ಮಂಗಳವಾರ, ಸೆಪ್ಟೆಂಬರ್ 9, 2014

ಸಿದ್ಧಿ ಫೌಂಡೇಶನ್ - ಕಥಾ ಕಮ್ಮಟ

                     
                ಸಿದ್ಧಿ ಫೌಂಡೇಶನ್ ಬೆಂಗಳೂರು ಇದರ ಸ್ಥಾಪಕರಲ್ಲಿ ಒಬ್ಬರಾದ ಮೇಘಶ್ಯಾಮ್ ರವರು ಫೇಸ್ ಬುಕ್ ನಲ್ಲಿ ಹಾಕಿದ ಒಂಡು ಸ್ಟೇಟಸ್ ನಿಂದ ಅದು ನಮ್ಮ ಕೊಪ್ಪಳದ ಮೂಲೆಯಲ್ಲಿರುವ ಪ್ರೌಡಶಾಲೆಗೆ ಬೆಂಗಳೂರಿನಿಂದ ಬಂದು ಮಕ್ಕಳಿಗೆ "ಕಥಾ ಕಮ್ಮಟ" ವನ್ನು ನಡೆಸಲು ಇಚ್ಚಿಸಿ ಆಗಮಿಸಿದ್ದು ನಮಗೆ ತಿಳಿಸಲಾರದಷ್ಟು ಸಂತೋಷವಾಗುತ್ತಿದೆ. ದಿನಾಂಕ ೬.೯.೨೦೧೪ ಹಾಗೂ ೧೩.೯.೨೦೧೪ ರ ಎರಡು ಶನಿವಾರಗಳನ್ನು ನಮ್ಮ ಮಕ್ಕಳೊಂದಿಗೆ ಕಳೆಯಲು ಬಯಸಿದ್ದಾರೆ. ಅದರ ಮೊದಲ ದಿನದ ಮಕ್ಕಳ  ಭಾಗವಹಿಸುವಿಕೆ ಚೆನ್ನಾಗಿತ್ತು. ನಮ್ಮ ವಿದ್ಯಾರ್ಥಿಗಳೊಂದಿಗೆ ಕಳೆದ ಸಾಲಿನ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಭಾಗವಹಿಸಿ ತಮ್ಮ ಭವಿಷ್ಯವನ್ನು ಕಟ್ಟಿಕೊಳ್ಳಲು ಹಾದಿಯನ್ನು ತೊರಿಸುವ ಕಾರ್ಯ ನನ್ನದು. ಮುಂದೆ ನಿಮ್ಮದೇ ದಾರಿ. ಆ ಮೊದಲ ದಿನದ ಛಾಯಚಿತ್ರಗಳು ಇಲ್ಲಿವೆ.