
ಒಂದು ನರಿ ಹಾಗು ಒಂದು ಕಾಡು ಬೆಕ್ಕು ಹಳ್ಳಿಯ ಹೊರ ಭಾಗದಲ್ಲಿ ಸಂಧಿಸಿದವು. ಇದು ತುಂಭಾ ಆಪಾಯಕಾರಿ ಸ್ಥಳ. ನಾಯಿಗಳ ಕಾಟ ಇಲ್ಲಿ ವಿಪರೀತವಾಗಿ ಇದೆ ಎಂದು ಬೆಕ್ಕು ಹೇಳಿತು.ನಾಯಿಗಳು ನನ್ನನ್ನು ಏನು ಮಾಡಲಾರವು ಎಂದು ನಿರ್ಲಕ್ಷ್ಯ್ತೋರಿದ ನರಿ ಆ ಮೂರ್ಖಪ್ರಾಣಿಗಳಿಂದ ಪಾರಾಗಲು ತನ್ನಲ್ಲಿ ನೂರಾರು ತಂತ್ರಗಳಿವೆ ಎಂದು ಕೊಚ್ಚಿಕೊಂಡಿತು. ಅಷ್ಟರಲ್ಲಿಯೇ ನಾಯಿಯ ಗುಂಪೊಂದು ಅತ್ತ ಕಡೆ ಬರುತ್ತಿರುವುದನ್ನು ಅವು ನೋಡಿದವು. ಬರುತ್ತೇನೆ ಗೆಳೆಯ ಇಲ್ಲಿಂದ ನಾನು ಕಾಲು ಕೀಳುವುದು
ಮೇಲು ನಿನ್ನಂತೆ ನೂರಾರು ಉಪಾಯಾಗಳು ನನ್ನ ಬಳಿ ಇಲ್ಲ. ನಾಯಿಗಳಿಂದ ಪಾರಾಗಲು ಮರ ಏರುವುದು ಒಂದೇ ನನ್ನ ಬಳಿ ಇರುವ ಉಪಾಯ. ಎಂದು ಹೇಳಿ ಬೆಕ್ಕು ಓಡಿ ಹೋಗಿ ಎತ್ತರದ ಮರವನ್ನು ಏರಿತು. ನರಿ ತನ್ನ ಬಳಿ ಇರುವ ನೂರಾರು ತಂತ್ರಗಳಲ್ಲಿಯಾವುದನ್ನು ಬಳಸಿದರೆ ನಾಯಿಗಳಿಂದ ಪಾರಾಗಬಹುದು ಎಂದು ಯೋಚಿಸುವಷ್ಟರಲ್ಲಿಯೇ ನಾಯಿಗಳು ನರಿಯನ್ನು ಆಕ್ರಮಿಸಿ ಬಿಟ್ಟವು.
ಭೀಮಪ್ಪ. ಬಿ. ಕಲ್ಲೂರು
೮ ನೇ ತರಗತಿ, ಜಹಾಗಿರ ಗುಡದೂರ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
Thank you.
.................
Gururaj.L
Drama Teacher