ಶುಕ್ರವಾರ, ಆಗಸ್ಟ್ 17, 2018

ದೇವತಾಪುರದ ಮಕ್ಕಳು















ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಬೆಂಗಳೂರು ಹಾಗೂ ವಿಸ್ತಾರ ರಂಗಶಾಲೆ ಕೊಪ್ಪಳ ಇವರ ಸಹಯೋಗದಲ್ಲಿ "ಚಿಣ್ಣರ ಚಿಲುಮೆ" ಮಕ್ಕಳ ರಂಗ ತರಬೇತಿಯ ಸಮಾರೋಪ ಸಮಾರಂಭವನ್ನು ವಿಸ್ತಾರ ರಂಗಶಾಲೆಯಲ್ಲಿ ನಡೆಸಲಾಯಿತು. ಪಾರಂಪರಿಕ ರಂಗಕಲೆಗಳು ಸದಾ ಕ್ರಿಯಾಶೀಲವಾಗಿ ಮಕ್ಕಳ ಜೊತೆಗೆ ಇದ್ದಾಗ ಮಕ್ಕಳ ಮಾನಸಿಕ ವ್ಯಕ್ತಿತ್ವ ಸದೃಢವಾಗುತ್ತದೆ. ಸ್ವಸ್ಥಾ ಸಮಾಜ ನಿರ್ಮಾಣವಾಗುತ್ತದೆ ಎಂದು ರಾಜ್ಯ ಸಮನ್ವಯ ಸಂಚಾಲಕರು ಹಾಗೂ ಮಕ್ಕಳ ಸಾಹಿತಿ ಶ್ರೀ ಶಂಕರ ಹಲಗತ್ತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ತಮ್ಮ ಅಭಿಪ್ರಾಯ ತಿಳಿಸಿದರು. ಸರ್ಕಾರ ನಿರ್ಮಿಸುವ ಈ ರೀತಿಯ ಮಕ್ಕಳ ಯೋಜನೆಯು ರಂಗಭೂಮಿಯ ಮೂಲಕ ನಡೆಸುತ್ತಿರುವುದು ಭಾರತದಲ್ಲೇ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ವಿಸ್ತಾರನ ಉಪ ನಿರ್ದೇಶಕರಾದ ಆಶಾ ವಿ ಅವರು ನುಡಿದರು.

ಕುಮಾರಿ ವೆಣ್ಣೀಲಾ ಹಾಲ್ಕುರಿಕೆ ರಚಿತವಾದ ಈ ನಾಟಕ ಮಕ್ಕಳ ಮೂಲಭೂತ ಸಮಸ್ಯೆಗಳನ್ನು ಅರ್ಥಯಿಸುವ ಪ್ರೇಕ್ಷಕರ ಪ್ರಖರ ಚಿಂತನೆಗೊಳ ಪಡುವ ಸಂದೇಶಾತ್ಮಕ ನಾಟಕ ದೇವತಾಪುರದ ಮಕ್ಕಳು. 

 ಮಕ್ಕಳ ನಾಟಕ ಮನೋಜ್ಞ ಮಾತುಗಳಿಂದ ನೃತ್ಯ, ಸಂಗೀತದೊಂದಿಗೆ ಪ್ರದರ್ಶನಗೊಂಡಿತು. ಅಲ್ಲಲ್ಲಿ ಬೆಳಕಿನ ವಿನ್ಯಾಸ ಕುಂಟಿತಗೊಂಡಿದ್ದರು ರಂಗಸಜ್ಜಿಕೆ ಪರಿಕರ ನಿರ್ದೇಶಕರ ಅಚ್ಚುಕಟ್ಟತೆ ತಂತ್ರಜ್ಞಾನದಿಂದ ಪ್ರೇಕ್ಷಕರನ್ನು ಸೆಳೆಯುವಲ್ಲಿ ಗುರುರಾಜ ಹೊಸಪೇಟೆ ನಿರ್ದೇಶನದ "ದೇವತಾಪುರದ ಮಕ್ಕಳು" ನಾಟಕ  ಯಶಸ್ವಿಯಾಯಿತು.

ಕಾರ್ಯಕ್ರಮದಲ್ಲಿ ಹಿರೇಬಿಡ್ನಾಳ ಗ್ರಾಮ ಪಂಚಾಯಿತಿಯ ಉಪಧ್ಯಾಕ್ಷರಾದ ಬಸವರಾಜ ಕನಕಾಪುರ, ರಾಜ್ಯ ಸಮಿತಿ ಸದಸ್ಯರಾದ ಕಲಾವಿದೆ ಸುನಂದ ನಿಂಬನಗೌಡರ, ಯೂಸಫ್ ಜೆ ಡಿ, ವೆಣ್ಣೀಲಾ ಹಾಲ್ಕುರಿಕಿ, ನಿರ್ದೇಶಕ ಗುರುರಾಜ ಹೊಸಪೇಟೆ, ವಿಸ್ತಾರ ರಂಗಶಾಲೆಯ ಸಂಯೋಜಕರಾದ ಲಕ್ಷ್ಮಣ ಪೀರಗಾರ ಅವರು ವೇದಿಕೆ ಮೇಲಿದ್ದರು. ಸುಂಕಪ್ಪ ಮೀಸಿ ಕಾರ್ಯಕ್ರಮ ನಿರೂಪಿಸಿದರೆ ಕರಿಯಪ್ಪ ಅವರು ವಂದನಾರ್ಪಣೆ ಮಾಡಿದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

Thank you.

.................
Gururaj.L
Drama Teacher