದು ಮಾತನಾಡಿದ್ದು ಒಂದು ನನಗೆ ನೆನಪಿನಲ್ಲಿ ಉಳಿದಿಲ್ಲ. 

         ಅಲ್ಲಿಯವರೆವಿಗೂ ನನ್ನಲ್ಲಿ ಮಡುಗಟ್ಟಿದ್ದ ದುಃಖ ಮರೆಯಾಗಿ ಸಾರ್ ಅವರು  ನನಗಾಗಿ ನೀಡಿದ್ದ ಹಣ ನನ್ನನ್ನು ಗೊಂದಲಕ್ಕೆ ಎಡೆ ಮಾಡಿಕೊಟ್ಟಿತು. ಕಸಿವಿಸಿ ಆಯಿತು ಆದರೂ ಆ ನನ್ನ ಸ್ಥಿತಿ ತೆಗೆದುಕೊಳ್ಳುವಂತೆ ಮಾಡಿತು. ಆ ಎರೆಡು ಇಡ್ಲಿಗಳು ನನ್ನ ಜೀವನದ ಮಹಾ ಪ್ರಸಾದವಾಗಿ ಕಾಣಿಸಿತು. ಎಲ್ಲೋ ಹೋಗಿ ದೇವಸ್ಥಾನಗಳಲ್ಲಿ ಪ್ರಸಾದ ಪಡೆದುಕೊಂಡು ಬರುವಲ್ಲಿ ಇರುವ ಆನಂದಕ್ಕಿಂತ ಹೆಚ್ಚಿನ ಆನಂದ ನನಗೆ ಅಂದು ದೊರಕಿದ್ದು. ಆ ಆನಂದ ನನ್ನ ಜೀವನದ ಪರಮಾನಂದ ಎಂದು ತಿಳಿಯುವುದರಲ್ಲಿ ಯಾವುದೇ ಸಂದೇಹವಿಲ್ಲ. ನಾನು ಮತ್ತೇ ಅವರನ್ನು ಕಂಡಿದ್ದು ನಾನು ಶಿಕ್ಷಕನಾಗಿ ಒಂದುವರೆ ವರ್ಷಗಳ ನಂತರ. ಅದಾಗಲೇ ಅವರು ನಿವೃತ್ತಿ ಹೊಂದಿದ್ದರು  ಕುಷ್ಟಗಿಗೆ ನಾನು ಹೊರಡುವ ಬಸ್ ನಲ್ಲಿ ಸಿಟ್ ಗಾಗಿ ಹೊಡುಕುವಾಗ ನಾನೇ ಅವರನ್ನು ಮಧ್ಯದ ಸಿಟ್ ನಲ್ಲಿ ವ್ಯವಸ್ಥೆ ಮಾಡಿಕೊಟ್ಟು ಪರಿಚಯ ಮಾಡಿಕೊಂಡೆ. ಅವರು ತಲೆ ಮೇಲೆ ಕೈ ಇಟ್ಟು ಒಳ್ಳೇದಾಗಲಿ ಎಂದು ಹರಸಿದರು. ನನಗೆ ಮತ್ತೇ ಅವರ ಶಕ್ತಿಯನ್ನು ಧಾರೆ ಎರದಂತೆ ತುಂಬಿ ಹೋದೆ. 

(ತಮಗೆ ನೋವಾದರೆ ಕ್ಷಮೆ ಇರಲಿ ಶಾಂತ/ಗೀತಾ)

ಮಂಗಳವಾರ, ಸೆಪ್ಟೆಂಬರ್ 3, 2013

ಮಕ್ಕಳು ರಚಿಸಿದ ಕಥೆಗಳ ನೋಟ


ಹೆಜ್ಜೆಪದ - ಕಥೆ

ಮಂಗಳವಾರ, ಆಗಸ್ಟ್ 20, 2013

ತಾಲಿಂ

                               ಮಕ್ಕಳಲ್ಲಿ ನಾಟಕದ ಕುರಿತು ಕೊಂಚ ಹಿಂಜರಿಕೆ ಇರುವುದನ್ನು ನಾನು ಕಂಡಿದ್ದೇನೆ. ಕಾರಣ ಹಲವಾರು ಇವೆ. ಆದರೆ ನಿಜ ಅರ್ಥದಲ್ಲಿ ವಿವರಿಸುವಲ್ಲಿ ಮಕ್ಕಳಿಗೆ ಮುಟ್ಟಿಸುವ ಹಂತ ಎಲ್ಲೋ ಕಡಿಮೆಯಾಗುತ್ತಿದೆ ಎಂಬ ಭಾವ  ಯಾಕೆಂದರೆ ಅಧುನಿಕ  ರಂಗಭೂಮಿಯ  ಕುರಿತು ಲವಲೇಶ ಕಾಣದ ಈ ಪ್ರದೇಶಗಳಲ್ಲಿ ನಾವು ವಿದ್ಯಾರ್ಥಿಗಳಿಗಾಗಲಿ  ಅವರ ಪಾಲಕರಿಗೆ ಅರ್ಥೈಸುವ ಹೊತ್ತಿಗೆ ಸಮಯ ಮುಗಿದೇ ಹೋಗಿರುತ್ತದೆ. ವಿದ್ಯಾರ್ಥಿಯನ್ನು ಮೊದಲ ಹಂತದಲ್ಲಿಯೇ ರಂಗಭೂಮಿಯ ನಟನನ್ನಾಗಿಸಲು ನಾವಿಲ್ಲಿ  ಪ್ರಯತ್ನ ಎಂದಿಗೂ ಮಾಡಿಲ್ಲ ಕಾರಣ, ವಿದ್ಯಾರ್ಥಿಗಳಿಗೆ ಪ್ರಾಥಮಿಕವಾಗಿ ಪ್ರಪಂಚವನ್ನು ತಮ್ಮ ಕಣ್ಣುಗಳಿಂದಲೇ ನೋಡುವಂಥ ವಾತಾವರಣವನ್ನು ಕಲ್ಪಿಸಿಕೊಡಬೇಕಾಗಿದೆ. ನಮ್ಮ ಗ್ರಾಮೀಣ ಪ್ರದೇಶದಲ್ಲಿ ಅದು ಗೂಳೆ ಹೋಗುವ ಇಂಥಹ ಸ್ಥಳಗಳ ಪೋಷಕರು ಮಕ್ಕಳ  ಶೈಕ್ಷಣಿಕ ನೆಲೆಯಲ್ಲಿ ದೃಷ್ಟಿ ಹಾಯಿಸುವುದು ತುಂಬಾ ಕಷ್ಟ. ಆದರೆ ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ಭಾಗುವಹಿಸುವಿಕೆ ಆರೋಗ್ಯಕರವಾಗಿ ಸ್ಪರ್ಧಾ ಸ್ಪೂರ್ತಿಯಿಂದ ಎಷ್ಟರ ಮಟ್ಟಿಗೆ ಇದ್ದು ನಾವು ಕಂಡಿದ್ದೇವೆ. ಕಾಲೇಜುಗಳಲ್ಲಿ ನಡಿಯುವ ವಿಚಾರ ಸಂಕಿರಣಗಳಲ್ಲಿ, ಗೋಷ್ಠಿಗಳಲ್ಲಿ, ಚರ್ಚೆ - ಸಂವಾದಗಳಲ್ಲಿ ನಮ್ಮ ವಿದ್ಯಾರ್ಥಿಗಳ ಭಾಗುವಹಿಸುವಿಕೆಯನ್ನು ಕಾಣಲು ಆಗುತ್ತಲೇ ಇಲ್ಲ. ಪ್ರೌಢಶಿಕ್ಷಣದ ನಂತರ ಮಕ್ಕಳಲ್ಲಿ ಸಂಘಟನಾ ಸಾಮರ್ಥ್ಯವನ್ನು ಕಾಣಲು ಇಚ್ಚಿಸುತ್ತೇನೆ. ಪ್ರಶ್ನಿಸುವ ಇಲ್ಲವೇ ಹುಡುಕಾಟವನ್ನು ನಡೆಸುವ ಛಲ ಅವರಲ್ಲಿ ಸದಾ ಕಂಡರೆ ಒಳ್ಳೆಯದು. ಆದರೆ ಅದು ಸಾಧ್ಯಾವಾಗಿದೆಯೇ ಎನುವುದು. ಮಕ್ಕಳು ತಮ್ಮ ಪೋಷಕರಿಗೆ ತಿಳಿಸಬೇಕು  ನಾನು ಸರಿಯಾದ ಮಾರ್ಗದಲ್ಲಿಯೇ ಇದ್ದೇನೆ ಎಂದು. ದುಡಿದು ಬದುಕುವ ಜನರಲ್ಲಿ ಮಗ/ಮಗಳ ಕುರಿತು ಶಿಕ್ಷಕರಲ್ಲಿ ವಿಚಾರಿಸುವ ಸಮಯವನ್ನು ಹೊಂದಿಸಿಕೊಳ್ಳದೇ ಇದ್ದರೆ ನಮ್ಮ ಮಕ್ಕಳನ್ನು ನಾವು ಎಂದಿಗೂ ದೊಡ್ಡ ಹುದ್ದೆಯಲ್ಲಿ ಕಾಣಲು ಖಂಡಿತ ಸಾಧ್ಯಾವಿಲ್ಲ. ಮಕ್ಕಳನ್ನು ಶಾಲೆಯಲ್ಲಿ ಭಾಗುವಹಿಸುವಿಕೆಯನ್ನು ಕಂಡು ಅವರಿಗೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಭಾಗವಹಿಸುವ ಮಾತುಗಳನ್ನು ಆಡಿದರೆ ಮಕ್ಕಳು ಎಂದಿಗೂ ಇಂದೆ ಉಳಿಯುವುದಿಲ್ಲ ಸದಾ ಮುಂದೆ ಬರುವ ಪ್ರಯತ್ನ ಮಾಡುತ್ತಾರೆ. ಸೋತರು ಹೆದರಬೇಡ ಪ್ರಯತ್ನ ಪಡು ಮತ್ತೇ ನೀ ಗೆಲ್ಲುತ್ತೀ ಎಂದಾಗ ಕಂಡಿತ ಮಗು ತನ್ನ ಆತ್ಮ ವಿಶ್ವಾಸವನ್ನು ಕಳೆದು ಕೊಳ್ಳದೇ ಉನ್ನತದತ್ತ ಮುಖ ಮಾಡುತ್ತಾನೆ. 

ಸೋಮವಾರ, ಆಗಸ್ಟ್ 12, 2013

ಸರ್ಕಾರಿ ಶಾಲೆಯ ರಂಗ ಚಟುವಟಿಕೆಗಳು

ರಂಗ ಚಟುವಟಿಕೆಯ ಆಧಾರದಿಂದ ಮಕ್ಕಳಿಗೆ ಹೊಸತನದ ಪಾಠವನ್ನು ಹೇಳಿಕೊಡಲು ಸಾಧ್ಯವೆಂದು ಪ್ರಸ್ತುತ ನನ್ನ ಸಹೋಧ್ಯೋಗಿಗಳು ಮಾತಾನಾಡುತ್ತಿರುವುದನ್ನು ಕಂಡು ನನ್ನನ್ನು ನಾನೇ ನಂಬಲಾಗಲಿಲ್ಲ. ಈ ವಾತವರಣ ಬರಲು ನಾನು ಐದು ವರ್ಷ (ಡಿಸೆಂಬರ್ ಗೆ) ಕಾಯಬೇಕಾಯಿತು. ಆದರೆ ಇದು ಸಂಪೂರ್ಣ ಸತ್ಯವು ಅಲ್ಲ. ಆ ದಿನಗಳು ದೂರಿಲ್ಲ ಎಂಬ ಭಾವನೆಯು ನನ್ನ ಗೆಳೆಯರು, ಹಿತೈಷಿಗಳು ನನ್ನೊಂದಿಗೆ  ಹಂಚಿ ಕೊಂಡಿದ್ದು ಇದೆ. ನಾಟಕ ಎಂದರೆ ಕೇವಲವಾಗಿ ಮಾತಾನಾಡುತ್ತಿದ್ದ ನಮ್ಮ ಉತ್ತರದ ಭಾಗದಲ್ಲಿ ಹೊಸತನದ ಅಧುನಿಕ ನಾಟಕಗಳ ಕುರಿತು ಪಾಠವನ್ನು ಮಾಡುವ ನಾವು ನಿಲ್ಲಲು ಸಾಧ್ಯಾವೇ ಎಂಬ ಪ್ರಶ್ನೆಗಳು ಹುಟ್ಟಿದ್ದು ಇದೆ. ಪ್ರೌಢಶಾಲೆಗಳಲ್ಲಿ ನಾಟಕ ಶಿಕ್ಷಕರನ್ನು ೧೯೮೨ ರಲ್ಲಿಯೇ ಆಯ್ಕೆ ಪ್ರಾರಂಭಿಸಿದ್ದರೂ ಇಲ್ಲಿಯವರೆಗೂ ೬೦ ರಿಂದ ೭೦ ರ ಸಂಖ್ಯೆಯು ದಾಟಿಲ್ಲ ಆದರೆ ಇದು ಹೆಚ್ಚಿನ ಶಿಕ್ಷಕರನ್ನು  ಮೈಸೂರು ವಿಭಾಗದಲ್ಲಿ ಸರ್ಕಾರ ನಾಟಕ  ಶಿಕ್ಷಕರನ್ನು ತೆಗೆದು ಕೊಂಡಿದೆ. ಗುಲ್ಬಾರ್ಗ ಹಾಗೂ ಬೆಳಗಾವಿ ವಿಭಾಗದಲ್ಲಿ ತುಂಬಾ ಕಡಿಮೆ. 

ಕರ್ನಾಟಕ ಸಾಹಿತ್ಯಕವಾಗಿ, ಸಾಂಸ್ಕೃತಿಕವಾಗಿ ಎಷ್ಟೇ ಹಿಂದಿನಿಂದಲೂ ಬಂದರೂ  ಸಮೃದ್ಧಿಯಾಗಿ ಇಂದಿನ  ವಿದ್ಯಾರ್ಥಿಗಳಲ್ಲಿ  ಕಾಣಲು ಸಾಧ್ಯಾವಾಗಿಲ್ಲ. ನೀನಾಸಂ,ರಂಗಾಯಣ, ಶಿವಸಂಚಾರ ರಂಗ ತಂಡಗಳು ನಿರ್ಮಾಣವು ಉತ್ತರ ಕರ್ನಾಟಕದ  ಭಾಗಗಳಲ್ಲಿ ಕಾಣಲು ಸಾಧ್ಯಾವಾಗಿಲ್ಲ. ಗುಲ್ಬಾರ್ಗದಲ್ಲಿ ರಂಗಾಯಣ ನಿರ್ಮಾಣಕ್ಕೆ ಬಡ್ಜ್ ಟ್ ನಲ್ಲಿ ಘೋಷಣೆಯನ್ನು ಮಾಡಿದ್ದಾರೆ ಆದರೆ ನಮ್ಮ ಗ್ರಾಮೀಣ ಜನರಿಗೆ ಹಾಗೂ  ಮಕ್ಕಳಿಗೆ ಇನ್ನೂ ಎಷ್ಟು ವರ್ಷಗಳ ಕಾಲ ಕತ್ತಲೆಯಲ್ಲಿ ಇಡುತ್ತೇವೆ ಎಂದು  ತಿಳಿಯುತ್ತಿಲ್ಲ. ಈಗ ಇರುವ ನಾಟಕ ಶಿಕ್ಷಕರನ್ನು ಅವರ ಕಾರ್ಯಗಳನ್ನು ಅವರ ಶಾಲೆ-ಹಳ್ಳಿಗಳಿಗೆ ಬೇಟಿ ನೀಡಿ ಇಲಾಖೆಯ ತಜ್ಞರು ಸೂಕ್ಷ್ಮವಾಗಿ ಗಮನಿಸಬೇಕಾಗಿದೆ. ರಂಗ ಚಟುವಟಿಕೆಗಳ  ಕಾರ್ಯಗಳಿಂದ ಆದ ಬದಲಾವಣೆಗಳನ್ನು ಮಕ್ಕಳಿಂದಲೇ  ಕಾಣಬಹುದು. ಸಣ್ಣ ಸಣ್ಣ ಕಾರ್ಯ ಚಟುವಟಿಕೆಗಳಿಂದ ಮಕ್ಕಳಲ್ಲಿ ಇರುವ ಉತ್ಸಾಹ ಅವರು ಒಂದು ಸಂಪೂರ್ಣ ನಾಟಕವನ್ನು ಎಲ್ಲ ಪರಿಕರ, ರಂಗ ಸಜ್ಜಿಕೆ, ರಂಗ ವಿನ್ಯಾಸ, ಬೆಳಕಿನ ಹಾಗೂ ವೇಷ ಭೂಷಣಗಳೊಂದಿಗೆ ಮಕ್ಕಳು ವೇದಿಕೆಯ ಮೇಲೆ ಕಂಡರೆ ಅವರಲ್ಲಿ ಹುಟ್ಟುವ ಅಭಿನಯವನ್ನು ಕಾಣುವ ಅವರ ತಂದೆ ತಾಯಿಗಳ ಕಣ್ಣುಗಳಲ್ಲಿ ಉಕ್ಕುವ ಪ್ರೀತಿಯನ್ನು ಕಾಣುವುದೇ ಬಹಳ ಮುಖ್ಯ.


ಮಂಗಳವಾರ, ಆಗಸ್ಟ್ 6, 2013

ಹಾಲು ವಿತರಣೆಯ ಮೊದಲ ದಿನ












                   ಗೆಳೆಯರೊಬ್ಬರು ಈ ಛಾಯ ಚಿತ್ರಗಳನ್ನು ನೋಡಿ ಪ್ಲಾಸ್ಟಿಕ್ ಬಳಕೆ ಮಾಡಬಾರದಿತ್ತು ಎಂದು ಸಲಹೆ ನೀಡಿದರು. ಹೌದು ಅನಿವಾರ್ಯ ಕಾರಣಗಳಿಂದ ನಮ್ಮ ಶಾಲೆಯಲ್ಲಿ ಮೊದಲದಿನ ಪ್ಲಾಸ್ಟಿಕ್ ಬಳಕೆ ಮಾಡಲೇ ಬೇಕಾಯಿತು. ಮಕ್ಕಳಲ್ಲಿ ಸರ್ಕಾರದ ಹೊಸತನಗಳು ಸಂತೋಷವನ್ನು ಉಂಟು ಮಾಡ ಬೇಕಾಗಿರುವುದು. ಹಾಲು ಹಾಲಿನಂಥಹ ಮನಸ್ಸುಗಳಿಗೆ ಉನ್ನತ ಶಿಕ್ಷಣದ ಹಾದಿಯತ್ತ ಮಕ್ಕಳು ಸಾಗಲು ಒಂದು ಒಳ್ಳೆಯ ವೇದಿಕೆಯಾಗಬೇಕಿದೆ. ಶಿಕ್ಷಕರೆಲ್ಲ ಈ ಕಾರ್ಯಕ್ರಮದಲ್ಲಿ  ಮಕ್ಕಳೊಂದಿಗೆ ಭಾಗವಹಿಸಿದ್ದು ಅದು ಯಾವಗಲೂ ನಿರಂತರವಾಗಿ  ಮಕ್ಕಳ ಶೈಕ್ಷಣಿಕ ಸಮಸ್ಯಗಳನ್ನು ಉಚಿತ ಸಮಯದಲ್ಲಿ ಬಗೆಹರಿಸುವುದು ಮಕ್ಕಳ ಜ್ಞಾನ ವೃದ್ಧಿಯಾಗಲು ಸಾಧ್ಯತೆ ಇದೆ. 


ಸೋಮವಾರ, ಜುಲೈ 29, 2013

ಎಚ್.ಎ. ಅನಿಲ್ ಕುಮಾರ ಬೇಟಿ

H.A.Anil Kumar
              
ಎಚ್.ಎ. ಅನಿಲ್  ಕುಮಾರ  ಚಿತ್ರಾಕಲಾ ಪರಿಷತ್ ನ ಪ್ರಾಧ್ಯಾಪಕರು ನಮ್ಮ ಮಕ್ಕಳ ಕಾರ್ಯ ಚಟುವಟಿಕೆಗಳನ್ನು ಗಮನಿಸಲು ಆಗಮಿಸಿದ್ದರು.  ಅನುಪಮಾ ಪ್ರಕಾಶ ನಮ್ಮ ಯೋಜನೆಯ ಯೋಜನಾಧಿಕಾರಿಗಳು ತಿಳಿಸಿದಂತೆ ಅನಿಲ್ ಬರ್ತಾರೆ, ನೀನು ಮಾಡಿದ ಕಾರ್ಯಗಳ ಕುರಿತು ತಿಳಿಸು ಜೊತೆಗೆ ಏನೇನು ತೋರಿಸಲಿಕ್ಕೆ ಆಗುತ್ತದೆ ಅವುಗಳೆಲ್ಲವನ್ನು ಅವರಿಗೆ ತೋರಿಸು. ಎಂದಾಗ ನಾನು ಅನಿಲ್ ಕುಮಾರ ಅವರ ಕುರಿತು ತಿಳಿಯಲು ಪ್ರಯತ್ನಿಸಿದೆ. ಪ್ರಜ್ಞಾ ಹೇಳಿದ್ದು  "ಅಲ್ಲಾ ಕಣೋ ಅವರಿಗೆ ಕೇಂದ್ರ ಅಕಾಡೆಮಿ ಪ್ರಶಸ್ತಿ ಬಂದಿದೆಯೋ" ಎಂದಾಗ ನನ್ನ ಎದೆ ಧಸಕ್ಕೆಂದಂತಾಯಿತು. ಯಾಕೆಂದರೆ ಇಷ್ಟೆಲ್ಲ ಖ್ಯಾತ ವ್ಯಕ್ತಿಗಳು ನಮ್ಮ ಸಣ್ಣ ಹಳ್ಳಿಯ ಶಾಲೆಗೆ ಬೆಂಗಳೂರಿನಿಂದ ಬರುವಂಥಹ ವ್ಯಕ್ತಿಗೆ ಯಾವ ತರಹದಲ್ಲಿ ಉಪಚರಿಸಬೇಕು ಎಂದು ಸಂಕಷ್ಟದಲ್ಲಿ ಬಿದ್ದೆ. ಅವರ ಬರುವ ದಿನಗಳ ಲೆಕ್ಕ ಸಾಗುತ್ತಲೇ ಇತ್ತು. ಈ ಕಡೇ ನಮ್ಮ ಮಕ್ಕಳ ತಾಲೀಮು ನಡೆದಿದ್ದೆ. ಮಳೆ-ಗಾಳಿಗೆ ತಲೆ ಕೊಡದೇ ದಿನಾಲೂ ಮಧ್ಯಾಹ್ನದ ಒಂದು ಅವಧಿಯನ್ನು ಮುಗಿಸಿಕೊಂಡು ನಾಟಕದ ಅಭ್ಯಾಸ ನಡದೇ ಇತ್ತು. ಕುತೂಹಲವು ಇಲ್ಲಿ ಇದ್ದದ್ದು ಕಾಣುತ್ತಿತ್ತು ಕಾರಣ ನಾಟಕ ಅಂತ್ಯ ಹೇಗೆ ಎನ್ನುವುದು. ಶಿಕ್ಷಕರು ಕೊನೆ ಹೇಗೆ ಮಾಡುತ್ತೀರಿ ಮತ್ತು  

ಯಾವಾಗ ಎಂಬ ಪ್ರಶ್ನೆಗಳು ಸದಾ ನನ್ನ ಕಿವಿಯಲ್ಲಿ ಕೇಳುತ್ತಿದ್ದನ್ನು ಅಷ್ಟೇ ಆನಂದದಿಂದ ಆಲಿಸುವ ಕಾರ್ಯವನ್ನು ಮಾಡುತ್ತಿದ್ದೆ. ನನಗೆ ಅನಿಲ್ ಅವರು ಬಂದಾಗ ಈ ಮಕ್ಕಳ ತಾಲೀಮು ಇಷ್ಟ ಆಗಬಹುದೇ ಎಂಬುವ ಮತ್ತು ಅವರು ಬಂದ ಸಮಯದಲ್ಲಿ ಮಳೆ ಬರದೇ ಇರಲಿ ಎನ್ನುವುದು. ತಾಲೀಮನ್ನು ಕೋಣೆಯಲ್ಲಿ ತೋರಿಸಲಿಕ್ಕೆ ಆಗೋದೇ ಇಲ್ಲ. ಇರೋ ವೇದಿಕೆಯ ಕಟ್ಟೆಯ ಮೇಲೆ ನಮ್ಮ ಮಕ್ಕಳ ತಾಲೀಮಿನ ಆಯ್ದ ಭಾಗವನ್ನು ಇಡೋದು. ಸದಾ ಧಾರವಾಡದಿಂದ ಯಾರೇ ಅತಿಥಿಗಳನ್ನು ಕರೆದುಕೊಂಡು ಬರುವ ಸಾರಥಿ ರಾಮುವಿಗೆ ಬೆಳಿಗ್ಗೆನೆ ಪೋನಾಯಿಸಿದೆ. ರಾಮು ನಾನು ಇಲ್ಲಿಂದ ಬಿಡುವಾಗ ಮಿಸ್ ಕಾಲ್ ಕೊಡ್ತೀನಿ ಸಾರ್ ಅಂದ. ಇದು ನಮ್ಮ ಸಂಕೇತ ಸಿದ್ಧತೆಯಲ್ಲಿ ಇರಲು. ಗಡ ದಿಂದ ಹಿಡಿದು ಶಾಲೆಗೆ ಹೋಗುವ ವರೆವಿಗೂ ಮಳೆಯ ಹನಿ ಸುರಿಯುತ್ತಲೇ ಇತ್ತು. 




ಬಿಸಿಲೇ ಸದಾ ಇರುವ ನಮ್ಮ ಪ್ರದೇಶಗಳಲ್ಲಿ ಯಾರೋ ಬರುವ ಸಮಯಗಳಲ್ಲಿ ಮಳೆ ಅನಿರೀಕ್ಷಿತ ಎಂಬಂತೆ ಬರುವುದು ಶಿಕ್ಷಕರೆಲ್ಲರಲ್ಲೂ  ಚಿಂತೆಗೆ ಕಾರಣವಾಗಿತ್ತು. ಅನಿಲ್ ಸಾರ್ ಬಂದಾಕ್ಷಣ ನಮ್ಮ ಮಕ್ಕಳ ನೋಟವೆಲ್ಲ ಅವರತ್ತಲೇ ನೆಟ್ಟಿರುತ್ತದೆ. ಶಿಕ್ಷಕರೆಲ್ಲ ಪರಿಚಯ ಚಹಾ ಆದ ತಕ್ಷಣ ನಾವು ಕಂಪ್ಯೋಟರ್ ಕೋಣೆಗೆ ತೆರೆಳಿ ಅಲ್ಲಿ ಈಗಾಗಲೇ ಸಿದ್ಧ ಪಡಿಸಿದ್ದ ನಮ್ಮ ಇಲ್ಲಿನವರೆಗಿನ ಚಟುವಟಿಕೆಗಳ ಕುರಿತು ಅಪೂರ್ಣವಾದ ಸಾಕ್ಷ್ಯಚಿತ್ರವನ್ನು ವಿಕ್ಷಿಸಲು ಮತ್ತು ಅದು ನಮ್ಮ ವಿಕ್ಷಕರ ಇಂದಿನ  ಒಂದು ಕಾರ್ಯವೆಂದೇ ತೆರಳಿದೆವು. ಹತ್ತು ನಿಮಿಷದ ಚಿತ್ರವನ್ನು ವಿಕ್ಷೀಸಿದ ನಂತರ ಆದ ಚಟುವಟಿಕೆಗಳನ್ನು ವಿವರವಾಗಿ ಕೇಳುತ್ತಾ ನಮ್ಮ ಕೋಣೆಯ ಹಿಂಬಾಗದಿಂದ ಸಾಗಿದೆವು. ಇಲ್ಲಿ ನಮ್ಮ ಮಾತುಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿಯುತ್ತಿದಿದ್ದು ಹತ್ತನೆಯ ತರಗತಿಯ ವಿದ್ಯಾರ್ಥಿ ಮಲ್ಲಿಕಾರ್ಜುನ ತೆಂಗಿನಕಾಯಿ. ತರಗತಿ ಕೋಣೆಯ ಹಿಂಬಾಗದಿಂದ ಸಾಗೋಣವೆಂದು ಅನಿಲ್ ಅವರು ಮಾತಾನಾಡುತ್ತಾ ತೆರಳಿದಾಗ ವಿದ್ಯಾರ್ಥಿ ಮಲ್ಲಿಕಾರ್ಜುನ ಹಾಗೂ ರುದ್ರಯ್ಯ ನಿಗೆ ಹಿಡಿಸಲಾರದಾಗಿತ್ತು. ಕಾರಣ ಅವರೇ ಹೇಳುವಂತೆ 'ಸಾರ್ ಕಸ,ಪೇಪರ್,ಎಲ್ಲವನ್ನಾ ನಾವು ಕಿಟಕಿಯಿಂದ ಹೊರ ಹಾಕ್ತೀವಿ. ಈ ಸಾರ್ ಅದೇ 






ಗುರುವಾರ, ಜುಲೈ 25, 2013

ಪತ್ರಿಕೆ



                          ಸಂತೋಷ ಗುಡ್ಡಿಯಂಗಡಿಯ ಹೊಸ ಶಾಲೆಯ ಹೊಸ ಮಕ್ಕಳ ಪತ್ರಿಕೆ ರಾಜ್ಯದ ಎಲ್ಲ  ಶಾಲೆಯ ಮಕ್ಕಳ ಬರವಣಿಗೆಗಳನ್ನು ದಾಖಲಿಸುವ ಹೊಸ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಿ  ಮಕ್ಕಳ  ಹಿತವನ್ನು ಸೃಜನಶೀಲತೆಯ ಪ್ರಯತ್ನಕ್ಕೆ ಅಣಿ ಮಾಡಬೇಕಾಗಿದೆ.   

ರಂಗ ತಾಲೀಂ ಅವಧಿಯಲ್ಲಿ ತೆಗೆದ ಚಿತ್ರಗಳು













ರಂಗ ತಾಲೀಂ ಅವಧಿಯಲ್ಲಿ ತೆಗೆದ ಚಿತ್ರಗಳು 

ಸೋಮವಾರ, ಜುಲೈ 1, 2013

ಚಿಲ್ ಜರಿ ಗ್ರಾಮದ ಹಾಡುಗಳ

ಜಾನಪದದ ಹುಡುಕಾಟದಲ್ಲಿ ನಾವು ಸ್ಥಳೀಯ ಗ್ರಾಮಕ್ಕೆ  ಬೇಟಿ ನೀಡಿ ಅವರಲ್ಲಿ ಜಾನಪದ ಕುರಿತು ನಾವು ಮಾಡುವ ದಾಖಲೀಕರಣ ಕುರಿತು ಹೇಳಿದ  ಮಾತುಗಳು ಅಂಥಹ ಆಸಕ್ತಿಯನ್ನನೇನು  ಮೂಡಿಸುತ್ತಿರಲಿಲ್ಲ ಇದು ಕೇವಲ ತಮ್ಮ ಮನೆಯ ಶಾಸ್ತ್ರದ ಕಾರ್ಯಕ್ರಮಗಳಲ್ಲಿ ಹಾಡುವಂಥ ಹಾಡುಗಳನ್ನು ಇವರು ಚಿತ್ರೀಕರಣ ಮಾಡಿಕೊಂಡು ಏನನ್ನು ಮಾಡುತ್ತಾರೆ ಎಂಬ ಪ್ರಶ್ನೆಗಳು  ಊರಿನವರಲ್ಲಿ ಎಲ್ಲರಿಗೂ ಮೂಡುತ್ತಲೇ ಇದ್ದವು. ಆದರೆ ಆ ಹಳ್ಳಿಯ ಮುಗ್ಧ ಜನರಿಗೆ ತಿಳಿದಿಲ್ಲ ಜನಪದ ಹಿಂದಿನಿಂದಲೂ ಜನರ ಬದುಕನ್ನು ಕಟ್ಟುತ್ತಾ ಬಂದಿದ್ದು ಅವುಗಳ ಜ್ಞಾನ ಹೊಂದಿದ್ದ ತಲೆಮಾರು ಮುಂದಿನ ಹಂತಕ್ಕೆ ಸಾಗದೇ ಕೊನೆಗೊಳ್ಳುವ ಸ್ಥಿತಿಯು ನಿರ್ಮಾಣವಾಗಿರುವ ಈ ಸಂರ್ಧಭದಲ್ಲಿ ಹಿರಿಯರಿಂದ ಹಾಡುಗಳ ಜೊತೆಗೆ ಅನುಭವಗಳನ್ನು ಕೇಳಿ ತಿಳಿದುಕೊಂಡು ಅವನ್ನು ದಾಖಲೀಕರಣ ಮಾಡುವುದರೊಂದಿಗೆ ಇಂದಿನ  ಮಕ್ಕಳಿಗೆ ಶಿಕ್ಷಣದ ಜೊತೆಗೆ ಜಾನಪದದ ಹಲವು ಪ್ರಕಾರಗಳನ್ನು ವಿದ್ಯಾರ್ಥಿಗಳೊಂದಿಗೆ ಅವರ ಮನೆಗಳಿಗೆ ತೆರೆಳಿ ಕಲೆತುಕೊಳ್ಳಬೇಕಾಗಿದೆ. ವೇದಿಕೆ, ಸಮಾರಂಭ ಎಂದರೆ ಆ ಜೀವಗಳು ಮುಜುಗರ ಪಟ್ಟು ಹಾಡಲು ಹಿಂಜರಿಯುತ್ತಾರೆ. ಮಕ್ಕಳೊಂದಿಗೆ ಅವರನ್ನು ಮಾತಿಗೆ ಹಚ್ಚಿದರೆ ಆ ಪಾಲಕರು ತುಂಬಾ ಸಹಜವಾದ ಮಾತುಗಳನ್ನು ಹೊರ ಹಾಕಲು ಸಾಧ್ಯತೆಗಳು ಹೆಚ್ಚು. ಮನೆಯ ಕಾರ್ಯಕ್ರಮದ ಜೊತೆಗೆ ಸ್ತಳೀಯ ಊರಿನ ಆಚರಣೆಗಳಲ್ಲಿ, ಹಬ್ಬದ ಸಂಭ್ರಮದಲ್ಲಿ ಹಾಡುವ ಇವರು ಮಕ್ಕಳಿಗೆ ಕಲಿಯುವ - ಕಲಿಸುವ ವಾತಾವರಣವನ್ನು ಪಾಲಕರೊಂದಿಗೆ, ಶಿಕ್ಷಕರು ಒದಗಿಸಿ ಕೊಡಬೇಕಾಗಿದೆ. ಜೊತೆಗೆ ಮಕ್ಕಳು ಜಾನಪದದ ಕುರಿತು ಹಿರಿಯರಿಂದ ಅನುಭವಗಳನ್ನು ಪಡೆದು ಭವಿಷ್ಯತ್ ಗಾಗಿ ಕಟ್ಟಬೇಕಾಗಿದೆ. ನಮ್ಮ ಹತ್ತಿರದ   ಚಿಲ್ ಜರಿ   ಗ್ರಾಮ ದಲ್ಲಿ ಶ್ರೀಮತಿ ಪಾರ್ವತಿ , ಶ್ರೀಮತಿ ಶಾಂತಮ್ಮ , ಶ್ರೀಮತಿ  ಪಾರವ್ವ , ಶ್ರೀಮತಿ ಪದ್ಮವ್ವ ಹಾಗೂ ನಿರ್ಮಲ ಅವರು ನಮ್ಮ ವಿದ್ಯಾರ್ಥಿನಿಯ ಪ್ರಶ್ನೆಗಳಿಗೆ ಉತ್ತರಿಸುತ್ತಾ ತಮ್ಮ ಕಾಯಕದಲ್ಲಿ ಪ್ರತಿ ನಿತ್ಯ ಹಾಡುಗಳನ್ನು ಹಾಡುವುದು.  ತಮ್ಮ ಕಾಯಕ ನಿರಾತಂಕವಾಗಿ ಸಾಗಲು ಯಾವುದೇ ಒತ್ತಡ ಇರುವುದಿಲ್ಲ. ಎಂಬ ಮಾತುಗಳು ನಮ್ಮ ಮಕ್ಕಳಿಗೆ ಹಾಡುಗಳನ್ನು ಕೇಳಿಸುತ್ತಾ ಅನುಭವಗಳನ್ನು ಅಂಚಿಕೊಂಡರು. 
                          'ಎಷ್ಟು ಮಕ್ಕಳು ಇಂದು ಹಾಡುಗಳನ್ನು ಕಲಿಯಲು ನಮ್ಮ ಹತ್ತಿರ ಬರುತ್ತಿದ್ದಾರೆ.... ' ಎಂಬ ನಮ್ಮ ಹಿರಿಯರ ಪ್ರಶ್ನೆಗಳು ಮಕ್ಕಳಿಗೆ ಮೈಮೇಲೆ ಬಂದು ಎರಗಿದಂತಿತ್ತು. 




ಶನಿವಾರ, ಜೂನ್ 29, 2013

ಬುಧವಾರ, ಜೂನ್ 26, 2013

ಸೋಬಾನೆ ಹಾಡುಗಳು






ಮಾಸವ್ವ ಕಳಕಪ್ಪ ಕೃಷ್ಟಪ್ಪನವರು, ಗಂಗಮ್ಮ ಪುಂಡನ ಗೌಡ ಮಾಲೀಪಾಟೀಲ್, ಭೀಮವ್ವ ಹನಮಪ್ಪ ಮಂತ್ರಿ ಮತ್ತು  ಶಾಂತವ್ವ ಸಿದ್ದಪ್ಪ ಮೇಟಿ ಇವರೆಲ್ಲರನ್ನು ನಮ್ಮ ವಿದ್ಯಾರ್ಥಿನಿಗಳಾದ ಈರಮ್ಮ ಕೃಷ್ಟಪ್ಪನವರ ಹಾಗೂ ಮೇಘ ಬಡಿಗೇರ ಅವರು ತಮ್ಮ ಮನೆಯ ಹತ್ತಿರ ವ್ಯವಸ್ಥೆ ಮಾಡಿ ಅವರೊಂದಿಗೆ ಹಾಡಿದರು. ಮಕ್ಕಳು ದಿನಾಲೂ ಬಂದು 'ಹಾಡ ಬೇ ' ಅಂತ ಕಾಡ್ತನೇ ಇದ್ದರೂ. ನಮಗೆ ಸಮಯನೇ ಹೊಂದಾಣಿಕೆ ಆಗ್ತಾ ಇರಲಿಲ್ಲ. ಈಗ ಮಕ್ಕಳು ಹಾಡು ಬರಕೊಂಡು ಹಾಡ್ತಾ ಇದ್ರೆ ಖುಷಿ ಆಗ್ತಾದೆ. ಈಗ ಕಾರ್ಯ (ಸೀಮಂತ, ಹಿರೀಮಗಳು ) ಗಳಲ್ಲಿ ಹಾಡೋದಕ್ಕಷ್ಟೇ ಸೀಮಿತ ಆಗಿದೆ. ಕೆಲಸ ಸಮಯದಲ್ಲಿ ಯಾವಾಗಲೋ ಹಾಡೋದು ಆಗಿದೆ. ಮಕ್ಕಳು ಕಲಿತರೆಂದರೇ ನಮಗೂ ಸಂತೋಷ. ಇನ್ನೂ ಹೆಚ್ಚು ಹೆಚ್ಚು ಮಕ್ಕಳಿಗೆ ಹೇಳೋದರ ಜೊತೆಗೆ ಹಾಡುಗಳನ್ನು ಕಟ್ಟಬಹುದು. 

ಶುಕ್ರವಾರ, ಮೇ 31, 2013

ಮಕ್ಕಳ ಹೆಜ್ಜೆ ಕುಣಿತ






ಶಾಲಾ ಸರಸ್ವತಿ ಪೂಜೆ ಹಾಗೂ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೋಡುಗೆ 
ಸಮಾರಂಭದಲ್ಲಿ ಮಕ್ಕಳೊಂದಿಗೆ ಹಿರಿಯ ಶಿಕ್ಷಕರಾದ ಶ್ರೀ ಸಂಗನಗೌಡ ಪಾಟೀಲ್ ಗುರುಗಳು
 ಹಾಗೂ ದೈಹಿಕ ಶಿಕ್ಷಕರಾದ ಜಗದೀಶ್ ರವರು ಹೆಜ್ಜೆ ಕುಣಿತದ ಹಾಡಿಗೆ ಹೆಜ್ಜೆಯನ್ನು ಮಕ್ಕಳೊಂದಿಗೆ 
ಸೇರಿ ಹಾಕಿದರು. ಇಲ್ಲಿ ಮಕ್ಕಳೊಂದಿಗೆ ಯಾವುದೇ ಮುಜುಗರ ಪಡದೇ ಶಿಕ್ಷಕರು ಕುಣಿದು
 ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಸಾಹ ತುಂಬುವಲ್ಲಿ ವಹಿಸಿದ ಪಾತ್ರವನ್ನು ಕೊಂಡಾಡಲೇ ಬೇಕಾದದ್ದು. 
ನಮ್ಮ ಶಾಲೆಯಲ್ಲಿ ಐ.ಎಫ್ ಎ ವತಿಯಿಂದ "ಮಕ್ಕಳ ಹೆಜ್ಜೆಗಳು ಜಾನಪದದತ್ತ..." 
ಕಾರ್ಯಕ್ರಮದಲ್ಲಿ ಊರಿನ ಹಿರಿಯರಿಂದ ಮಕ್ಕಳು ದಿನಾಲೂ ಇಳೆ ಹೊತ್ತಿನಲ್ಲಿ 
ಕಾಡಿ-ಬೇಡಿ ಹೆಜ್ಜೆಯ ಕುಣಿತವನ್ನು  ಕಲಿತು ಬಂದು ಇಂದು 
ಎಲ್ಲ ಶಾಲಾ ಮಕ್ಕಳು-ಶಿಕ್ಷಕರ ಮುಂದೆ ಪ್ರದರ್ಶನ ನೀಡುತ್ತಾ 
ಸಂಭ್ರಮದಿಂದ ಹಿರಿಯ ವಿಧ್ಯಾರ್ಥಿಗಳ ಬೀಳ್ಕೋಡುಗೆಗೆ ಸುಂದರತೆಯನ್ನು ನೀಡಿದರು. 


ಸೋಬಾನೆ ಪದಗಳು




ಬುಧವಾರ, ಮೇ 1, 2013

ಜರ್ಮನಿಯ ಕ್ರಿಸ್ಟೋಫ್ ಬೇಟಿ

                                 ಮಕ್ಕಳ ಹೆಜ್ಜೆಗಳು  ಯೋಜನೆಯನ್ನು  ವೀಕ್ಷಿಸಲು IFA ಬೆಂಗಳೂರಿನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಪ್ರಕಾಶ ರವರೊಂದಿಗೆ ಜರ್ಮನಿಯ ಗೋಥೆ ಇನ್ ಸ್ಟಟ್ಯೂಟ್ ಮ್ಯಾಕ್ಸ್ ಮುಲ್ಲರ ಭವನದ ಶ್ರೀ ಕ್ರಿಸ್ಟೋಫ್ ಅವರು ನಮ್ಮ ಹಳ್ಳಿ ಜಹಗೀರ ಗುಡದೂರ ಶಾಲೆಗೆ ದಿನಾಂಕ 13.03.2013 ಬೇಟಿ ನೀಡಿ ಇಡೀ ದಿನ ನಮ್ಮೊಂದಿಗೆ ಕಳೆದರು. ಮಕ್ಕಳೊಂದಿಗೆ ಶಿಕ್ಷಕರು ಭಾಗವಹಿಸಿ ಸಂವಹನ ಮಾಡಲು ಅನುಕೂಲವಾಯಿತು. ವಿವಿಧ ದೇಶಗಳಲ್ಲಿ ಕಾರ್ಯ ನಿರ್ವಹಿಸಿದ ಕ್ರಿಸ್ಟೋಫ್ ಅವರಿಗೆ ಮಕ್ಕಳ ನೂರಾರು ಪ್ರಶ್ನೆಗಳಿಗೆ ಸರಳವಾಗಿ ಉತ್ತರವನ್ನು ನೀಡಿದರು.