ಶುಕ್ರವಾರ, ಫೆಬ್ರವರಿ 24, 2012
ಗುರುವಾರ, ಫೆಬ್ರವರಿ 23, 2012
ಮಂಗಳವಾರ, ಫೆಬ್ರವರಿ 21, 2012
ಅರಳು ಮೊಗ್ಗು
ಕವಿತೆ ಬರೆಯುವುದು ಪಾಂಡಿತ್ಯ ತೋರಿಸಲಿಕ್ಕಲ್ಲ
ಭಾವನೆಗಳನ್ನು ವ್ಯಕ್ತ ಪಡಿಸಲಿಕ್ಕೆ
---ಜಿ.ಕೆ.ಹೆಗಡೆ.
( ಕಾರ್ನಾಡರ "ಆಡಾಡತ ಆಯುಷ್ಯ" ದಿಂದ )
ಕಾವ್ಯ ಬಿ.ಬಿಂಗಿಕೊಪ್ಪದ
ನಮಗೆ ನಾಟಕ ಕಲಿಸಲು ಆಗಮಿಸಿದ ಶ್ರೀ ಗುರುರಾಜ ನಿರ್ದೇಶಕರಿಗೆ ಅಭಿನಂದನ ಸಲ್ಲಿಸ ಬಯಸುವೆ. ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ೧೫ ದಿನಗಳ ತರಬೇತಿ ಪಡೆದು ಆರು ವಿವಿಧ ಶಾಲೆಗಳಲ್ಲಿ ಪ್ರದರ್ಶಿಸಿದ ನಾಟಕ " ಕತ್ಲೆ ನಗರೀ ತಲೆಕೆಟ್ ರಾಜ " ನಮಗೊಂದು ಅದ್ಭುತ ಅನುಭವ ನೀಡಿತು.
ತರಬೇತಿ ಸಮಯದಲ್ಲಿ ಮುಖವಾಡ ತಯಾರಿಕೆ, ರಂಗಾಟ, ಬಣ್ಣದ ಆಟ, ಆಡಿಸುತ್ತಾ ನಾಟಕ ಕಟ್ಟಿ ಕೊಟ್ಟಿದ್ದು ತಿಳಿದೇ ನಾವು ನಾಟಕದ ಒಳಗೆ ಪ್ರವೇಶ ಮಾಡಿದ್ದೆವು. ನಾಟಕಗಳ ಪ್ರದರ್ಶನ ನಂತರ ನಾವು
ನಮ್ಮ ಯೋಚನೆ, ನಡವಳಿಕೆ, ಇತರರೊಂದಿಗೆ ಸಂಬಂಧದಲ್ಲಿ ಆದ ಬದಲಾವಣೆ ಊಹಿಸದಂತೆ ಪರಿವರ್ತನೆ ಆದದ್ದು. ಇಂಥಹ ಒಂದು ವಿಷಯ ನಮ್ಮ ಪ್ರತಿಯೊಂದು ಶಾಲೆಯಲ್ಲಿ ದೊರಕಿದರೆ ನಾವು ನಾಡಿನ ಆದರ್ಶ ಸತ್ ಪ್ರಜೆ ಆಗಬಹುದು.
ಶನಿವಾರ, ಫೆಬ್ರವರಿ 18, 2012
ಕಾರ್ನಾಡರಿಗೆ ಒಂದು ಪತ್ರ
ಗಿರೀಶ್ ಕಾರ್ನಾಡ ರವರ ಆತ್ಮ ಕಥೆಯನ್ನು ಓದಿ ಕೊಂದು ಅವರಿಗೆ ಪ್ರತಿಕ್ರಿಯಿಸ ಬೇಕೆಂಬ ಉತ್ಸುಕತೆಯಲ್ಲಿ ಕಾರ್ನಾಡ ರಿಗೆ ಹೀಗೆ ಕೆಳಗಿನಂತೆ ಬರೆದಾಗ
ಮಿ|| ಜಂಟಲ್ ಮ್ಯಾನ್
ಗುರುರಾಜ್
ಅದಕ್ಕೆ ಕಾರ್ನಾಡರು ಪ್ರತಿಕ್ರಿಯಿಸಿದ್ದು
ಗಿರೀಶ್ ಕಾರ್ನಾಡ್
ಮಿ|| ಜಂಟಲ್ ಮ್ಯಾನ್
"ಆಡಾಡತ ಆಯುಷ್ಯ " ದಲ್ಲಿ ನಿಮ್ಮ ಪಯಣವನ್ನು ಓದಿ ಹೇಗೆ ಪ್ರತಿಕ್ರಿಯಿಸ ಬೇಕೆಂದು ತಿಳಿಯದೆ ನನ್ನಿಂದ ಶಬ್ದಗಳೇ ಹೊರಡುತ್ತಿಲ್ಲ. ನಿಮ್ಮ ಈ ಬರವಣಿಗೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಕಾರಂತರ ಪಲಾಯನ , ನಿಮ್ಮ oup ನಲ್ಲಿ , ಚಿತ್ರಪಟ , ಬರವಣಿಗೆ ಹೀಗೆ ಎಲ್ಲವೂ ನನ್ನನ್ನು ಕಾಡುತ್ತವೆ. ಈ ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆ. ಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿ ಪಯಣವಂತು ನಡದೇ ಇದೆ.
ಕ್ಷಮಿಸಿ ನಾನು ನಿಮ್ಮ ಮಗಳ ವಯಸ್ಸಿನವನು. ಭರವಸೆಯನ್ನು ಗಟ್ಟಿಯಾಗಿಯೇ ಇಟ್ಟುಕೊಂಡಿದ್ದೇನೆ. ನಿಮ್ಮ ಈ ಪುಸ್ತಕದ ಓದು ನನ್ನನ್ನು ಇನ್ನು ಹುರಿಗೊಳಿಸಲು ಸಹಾಯಕವಾಗಿದೆ ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನ" ಕಾಯುತ್ತೇನೆ. "
ಗುರುರಾಜ್
ಪ್ರಿಯ ಗುರುರಾಜ್,
ನಿಮ್ಮ ಪತ್ರಕ್ಕಾಗಿ ಆಭಾರಿ. "ಆಡಾಡತ ಆಯುಷ್ಯ " ಓದಿ ನಿಮಗೆ ಖುಷಿ ಯಾಯಿತೆಂದು ತಿಳಿದು ಸಂತೋಷವಾಯಿತು.
ಶುಭಾಶಯಗಳೊಂದಿಗೆ
ಶುಕ್ರವಾರ, ಫೆಬ್ರವರಿ 17, 2012
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)