ಬುಧವಾರ, ನವೆಂಬರ್ 27, 2024

ಸಬ್ ಎಡಿಟರ್ ಸುಬ್ರಾಯ ಸತ್ತ ಮೇಲೆ...

 


ಕೊಪ್ಪಳದ ಶಾಲೆಗೆ ಸೇರಿ ಎರಡು ತಿಂಗಳು ಕಳೆದಿರಲಿಲ್ಲ ಆಗಲೇ ಹೊಸದೊಂದು ಜವಾಬ್ದಾರಿ ಗೆ ಹೆಗಲು ಕೊಡಬೇಕೆಂದು ಆಹ್ವಾನ ಬಂದಾಗ ನನಗೆ ತಿರಸ್ಕಾರ ಮಾಡಲು ಯಾವುದೇ ಕಾರಣ ನನಗೆ ದೊರಕಲಿಲ್ಲ. ಕೊಪ್ಪಳದ ಮೀಡಿಯಾ ಕ್ಲಬ್ ನ ವಿಶ್ವ ಪತ್ರಿಕಾ ದಿನಾಚರಣೆಯ ಅಂಗವಾಗಿ ನಾಟಕವೊಂದನ್ನು ಆಡು ತೀರ್ಮಾನಿಸಿ ನಿರ್ದೇಶಕರ ಹುಡುಕಾಟದಲ್ಲಿ ಇದ್ದಾಗ ಡೊಳ್ಳಿನ ನಾಗರಾಜ್ ಅವರಿಂದ ನನಗೆ ಕರೆ ಮಾಡಿ ಕೇಳಿ ಕೊಂಡರು.












ಭಾನುವಾರ, ನವೆಂಬರ್ 24, 2024

ರಂಗ ಕುಸುಮ ಕಲಾನಿಧಿ ಪ್ರಶಸ್ತಿ

 







ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು. ಜಿಲ್ಲಾ ಘಟಕ ಹಾವೇರಿ ಹಾಗೂ ರಂಗ ಕುಸುಮ ಪ್ರಕಾಶನ (ರಿ) ರಾಣೇಬೆನ್ನೂರು ಪ್ರಸ್ತುತಪಡಿಸುವ ಮಕ್ಕಳ ಸಾಂಸ್ಕೃತಿಕ ಸೌರಭ -  2024

ರಂಗ ಕಾಯಕ, ರಂಗಶಿಕ್ಷಕನಾಗಿ ಕಾರ್ಯ ನಿರ್ವಹಿಸಿ ಕಳೆದ 16 ವರ್ಷದ ರಂಗ ಕ್ಷೇತ್ರದಲ್ಲಿ  ಮಾಡಿದ ಕಾರ್ಯಗಳನ್ನು ಗಮನಿಸಿ ನನಗೆ ನನ್ನ ಸಾಧನೆಯನ್ನು ಗುರುತಿಸಿ 2024 ನೇ ಸಾಲಿನ " *ರಂಗ ಕುಸುಮ ಕಲಾ ನಿಧಿ* "ಪ್ರಶಸ್ತಿ ಪ್ರಧಾನ ಮಾಡಿದರು.


ಇಂದು ಈ ಪ್ರಶಸ್ತಿ ಕಾರ್ಯಕ್ರಮವು ರಾಣೆಬೆನ್ನೂರು ನಗರದ ಕನ್ನಡ ಸಾಹಿತ್ಯ ಭವನದಲ್ಲಿ ನಡೆಯಿತು ಈ ಸಂದರ್ಭದಲ್ಲಿ ಮಕ್ಕಳ ಕಾರ್ಯಕ್ರಮ ಆಗಿದ್ದರಿಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭರತನಾಟ್ಯ, ಕವಿ ಗೋಷ್ಠಿ, ರಂಗೋಲಿ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ಅವರ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಮಕ್ಕಳ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದ ನನಗೂ ಕೂಡ ತುಂಬಾ ಖುಷಿಯಾಯಿತು ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು ವೆಂಕಟೇಶ್ ಈಡಿಗರ, ಮುಖ್ಯ ಅತಿಥಿಯಾಗಿ ಶಿವಮೊಗ್ಗ ರಂಗಾಯಣದ ನಿರ್ದೇಶಕರಾದ ಪ್ರಸನ್ನ ಡಿ ಸಾಗರ ಹಾಗೂ ಹಲವಾರು ಗಣ್ಯರು ಭಾಗವಹಿಸಿ ಪ್ರಶಸ್ತಿ ಪ್ರಧಾನ ಮಾಡಿ ಅಭಿನಂದಿಸಿದರು.

ಗುರುವಾರ, ನವೆಂಬರ್ 21, 2024

Angikam Bhuvanam yasya

ಶನಿವಾರ, ನವೆಂಬರ್ 16, 2024

SUB EDITOR SUBHRAYA DRAMA






 

ಶುಕ್ರವಾರ, ನವೆಂಬರ್ 1, 2024

KANNADA RAJYOTHSAVA


 

ಬುಧವಾರ, ಅಕ್ಟೋಬರ್ 30, 2024

ನಾಟಕ ದಾಂಪತ್ಯ ಗೀತ

ನಾಟಕ ದಾಂಪತ್ಯ ಗೀತ
ನಿನ್ನೆ ಹನಮಸಾಗರ ದಲ್ಲಿ ನಾಟಕ ನೋಡಿ ಅನಿಸಿದನ್ನು ಹಂಚಿಕೊಳ್ಳುತ್ತಿರುವೆ.
ಡಾ|| ನಿಂಗೂ ಸೊಲಗಿ ಅವರು ಬರೆದ
' ನನ್ನಿನ ನಗೀ ನೋಡಿ ' ಅತ್ಯಂತ ಮಹತ್ವದ ಪುಸ್ತಕ. ಅದನ್ನು ರಂಗಕ್ಕೆ ತಂದು ಪ್ರದರ್ಶನ ನೀಡುತ್ತಿರುವ ಶ್ರೀಕಾಂತ್ ಹಾಗೂ ಅಕ್ಕಮ್ಮ ದಂಪತಿಗಳು ಸೊಲಗಿ ಸರ್ ದಂಪತಿಗಳ ಬದುಕಿದ ರೀತಿಯಲ್ಲಿ ತಾವು ಬದುಕಿ ತೋರಿಸುವಾಗ ನಾನೂ ಭಾವುಕತೆಯಲ್ಲಿ ಮುಳುಗಿ ಹೋದೆ. ನೋಡುಗರನ್ನು ಹಿಡಿದಿಡುವ ಈ ನಾಟಕ ಪ್ರತಿಯೊಬ್ಬರು ಹೇಗೆ ಬದುಕಬೇಕು ಎಂದು ಅರ್ಥೈಸುತ್ತದೆ.
ನಾಟಕ ಪ್ರೇಕ್ಷಕರನ್ನು ಹಿಡಿದಿಡುತ್ತಲೇ ಸಂಗಾತಿಗೆ ಸಂಬಂಧಗಳ ಬದುಕಿನ ಬಗ್ಗೆ ತಿಳಿಸುತ್ತಾ
'ಹೂ ಅರಳೀದಂಗಾ ನಮ್ಮಿಬ್ಬರ ಬದುಕು ಅರಳಬೇಕು'
'ನಾವು ಎಷ್ಟು ದಿನ ಇರ್ತಿವಿ ಅನ್ನೋದು ಮುಖ್ಯ ಅಲ್ಲ. ನಾವು ಹ್ಯಾಂಗಾ ಬದುಕ್ತಿವಿ ಅನ್ನೋದು ಮುಖ್ಯ' ಅನ್ನೋದನ್ನ ಪ್ರೇಕ್ಷಕರನ್ನ ಎಚ್ಚರಿಸುವ ರೀತಿಯಲ್ಲಿ ನಾಟಕ ಕಟ್ಟಿ ಕೊಡುತ್ತದೆ.
ನಾಟಕದಲ್ಲಿ ಸಂಗಾತಿಗೆ ತಿಳಿಸುತ್ತಾ ನಮ್ಮ ಬದುಕಿಗೆ ವಿಮರ್ಶಕರ ರೀತಿಯಲ್ಲಿ ಹೊರಗೂ ಮತ್ತು ಒಳಗೂ ಇರುವವರು ಬಹಳಷ್ಟು ಜನ ಇರ್ತಾರೆ. ಅವರಿಗೆ ನಾವು ಉತ್ತರ ನೀಡಬೇಕಾಗಿಲ್ಲ ನಮ್ಮ ಕೆಲಸಗಳಿಂದ ಅರ್ಥೈಸಬೇಕು ಅಂತ ತಿಳಿ ಹೇಳ್ತಾ
ಲವ್ ಫ್ಯಾಕ್ಟರಿ
ಐಸ್ ಫ್ಯಾಕ್ಟರಿ
ಶುಗರ್ ಫ್ಯಾಕ್ಟರಿ
ಅನ್ನೋ ನಮ್ಮ ಮನದಲ್ಲಿ ಮೂರು ರೀತಿಯ ಫ್ಯಾಕ್ಟರಿ ಗಳನ್ನು ಕಟ್ಟಿಕೊಳ್ಳಬೇಕು ಎಂದು ತಿಳಿಸುತ್ತಾ ಮಕ್ಕಳಿಗೆ ಈ ಜಾತಿ ಧರ್ಮ ಬೇದ ಭಾವಗಳಲ್ಲಿ ನಾವು ಏನನ್ನು ಕಲಿಸಬೇಕು ಎಂದು ತಿಳಿಸುವ ಬಗೆಯನ್ನು ಅತ್ಯಂತ ಸುಂದರವಾಗಿ ದೃಶ್ಯ ರೂಪಕವಾಗಿ ಅಭಿನಯಿಸಿದ್ದಾರೆ.
ಮಳೆ ಬಗ್ಗೆ ಬರೆಯಬೇಕು ಎಂದು ತಿಳಿಸುತ್ತಾ ಜಾನಪದೀಯ ರೀತಿಯಲ್ಲಿ ಮಳೆಯನ್ನ ಕಟ್ಟಿ ಕೊಡೋದು, ಗುರ್ಜಿ ಬಗ್ಗೆ ಹೇಳುವ ಹಿರಿಯರು 'ಕೊಣಿಯೊಳಗಿನ ಮಗು ಕೊಳಿತು ಒಣಿಯೋಳಗಿನ ಮಗು ಬೇಳಿತು ಎನ್ನುವುದನ್ನು ಹೇಳುವಾಗ ನಟರಿಬ್ಬರ ಚರ್ಚೆ ಪ್ರತಿಯೊಂದು, ಪ್ರತಿಯೊಬ್ಬರ ಮನೆಯ ಚರ್ಚೆಯಾಗಬೇಕು ಎಂದೆನಿಸುತ್ತದೆ.
ಇಂದಿನ ಶಿಕ್ಷಣ ಬಗ್ಗೆ ತಮ್ಮ ಬೇಸರವನ್ನು ತಿಳಿಸುತ್ತಾ ಸ್ನೇಹ ಶಾಲೆಗಳು ಕಡಿಮೆಯಾಗಿವೆ. ಪುಸ್ತಕಗಳಿಂದ ಹೊರ ಬಂದು ಕಲಿಸುವ ರೀತಿಯನ್ನು ಪ್ರಯೋಗಿಕ ಶಿಕ್ಷಣದ ಬಗ್ಗೆ ಅನಿವಾರ್ಯತೆಯನ್ನು ನಟರಿಬ್ಬರೂ ರಂಗದ ಮೇಲೆ ಸಾತ್ವಿಕತೆಯಲ್ಲಿ ಪ್ರದರ್ಶಿಸಿದ್ದಾರೆ.
ಇಲ್ಲಿ ಬರೆಯುತ್ತಾ ಹೋದ್ರೇ ಬರೇ ಬರವಣಿಗೆ ಆಗೋಗುತ್ತೋ ಅನಿಸುತ್ತೇ ಆದರೆ ನಾವು ನಮ್ಮ ಜೀವನದಲ್ಲಿ ಅನುಸರಿಸಿದರೆ ಅದು ಸಾರ್ಥಕತೆ ಅನಿಸುತ್ತೆ.
ಇಲ್ಲ ಮತ್ತೇ ಮತ್ತೇ ಈ ನಾಟಕ ನೋಡಬೇಕೆನಿಸುತ್ತದೆ.
ಧನ್ಯವಾದಗಳು Ningu Solagi ಸೊಲಗಿ ಸರ್ ಇಂತಹ ಕೃತಿಯೊಂದನ್ನು ಹೊರ ತಂದಿರುವುದಕ್ಕೆ. ಅಭಿನಯಿಸುತ್ತಿರುವ ಗೆಳೆಯ Shrikant Pn Shrikant Pn ಶ್ರೀಕಾಂತ್ ಹಾಗೂ ಅಕ್ಕಮ್ಮ ಅವರಿಗೆ ಸಾಕಷ್ಟು ಯಶಸ್ವಿ ಪ್ರದರ್ಶನಗಳು ಸಿಗಲಿ ಎಂದು ಆಶಿಸುತ್ತೇನೆ.
ರಂಗ ರೂಪ ಹಾಗೂ ನಿರ್ದೇಶನ
ಮಹಾಂತೇಶ ರಾಮದುರ್ಗ
ಸಂಗೀತ : ರಾಘವ ಕಮ್ಮಾರ
ಪ್ರದರ್ಶನ ನೀಡುತ್ತಿರುವ ನಿಮಗೆ ಒಳಿತಾಗಲಿ.








 

ಭಾನುವಾರ, ಸೆಪ್ಟೆಂಬರ್ 15, 2024

ಪ್ರಜಾ ಪ್ರಭುತ್ವ ದಿನಾಚರಣೆ ಮಾನವ ಸರಪಳಿ





                              



ಶನಿವಾರ, ಆಗಸ್ಟ್ 31, 2024

ಹೊಸ ಶಾಲೆ ಹೊಸ ಊರು


ಸರಕಾರಿ ಬಾಲಕರ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ)
ಕೊಪ್ಪಳ

ಶುಕ್ರವಾರ, ಆಗಸ್ಟ್ 30, 2024

ಶುಕ್ರವಾರ, ಆಗಸ್ಟ್ 16, 2024

ಗುರುವಾರ, ಆಗಸ್ಟ್ 15, 2024

AUG 15, 2024