ಸೋಮವಾರ, ನವೆಂಬರ್ 3, 2014

ಕವಿತೆ

ಓ ಬಾನಾಡಿಗಳೆ ಎಲ್ಲಿ ಓಡುವಿರಿ
ಮುಸ್ಸಂಜೆಯಾಯಿತೆಂದು 
ಸೂರ್ಯಕಿರಣಗಳು ಸಾರಿದವೇ
ನಿಮಗೆ
ಹೊಂಗಿರಣಗಳಲಿ ಅರಳಿದ ಕುಸುಮವೇ
ಸುವಾಸನೆಯ ನಿನ್ನೊಳಗೆ ನೀ ಹೀರಿ
ಮುದುಡಿರುವೆ..... ರಾತ್ರಿಯಾಯಿತೆಂದು
ತಾ ಬರುವೆನೆಂದು ಆ ಶಶಿಯು ಹೇಳಿದನೇ
ನಿನಗೆ
ನಿಮ್ಮನೆಲ್ಲ ನೋಡುತಾ ಈ ಶುಭದಿನದ 
ಶುಭರಾತ್ರಿಗೆ ಶುಭ ಆಶಯವ ನಾ
ಸುರಿಸುವೆ ನಿಮಗೆಲ್ಲ ಓ ನನ್ನ
ಒಡನಾಡಿಗಳೇ.............!!!!!



Shreesamadarshi Honnavara ಅವರ ಕವಿತೆ