ಬುಧವಾರ, ಸೆಪ್ಟೆಂಬರ್ 4, 2019

ರಿವಾಯತ್ ಪದ


ಮದಲ ಸಭೆದೊಳು ಗಜಮುಖ ಗಣಪತಿ
ಭಜಿಸುವೆ ನಾ ಬಂದ
ಬುದ್ಧಿಕೊಡೋ ಭಕ್ತ ನಾ ನಿಮ ಕಂದ ||ಪ||

ಕೇಳೋ ಗಣಪತಿ ನಾಳಿನ ಉದಯಕ ಮ್ಯಾಳ ಸಹಿತ ಬಂದ
ನಿಮಗ ತಾಳ ತಂಬುರಿ ತಂದ
ಪದಗಳ ಹಾಡುತಿವರೀ ಒಂದೊಂದ ||ಪ||

ಚದುರ ಗಣಪತಿ ಸದರಿಗೆ ಒಪ್ಪುವಂಥ
ಉದರ ಮಲ್ಲಿಗೆ ತಂದ,
ಸ್ವಾಮಿ ನೆನೆಸುವೆ ನಿಮಕಂದ ||ಪ||

ಸಿಸುನಾಳ ಹುಸೇನ್ ವಕೀಲ್ ಸಾಹೇಬರು
ಬರೆದಂಥ ಕವಿಗಾರ
ಚಿತ್ತವಿಟ್ಟು ಕೇಳಿರಿ ಜನರೆಲ್ಲ ||ಪ||

ಕುಷ್ಟಗಿ ತಾಲೂಕಾ ಗುಡದೂರ ಹುಡಗರೂ
ಹಾಡುವರೋ ಮುಂದ
ಚಿತ್ತವಿಟ್ಟು ಕೇಳಿರಿ ಮುಂದ ಮುಂದ ||ಪ||

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher