ಭಾನುವಾರ, ಡಿಸೆಂಬರ್ 30, 2018

ಶಾಲಾ ಶೈಕ್ಷಣಿಕ ಪ್ರವಾಸ


ಶ್ರೀ ತಿಪ್ಪಣ್ಣ  ರಾಮದುರ್ಗ
            ಸ ಶಿ(ಕಲಾ ಕನ್ನಡ)
ಸ ಪ್ರೌ ಶಾಲೆ ಜಹಗೀರ ಗುಡದೂರ
ಸೆಲ್ ನಂಬರ್-9480756727.


2018-19 ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸ ನನ್ನ ಶಾಲಾ ಜೀವನದ ನೆನಪುಗಳನ್ನು ಮರುಕಳಿಸುವದರ ಜೊತೆಗೆ ಅಚ್ಚಳಿಯದೆ ಉಳಿದಿದ್ದು ಈಗ ಇತಿಹಾಸ.......
ನಾಲ್ಕು ದಿನಗಳ ಪ್ರವಾಸ ದಿನಾಂಕ ೨೪/೧೨/೨೦೧೮ ರಂದು ರಾತ್ರಿ ೯ಗಂಟೆಗೆ ಪ್ರಾರಂಭವಾಯಿತು. ೧೪೫ ವಿದ್ಯಾರ್ಥಿಗಳ ಜೊತೆಗೆ ೧೨ ಜನ ಶಾಲಾ ಸಿಬ್ಬಂಧಿಯನ್ನು ಕರೆದೊಯ್ಯಲು ಗಜೇಂದ್ರಗಡ ಘಟಕ ದಿಂದ ೨ ಬಸ್ಸುಗಳು ಮತ್ತು ಹನಮನಾಳದಿಂದ ಮಿನಿ ಬಸ್ ಬಂದವು.
ನಮಗೆ ವಹಿಸಿದ ಜವಾಬ್ದಾರಿಯಂತೆ ಊಟದ ಸಾಮಾಗ್ರಿಗಳನ್ನು ವಾಹನಗಳಲ್ಲಿಟ್ಟು ವಿದ್ಯಾರ್ಥಿಗಳನ್ನು ವಾಹನಗಳಲ್ಲೆರಿಸಿ ನನಗೆ ಹಂಚಿಕೊಟ್ಟ ಮಿನಿ ಬಸ್ಸನೇರಿ ವಿದ್ಯಾರ್ಥಿಗಳ ರಸಭರಿತ ಉತ್ಸಾಹದೊಂದಿಗೆ ಪ್ರಯಾಣ ಆರಂಭವಾಯಿತು.
ನಮ್ಮ ಪ್ರಯಾಣದಲ್ಲಿ ಚಿಕ್ಕನಾಯಕನಹಳ್ಳಿಯ ಹತ್ತಿರ ಬೆಳಗಿನ ಜಾವ ೪ಗಂಟೆಗೆ ಚಹ ಸೇವಿಸಿ ಪ್ರಯಾಣ ಮುಂದುವರೆಸಿದೆವು...
ಮಾರ್ಗ ಮದ್ಯದಲ್ಲಿ ನೀರಿನ ಅನುಕೂಲ ವಿರುವ ಕಡೆ ನಿಲ್ಲಿಸಿ ಬೆಳಗಿನ ಕರ್ಮಗಳನ್ನು ಮುಗಿಸಿಕೊಂಡು ಕಾಲ ಭೈರವೇಶ್ವರ ದರ್ಶನ ಪಡೆಯಲು ನಾಡಿನ ಪ್ರಮುಖ ದಾರ್ಮಿಕ, ಶೈಕ್ಷಣಿಕ ಶಕ್ತಿ ಕೇಂದ್ರವಾದ ಆದಿಚುಂಚನಗಿರಿ ತಲುಪಿದಾಗ ೭ಗಂಟೆ ೪೫ನಿಮಿಷವಾಗಿತ್ತು.
ಬೆಟ್ಟದ ಮೇಲಿರುವ ಕಾಲ ಬೈರವನ ದರ್ಶನ ನಮ್ಮೆಲ್ಲರನ್ನು ಮಂತ್ರ ಮುಗ್ದರನ್ನಾಗಿಸಿತು.....
   ದೇವಾಲಯದ ಇತಿಹಾಸವನ್ನು ಅಲ್ಲಿನ ಪ್ರಮುಖರು ಅಚ್ಚು ಕಟ್ಟಾಗಿ ತಿಳಿಸಿದರು. ನಮ್ಮ ವಿದ್ಯಾರ್ಥಿಗಳು ಆಸಕ್ತಿಯಿಂದ ತಿಳಿದುಕೊಂಡರು.ಅಷ್ಟೋತ್ತಿಗೆ ಉಪಹಾರದ ಸಮಯವಾಗಿದ್ದರಿಂದ ದೇವಾಲಯದ ಭೋಜನ ಮಂದಿರಕ್ಕೆ ತೆರಳಿ "ಪುಳಿಯೊಗರೆ" ಯನ್ನು ಸವಿದು, ನಾಡಿನ ಅಮೂಲ್ಯ ರತ್ನಗಳಾದ
ಸರ್ ಎಂ ವಿಶ್ವೇಶ್ವರಯ್ಯ
ಪರಮ ಪೂಜ್ಯ ಶ್ರೀ ಶಿವಕುಮಾರ ಸ್ವಾಮಿಗಳು ಮತ್ತು ಬಾಲ ಗಂಗಾಧರ ನಾಥ ಸ್ವಾಮಿಗಳ ಜೀವನ ಮತ್ತು ಸಾಧನೆಗಳನ್ನು ತಿಳಿದುಕೊಂಡು ಮುಂದಿನ ಸ್ಥಳ ಎಡೆಯೂರು ಸಿದ್ಧಲಿಂಗೇಶ್ವರನ ದರ್ಶನ ಪಡೆಯಲು ನಮ್ಮ  ,ನಮ್ಮ ವಾಹನಗಳನ್ನೇರಿ ಹೊರಟೆವು........
ಮುಂದುವರೆಯುವದು......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher