ಶುಕ್ರವಾರ, ಫೆಬ್ರವರಿ 13, 2015

ಹೈ.ಕ.ಪ್ರದೇಶದ ನಿವಾಸಿಗಳು ಅನುಚ್ಛೇದ 371 ಜೆ ಮೀಸಲಾತಿ ಪಡೆಯುವ ಬಗೆ

*   ಹೈದ್ರಾಬಾದ್ ಕರ್ನಾಟಕದ ಪ್ರದೇಶಕ್ಕೆ ಸಂಬಂಧಿಸಿದ ಆರೂ ಜಿಲ್ಲೆಗಳ, ಆಯಾ ಜಿಲ್ಲೆಯ ಕಂದಾಯ ಉಪ               
     ವಿಭಾಗಾಧಿಕಾರಿಗಳು (ಎ.ಸಿ) ಯವರು " ಅರ್ಹತಾ ಪ್ರಮಾಣ ಪತ್ರ " ವನ್ನು ನೀಡುವ ಸಕ್ಷಮ ಪ್ರಾಧೀಕಾರವಾಗಿದ್ದಾರೆ.

*   ಆರು ಜಿಲ್ಲೆಯನ್ನು ಹೊರತುಪಡಿಸಿ ಅನ್ಯರಿಗೆ ಈ ಪ್ರಮಾಣ ಪತ್ರ ಪಡೆಯುವ ಹಕ್ಕು ಇರುವುದಿಲ್ಲ.

*  ಸಕ್ಷಮ ಪ್ರಾಧಿಕಾರ ನಿಗದಿಪಡಿಸಿದ ನಿಯಮಾನುಸಾರ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿ ಸ್ಥಳೀಯರು ಈ "ಅರ್ಹತಾ ಪ್ರಮಾಣ ಪತ್ರ " ಪಡೆದುಕೊಂಡು ವಿಶೇಷ ಸೌಲಭ್ಯ ಪಡೆಯಲು ಹಕ್ಕನ್ನು ಹೊಂದಿದ್ದಾರೆ.

     ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ತುಂಬಾ ಪಾರದರ್ಶಕವಾಗಿ ಕಾರ್ಯ ನಡೆಯುತ್ತಾ ಇದೆ. ಶ್ರೀ ಮಂಜುನಾಥ ಕೊಪ್ಪಳದ ಸಕ್ಷಮ ಪ್ರಾಧಿತಾರಿ /AC ಸಾಹೇಬರು. ಚನಾಗಿ ಮತ್ತು ಕಟ್ಟು ನಿಟ್ಟಿನಿಂದ ಕೆಲಸ ನಿರ್ವಹಿಸುತ್ತಾ ಅರ್ಹರಿಗೆ ಮಾತ್ರ ಸಿಗುವಂತಾಗುತ್ತಿದೆ.

 ೧. ಅನುಬಂಧ - A     ಅರ್ಹತಾ ಪ್ರಮಾಣಪತ್ರ ಪಡೆಯುವುದು AC ಯಿಂದ.

 ೨. ಅನುಬಂಧ -  B     ವಾಸಸ್ಥಳ ಪ್ರಮಾಣಪತ್ರ ಪಡೆಯುವುದು ತಹಶೀಲ್ದಾರರಿಂದ.

 ೩. ಅನುಬಂಧ - C     ವ್ಯಾಸಂಗಪ್ರಮಾಣ ಪತ್ರ ಪಡೆಯುವುದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ.

೪. ಅನುಬಂಧ - D     ಸ್ವಗ್ರಾಮ ಪ್ರಮಾಣಪತ್ರ - ಸರ್ಕಾರಿ ನೌಕರಿರಗೆ ಅವರ ನೇಮಕಾತಿ ಪ್ರಾಧಿಕಾರದಿಂದ (SR ನಂತೆ)

೫. ಅನುಬಂಧ - E    ಸಿಂಧುತ್ವ ಪ್ರಮಾಣಪತ್ರ ಜಿಲ್ಲಾ ತ್ರಿಸದಸ್ಯ ಕಮಿಟಿಯಿಂದ ( DC, CEO, SP )

         [ ಸಿಂಧುತ್ವ - ಅರ್ಹತಾ ಪ್ರಮಾಣ ಪತ್ರದ ಸರಿತನದ ಪರಿಶೀಲನೆಯೇ ಸಿಂಧುತ್ವ ]

* ಸರಕಾರಿ ನೌಕರರು 01.01.2013 ಕ್ಕಿಂತ ಮೊದಲು ಅಥಾವ 10 ವರ್ಷ ಆರೂ ಜಿಲ್ಲೆಯ ವ್ಯಾಪ್ತಿಯಲ್ಲಿ ವಾಸವಾಗಿದ್ದರೆ ಅವರು ಅರ್ಹರು ಎಂದು ಈ ಮೊದಲು ತಪ್ಪಾಗಿ ನಮೂದಾಗಿತ್ತು. ಆದರೆ ಅವರಿಗೆ ಈ ಅವಕಾಶ ಇಲ್ಲ ಮತ್ತು ಅವರು ಅರ್ಹರೂ ಅಲ್ಲ. ( ದಿ: 16.01.2015 & 18.01.2015 ರ ವಿಜಯ ಕರ್ನಾಟಕ ಪತ್ರಕೆ ನೋಡಬಹುದು.)

 ವ್ಯಾಪ್ತಿಗೆ ಒಳಪಡದವರು ಈಗಾಗಲೇ ಪ್ರಮಾಅಣಪತ್ರ ಪಡೆದುಕೊಂಡಿದ್ದರೆ ಮರಳಿ ಸಕ್ಷಮ ಪ್ರಾಧಿಕಾರಕ್ಕೆ ಹಿಂದುರುಗಿಸಬೇಕು. ಇಲ್ಲದಿದ್ದರೆ ಶಿಕ್ಷಾರ್ಹರು ಎಂದು ಆದೇಶ ಮಾಡಿದ್ದಾರೆ.

ಪ್ರಮಾಣ ಪತ್ರ ಪಡೆಯಲು ಅಗತ್ಯ ದಾಖಲೆಗಳು

1. ವರ್ಗಾವಣೆ ಪ್ರಮಾಣಪತ್ರ
2. ಚುನಾವಣಾ ಗುರುತಿನ ಪತ್ರ
3. ಆಧಾರ 
4. ವಂಶಾವಳಿ
5. ಪಹಣಿ/ಸ್ಥಿರಾಸ್ಥಿ/ಮನೆ ಉತಾರ
6. ವಾಸಸ್ಥಳ 
7. ವ್ಯಾಸಂಗ ಪ್ರಮಾಣಪತ್ರ

ಶಿವಪ್ಪ ಆರ್.ಇಲಾಳ
ಶಿಕ್ಷಕರು
ಸರಕಾರಿ ಪ್ರೌಡಶಾಲೆ
ಜಹಗೀರಗುಡದೂರ
ಕರೆಗಾಗಿ : 9731981167