ಗುರುವಾರ, ಡಿಸೆಂಬರ್ 27, 2018

ನಾಟಕ ಸಾಹಿತ್ಯ ಹಾಗೂ ಪ್ರಯೋಗಗಳು







ಪಠ್ಯ ಸಾಹಿತ್ಯವನ್ನು ನಾಟಕೀಯಗೊಳಿಸಿಕೊಂಡು ಅಭ್ಯಾಸ ಮಾಡಿದರೇ ಅದು ಶಾಶ್ವತವಾಗಿ ನಮ್ಮಲ್ಲಿ ಉಳಿಯುತ್ತದೆ. ಪಾಠವನ್ನು ಕುರುಡು ರೀತಿಯಲ್ಲಿ ಓದಿದರೆ ಅದರ ವ್ಯಾಲಿಡಿಟಿ ಕಮ್ಮಿ ಅದೇ ನಾವು ಓದುವ ಯಾವುದೇ ಸಾಹಿತ್ಯವನ್ನು ಮನಸ್ಸಿನಿಂದ ಅನುಭವಿಸಿ ಅಭ್ಯಾಸ ಮಾಡಿದರೇ ಅದು ಅಚ್ಚಿನಂತೆ ಮನಸ್ಸಲ್ಲಿ ಕಾಯಂ ಆಗಿ ಉಳಿದಿರುತ್ತದೆ. ಸಾಹಿತ್ಯ ಪ್ರಕಾರದಲ್ಲಿ ನಾಟಕ ಸಾಹಿತ್ಯ ಓದುಗರ  ಕಣ್ಣಿಗೆ ಕಟ್ಟುವಂತೆ ಮಾಡುತ್ತದೆ. ನಮ್ಮ ಪಠ್ಯಗಳನ್ನೇ ನಾವು ಅಭಿನಯ ಮೂಲಕ ಅಭ್ಯಾಸ ಮಾಡಿದರೆ ಅದು ಮಾಡುವವರ ಹಾಗು ನೋಡುವವರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿದು ಬಿಡುತ್ತದೆ. ಗಾಂಧೀಜಿ ಅವರಿಗೆ ಸತ್ಯ ಹರಿಶ್ಚಂದ್ರ ಹಾಗು ಶ್ರವಣ ಕುಮಾರ ನಾಟಕಗಳು ಅವರ ಇಡೀ ಜೀವನವನ್ನೇ ಬದಲಾಯಿಸಿ ಬಿಟ್ಟಿತು. ಹೀಗಾಗಿ ನಾಟಕ ಸಾಹಿತ್ಯ ಹಾಗೂ ಪ್ರಯೋಗಗಳು ಮಕ್ಕಳನ್ನು ತಮ್ಮೊಳಗೆ ತಮ್ಮನ್ನು ವಿಮರ್ಶಿಸಿ ಕೊಳ್ಳುವಂತೆ ಮಾಡುತ್ತದೆ. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher