ಗುರುವಾರ, ಜುಲೈ 26, 2018

ಸ್ವಚ್ಛ ಭಾರತ ಅಭಿಯಾನ

ದಿನಾಂಕ :26.07.2018      ದಿನ : 04 

" ಸ್ವಚ್ಛ ಭಾರತ ಸಪ್ತಾಹ ಅಭಿಯಾನ "

ಇಂದು ನಾಲ್ಕನೇ ದಿನ ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಿಗೆ, ಬಿಸಿಯೂಟ ಸಿಬ್ಬಂದಿ ಹಾಗೂ ಪರಿಚಾರಕರಿಗೆ ಸ್ವಚ್ಛತೆ ಕುರಿತು ಮಾಹಿತಿ ತಿಳಿಸುತ್ತಾ ಮಕ್ಕಳ ಆರೋಗ್ಯದ ಕುರಿತು ಗಮನ ನೀಡುವ ಬಗ್ಗೆ ಸಂಕ್ಷಿಪ್ತವಾಗಿ ಶಿವಪ್ಪ ಇಲಾಳ ಅವರಿಂದ ವಿವರಿಸಲಾಯಿತು. ಜೊತೆಗೆ ಸಸಿ ನೆಡುವ ಕಾರ್ಯವನ್ನು ಜರುಗಿಸಲಾಯಿತು.  ಸಭೆಯಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಭೀಮರಾವ್ ಸಾಳುಂಕಿಯವರು ಸದಸ್ಯರಾದ ಮಲ್ಲಿಕಾರ್ಜುನ ಹೆಬ್ಲಿ, ಮುತ್ತಣ್ಣ, ಅಂದಪ್ಪನವರು, ಹನುಮಂತ ಅಡುಗೆ ಸಿಬ್ಬಂದಿಗಳಾದ ಬಸಮ್ಮ, ಶಾಂತಮ್ಮ ಹಾಗೂ ಪುಷ್ಪ ಅವರು ಪರಿಚಾರಕರಾದ ಯಂಕಮ್ಮ ಅವರೆಲ್ಲರೂ ಭಾಗವಹಿಸಿದ್ದರು.

ಶಿಕ್ಷಕರಾದ ಸಂಗನಗೌಡ ಪಾಟೀಲ , ಶಿವಪ್ಪ ಇಲಾಳ, ಪ್ರಶಾಂತ ಕಟ್ಟಿ , ಗುರುರಾಜ , ಶ್ರೀದೇವಿ ಗುಳಬಾಳ ಹಾಗೂ ಇಮಾಂಬಿ ಅವರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher