ಶನಿವಾರ, ಡಿಸೆಂಬರ್ 25, 2010

ಅರಳು ಮೊಗ್ಗು - ರಂಗ ತರಬೇತಿ












ಅರಳುಮೊಗ್ಗು 

 ನಮ್ಮ ನಾಟಕ ಶಿಕ್ಷಕರಾದ ಗುರುರಾಜ್ ಅವರಿಗೆ ಅಭಿನಂದನೆಗಳನ್ನು ತಿಳಿಸುತ್ತೇವೆ ಏಕೆಂದರೆ ಇಡೀ ಜಿಲ್ಲೆಯಲ್ಲಿ ನಮ್ಮ ಶಾಲೆಯನ್ನು ಆರಿಸಿಕೊಂಡಿದ್ದು ನಮಗೆ ಹೆಮ್ಮೆಯ ವಿಷಯವಾಗಿದೆ. ಗುರುರಾಜ್ ಸರ್ ಅವರು ನಮಗೆ 15 ದಿನಗಳವರೆಗೆ ತರಬೇತಿ ಕೊಟ್ಟು 6 ಶಾಲೆಯಲ್ಲಿ ನಾಟಕವನ್ನು ಪ್ರದರ್ಶಿಸಿದೆವು. ಈ ನಾಟಕದ ಹೆಸರು ಕತ್ತಲೆ ನಗರಿ ತಲೆಕೆಟ್ಟ ರಾಜ ಇದು 9ನೇ ತರಗತಿಯ ಹಿಂದಿ ಪಾಠ ದಲ್ಲಿದೆ.
 ಗುರುರಾಜ್ ಸರ್ ಅವರು ನಮ್ಮಲ್ಲಿ 15 ದಿನಗಳ ತರಬೇತಿಯಲ್ಲಿ ನಮಗೆ ಬಲೂನಿನ ಮುಖವಾಡಗಳ ತಯಾರಿಕೆ ಮಣ್ಣಿನ ಮುಖವಾಡಗಳ ತಯಾರಿಕೆ ತಿಳಿಸಿದರು ನಂತರ ಅನೇಕ ರೀತಿಯ ಆಟಗಳನ್ನು ಇದರಿಂದ ನಮಗೆ ಕವಿಗಳ ಹೆಸರುಗಳು ತಿಳಿದವು. ನಮ್ಮ ಪಾಠ ಪುನರಾವರ್ತನೆಯಾಯಿತು. ಕೆಲವು ದಿನಗಳ ನಂತರ ಎಲ್ಲರಿಂದ ಅನೇಕ ಚಟುವಟಿಕೆಗಳನ್ನು ಮಾಡಿಸಿದರು. ಅದರಿಂದ ಧ್ವನಿಗಳ ಆಧಾರದ ಮೇಲೆ ಅವರಿಗೆ ಪಾತ್ರಗಳನ್ನು ಹಂಚಿದರು ನಮ್ಮ ಶಾಲೆಯಲ್ಲಿನ ವಸ್ತುಗಳನ್ನೇ ಬಳಸಿ ಅನೇಕ ನಾಟಕಕ್ಕೆ ಬೇಕಾಗುವ ಪೀಠೋಪಕರಣಗಳನ್ನು ಮಾಡಿಸಿದರು. ಕೆಲವು ದಿನಗಳ ನಂತರ ನಮ್ಮ ನಾಟಕದ ಅಭ್ಯಾಸವು ಪೂರ್ಣವಾಗಿ ಮುಗಿಸಿ 6 ಶಾಲೆಗಳಿಗೆ ಭೇಟಿ ನೀಡಿದೆವು. ಅವುಗಳೆಂದರೆ ಹನುಮಸಾಗರ, ತಳವಗೇರಾ, ಕೊರಡಕೆರ, ಮಾವಿನ ಇಟಗಿ ಮಕ್ಕಳಿಗೆ ನಮ್ಮ ಗುರುಗಳು ಕಲಿಸಿದ ಪಾಠಗಳನ್ನು ಕಲಿಸಿದ ನಂತರ ಕೊನೆಯದಾಗಿ ಕುಷ್ಟಗಿಯಲ್ಲಿ ನಮ್ಮ ಪ್ರದರ್ಶನದಲ್ಲಿ ಅನೇಕ ಶಾಲಾ ಕಾಲೇಜುಗಳಿಂದ ಬಂದ ವಿದ್ಯಾರ್ಥಿ ವಿದ್ಯಾರ್ಥಿನಿಯರು ನಮ್ಮ ನಾಟಕವನ್ನು ನೋಡಿ ಆನಂದಿಸಿದರು ಇದು ನಮ್ಮ ಅನಿಸಿಕೆಯಾಗಿದೆ. 

ಕಾವ್ಯ ಬಿ ಬಿಂಗಿ ಕೊಪ್ಪದ 
9ನೇ ತರಗತಿ 
ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ,
ನಿಡಶೇಸಿ.