ಗುರುವಾರ, ನವೆಂಬರ್ 27, 2014

ರಾಜ್ಯ ಮಟ್ಟದ ವಿಜ್ಞಾನ ನಾಟಕ ಸ್ಪರ್ದೆಯಲ್ಲಿ ನಾಟಕ







ನಮ್ಮ ಶಾಲೆಯ ನಾಟಕದಿಂದಾಗಿ ಬಹುಮಾನವೇನು ಬರಲಿಲ್ಲ. ಆದರೆ ರಾಜ್ಯ ಮಟ್ಟದವರೆಗೆ ಭಾಗವಹಿಸಿದ ತೃಪ್ತಿ. ನಮ್ಮ ಶಾಲೆಯ ಮಕ್ಕಳು ಚೆನ್ನಾಗಿ ಅಭಿನಯಿಸಿದರು. ಆದರೆ ಅದಕ್ಕಿಂತ ಚೆನಾಗಿ ಇತರೆ ಶಾಲೆಯ ವಿದ್ಯಾರ್ಥಿಗಳು ಅಭಿನಯಿಸಿ ಪ್ರಶಸ್ತಿ ಪಡೆದರು. ಮಕ್ಕಳು ಭಾಗವಹಿಸುವುದು ಮುಖ್ಯ. ಅದಕ್ಕೆ ಅನುವು ಮಾಡಿಕೊಟ್ಟ ಎಲ್ಲಾ ಶಾಲಾ ವೃಂದ ಹಾಗೂ ಪಾಲಕರಿಗೆ ಅಭಿನಂದನೆಗಳನ್ನು ತಿಳಿಸಲೇಬೇಕು. ಆತಿಥ್ಯ ನೀಡಿ ನೆನೆಪಲ್ಲಿ ಉಳಿಯುವಂತೆ ಮಾಡಿದ ಮಂಗಳೂರಿನ DIET ನ ಪ್ರಾಂಶುಪಾಲರಿಗೂ, ದಯಾವತಿ ಹಿರಿಯ ಉಪನ್ಯಾಸಕರಿಗೂ, ಕೊಪ್ಪಳದ ಉಮಾದೇವಿ ಉಪನ್ಯಾಸಕರಿಗೂ ಹಾಗೂ ಕುಷ್ಟಗಿಯ ವೆಂಕಟೇಶ ಉಪನ್ಯಾಸಕರಿಗೂ ಧನ್ಯಾವಾದಗಳನ್ನು ತಿಳಿಸುತ್ತೇನೆ.