ಶುಕ್ರವಾರ, ಜೂನ್ 3, 2022

ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ ಪ್ರಶಸ್ತಿ ಪಡೆದ ರಮೇಶ ಚೌವ್ಹನ್ ಗುರುಗಳು

ಇಂದು ಜಹಗೀರಗುಡದೂರ ಪ್ರೌಢಶಾಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟದಲ್ಲಿ  ನಮ್ಮ ಕೊಪ್ಪಳ ಜಿಲ್ಲೆಯಿಂದ ಪ್ರತಿನಿಧಿಸಿ ರಾಜ್ಯ ಮಟ್ಟದ ಕುಸ್ತಿಯಲ್ಲಿ ತೃತೀಯ ಸ್ಥಾನವನ್ನು ಪಡೆದ ಬಂದಿರುವ ಶಾಲೆಯ ಸಹಶಿಕ್ಷಕರಾದ  *ಶ್ರೀ ರಮೇಶ್ ಚೌವ್ಹನ್* ಅವರಿಗೆ ಶಾಲೆಯ ಸಿಬ್ಬಂದಿ, ಎಸ್.ಡಿ.ಎಮ್.ಸಿ ಹಾಗೂ ಗ್ರಾಮಸ್ಥರ ಪರವಾಗಿ ಸನ್ಮಾನ ಮಾಡಲಾಯಿತು. ಜೊತೆಗೆ ಶಾಲೆಯ ಶೈಕ್ಷಣಿಕ ವರ್ಷದ  ಕ್ರೀಡಾ ಕೂಟಕ್ಕೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಚಾಲನೆಯನ್ನು ಈ ಕಾರ್ಯಕ್ರಮದ ಮೂಲಕ ನೀಡಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದ ಶ್ರೀ ಶಿವಪ್ಪ ಇಲಾಳ,  ಜಗದೀಶ ಬಾಸಿಂಗದ, ಬಸಪ್ಪ ತಳವಾರ, ಗುರುರಾಜ, ಶರಣಪ್ಪ ರಾಂಪೂರ, ರಮೇಶ ಚೌವ್ಹನ್, ಶ್ರೀಮತಿ ತನುಜಾ ಪೋಲಿಸ್, ಸುಮಿತ್ರಾ, ಹುಲಿಗೆಮ್ಮ ಹಾಗೂ ರವಿಕುಮಾರ  ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher