ಶನಿವಾರ, ಫೆಬ್ರವರಿ 18, 2012

ಕಾರ್ನಾಡರಿಗೆ ಒಂದು ಪತ್ರ

                                 ಗಿರೀಶ್ ಕಾರ್ನಾಡ ರವರ ಆತ್ಮ ಕಥೆಯನ್ನು ಓದಿ ಕೊಂದು ಅವರಿಗೆ ಪ್ರತಿಕ್ರಿಯಿಸ ಬೇಕೆಂಬ ಉತ್ಸುಕತೆಯಲ್ಲಿ  ಕಾರ್ನಾಡ ರಿಗೆ  ಹೀಗೆ ಕೆಳಗಿನಂತೆ  ಬರೆದಾಗ 
                   
  ಮಿ|| ಜಂಟಲ್ ಮ್ಯಾನ್                                                                                                                            
                                        "ಆಡಾ ಆಯುಷ್ಯ " ದಲ್ಲಿ ನಿಮ್ಮ ಪಯಣವನ್ನು ಓದಿ ಹೇಗೆ ಪ್ರತಿಕ್ರಿಯಿಸ ಬೇಕೆಂದು ತಿಳಿಯದೆ ನನ್ನಿಂದ ಶಬ್ದಗಳೇ ಹೊರಡುತ್ತಿಲ್ಲ. ನಿಮ್ಮ ಬರವಣಿಗೆಯಲ್ಲಿ ನನ್ನನ್ನು ನಾನು ಕಂಡುಕೊಳ್ಳುತ್ತಿದ್ದೇನೆ. ಕಾರಂತರ ಪಲಾಯನ , ನಿಮ್ಮ oup ನಲ್ಲಿ , ಚಿತ್ರಪಟ , ಬರವಣಿಗೆ ಹೀಗೆ ಎಲ್ಲವೂ ನನ್ನನ್ನು ಕಾಡುತ್ತವೆ. ಮೊದಲು ಕಾರಂತರನ್ನು ಓದಿ ಕೊಂಡು ನಾನು ಓಡಿದ್ದೆ. ಆದರೆ ಒಳ್ಳೆ ಸ್ನೇಹಿತನ ಮನೆಯಲ್ಲಿ ಆಶ್ರಯ ಪಡೆದು ಅಂದು ಕೊಂಡ ಕ್ಷೇತ್ರದಲ್ಲಿ ಸಣ್ಣದಾಗಿ ಪಯಣವಂತು ನಡದೇ ಇದೆ.
ಕ್ಷಮಿಸಿ ನಾನು ನಿಮ್ಮ ಮಗಳ ವಯಸ್ಸಿನವನು. ಭರವಸೆಯನ್ನು ಗಟ್ಟಿಯಾಗಿಯೇ ಇಟ್ಟುಕೊಂಡಿದ್ದೇನೆ. ನಿಮ್ಮ ಪುಸ್ತಕದ ಓದು ನನ್ನನ್ನು ಇನ್ನು ಹುರಿಗೊಳಿಸಲು ಸಹಾಯಕವಾಗಿದೆ ಎಂದು ತಿಳಿಸುತ್ತಾ ತಮ್ಮ ಮುಂದಿನ "ನೋಡುನೋಡುತ ದಿನಮಾನ" ಕಾಯುತ್ತೇನೆ. "
       
                                                                                         ಗುರುರಾಜ್

                ಅದಕ್ಕೆ ಕಾರ್ನಾಡರು  ಪ್ರತಿಕ್ರಿಯಿಸಿದ್ದು  


ಪ್ರಿಯ ಗುರುರಾಜ್,
          ನಿಮ್ಮ ಪತ್ರಕ್ಕಾಗಿ ಆಭಾರಿ.  "ಆಡಾ  ಆಯುಷ್ಯ " ಓದಿ ನಿಮಗೆ ಖುಷಿ ಯಾಯಿತೆಂದು ತಿಳಿದು ಸಂತೋಷವಾಯಿತು.

                        ಶುಭಾಶಯಗಳೊಂದಿಗೆ

                                                                    ಗಿರೀಶ್ ಕಾರ್ನಾಡ್