ಶುಕ್ರವಾರ, ಮೇ 31, 2013

ಮಕ್ಕಳ ಹೆಜ್ಜೆ ಕುಣಿತ






ಶಾಲಾ ಸರಸ್ವತಿ ಪೂಜೆ ಹಾಗೂ ಎಸ್.ಎಸ್.ಎಲ್.ಸಿ ಮಕ್ಕಳ ಬೀಳ್ಕೋಡುಗೆ 
ಸಮಾರಂಭದಲ್ಲಿ ಮಕ್ಕಳೊಂದಿಗೆ ಹಿರಿಯ ಶಿಕ್ಷಕರಾದ ಶ್ರೀ ಸಂಗನಗೌಡ ಪಾಟೀಲ್ ಗುರುಗಳು
 ಹಾಗೂ ದೈಹಿಕ ಶಿಕ್ಷಕರಾದ ಜಗದೀಶ್ ರವರು ಹೆಜ್ಜೆ ಕುಣಿತದ ಹಾಡಿಗೆ ಹೆಜ್ಜೆಯನ್ನು ಮಕ್ಕಳೊಂದಿಗೆ 
ಸೇರಿ ಹಾಕಿದರು. ಇಲ್ಲಿ ಮಕ್ಕಳೊಂದಿಗೆ ಯಾವುದೇ ಮುಜುಗರ ಪಡದೇ ಶಿಕ್ಷಕರು ಕುಣಿದು
 ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ಸಾಹ ತುಂಬುವಲ್ಲಿ ವಹಿಸಿದ ಪಾತ್ರವನ್ನು ಕೊಂಡಾಡಲೇ ಬೇಕಾದದ್ದು. 
ನಮ್ಮ ಶಾಲೆಯಲ್ಲಿ ಐ.ಎಫ್ ಎ ವತಿಯಿಂದ "ಮಕ್ಕಳ ಹೆಜ್ಜೆಗಳು ಜಾನಪದದತ್ತ..." 
ಕಾರ್ಯಕ್ರಮದಲ್ಲಿ ಊರಿನ ಹಿರಿಯರಿಂದ ಮಕ್ಕಳು ದಿನಾಲೂ ಇಳೆ ಹೊತ್ತಿನಲ್ಲಿ 
ಕಾಡಿ-ಬೇಡಿ ಹೆಜ್ಜೆಯ ಕುಣಿತವನ್ನು  ಕಲಿತು ಬಂದು ಇಂದು 
ಎಲ್ಲ ಶಾಲಾ ಮಕ್ಕಳು-ಶಿಕ್ಷಕರ ಮುಂದೆ ಪ್ರದರ್ಶನ ನೀಡುತ್ತಾ 
ಸಂಭ್ರಮದಿಂದ ಹಿರಿಯ ವಿಧ್ಯಾರ್ಥಿಗಳ ಬೀಳ್ಕೋಡುಗೆಗೆ ಸುಂದರತೆಯನ್ನು ನೀಡಿದರು. 


ಸೋಬಾನೆ ಪದಗಳು




ಬುಧವಾರ, ಮೇ 1, 2013

ಜರ್ಮನಿಯ ಕ್ರಿಸ್ಟೋಫ್ ಬೇಟಿ

                                 ಮಕ್ಕಳ ಹೆಜ್ಜೆಗಳು  ಯೋಜನೆಯನ್ನು  ವೀಕ್ಷಿಸಲು IFA ಬೆಂಗಳೂರಿನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಪ್ರಕಾಶ ರವರೊಂದಿಗೆ ಜರ್ಮನಿಯ ಗೋಥೆ ಇನ್ ಸ್ಟಟ್ಯೂಟ್ ಮ್ಯಾಕ್ಸ್ ಮುಲ್ಲರ ಭವನದ ಶ್ರೀ ಕ್ರಿಸ್ಟೋಫ್ ಅವರು ನಮ್ಮ ಹಳ್ಳಿ ಜಹಗೀರ ಗುಡದೂರ ಶಾಲೆಗೆ ದಿನಾಂಕ 13.03.2013 ಬೇಟಿ ನೀಡಿ ಇಡೀ ದಿನ ನಮ್ಮೊಂದಿಗೆ ಕಳೆದರು. ಮಕ್ಕಳೊಂದಿಗೆ ಶಿಕ್ಷಕರು ಭಾಗವಹಿಸಿ ಸಂವಹನ ಮಾಡಲು ಅನುಕೂಲವಾಯಿತು. ವಿವಿಧ ದೇಶಗಳಲ್ಲಿ ಕಾರ್ಯ ನಿರ್ವಹಿಸಿದ ಕ್ರಿಸ್ಟೋಫ್ ಅವರಿಗೆ ಮಕ್ಕಳ ನೂರಾರು ಪ್ರಶ್ನೆಗಳಿಗೆ ಸರಳವಾಗಿ ಉತ್ತರವನ್ನು ನೀಡಿದರು. 








ಗುರುವಾರ, ಫೆಬ್ರವರಿ 14, 2013

ಮೊಹರಂ ಒಂದು ನೋಟ..



ಶ್ರೀ ಆನಂದಪ್ಪ ಕುರಿ 


ಮಕ್ಕಳ ಹೆಜ್ಜೆಗಳು ಯೋಜನೆಯಡಿಯಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಇಂದು ಶ್ರೀ ಆನಂದಪ್ಪ ನವರು "ಮೊಹರಂ" ಆಚರಣೆಯ ಹಿನ್ನಲೆ ಹುಟ್ಟು, ಬೆಳೆದು ಬಂದ ದಾರಿ ಸದ್ಯ ಪ್ರಸ್ತುತ ನಮ್ಮ ಊರು ಬೇರೆ ಬೇರೆ ಭಾಗಗಳಲ್ಲಿ ಆಚರಿಸುವ ರೀತಿಗಳನ್ನು ತಮ್ಮ ಉಪನ್ಯಾಸದಲ್ಲಿ ತಿಳಿ ಹೇಳಿದರು ಮಕ್ಕಳಿಗೆ. ನಮ್ಮೊಂದಿಗೆ ಮುಖ್ಯ ಗುರುಗಳು ಹಾಗೂ ಇತರೆ ಶಿಕ್ಷಕರು ಹಾಜರಿದ್ದರು. ಮಕ್ಕಳು ತಾವು ಆಡಿ ಬೆಳೆದ ಈ ಹಬ್ಬ ಆಚರಣೆಗಳ  ಹಿನ್ನಲೆಯನ್ನು ಕೇಳಿ ಹುಟ್ಟಿದ ಹಲವಾರು ಪ್ರಶ್ನೆಗಳಿಗೆ ಅತಿಥಿಗಳು ಉತ್ತರ ನೀಡಿದರು. ಇದು ಮಕ್ಕಳ ಜಾನಪದದ ಹುಡಕಾಟದಲ್ಲಿ ಹಿನ್ನಲೆಯ ಜ್ಞಾನ ಪಡೆದಾಗ ಹೆಚ್ಚಿನ ಹೊಳಹುಗಳು ದೊರಕುವ ಆಶಾ ಭಾವದ ಜೊತೆಗೆ ಮಕ್ಕಳಿಗೆ ಹೆಚ್ಚಿನ ಸಹಕಾರ ದೊರಕುವ ದೃಷ್ಟಿ ಇಲ್ಲಿ ಹೊಂದಲಾಗಿತ್ತು.

ಭಾನುವಾರ, ಫೆಬ್ರವರಿ 10, 2013

ದೃಶ್ಯ ಕಾರ್ಯ

ದೃಶ್ಯ ಕಾರ್ಯ (Scene work) ವನ್ನು ಎನ್.ಎಸ್. ಡಿ ಪದವೀಧರೆ  ಸಹನ.ಪಿ ಅವರು ಮೂರು ದಿನಗಳ ಕಾಲ ನಮ್ಮ ಶಾಲೆಯಲ್ಲಿ ಕಾರ್ಯಗಾರವನ್ನು ನಡೆಸಿಕೊಟ್ಟರು. 












ಶನಿವಾರ, ಜನವರಿ 26, 2013

ಹೆಜ್ಜೆ ಕುಣಿತದ ಕಾರ್ಯಗಾರ

ಮೊಹರಂ ಪದ  ಹಾಗೂ  ಹೆಜ್ಜೆ ಕುಣಿತದ ಕಾರ್ಯಗಾರವನ್ನು  ನಮ್ಮ ಶಾಲೆಯಲ್ಲಿ ದಿನಾಂಕ ೨೦.೦೧.೨೦೧೨ ರಂದು ಭಾನುವಾರ ಮಕ್ಕಳಿಗೆ ಹೆಜ್ಜೆ ಕುಣಿತದ  ಪ್ರಾಥಮಿಕ ಜ್ಞಾನವನ್ನು ನೀಡಲು ನಾವು ನಮ್ಮ "ಮಕ್ಕಳ  ಹೆಜ್ಜೆಗಳು ಜಾನಪದದತ್ತ..." ಯೋಜನೆಯಡಿಯಲ್ಲಿ ಕೈಗೊಂಡಿದ್ದೇವು. ಶಿವಮಲ್ಲಪ್ಪ ಹಾಗೂ ಮಹಾಂತೇಶ  ಅವರ ಗೆಳೆಯರು ನಮ್ಮ ವಿದ್ಯಾರ್ಥಿಗಳಿಗೆ ದಿನ ಪೂರ್ತಿ ತರಬೇತಿ ನೀಡಿದರು.  












ಮಂಗಳವಾರ, ಜನವರಿ 22, 2013

ಸೋಬಾನೆ ಪದಗಳ ಪ್ರತ್ಯಾಕ್ಷಿಕೆ.


                                                           




ಮಕ್ಕಳ ಹೆಜ್ಜೆಗಳು ಜಾನಪದದತ್ತ... ಕಾರ್ಯಕ್ರಮದಡಿಯಲ್ಲಿ  ದಿನಾಂಕ ಜನವರಿ ೫, ೨೦೧೩ ರಂದು ಶಾಲಾ ಅವಧಿಯ ನಂತರ ಜಾನಪದ ಹಾಡುಗಳಲ್ಲಿ ಬಿಸೋ ಪದ, ಕುಟ್ಟೋ ಪದ, ಸೋಬಾನೆ ಪದಗಳ  ಹಾಡುಗಳನ್ನು ಮಕ್ಕಳಿಗೆ ಹೇಳಿಸಿ ಕೊಡುವುದು ಮತ್ತು ಸ್ಥೂಲವಾದ ಪರಿಚಯವನ್ನು ನೀಡುವುದಾಗಿತ್ತು.  ಮಕ್ಕಳಿಗೆ ನಮ್ಮ ಕ್ರಿಯಾ ಯೋಜನೆಯಂತೆ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲು ಮೊದಲೂ ಊರಿನಲ್ಲಿ ನಿರಂತರವಾಗಿ ಮನೆಯ ಪೂಜಾ,
ಮದುವೆ, ಸೀಮಂಥ ದಂಥಹ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದ ನಮ್ಮ ಶಾಲೆಯ ಪಾರಿಚಾರಕಿ ಶ್ರೀಮತಿ ಯಂಕಮ್ಮ ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿನಿ ಕುಮಾರಿ ಅನಿತಾ ಪೋಲೀಸ್ ಪಾಟೀಲ್ ಇಬ್ಬರನ್ನು ವಿದ್ಯಾರ್ಥಿಗಳ ಮುಂದೆ ತಮ್ಮ ಜಾನಪದದ ಹಾಡುಗಳನ್ನು ಹಂಚಲು ಆಹ್ವಾನಿಸಿದೇವು. ಊರಿನ ಮನೆಗಳಲ್ಲಿ ಎಲ್ಲೋ ಕತ್ತಲೆಯಲ್ಲಿ, ಮೂಲೆಯಲ್ಲಿ ಕುಳಿತು ಹಾಡುಗಳನ್ನು ಹಾಡುವ ಇವರಿಗೆ ಒಂದು ಹೊಸ ಅನುಭವ. ವೇದಿಕೆಯೇ ಬೇಕಾಗಿಲ್ಲ ಮಕ್ಕಳ ನಡುವೆ ಕೂಡುವ ವ್ಯವಸ್ಥೆ ಮಾಡುವ ಆಲೋಚನೆಯನ್ನು ಮಾಡಿದ್ದೇವು. ಆದರೆ ನಮ್ಮ ವಿಧ್ಯಾರ್ಥಿನಿಗಳೇ ಆದ ಶರಣಮ್ಮ ಪೋಲೀಸ್ ಪಾಟೀಲ್ ಹಾಗೂ 


 ಸೋಬಾನೆ ಪದ ಶುದ್ಧ ದೇಸಿಯ ಗ್ರಾಮೀಣ ಭಾಗದ ಪ್ರಮುಖ ಜಾನಪದ ಗೀತೆಗಳಲ್ಲಿ ಒಂದು. ಈ ಸೋಬಾನೆ ಪದಗಳನ್ನು ಪ್ರಮುಖವಾಗಿ ಮಹಿಳೆಯರು ಶುಭ-ಸಮಾರಂಭಗಳಲ್ಲಿ ಹಾಡುತ್ತಾರೆ. 

ಮಕ್ಕಳ ಕಥೆಗಳ ವಾಚನ


                                                         

ಮಂಗಳವಾರ, ಜನವರಿ 15, 2013

K.S.Q.A.A.C ಯ ಮೌಲ್ಯಾಮಾಪನ

                             K.S.Q.A.A.C ಯ ಮೊದಲ ಹಂತದ ಪರೀಕ್ಷೆ ಹಾಗೂ ಮೌಲ್ಯ ಮಾಪಕರೊಂದಿಗೆ ಮಕ್ಕಳು ಇರುವ ಛಾಯಾ ಚಿತ್ರಗಳು ಇಲ್ಲಿವೆ. ರಾಜ್ಯದ ಆಯ್ದ ಶಾಲೆಗಳಲ್ಲಿ ಪ್ರಾಥಮಿಕವಾಗಿ ಭೌತಿಕ ಹಾಗೂ ಶೈಕ್ಷಣಿಕ ಅಂಶಗಳನ್ನು ಪರೀಕ್ಷಿಸಲು ಆಗಮಿಸಿದ್ದರು. ೯ ನೇ ತರಗತಿ ಮಕ್ಕಳಿಗೆ ಪರೀಕ್ಷೆಗಳನ್ನು ನಡೆಸಿ ಶಾಲೆಯ ಮೌಲ್ಯಾಮಾಪನವನ್ನು  ನಡೆಸಿದರು.



\



ಗುರುವಾರ, ಡಿಸೆಂಬರ್ 27, 2012

ಶೈಕ್ಷಣಿಕ ಪ್ರವಾಸ


ಬನವಾಸಿ 
ಶಿರಸಿ 
ಇಡಗುಂಜಿ 
ಜೋಗ್ 
ಮುರ್ಡೆಶ್ವರ 
ಮರವಂತಿ 
ಮಲ್ಪೆ 
ಉಡುಪಿ 
ಮಣಿಪಾಲ 
ಶೃಂಗೇರಿ 

ದಿನಾಂಕ : ಡಿಸೆಂಬರ್ ೨೧ ರ ರಾತ್ರಿ ೧೦.೩೦ ಕ್ಕೆ ಹೊರಟು ಡಿಸೆಂಬರ್ ೨೪ ರ ಮುಂಜಾನೆ ಶಾಲೆಗೆ ಮರಳಿದ್ದು.




ರಾಘವೇಂದ್ರ ಟಿ.ವಿಶ್ವಕರ್ಮ  ಗಣಿತ ಗೌರವ ಶಿಕ್ಷಕರು 

                  ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಜಹಗೀರ ಗುಡದೂರ ಹೊರ ವಲಯದಲ್ಲಿ ಶಾಂತ ದೇಗುಲದಂತಿರುವ ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ ನಾನು ಕೂಡ ಶೈಕ್ಷಣಿಕ ಪ್ರವಾಸದಲ್ಲಿ ಭಾಗಿಯಾಗಿದ್ದೆ.

                      ಮುದುಡಿದ ಮನಸಿಗೆ ಅರಳುವ ಪರಿಸರದ ಆ ಎರಡು ದಿನದ ಪ್ರವಾಸ ತುಂಭಾ ಚೆನ್ನಾಗಿತ್ತು.ಮಕ್ಕಳೊಡನೆ ಮಕ್ಕಳಾಗಿ ಸಂತೋಷದಿಂದ  ಶಿಕ್ಷಕರು ಅಲ್ಲಿ ಭಾಗಿಯಾಗಿದ್ದೇವು. ಪ್ರತಿದಿನ ಶಾಲಾ ವಾತವರಣದಿಂದ ಬೇಸತ್ತ ಮಕ್ಕಳು ಆ ಎರಡು ದಿನದ ಹೊಸ ಪ್ರಪಂಚಕ್ಕೆ ಸಾಕ್ಷಿಯಾದರು.

                       ನಮ್ಮ ಪ್ರವಾಸಕ್ಕೆ ಒಟ್ಟು ಎರಡು ಬಸ್ಸುಗಳಿದ್ದವು. ಒಂದು ದೊಡ್ಡ ಬಸ್ಸು ಮತ್ತೊಂದು ಮಿನಿ ಬಸ್ಸು ಒಳ್ಳೆಯ ಡ್ರೈವರ್ ಗಳಲ್ಲದೆ ಅಡುಗೆ ಭಟ್ಟರ ಅದರ ಸಂಗಡ ಇದ್ದರು.ಮಕ್ಕಳಿಗೂ ಮತ್ತು ಶಿಕ್ಷಕರಿಗೂ ಹೊಂದುವ ರೀತಿಯಲ್ಲಿ ಆ ಎರಡು ಬಸ್ಸುಗಳು ಮದುವೆ ದಿಬ್ಬಣದಂತೆ ರೆಡಿ ಆಗಿದ್ದವು. ನಾವೆಲ್ಲರೂ ಸರಿಯಾದ ಸಮಯಕ್ಕೆ ನಮ್ಮೆಲ್ಲ ಲಗೇಜುಗಳನ್ನು ಹಿಡಿದು ಜೊತೆಗೆಂದು ಕ್ಯಾಮರ ತೆಗೆದುಕೊಂಡು ರಾತ್ರಿ ಪೂಜೆಯೊಂದಿಗೆ ದೇವರ ನೆನೆದು ಹೊರಟೆವು. ಮುಂಜಾನೆ ಚುಮು-ಚುಮು ಬೆಳಕು ಬೀಳುವ ಮುನ್ನ ಕದಂಬರ ನಾಡು ಬನವಾಸಿ ತಲುಪಿದೆವು. ಮುಂಜಾನೆ ಕಾರ್ಯಗಳನ್ನು ಮುಗಿಸಿ ಕೊಂಡು ದೇವಾಲಯವನ್ನು ಅಲ್ಲಿರುವ ಅರ್ಚಕರೊಬ್ಬರ ಮಾಹಿತಿಯಿಂದ ಅದರ ಹಿನ್ನಲೆಯನ್ನು ಅರಿತುಕೊಂಡು ಚೆನ್ನಾಗಿ ನೋಡತೊಡಗಿದೆವು.


                          ಅಲ್ಲಿಯ ಒಂದು ವಿಷೇಷವೆಂದರೇ ನಂದೀಶ. ಅಕ್ಕ-ಪಕ್ಕದಲ್ಲಿರುವ ಪಾರ್ವತಿ ಪರಮೇಶ್ವರರ ಗುಡಿಗಳನ್ನು ಆ ನಂದಿ ಒಂದು ಕಣ್ಣಿಂದ ಪರಮೇಶ್ವರ ಮೂರ್ತಿಯನ್ನು ಮತ್ತೊಂದು ಕಣ್ಣಿಂದ ಪಾರ್ವತಿ ವಿಗ್ರಹವನ್ನು ನೋಡುವ ಕೆತ್ತನೆ ತುಂಬಾ ಅಚ್ಚರಿ ಮೂಡಿಸಿತು. ಜೊತೆಗೊಂದಿಷ್ಟು ಪೋಟೋಗಳನ್ನು ತೆಗೆಸಿಕೊಂಡು ಟಿಫಿನ್ ಸಮಯಕ್ಕೆ ಬಿಟ್ಟರು. ಬಿಸಿ-ಬಿಸಿ ಉಪ್ಪಿಟ್ಟು ಮಾಡಿದ್ದರು ಎಲ್ಲರೂ ಟಿಫಿನ್ ಮುಗಿಸಿ ಮುಂದಿನ ಪಯಣಕ್ಕೆ ಅಣಿ ಆದೆವು. ನಂತರ ನಾವು ಅಲ್ಲಿಂದ ಶಿರಸಿ ಮಾರಿಕಾಂಬಕ್ಕೆ ತೆರಳಿದೆವು. 



                              ಸಾಲು ಸಾಲಾಗಿ ರೋಡು ದಾಟಿ ದೇವಾಲಯ ತಲುಪಿ ದರುಶನ ಪಡೆದೆವು. ಅಲ್ಲಿ ಕೂಡ ಒಂದು ವಿಶೇಷವಿತ್ತು. ಅದೇನೆಂದರೆ ಆ ದೇವಾಲಯದಲ್ಲಿ  ಎರಡು ಕೋಣಗಳನ್ನು ಸಾಕಿದ್ದರು. ಅಲ್ಲದೆ ಅವು ಸಕತ್ತಾಗಿ ತಿಂದು ಚೆನ್ನಾಗಿ ಕೊಬ್ಬಿದವು. ಅಂತು ಅಲ್ಲಿ ಸ್ವಲ್ಪ ಪೋಟೋ ಕಲೆಕ್ಟ್ ಮಾಡಿ ಅಲ್ಲಿಂದ ನಮ್ಮ ಪಯಣ ಜೋಗಕ್ಕೆ ಸಾಗಿತು. ಮಧ್ಯಾಹ್ನದ ಹೊತ್ತಿಗೆ ಜೋಗಕ್ಕೆ ತಲುಪಿದೆವು. ಪ್ರಕೃತಿಯ ಬಯಲಲ್ಲಿ ಅಚ್ಚರಿ ಮೂಡಿಸುವ ಹಾಗೆ ನಿಸರ್ಗದ ಮಡಿಲಲ್ಲಿ ನಿರ್ಮಾಣಗೊಂಡಿದ್ದ ಜೋಗವನ್ನು ಕಂಡು ನಮಗೆಲ್ಲರಿಗೂ ನಮ್ಮೂರಿನ ಪರಿವೆ ಮರೆತಿತ್ತು. ಮಕ್ಕಳೊಂದಿಗೆ ನಾವೆಲ್ಲರೂ ಸಾವಿರದ ನಾಲ್ಕು ನೂರು ಮೆಟ್ಟಿಲು ಕೆಳಗಿಳಿದು ಜೋಗದ ಗರ್ಭದಲ್ಲಿ ತುಸು ಹೊತ್ತು ನೆಲಸಿದೆವು. ಎಲ್ಲರಿಗೂ ಮರೆಯಲಾಗದ ಸಮಯವದು ಆ ನಿಸರ್ಗದ ಮಡಿಲಲ್ಲಿ ಕೆಲವಿಷ್ಟು ಪೋಟೋ ಸೆರೆ ಹಿಡಿದೆವು. ನಂತರ ಆ ಮೆಟ್ಟಿಲುಗಳನ್ನು ಏರಲು ನಾವೆಲ್ಲರೂ ಹರಸಾಸವನ್ನೇ ಮಾಡಬೇಕಾಯಿತು. ಅಂತು ಉಸ್ಸಪ್ಪ ಅಂತ ಏರಿದೆವು. ಅಷ್ಟರಲ್ಲಿ ನಮ್ಮ ಬಸ್ಸುಗಳು ಕಾಲುವೆಯೊಂದರ ಪಕ್ಕ ವಿಶ್ರಾಂತಿ ಪಡೆಯುತ್ತಿದ್ದವು. ಜೊತೆಗೆ ಭಟ್ಟರ ಕಾಯಕವು ನಡೆದಿತ್ತು. ನಾವೆಲ್ಲರೂ ನಿಸರ್ಗದ ಮಡಿಲಲ್ಲಿ ಕಾಲುವೆಯ ಪಕ್ಕ ಕೂತು ಸ್ನಾನ ಮಾಡಿದೆವು. ಭಟ್ಟರು ತಯಾರಿಸಿದ ಭೋಜನವನ್ನು ಹೊಟ್ಟೆ ತುಂಬಾ ಜಡಿದು ತುಸು ಹೊತ್ತು ಕಳೆದು ಪುನಃ  ನಮ್ಮ ಪಯಣ ಪ್ರಾರಂಭವಾಯಿತು.








ನಮ್ಮ ಮುಂದಿನ ಪಯಣ ಇಡಗುಂಜಿ ಗಣಪ ಅಲ್ಲಿಗೆ ತೆರಳಿ ದರ್ಶನ ಪಡೆದು ತಡ ಮಾಡದೇ ಮುರ್ಡೆಶ್ವರ ಕ್ಕೆ ತೆರಳಲು ಆತುರದಲ್ಲಿದ್ದೇವು. ಕಾರಣ ಅಲ್ಲಿಯ ಸೂರ್ಯಸ್ತ ವೀಕ್ಷಿಸಲು. 







ನಾವು ಮುರ್ಡೆಶ್ವರ ಮುಟ್ಟುವ ಹೊತ್ತಿಗೆ ಸೂರ್ಯಸ್ತ ಸ್ವಲ್ಪ ಭಾಗ ಉಳಿದಿತ್ತು ತುಂಬಾ ಬೇಸರಗೊಂಡು ಚಡಪಡಿಸುತ್ತಾ ಬೀಚ್ ಗೆ ಬಂದೇವು. ಅಲ್ಲಿ ಬೋಟಿನ ಸಾಹಸ ನೋಡುತ್ತಾ ನೀರಿನ ಅಲೆಗಳಿಗೆ ಕಾಲೊಡ್ಡಿ ಸುಂದರ ರಾತ್ರಿಯನ್ನು ಬರಮಾಡಿಕೊಂಡೆವು. ಕತ್ತಲು ಆವರಿಸುತ್ತಿದ್ದಂತೆ ವಿಶ್ರಾಂತಿ ನಿಲಯವೊಂದನ್ನು ತಲುಪಿ ಸ್ವಲ್ಪ ಫ್ರೆಶ್  ಆಗಿ ಹೊಟ್ಟೆ ತುಂಬಾ ಭಟ್ಟರ ಅಡುಗೆಯುಂಡು ಕಣ್ಣು ತುಂಬಾ ನಿದ್ರಿಸಲು ರೆಡಿಯಾದೆವು. ಎಲ್ಲರೂ ನೆಲ ಸಿಕ್ಕರೆ ಸಾಕಪ್ಪ ಅಂತ ಹೇಳಿ ಮಲಗಿ ಬಿಟ್ಟೆವು. ತಾಸಿನಲ್ಲಿ  ಸ್ಮಶಾನ ಮೌನ. ಎಲ್ಲರು ಸತ್ತ ಹೆಣದಂತೆ ಬಿದ್ದೆವು. ಕಾರಣ ಮುಂಜಾನೆ ೪ ಕ್ಕೆ ಏಳಬೇಕಾಗಿತ್ತು.