ಗುರುವಾರ, ಅಕ್ಟೋಬರ್ 25, 2018

ಅರುಂಧತಿ ಹಾದಿಮನಿ

ನಮ್ಮವ್ವ ನಮ್ಮನ್ನು ಹಡೆದು ತುಂಭಾ ಜಾಗೃತಿಯಿಂದ ಆರೈಕೆ ಮಾಡುತ್ತಾಳೆ. ಹುಟ್ಟಿದಾಗಿನಿಂದ ನಮಗೆ ಬುದ್ಧಿ ತಿಳಿಯುವವರೆಗೂ ನಮ್ಮ ಎಲ್ಲಾ ಬೇಕು ಬೇಡಗಳನ್ನು ಪೂರೈಸುತ್ತಾ ಬೆಳಸುವಳು. ಚಿಕ್ಕವರಿದ್ದಾಗ ನಮ್ಮ ಬುದ್ಧಿಶಕ್ತಿ ಹೆಚ್ಚಿರುತ್ತದೆ ಅಂತೆ. ಬೆಳೀತಾ ನಮ್ಮ ಬುದ್ದಿಶಕ್ತಿ ಕಮ್ಮಿ ಆಗುತ್ತಂತೇ. ನಮ್ಮ ಮನೆಯಲ್ಲಿ ಅಜ್ಜ-ಅಜ್ಜಿಯವರಿಗೆ ಬುದ್ಧಿ ಅಥಾವ ತಿಳುವಳಿಕೆ ಕಡಿಮೆ ಇರುತ್ತದೆ. ನಮ್ಮ ಅಮ್ಮನಿಗೆ ವಯಸ್ಸಾಗಿದೆ ಅವರಿಗೆ ಅರುವು ಮರುವು ಆಗ್ತಾ ಇರ್ತಾದೆ. ಎಷ್ಟೋ ಮಾತುಗಳು ನೆನಪೇ ಇರೋದಿಲ್ಲ.


ನಾನು ಅರುಂಧತಿ ಈಗ ೮ ನೇ ತರಗತಿ. ನಮ್ಮ ಮನೆಯಲ್ಲಿ ಒಟ್ಟು ಹದಿನೆಂಟು ಜನ ಇರ್ತೇವೆ. ನಮ್ಮ ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುತ್ತೇವೆ. ನನ್ನ ತಂಗಿ ಸಣ್ಣೋಳು ಒಮ್ಮೇ ನನ್ನ ಮೇಲೆ ಚಾ ಚೆಲ್ಲಿದಳು ಆದ್ರೆ ನಮ್ಮವ್ವ ಅವಳು ಚಿಕ್ಕೋಳು ಅವಳಿಗೆ ಗೊತ್ತಾಗೋದಿಲ್ಲ ಅಂತ ನಮ್ಮನ್ನೇ ಬೈತಾಳೆ. ನಮ್ಮ ಮನೆ ಮುಂದೆ ಹೂ ಗಿಡಗಳನ್ನಾ ಹಾಕಿವಿ. ಬೆಳಬೆಳಗ್ಗೆ ಗಮ್ಮ ಅಂತಾ ವಾಸ್ನಿ ಬರ್ತಾದೆ. ಆದ್ರೇ ಯಾಕೋ ನನಗೆ ಅವುಗಳನ್ನಾ ಕಿತ್ತು ಮುಡಿಬೇಕು ಅಂತ ಅನಿಸೋದಿಲ್ಲ. ನಮ್ಮ ಮನೆಯಲ್ಲಿ ಬೆಕ್ಕು ಮತ್ತೇ ನಾಯಿಮರಿಯನ್ನಾ ಸಾಕಿವೀ. ಅಂದ್ರೇ ಅವು ಬೀದಿಯಲ್ಲೇ ಓಡಾಡಿಕೊಂಡಿರುವಂಥ ಸಾಕು ಪ್ರಾಣಿಗಳು. ಸಾವುಕಾರರ ಮನೆಯಲ್ಲಿ ಇರೋ ನಾಯಿಗಳು ದೊಡ್ಡಿಗೆ ತಂದಿರ್ತಾರೆ. ನಾವು ಹಾಗೇ ಮಾಡಿರಲಿಲ್ಲ. ನಾನು ಶಾಲೆ ಬಿಟ್ಟು ಮನೆಗೆ ಹೋದ ತಕ್ಷಣ ಕಾಲ್ ಕಾಲಿಗೆ ಅಡ್ಡ ಬರ್ತಾವೇ. ಯಾಕಂದ್ರೇ ಅವು ನಮ್ಮನ್ನಾ ಬಹಳ ಪ್ರೀತಿ ಮಾಡ್ತಾವೇ.
(ಮುಂದುವರೆಯುವುದು.....)

ಶನಿವಾರ, ಅಕ್ಟೋಬರ್ 20, 2018

ಸ್ವಗತಗಳು

ಹೈದ್ರಾಬಾದ್ ಕರ್ನಾಟಕ ದಿನಾಚರಣೆ

ಹೈದ್ರಾಬಾದ್ ಕರ್ನಾಟಕ ದಿನಾಚರಣೆ ಅಂಗವಾಗಿ ನಮ್ಮ ಶಾಲೆಯ ಹತ್ತಿರದಲ್ಲಿರುವ ಎರಡು ಸ್ಮಾರಕಗಳಿಗೆ ಪುಷ್ಪಗಳನ್ನ ಅರ್ಪಿಸಿ ಧ್ವಜಾರೋಹಣವನ್ನು ಮಾಡಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯರಾದ ನೇಮಣ್ಣ ಮೇಲಸಕ್ರಿಯವರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ವಿದ್ಯುಕ್ತವಾಗಿ ನಡೆಸಲಾಯಿತು.

chitr

ಸೋಮವಾರ, ಸೆಪ್ಟೆಂಬರ್ 24, 2018

ಕಾರಂತರು




ಮೊಹರಂ















ವಸ್ತ್ರಾಭರಣ
















ಶುಕ್ರವಾರ, ಸೆಪ್ಟೆಂಬರ್ 7, 2018

ಬಿ.ವಿ ಕಾರಂತ

ಬೆನಕ ತಂಡ ಬೆಂಗಳೂರು
ಅವರು ಆಯೋಜಿಸಿದ
ಕೊಪ್ಪಳದ ಜಿಲ್ಲಾ ಮಟ್ಟದ
ಬಿ.ವಿ.ಕಾರಂತ -೮೯ ರಂಗ ಸಂಗೀತೋತ್ಸವ ಸ್ಪರ್ಧೆಯನ್ನು

ಕುಕನೂರಿನ
ಸರ್ಕಾರಿ ಪ್ರೌಢಶಾಲೆ ಯಲ್ಲಿ ಆಯೋಜಿಸಲಾಗಿತ್ತು.

ಬುಧವಾರ, ಆಗಸ್ಟ್ 29, 2018

ಬುಧವಾರ, ಆಗಸ್ಟ್ 22, 2018

ಸೋಮವಾರ, ಆಗಸ್ಟ್ 20, 2018

ಹಸಿರು ಕರ್ನಾಟಕ ಆಂದೋಲನ

‌ಇಂದು ದಿನಾಂಕ ೨೦.೦೮. ೨೦೧೮ ರಂದು ಅರಣ್ಯ ಇಲಾಖೆಯ ವತಿಯಿಂದ ಸರಕಾರಿ ಪ್ರೌಢಶಾಲೆಯಲ್ಲಿ ಹಸಿರು ಕರ್ನಾಟಕ ಆಂದೋಲನದ ಅಡಿಯಲ್ಲಿ ಹಸಿರು ಕರ್ನಾಟಕಕ್ಕಾಗಿ ಪ್ರತಿಜ್ಞಾವಿಧಿ ಹಾಗೂ ಸಸಿ ನೆಡುವ ಕಾರ್ಯಕ್ರಮ ನೆಡೆಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯೋಪಾಧ್ಯಾಯರಾದ ಶ್ರೀ ಈಶಪ್ಪ ತಳವಾರ ಅವರು ಮರಗಳನ್ನು ಸಂರಕ್ಷಿಸುವ ಆನಿವಾರ್ಯತೆ ನಮ್ಮ ಮೇಲೆ ಬಿದ್ದಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ತುಂಬಾ ಅತಂತ್ರ ಸ್ಥಿತಿಯಲ್ಲಿರುವ ಕೇರಳ ನಮ್ಮ ಕೊಡಗು ಪರಿಸ್ಥಿತಿಗೆ ಮೂಲ ಕಾರಣ ನಾವು ಪರಿಸರ ನಾಶ ಮಾಡಿರುವುದೇ. ನಮ್ಮ ಪರಿಸರವನ್ನು ನಾವು ಉಳಿಸಿಕೊಂಡು ಹೋಗದೇ ಇದ್ದರೆ ಮುಂದಿನ ದಿನಗಳಲ್ಲಿ ಅದೇ ಸ್ಥಿತಿಯನ್ನು ನಾವು ಎದುರಿಸಬೇಕಾಗುತ್ತದೆ ಎಂದು ಮಕ್ಕಳಿಗೆ ತಿಳಿಹೇಳಿದರು.  ಉಪವಲಯ ಅರಣ್ಯಾಧಿಕಾರಿಯಾದ ಶ್ರೀ ಚಿದಾನಂದ ಓಲೇಕಾರ ಮಾತನಾಡಿ ಮಕ್ಕಳು ಪರಿಸರದ ಕುರಿತು ಖಾಳಜಿವಹಿಸಿದರೆ ಮುಂದಿನ ಪ್ರಕೃತಿ ವಿಕೋಪಗಳನ್ನು ತಡೆಯಲು ಸಾಧ್ಯ ಎನ್ನುವ ಮಾತುಗಳನ್ನು ಆಡಿದರು. ಶಾಲಾ ಮಕ್ಕಳಿಂದ ಪರಿಸರ  ಸಂರಕ್ಷಣೆ ಕುರಿತು ನಾಟಕ ಎಲ್ಲರ ಮನ ಸೆಳೆಯಿತು. ಪೆದ್ದನ  ಕೆರೆ ನಾಟಕ ದಲ್ಲಿ ಪರಿಸರ ಉಳುವಿನ ಬಗ್ಗೆ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನು ಉಳಿಸಿ ಮಳೆ ಬಿದ್ದ ನೀರನ್ನು ಸಂಗ್ರಸಿ ಅವುಗಳಿಗೆ ಕುಡಿಯಲು ಅನುಕೂಲ ಮಾಡಿ ಕೊಟ್ಟು  ಪರಿಸರವಾದಿಯೊಬ್ಬ ಕಟ್ಟಿದ ಕೆರೆಗಳ ಕುರಿತಾದ ನಾಟಕ ಹತ್ತಿರದ ಕಾಲ ಕಾಲೇಶ್ವರದ ಪರಿಸರ ಹಾಗೂ ಸುತ್ತಮುತ್ತಲಿನ ಪರಿಸರವನ್ನು ನಾವುಉಳಿಸಿಕೊಳುವ ಬಗೆಯನ್ನು  ಈ ನಾಟಕದಲ್ಲಿ ಪ್ರಸ್ತುತ ಪಡಿಸಿದರು. ನಾಟಕವನ್ನು ರಚಿಸಿ ನಿರ್ದೇಶಿಸಿದ ಗುರುರಾಜ ನಾಟಕ ಶಿಕ್ಷಕರ  ಖಾಳಜಿಯಿಂದ ನಾಟಕ  ಅಚ್ಚುಕಟ್ಟಾಗಿ ಪ್ರದರ್ಶನ ಗೊಂಡಿತು.
ಕೊನೆಯದಾಗಿ ಮಾತನಾಡಿದ ಅರಣ್ಯ  ರಕ್ಷಕರು ಶ್ರೀ ಕಳಕಪ್ಪ ಬ್ಯಾಳಿಯವರು ನೀವು ಮಕ್ಕಳು ಮಾಡಿದ   ಈ ನಾಟಕದಲ್ಲಿ ಸಾಕಷ್ಟು ವಿಚಾರಗಳು ತಿಳಿದು ಬರುತ್ತವೆ. ನಾವು ನಮ್ಮ ಪರಿಸರವನ್ನು ಯಾವ ರೀತಿ ಇಟ್ಟುಕೊಂಡು ಕಾಪಾಡಿಕೊಂಡು ಬರಬೇಕು ಅನ್ನುವುದು ತುಂಬಾ ಅಚ್ಚುಕಟ್ಟಾಗಿ ವಿವರಿಸಿದ್ದಿರಿ ಈ ವಿಚಾರಗಳು ನಿಮ್ಮ ಮನೆಯಲ್ಲಿ ತಿಳಿಸಿ ಪರಿಸರವನ್ನು ಸಂರಕ್ಷಣೆ ಮಾಡವಂತೆ ಹುರಿದುಂಬಿಸಿ ಎಂದು ಸಲಹೆಯನ್ನು ನೀಡಿದರು. ಶ್ರೀ ಶಿವಪ್ಪ  ಇಲಾಳ ಶಿಕ್ಷಕರು ಮಕ್ಕಳಿಗೆಲ್ಲ ಪ್ರಮಾಣ ವಚನ   ಬೊಧಿಸಿದರು. ಕಾರ್ಯಕ್ರಮದಲ್ಲಿ ಜಗದೀಶ ಬಾಸಿಂಗದ, ಮರಿಯಪ್ಪ ಜರಕುಂಟಿ , ಶ್ರೀದೇವಿ ಗುಳಬಾಳ ,  ತಿಪ್ಪಣ್ಣ ರಾಮದುರ್ಗ, ಪ್ರಶಾಂತ ಕಟ್ಟಿ,  ಶ್ರೀಮತಿ ಇಮಾಂಬಿ ರಾ ಯಲಬುರ್ಗಿ  ಹಾಗೂ ಗುರುರಾಜ ನಾಟಕ ಶಿಕ್ಷಕರು ಇದ್ದರು