ಮಂಗಳವಾರ, ಡಿಸೆಂಬರ್ 18, 2018

ಪಟ್ಯ ನಾಟಕ 1

ರಂಗಭೂಮಿ ವಿಸ್ತಾರವಾದದ್ದು. ಒಂದು ನಾಟಕ ಪ್ರದರ್ಶನವನ್ನು ನಾವು ಕೇವಲ ಮನರಂಜನೆ ಎಂದು ಕಾಣುವುದು ಒಂದಡೇ ಆದರೆ, ಬೌದ್ದಿಕ ಹಾಗೂ ಮಾನಸಿಕ ಸಬಲತೆಯ ದೃಷ್ಟಿಯಲ್ಲಿಯೂ ಇಂದು ನಾವು ಕಾಣಬೇಕಾಗಿದೆ. ಮಕ್ಕಳ ಜೊತೆಗೆ ದಿನಪೂರ್ತಿ ಇರುವ ನಮಗೆ ಅವರ ಮನೋವಿಕಾಸಕ್ಕೆ ಬೇಕಾದ ರೀತಿಯಲ್ಲಿ ಚಿತ್ರಿಸಬಹುದಾಗಿದೆ. ರಂಗಭೂಮಿಯಲ್ಲಿ ಕಥಾ ವಿಷಯವನ್ನು ನಾವು ರಂಗಕ್ಕೆ  ಪ್ರದರ್ಶನ ರೂಪದಲ್ಲಿ ಪ್ರೇಕ್ಷಕರ ಮುಂದೆ ಇಡುತ್ತೇವೆ. ಅದೇ ರೀತಿ ನಮ್ಮ ಪಟ್ಯದ ಪಾಠವೊಂದನ್ನು ನಾವು ಪ್ರಯೋಗಕ್ಕೆ ಅಣಿ ಮಾಡುವಾಗ ಒಂದಿಷ್ಟು ಸಣ್ಣ ಟಿಪ್ಪಣಿಗಳನ್ನು ಮಾಡಿಕೊಂಡರೇ ಒಳ್ಳೆಯದು.
ಪ್ರದರ್ಶನ ಪೂರ್ವದಲ್ಲಿ ನಡೆಯುವ ಪ್ರಕ್ರಿಯೆಯೆ ಸ್ಮರಣೀಯವಾದದ್ದು. ಪಾಠವನ್ನು ಅಭ್ಯಾಸ ಮಾಡುವಾಗ  - ಬರುವ ಒಂದಿಷ್ಟು ಪಾತ್ರ, ಘಟನೆ ಮತ್ತು ಸಂದರ್ಭಗಳನ್ನು ನೆನಪಲ್ಲಿ ಇಟ್ಟುಕೊಂಡು ಬರೆದು, ಮೌಖಿಕವಾಗಿ ಹೇಳುವ ಪರಿ. ಆದರೆ ಪ್ರದರ್ಶನದ ದೃಷ್ಟಿಯಲ್ಲಿ ನಡೆಯುವ ಪ್ರಕ್ರಿಯೆ ಅದ್ಬುತವಾದದ್ದು. ಮಗುವಿಗೆ ಕಥೆ ಅರ್ಥವಾಗುವುದರ ಜೊತೆಗೆ ಅದನ್ನು ಪ್ರತಿ ಸಂದರ್ಭದಲ್ಲಿಯು ಭಾವನಾತ್ಮಕವಾಗಿ ತೊಡಗಿಸುವಂಥ ಕ್ರಿಯೆ. ಸ್ಥಳವನ್ನು ತನ್ನ ಮನಸ್ಸು - ಕಣ್ಣಲ್ಲಿ ತಂದುಕೊಂಡು ತಾನು ಸಂಪೂರ್ಣ ಪಾತ್ರವಾಗುವ ಪ್ರಕ್ರಿಯೆ ಇದೆಯಲ್ಲ ಅದು ಮಗುವಿನ ಜೊತೆ ಜೊತೆಗೆ ಕಥೆಯು ಎಲ್ಲರೊಳಗೆ ಜೀವಂತವಾಗುತ್ತೆ.


(ಮುಂದುವರೆಯುವುದು...)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher