ಮಂಗಳವಾರ, ಫೆಬ್ರವರಿ 21, 2012

ಅರಳು ಮೊಗ್ಗು

ಕವಿತೆ  ಬರೆಯುವುದು ಪಾಂಡಿತ್ಯ ತೋರಿಸಲಿಕ್ಕಲ್ಲ 

ಭಾವನೆಗಳನ್ನು ವ್ಯಕ್ತ ಪಡಿಸಲಿಕ್ಕೆ 

                                
                                                  ---ಜಿ.ಕೆ.ಹೆಗಡೆ.
( ಕಾರ್ನಾಡರ  "ಆಡಾಡತ ಆಯುಷ್ಯ" ದಿಂದ )


ಕಾವ್ಯ ಬಿ.ಬಿಂಗಿಕೊಪ್ಪದ

                   ನಮಗೆ ನಾಟಕ ಕಲಿಸಲು ಆಗಮಿಸಿದ ಶ್ರೀ ಗುರುರಾಜ ನಿರ್ದೇಶಕರಿಗೆ ಅಭಿನಂದನ ಸಲ್ಲಿಸ ಬಯಸುವೆ. ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ಹೆಮ್ಮೆಯ ವಿಷಯವಾಗಿದೆ. ೧೫ ದಿನಗಳ ತರಬೇತಿ ಪಡೆದು ಆರು ವಿವಿಧ ಶಾಲೆಗಳಲ್ಲಿ ಪ್ರದರ್ಶಿಸಿದ ನಾಟಕ " ಕತ್ಲೆ ನಗರೀ ತಲೆಕೆಟ್ ರಾಜ " ನಮಗೊಂದು ಅದ್ಭುತ ಅನುಭವ ನೀಡಿತು. 

ತರಬೇತಿ ಸಮಯದಲ್ಲಿ ಮುಖವಾಡ ತಯಾರಿಕೆ, ರಂಗಾಟ, ಬಣ್ಣದ ಆಟ, ಆಡಿಸುತ್ತಾ ನಾಟಕ ಕಟ್ಟಿ ಕೊಟ್ಟಿದ್ದು ತಿಳಿದೇ ನಾವು ನಾಟಕದ ಒಳಗೆ ಪ್ರವೇಶ ಮಾಡಿದ್ದೆವು. ನಾಟಕಗಳ ಪ್ರದರ್ಶನ ನಂತರ ನಾವು
ನಮ್ಮ ಯೋಚನೆ, ನಡವಳಿಕೆ, ಇತರರೊಂದಿಗೆ ಸಂಬಂಧದಲ್ಲಿ ಆದ ಬದಲಾವಣೆ ಊಹಿಸದಂತೆ ಪರಿವರ್ತನೆ ಆದದ್ದು. ಇಂಥಹ ಒಂದು ವಿಷಯ ನಮ್ಮ ಪ್ರತಿಯೊಂದು ಶಾಲೆಯಲ್ಲಿ ದೊರಕಿದರೆ ನಾವು ನಾಡಿನ ಆದರ್ಶ ಸತ್ ಪ್ರಜೆ ಆಗಬಹುದು.