ಬುಧವಾರ, ಜುಲೈ 18, 2018

ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲರ ಪಾತ್ರ



 ಸರ್ದಾರ್ ವಲ್ಲಭಭಾಯಿ ಪಟೇಲ್ ರವರು ನಮ್ಮ ರಾಷ್ಟ್ರ ನಾಯಕರಾಗಿದ್ದಾರೆ ಇವರು ಭಾರತದ ಸ್ವಾತಂತ್ರಗಳಿಸಲು ಹೋರಾಡಿದ ಮಹಾ ನಾಯಕರಾಗಿದ್ದಾರೆ ಅದರಲ್ಲಿ ಹೈದರಾಬಾದ್-ಕರ್ನಾಟಕ ವಿಮೋಚನಾ ದಿನಾಚರಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಇವರು ಬಾಲ್ಯದಲ್ಲಿಯೇ ದೇಶಪ್ರೇಮ ಮತ್ತು ದೇಶದ ಅಭಿಮಾನದ ಭಾವನೆಯನ್ನು ಬೆಳೆಸಿ ಕೊಂಡರು. ಇವರನ್ನು ಭಾರತದಲ್ಲಿ ಉಕ್ಕಿನ ಮನುಷ್ಯ ಎಂದು ಕರೆದು ಗೌರವಿಸಲಾಯಿತು. ಇವರ ತಂದೆ ಜವರೇ ಬಾಯಿ ಪಾಟೀಲ್ ತಾಯಿ ರಾಧಾಬಾಯಿ ಸರ್ದಾರ್ ವಲ್ಲಭಭಾಯಿ ಪಟೇಲರು ಗುಜರಾತಿನ ನದಿಯ ಎಂಬ ಗ್ರಾಮದಲ್ಲಿ  1875 ಅಕ್ಟೋಬರ್ 31ರಂದು ಜನಿಸಿದರು.

  ವಿಷಯ ನಿರೂಪಣೆ : 1947 ಆಗಸ್ಟ್ 14ರಂದು ಭಾರತಕ್ಕೆ ಮಧ್ಯರಾತ್ರಿ ಸ್ವಾತಂತ್ರ್ಯ ದೊರೆಯಿತು ತುಂಡಾಯಿತು ಬ್ರಿಟಿಷರು ಭಾರತವನ್ನು ಬಿಟ್ಟು ಹೋಗುವಾಗ ಭಾರತದೊಂದಿಗೆ ವಿಲೀನವಾಗಬಹುದು ಅಥವಾ ಪಾಕಿಸ್ತಾನಕ್ಕಾದರೂ ಹೋಗಬಹುದು ಅಥವಾ ನೀವೇ ಸ್ವಂತ ರಾಜ್ಯಾಡಳಿತವನ್ನು ನಡೆಸಬಹುದು ಎಂದು ಹೇಳಿದರು. ಆಗ ಕೆಲವು ಜನರಿಗೆ ತುಂಬಾ ಹುರುಪಾಯಿತು. ಆದರೆ ಭಾರತದ ನಾಡಿಬಡಿತವನ್ನು ಅರ್ಥ ಮಾಡಿಕೊಂಡಂತಹ ಕೆಲವು ಸಂಸ್ಥಾನಗಳು ಭಾರತದ ಒಕ್ಕೂಟದೊಂದಿಗೆ ವಿಲೀನಗೊಂಡವು. ಆದರೆ ಬಹಳಷ್ಟು ಸಂಪದ್ಭರಿತವಾದ ಹೈದರಾಬಾದ್-ಕರ್ನಾಟಕ ಮಾತ್ರ ವಿಲಿನಗೊಳ್ಳಲಿಲ್ಲ. 216 ವರ್ಷಗಳ ಕಾಲ ಆಳಿದ ಆಶಿಬ್ ಜಾಯಿ ಮನೆತನದ ಉಸ್ಮಾನ್ ಅಲಿಖಾನ್ ಜಂಗ್ ಬಹದ್ದೂರ್ ಎಂಬ ಕೊನೆಯ ಅರಸ ಹೈದರಾಬಾದ್-ಕರ್ನಾಟಕಗಳಿಗಿದ್ದನು. ದುಷ್ಟರ ಮಾತಿಗೆ ಮರುಳಾದ ಅಂತಹ ಉಸ್ಮಾನ್ ಅಲಿಖಾನ್ ಜಂಗ್ ಬಹುದ್ದೂರ್ ರವರನ್ನು ನಿಜಾಂ ಆಡಳಿತ ಎಂದು ಕರೆಯುವರು. ಅದಕ್ಕೆ ನವಾಬ್ ಆಡಳಿತವೆ ಎಂದು ಕರೆಯುವರು ಇವರ ಸಂಸ್ಥಾನಗಳಲ್ಲಿ 16 ಜಿಲ್ಲೆಗಳಲ್ಲಿ ಒಳಪಟ್ಟಿದ್ದವು ಆಂಧ್ರ ಪ್ರದೇಶದ ಜಿಲ್ಲೆಗಳು ಮಹಾರಾಷ್ಟ್ರದ ಐದು ಜಿಲ್ಲೆಗಳು ಹಾಗೂ ಕರ್ನಾಟಕದ 3 ಜಿಲ್ಲೆಗಳು ಒಟ್ಟು 16 ಜಿಲ್ಲೆಗಳು ಒಳಪಟ್ಟಿದ್ದವು. ಆಗಿನ ಪ್ರಧಾನ ಮಂತ್ರಿಗಳಾಗಿದ್ದ ಪಂಡಿತ್ ಜವಾಹರ್ ಲಾಲ್ ನೆಹರುರವರು ಮತ್ತು ಗೃಹ ಮಂತ್ರಿಗಳಾದ ಸರ್ದಾರ್ ವಲ್ಲಭಭಾಯಿ ಪಟೇಲರು ನಿಜಾಮಿಗೆ ನೀನು ಭಾರತ ಒಕ್ಕೂಟದೊಂದಿಗೆ ವಿಲೀನವಾಗು ಎಂದು ಎಷ್ಟೇ ಹೇಳಿದರೂ ಅವರಿಗೆ ಸ್ವಲ್ಪವೂ ಕಿಮ್ಮತ್ತು ಕೊಡಲಿಲ್ಲ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher