ಬುಧವಾರ, ಸೆಪ್ಟೆಂಬರ್ 17, 2014

ಕಥಾ ಕಮ್ಮಟ

              ಪ್ರಿತಿಯಿಂದ ಅನಿಲ್ ಬರೆದು ನನಗೆ ಜಯಂತ ಕಾಯ್ಕಿಣಿಯವರ ಒಂದು ಪುಸ್ತಕವನ್ನು ಇಟ್ಟು ಹೋಗಿದ್ದ ಅನಿಲ್ ಗೆ ಹೇಗೆ ಕೃತಜ್ಜತೆ ತಿಳಿಸಬೇಕೋ ತಿಳಿಯುತ್ತಿಲ್ಲ. ಮೇಘಶ್ಯಾಮ್ ಹಾಗೂ ಅನಿಲ್ ನನ್ನ ಅನುಪಸ್ಥಿತಿಯಲ್ಲಿಯು ಶಾಲೆಯಲ್ಲಿ ಕಮ್ಮಟವನ್ನು ನಡೆಸಿದಾಗ ನನಗೆ ತುಂಭಾ ಸಂತೋಷವಾಯಿತು. ( ೧೩ ನೇ ಸೆಪ್ಟಂಬರ್ ೨೦೧೪ ರಂದು ಮೈಸೂರಿನ ಜಿಲ್ಲಾ ತರಬೆತಿ ಕೇಂದ್ರದಲ್ಲಿ ನಡೆದ ರಾಜ್ಯ ಮಟ್ಟದ ನಾಟಕ, ನೃತ್ಯ ಶಿಕ್ಷಕರ ಶೈಕ್ಷಣಿಕ ಕಾರ್ಯಗಾರದಲ್ಲಿ ಭಾಗವಹಿಸುವ ಅನಿವಾರ್ಯ ಸ್ಥಿತಿಯಲ್ಲಿ ) ಸಿದ್ಧಿ ಫೌಂಡೇಶನ್ ನ ಎಲ್ಲ ಬಳಗಕ್ಕೂ ನಾನು ಸದಾ ನೆನೆಯುತ್ತಾ ನಮ್ಮ ಮಕ್ಕಳು ಈ ಕಮ್ಮಟದ ಅನುಭವವನ್ನು ತಮ್ಮ ಮನಸ್ಸಿನಿಂದ ಎಂದಿಗೂ ತೆಗೆದು ಹಾಕೋದಿಲ್ಲ ಎನ್ನುವುದು ನಾನು ಇಲ್ಲಿ ತಿಳಿಸಲು ಬಯಸುವೆನು. ನಮ್ಮ ಶಾಲೆಯ ಅಕ್ಷರ ನಾಟಕ ಸಂಘ ದ ವಿದ್ಯಾರ್ಥಿಗಳು ಜವಾಬ್ದಾರಿ ನನಗೆ ಹಿಡಿಸಿತು.