ಶನಿವಾರ, ಮೇ 10, 2014

ರಂಗಭೂಮಿಯ ಅವಶ್ಯಕತೆ ೧

          ಹೆಜ್ಜೆಗಳ ಮುಖಾಂತರ ನಾನೇನು ಸಾಗುತ್ತಿದ್ದೇನೆ. ಇದು ನಾಟಕ ಶಿಕ್ಷಕನಾಗಿ ನಾನು ನೇಮಕ ಹೊಂದಿದ ನಂತರ ಆದ ಅನುಭವಗಳಿಂದ ಹುಡುಕಿದ ಒಳ ಮಾರ್ಗ. ಆದರೆ ನನಗೆ ನಂತರದಲ್ಲಿ ತಿಳಿದಿದ್ದು ಈ ಹಾದಿಯು ರಂಗಭೂಮಿಯ ಪೂರಕವಾದದ್ದು ಎಂದು. ಹೈಸ್ಕೂಲ್ ವಿದ್ಯಾರ್ಥಿಗಲಿಗೆ ಪಾಠ ಮಾಡುವಾಗ ನಾನು ನನ್ನನ್ನು ಕಾಣುವೇನೋ ಎಂದು ಹುಡುಕುತ್ತಿದ್ದೆ. ಆದರೆ ಕಷ್ಟ ಅದಕ್ಕೆ ಪೂರಕವಾಗಿ ಬೇಕಾದ ಸಾಕಷ್ಟು ಅಂಶಗಳು ಇಲ್ಲದಿರುವುದು. ಅದು ಒಂದು ವಸ್ತುವಾಗಿ ಕಾಣುವುದಕ್ಕಿಂತ ಒಂದು ವಲಯವಾಗಿ ಸೃಷ್ಟಿಸಬೇಕಾಗಿದೆ. 

  ಬೀದಿ ನಾಟಕ ಮಾಡ್ಕೊಂಡು ಹುಡಗರು ಹಾಳಾದರು ಎಂದು ಎಷ್ಟೋ ಜನ ಯಾಕೆ, ನಮ್ಮ ಮನೆಯಲ್ಲಿ ತಂದೆ,  ಬಂಧು ಬಳಗ ಹೇಳಿದಾಗ ಒಂದು ರೀತಿಯಲ್ಲಿ ನನಗೂ ಅನುಮಾನ ಬಂದದ್ದು ಇದೆ. ಆದ್ರೆ ನನ್ನ ಪಾಠಗಳನ್ನು ನಾಟಕೀಯ ರೀತಿಯಲ್ಲಿ ಅರ್ಥೈಸಿಕೊಂಡು ಕನಿಷ್ಟ ಅಂಕ ಪಡೆದು ಉತ್ತೀರ್ಣನಾಗಿ ಸಾಗುತ್ತಿದ್ದದ್ದು ಸಮಾಧಾನದ ಸಂಗತಿಯಾಗಿತ್ತು. ಅತಿ ಬುದ್ಧಿವಂತನಲ್ಲದ ಮತ್ತು  ಅತ್ಯಂತ ದಡ್ಡನೂ ಅಲ್ಲದವನು ನಾನಗಿದ್ದೆ. ಇಂದಿನ ಮಕ್ಕಳನ್ನೂ ನೋಡಿದಾಗ "ಶಿಕ್ಷಣ"  ಮಕ್ಕಳ ಹಕ್ಕನ್ನೇ ಕಿತ್ತಿಕೊಳ್ಳುತ್ತಿದೆಯೋ ಎಂದೆನಿಸುತ್ತದೆ. ಆ ಮಗುವನ್ನು ಅರ್ಥೈಸಿಕೊಳ್ಳಲು ಮತ್ತು ಆ ಮಗುವಿಗೆ ಅರ್ಥೈಸುವಷ್ಟು ನಮಗೆ (ವಿಷಯ ಶಿಕ್ಷಕರಿಗೆ) ಸಮಯವಿಲ್ಲ. ಇದು ಎಲ್ಲ  ಶಿಕ್ಷಕರಿಗೂ ತಿಳಿದಿರುವಂಥ ವಿಷಯ. ಪ್ರಾಥಮಿಕದಲ್ಲಿ ತರಬೇತಿ, ಗಣತಿ..... ಪ್ರೌಢಶಾಲೆಯಲ್ಲಿ ಪಟ್ಯ ಪೂರೈಸಬೇಕು ಎಂಬ ತರಾತುರಿ. ಹಾಗಾದರೆ ದೊರಕುವ ಕೆಲವೇ ದಿನದ ಅವಧಿಗಳಲ್ಲಿ ಆ ಮಗುವನ್ನು ಗಮನಿಸುವುದಾದರು ಹೇಗೆ...?  ಹೀಗೆ ಸಾಲು ಸಾಲು ಪ್ರಶ್ನೆಗಳು ಸದಾ ಕೆದುಕುತ್ತಲೇ ಇರುತ್ತೆ.  ಒತ್ತಡ ಹಾಕಿದರೆ ಮಕ್ಕಳು ಶಾಲೆಗಳನ್ನೇ ಮರೆತು ಬಿಡುತ್ತಾರೆ.

          ರಂಗಭೂಮಿಯ ಮುಖಾಂತರ ಸೆಳೆಯಲು ನಾನು ಹೊಸ ಮಾರ್ಗಗಳನ್ನು ಸಿದ್ದ ಪಡಿಸಿ ಅದರಂತೆ ಮಕ್ಕಳನ್ನು ಸೆಳೆಯಲು ಪ್ರಯತ್ನವನ್ನು ಮಾಡುತ್ತಿದ್ದೇನೆ. ಮಕ್ಕಳ ಸಮಸ್ಯಯನ್ನು ನಾವು ಶಿಕ್ಷಕರು ಅರ್ಥ ಮಾಡಿಕೊಳ್ಳದಿದ್ದರೆ ಮತ್ತ್ಯಾರೂ ಅರ್ಥ ಮಾಡಿಕೊಳ್ಳುವುದು. ಮಕ್ಕಳಿಗೆ ರಂಗಭೂಮಿ ಅಭಿವ್ಯಕ್ತಿಸಲು ಇರುವ ಸರಳ ಹಾಗೂ ಪ್ರಧಾನವಾದ ಮಾಧ್ಯಮ. ನನಗೆ ನನ್ನ ತರಗತಿಯ ಪಾಠಗಳು ಅರ್ಥವಾಗಿದ್ದು ರಂಗ ಮುಖೇನಾನೇ. ಮಕ್ಕಳನ್ನು ನಾವು ಅವರಿಗೆ ತಕ್ಕ ರೀತಿಯಲ್ಲಿ ಬೋಧಿಸಬೇಕಾಗುತ್ತದೆ. ನಾನು ಮತ್ತೊಬ್ಬರ ಕುರಿತು ಕೇವಲವಾಗಿ ಹೇಳಲು ಪ್ರಯತ್ನಿಸುತ್ತಿಲ್ಲ, ದಾರಿ ನಿಮ್ಮದೇ ಆಗಿದ್ದರೆ ಸುಲುಭವಾಗಿ ಅರ್ಥೈಸಲು ಸಾಧ್ಯ. ಪ್ರಾಥಮಿಕದಲ್ಲಿ ಕೆಲವು ಮಕ್ಕಳು ಬೇಗ ಅರ್ಥ ಮಾಡಿಕೊಳ್ಳಬಹುದು ಇನ್ನೂ ಕೆಲವು ಮಕ್ಕಳು ನಿಧಾನವಾಗಿ ಅರ್ಥೈಸಿಕೊಳ್ಲಬಹುದು. ಆದರೆ ಪಾಲಕರೇ ಆಗಲಿ ಶಿಕ್ಷಕರೇ ಆಗಲಿ ತಾಳ್ಮೆಗೆಡದೆ ಸಣ್ಣ ಬದಲಾವಣೆಯನ್ನು ಅವನಲ್ಲಿ ಮಾಡಲು ಪ್ರಯತ್ನಿಸಿದರೆ, ಖಂಡಿತ ಮುಂದೆ ಅವನಲ್ಲಿ ಆಸಕ್ತಿಯ ಜೊತೆ ಕಲಿಯುವ ಹಂಬಲ ಹೆಚ್ಚಾಗಬಹುದು.

(ಮತ್ತೇ ಸಿಗೋಣ)

ಬುಧವಾರ, ಏಪ್ರಿಲ್ 2, 2014

ಕುಷ್ಟಗಿಯ ಜಹಗೀರಗುಡದೂರನಲ್ಲಿ ರಂಗ ಶಿಕ್ಷಣ



ಹೊಸ ಹುಡುಕಾಟದತ್ತ ಚಿಂತನೆಗಳು ನಡೆಸಲಾಗುತ್ತಿದ್ದು, ಮಕ್ಕಳ ಹಿತ ದೃಷ್ಟಿಯಿಂದ ಬದಲಾವಣೆಗಳ ಹೊಸ ದಾರಿಗಳನ್ನು ಹುಡುಕಾಟ ನಡೆಸಲಾಗುತ್ತಿದೆ. ಬಡತನದಿಂದ ಹೊಟ್ಟೆ ಹೊರೆಯಲಿಕ್ಕೆ ಬೆಂಗಳೂರು, ಮಂಗಳೂರು, ಗೋವದಂಥ ಮಹಾನ್ ನಗರಗಳತ್ತ ಮುಖಮಾದಿ ಹೊರಡುತ್ತಿರುವ ಪಾಲಕರು ಮಕ್ಕಳ ಕಲಿಕೆಗೆ ಹಿನ್ನಡೆಯಾಗಲು ಇದು ಒಂದು ಕಾರಣ. ಆದರೆ ಅನಿವಾರ್ಯವು ಆಗಿದೆ.

ಭಾನುವಾರ, ಮಾರ್ಚ್ 30, 2014

ಪಠ್ಯ - ರಂಗ - ಪ್ರದರ್ಶನ


          ನಮ್ಮ ಶಾಲೆಯಲ್ಲಿ ಒಂದು ವರ್ಷದ ಕಾರ್ಯಕ್ರಮವನ್ನು ಈಗಾಗಲೇ ನಡೆಸುತಲಿದ್ದು ಮಕ್ಕಳೊಂದಿಗೆ, ನಮ್ಮ ಶಿಕ್ಷಕರೊಂದಿಗೆ ವಿಚಾರ ವಿನಿಮಯ ಮಾಡಿಕೊಂಡು ನಂತರದಲ್ಲಿ ನಮ್ಮ ತಾಲೂಕಿನ ಆಯ್ದ ೨೫ ಜನ ಶಿಕ್ಷಕರನ್ನು ನಮ್ಮ ಶಾಲೆಯಲ್ಲಿಯೇ ಶ್ರೀ ಮಲ್ಲೇಶ್ ಪಾವಗಡ ಹಾಗೂ ಶ್ರೀ ಗುರುರಾಜ ನಾಟಕಾ ಶಿಕ್ಷಕರನ್ನು ಆಮಂತ್ರಿಸಿ ಎರಡು ದಿನದ ಕಾರ್ಯಗಾರವನ್ನು ನಡೆಸಲಾಗಿದ್ದು ಅದಕ್ಕೆ ಐ.ಎಫ್,ಎ ನ ಯೋಜನಾಧಿಕಾರಿಗಳಾದ ಶ್ರೀಮತಿ ಅನುಪಮಾ ಪ್ರಕಾಶ ಹಾಗೂ ನಮ್ಮ ಬ್ಲಾಕ್ ನ ಶಿಕ್ಷಣಾಧಿಕಾರಿಗಳು ಎರಡು ದಿನದ ಕಾರ್ಯಗಾರದಲ್ಲಿ ಭಾಗವಹಿಸಿದ್ದರು. 

                  ಕಾರ್ಯಗಾರದಲ್ಲಿ ರಂಗಪಠ್ಯವನ್ನು ಸಿದ್ಧಪಡಿಸುವ ಕುರಿತು ಆಯೋಜಿಸಲಾಗಿತ್ತು. ಎಲ್ಲ ಶಿಕ್ಷಕರು ತುಂಭಾ ಉತ್ಸಾಹದಿಂದ ಭಾಗವಹಿಸಿ ಎರಡು ದಿನಗಳ ಸಂಪೂರ್ಣ ಲಾಭವನ್ನು ಪಡೆದುಕೊಂಡರು. 

ಹೆಚ್ಚಿನ ಮಾಹಿತಿಗಾಗಿ ಬೇಟಿ ನೀಡಿ :

ಬುಧವಾರ, ಮಾರ್ಚ್ 26, 2014

ಮಾರ್ಚ್ 27 ವಿಶ್ವ ರಂಗಭೂಮಿ ದಿನಾಚರಣೆ.



ಮಾರ್ಚ್ 27 ವಿಶ್ವ ರಂಗಭೂಮಿ ದಿನಾಚರಣೆ. 

----
ಈ ವರ್ಷದ ವಿಶ್ವರಂಗಭೂಮಿ ಸಂದೇಶ ನೀಡಿರುವುದು ಬ್ರೆಟ್ ಬೈಲೆ ಅವರು. ಅವರ ಸಂದೇಶ ಮತ್ತು ಅವರ ಪರಿಚಯ ಇಲ್ಲಿದೆ ನೋಡಿ..
--
--
ಎಲ್ಲೆಲ್ಲಿ ಮಾನವ ಸಮುದಾಯವಿದೆಯೋ ಅಲ್ಲಲ್ಲಿ ಪ್ರದರ್ಶನದ ಅದಮ್ಯ ಚೇತನ ಪ್ರಕಟಗೊಳ್ಳುತ್ತದೆ. ಸಣ್ಣಸಣ್ಣ ಹಳ್ಳಿಗಳ ಮರದಕೆಳಗೆ, ಮಹಾನಗರಗಳ ಹೈಟೆಕ್ ವೇದಿಕೆಗಳಲ್ಲಿ, ಶಾಲೆಗಳ ಸಭಾಂಗಣದಲ್ಲಿ, ಬಯಲಲ್ಲಿ ಮತ್ತು ದೇವಾಲಯಗಳಲ್ಲಿ, ನಗರದ ಸಂಕೀರ್ಣಗಳಲ್ಲಿ ಸಮುದಾಯ ಕೇಂದ್ರಗಳಲ್ಲಿ, ನಗರದೊಳಗಿನ ನೆಲಮಾಳಿಗೆಗಳಲ್ಲಿ ಜನರು ಒಗ್ಗೂಡಿ ತಾವೇ 
ಸೃಷ್ಟಿಸಿಕೊಂಡ ಅಲ್ಪಕಾಲಿಕ ರಂಗಜಗತ್ತಿನಲ್ಲಿ ಮಾನವ ಜಟಿಲತೆ, ವೈವಿಧ್ಯತೆ ಮತ್ತು ದೌರ್ಬಲ್ಯಗಳನ್ನು ಅಭಿನಯ ಮತ್ತು ಧ್ವನಿಯ ಮೂಲಕ ಜೀವಂತವಾಗಿ ವ್ಯಕ್ತಪಡಿಸುತ್ತಾರೆ. 
ದುಖಿಃಸಲು, ನೆನಪಿಸಿಕೊಳ್ಳಲು, ನಗಲು, ಅವಲೋಕಿಸಲು, ಕಲಿಯಲು, ಧೃಡೀಕರಿಸಿಕೊಳ್ಳಲು, ಕಲ್ಪಿಸಿಕೊಳ್ಳಲು, ದೇವರ ಅವತಾರಗಳನ್ನು ಆವಾಹಿಸಲು ತಾಂತ್ರಿಕ ನೈಪುಣ್ಯತೆ, ಸೌಂದರ್ಯ, ಅನುಕಂಪ ಹಾಗು ಪೈಶಾಚಿಕತೆಗಳಲ್ಲಿರುವ ನಮ್ಮ ಸಾಮಥ್ರ್ಯವನ್ನು ನೋಡಿ ಆಶ್ಚರ್ಯಪಡಲು ನಾವು ಸೇರುತ್ತೇವೆ. ಪುನಶ್ಚೇತನ ಮತ್ತು ಸಬಲೀಕರಣ ಗೊಳ್ಳಲು ವಿಭಿನ್ನ ಸಂಸ್ಕೃತಿಗಳ ಸಂಪತ್ತನ್ನು ಸಂಭ್ರಮಿಸಲು, ನಮ್ಮನ್ನು ಬೇರ್ಪಡಿಸುವ ಗಡಿಗಳನ್ನು ಕಿತ್ತೊಗೆಯಲು ಒಗ್ಗೂಡುತ್ತೇವೆ. 
ಎಲ್ಲೆಲ್ಲಿ ಮಾನವ ಸಮುದಾಯವಿದೆಯೋ ಅಲ್ಲಲ್ಲಿ ಪ್ರದರ್ಶನದ ಅದಮ್ಯ ಚೇತನ ಪ್ರಕಟಗೊಳ್ಳುತ್ತದೆ. ಅದು ಸಮುದಾಯದಲ್ಲಿ ಜನಿಸಿ ವಿಭಿನ್ನ ಸಂಪ್ರದಾಯಗಳ ಮುಖವಾಡಗಳನ್ನು ವೇಷಭೂಷಣಗಳನ್ನು ಧರಿಸಿ ಭಾಷೆ ಲಯ ಮತ್ತು ಸಂಜ್ಞೆಗಳನ್ನು ಮೈಗೂಡಿಸಿಕೊಂಡು ನಮ್ಮಗಳ 
ನಡುವೆ ನೆಲೆಯೂರಿದೆ. ಈ ಪ್ರಾಚೀನ ಚೈತನ್ಯದೊಂದಿಗೆ ಕೆಲಸ ಮಾಡುವ ಕಲಾವಿದರಾದ ನಮ್ಮನ್ನು ಹೃದಯದ ಮೂಲಕ ಅಭಿಪ್ರಾಯಗಳ ಮೂಲಕ ಮತ್ತು ದೇಹದ ಮೂಲಕ ಆ ಚೈತನ್ಯವನ್ನು ಹರಿಸಿ ನಮ್ಮ ಲೌಕಿಕ ವಾಸ್ತವತೆಯಯನ್ನು ಆಕರ್ಷಕ ನಿಗೂಢಗಳನ್ನು ಬಹಿರಂಗ ಪಡಿಸಲು ಒತ್ತಾಯಿಸುತ್ತದೆ. ಬಂಡವಾಳಶಾಹಿ ದಬ್ಬಾಳಿಕೆಯಿಂದ ಲಕ್ಷಾಂತರ ಜನ ಸಂಘರ್ಷ ಮತ್ತು ಸಂಕಷ್ಟಗಳಿಗೆ ಒಳಗಾಗಿ ಬದುಕಲು ಹೋರಾಡುತ್ತಿರುವ ಈ ದಶಕದಲ್ಲಿ ನಮ್ಮ ರಹಸ್ಯಗಳನ್ನು ಕಸಿದುಕೊಂಡು ಗೂಢಚಾರಿಗಳ ಮೂಲಕ ದಾಳಿಮಾಡುವ ಮತ್ತು ನಮ್ಮ ಮಾತುಗಳನ್ನು ನಿರ್ಬಂಧಗೊಳಿಸಿ ಮೂಗುತೂರಿಸುವ ಸಕರ್ಾರದ ಆಡಳಿತದಲ್ಲಿ ಅರಣ್ಯನಾಶ, ಪ್ರಾಣಿಸಂಕುಲದ ನಾಶ, ವಿಷಪೂರಿತವಾಗುತ್ತಿರುವ ಸಾಗರ; ವ್ಯಕ್ತಪಡಿಸಲು ಇವುಗಳಲ್ಲಿ ಯಾವ ಅನುಭವ ನಮ್ಮನ್ನು ಒತ್ತಾಯಿಸುತ್ತದೆ. ಒಂದು ರಾಷ್ಟ್ರ, ಒಂದು ಜನಾಂಗ ಒಂದು ಲಿಂಗ, ಲೈಂಗಿಕ ಆದ್ಯತೆ, ಒಂದು ಧರ್ಮ, ಒಂದು ಸಿದ್ಧಾಂತ ಒಂದು ಸಾಮಾಜಿಕ ಚೌಕಟ್ಟು ಉಳಿದವುಗಳಿಗಿಂತ ಅತ್ಯುತ್ತಮ ಎಂದು ನಮ್ಮ ಮನವೊಲಿಸುವ ಪ್ರಾಬಲ್ಯಪೂರಿತ ಆದೇಶಗಳಿರುವ ಅಸಮಾನತೆಯ ಈ ಜಗತ್ತಿನಲ್ಲಿ ಕಲೆಯು ಸಾಮಾಜಿಕ ಪ್ರಣಾಳಿಕೆಯಿಂದ ಮುಕ್ತವಾಗಿರಬೇಕೆಂಬ ಒತ್ತಾಯವನ್ನು ಸಮಥರ್ಿಸಿಕೊಳ್ಳಲು ಸಾಧ್ಯವೇ? 
ನಾವು ಪರಿಷ್ಕೃತ ಬೇಡಿಕೆಗಳನ್ನು ಪೂರೈಸುವ ಸಭಾಂಗಣದ ರಂಗಸ್ಥಳದ ಕಲಾವಿದರೋ? ಅಥವಾ ನಮ್ಮಲ್ಲಿನ ಶಕ್ತಿಯನ್ನು ಬಳಸಿಕೊಂಡು ಸಮಾಜದ ಹೃದಯ ಮನಸ್ಸುಗಳನ್ನು ತಿಳಿಗೊಳಿಸಿ ಜನರನ್ನು ಒಗ್ಗೂಡಿಸಿ, ಪ್ರೇರೇಪಿಸಿ, ಮುದಗೊಳಿಸಿ ತಿಳಿಹೇಳಿ, ಆಶಾಭಾವನೆ ಹಾಗು ಮುಕ್ತಮನಸ್ಸಿನ ಸಹಯೋಗವನ್ನುಂಟುಮಾಡುವ ಕಲಾವಿದರೋ? 
------------ 
ಬ್ರೆಟ್ ಬೈಲೆ ಕಿರುಪರಿಚಯ: ಬ್ರೆಟ್ ಬೈಲೆ ದಕ್ಷಿಣ ಆಫ್ರಿಕಾದ ನಾಟಕಕಾರ ವಿನ್ಯಾಸಕಾರ ನಿರ್ದೇಶಕ. ಮೂರನೇ ಜಗತ್ತಿನ ಬನ್ಫೈಟ್ (ಕಲಾತಂಡ)ದ ಕಲಾತ್ಮಕ ನಿರ್ದೇಶಕ. ಜಿಂಬಾಬ್ವೆ, ಉಗಾಂಡ, ಹೈಟಿ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ, ಯು.ಕೆ ಮತ್ತು ಯುರೋಪ್, ದಕ್ಷಿಣ ಆಫ್ರಿಕಾದಾದ್ಯಂತ ಪ್ರದರ್ಶನಗಳನ್ನು ನೀಡಿದ್ದಾರೆ. ಅಂತಾರಾಷ್ಟ್ರೀಯ ರಂಗಸಂಸ್ಥೆಯ ಮ್ಯೂಜಿಕ್ ಥಿಯೇಟರ್ ನೌ' ಕಾರ್ಯಕ್ರಮದ ತೀಪರ್ುಗಾರರಾಗಿ ಜೋಹಾನ್ಸ್ಬರ್ಗನ ಕಲೆ ಮತ್ತು ಸಂಸ್ಕೃತಿಯ ಆರಂಭ ಪ್ರದರ್ಶನದ ನಿರ್ದೇಶಕರಾಗಿ ದುಡಿದವರು.



ಕನ್ನಡಕ್ಕೆ: ಶ್ರೀಕಂಠ ಗುಂಡಪ್ಪ 

ಹಿರಿಯ ರಂಗಕರ್ಮಿ. ನಂ. 57, 'ಈಶಾನ್ಯ' 3ನೇ ಮೇನ್, 3ನೇ ಕ್ರಾಸ್, ಬ್ಯಾಂಕ್ ಕಾಲೋನಿ, ಬೋಗಾದಿ, ಮೈಸೂರು
0821-2598801, ಮೊ: 998600662

ನಾಟಕ ಮೇಷ್ಟ್ರುಗಳೇಲ್ಲ ಸೇರೋಣ ಬನ್ನಿ


ನಾಟಕ ಮೇಷ್ಟ್ರುಗಳೇಲ್ಲ ಸೇರೋಣ ಬನ್ನಿ

ಬುಧವಾರ, ಮಾರ್ಚ್ 19, 2014

ಬೀಳ್ಕೊಡುಗೆಯ ಮಾತು

            ಕಳೆದ ಎರಡು-ಮೂರು ವರ್ಷಗಳಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿದ್ದು ಕಲೆತು ಈಗ ಅಂತಿಮ ಘಟ್ಟ ಪರೀಕ್ಷೆಗಳು. ಇಲ್ಲಿ ಎಷ್ಟರ ಮಟ್ಟಿಗೆ ನೀವು ನಿಮ್ಮನ್ನು ಕಟ್ಟಿ ಕೊಳ್ಳುವಿರೋ ಆಗ ಮಾತ್ರ ಯಶಸ್ಸು ನಿಮ್ಮ ಬೆನ್ನ ಹಿಂದೆಯೇ ಬೀಳುತ್ತದೆ. ಅದು ಬಿಟ್ಟು ನಾನು ಶಾಲೆಯಿಂದ ಕಾಲೇಜಿಗೆ ಹೋಗುತ್ತಿದ್ದೇನೆ ನನ್ನ ತಡ್ಯೋರು ಯಾರು  ಎಂಬ ಆಲೋಚನೆಗಳು ಪುಸ್ತಕವನ್ನು ಬೆರೆಳಲ್ಲಿ ತಿರುಗಿಸುತ್ತಾ ಹೋಗುವುದೇ ನನ್ನ ಯಶಸ್ಸಿನ ಘಟ್ಟ ಎಂದು ಸಾಗಿದರೇ ನಿರಾಶೆ ಮುಂದೆ ಕಟ್ಟಿಟ್ಟಿದ್ದು. ನಿಮ್ಮ ಶ್ರಮದಿಂದ ಹೊಸತನಕ್ಕೆ ಸಾಗಲು ಪೂರ್ವ ತಯಾರಿಯೊಂದಿಗೆ ಸಾಗಿದರೆ ನಿಮ್ಮನ್ನು ಯಶಸ್ಸಿನ ಕದೇ ತೆಗೆದುಕೊಂಡು ಹೋಗುತ್ತದೆ.

ಮಂಗಳವಾರ, ಮಾರ್ಚ್ 18, 2014

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ



   
ಈ ಬಾರಿಯ ಮಕ್ಕಳಲ್ಲಿ ನಾವು ಶೇ ೧೦೦ ರಷ್ಟು ಫಲೀತಾಂಶವನ್ನು ನೀಡುವರೆಂಬ ಬಯಕೆಯಲ್ಲಿ ಇದ್ದೇವೆ. ಅಭ್ಯಾಸವು ಅಷ್ಟೇ ಪರಿಣಾಮಕಾರಿಯಾಗಿ ನಡೆಯುತ್ತಿದ್ದು ಮಕ್ಕಳು ತುಂಬು ಉತ್ಸಾಹದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಗುರುವಾರ, ಮಾರ್ಚ್ 13, 2014

ನಾಟಕದ ಚಿತ್ರೀಕರಣ

ನಮ್ಮೂರ ಹಬ್ಬ - ನಾಟಕ   ನಿ : ಗುರುರಾಜ್ .ಎಲ್

ಮಂಗಳವಾರ, ಮಾರ್ಚ್ 4, 2014

ಮಂಗಳವಾರ, ಫೆಬ್ರವರಿ 25, 2014

SSLC ಮಕ್ಕಳಿಗಾಗಿ


ಎಸ್.ಎಸ್.ಎಲ್.ಸಿ ಮಕ್ಕಳಿಗಾಗಿ ಹಾಸನ ಸಾರ್ವಜನಿಕ ಶಿಕ್ಷಣ ಇಲಾಖೆಯು ಮಕ್ಕಳೊಂದಿಗಾಗಿ ಕೆಲವು ಪದ್ಯಗಳಿಗೆ ಸ್ವರ ನೀಡಿದ್ದಾರೆ. ಶಿಕ್ಷಕರು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯುವಿರೆಂದು ಭಾವಿಸಿದ್ದೇನೆ.

ಶನಿವಾರ, ಫೆಬ್ರವರಿ 22, 2014

ಕೋತಿಯ ಅವಸರ



                  ನದಿಯ ದಡದಲ್ಲಿದ್ದ ಒಂದು ಮರದಲ್ಲಿ ದಿನಲೂ ಆಟವಾಡುತ್ತಾ ವಾಸ ಮಾಡಿಕೊಂಡಿತ್ತು. ಒಂದು ದಿನ ನದಿಯ ದಡದಲ್ಲಿಯೇ ಇದ್ದ ತೋಟದಲ್ಲಿ ಬಾಳೆಯ ಹಣ್ಣನ್ನು ಕಂಡು 
        "ಆಹ್ಹಾ ! ನನಗೆ ಇಷ್ಟವಾದ ಹಣ್ಣು." 

ಎಂದು ಅವಸರದಲ್ಲಿ ತೋಟಕ್ಕೆ ಓಡಿ, ಹಣ್ಣನ್ನು ಕಿತ್ತಿಕೊಂಡು ತನ್ನ ಮರ ಏರಿ ಕುಳಿತಿತು. ಹಣ್ಣನ್ನು ತಿನ್ನುವ ಆಸೆಯಲ್ಲಿ ಸಿಪ್ಪೆ ತೆಗೆದು ತಿನ್ನಬೇಕು ಎಂದು ಈಗಾಗಲೇ ಮನುಷ್ಯರನ್ನು ನೋಡಿ ತಿನ್ನುವ ಕಲೆಯನ್ನು ಕಲೆತಿದ್ದ ಕೋತಿ, ಸಿಪ್ಪೆ ತೆಗೆದು ಬಾಯಿಗೆ ಇಡಬೇಕು ಅಷ್ಟರಲ್ಲಿ ಅದು ಕೈಯಿಂದ ಜಾರಿ ನದಿಗೆ ಬಿದ್ದಿತು.
                    
                                                 "ಅಯ್ಯೋ.........." 

ಎಂದು ಕೆಳಗೆ ನೀರಲ್ಲಿ ನೋಡುತ್ತಾ, ಮರದಲ್ಲಿ ಅತ್ತಿಂದಿತ್ತ ಓಡಾಡ ತೊಡಗಿತು. ಬಾಳೆ ಹಣ್ಣಿನ ಆಸೆಯಲ್ಲಿ ಮರದಿಂದ ಇಳಿದು, ನೀರಿನಿಂದ ಹಣ್ಣನ್ನು ತೆಗೆಯಲು ಹುಡುಕಾಡ ತೊಡಗಿತು. ಈ ಎಲ್ಲವುದನ್ನು ನೋಡುತ್ತಾ ಇದ್ದ ಕಪ್ಪೆ ಬುದ್ಧಿವಂತನಾಗಿದ್ದು ಇಲ್ಲಿಯವರೆಗೆ ಕೋತಿಯೊಂದಿಗೆ ಮಾತನ್ನಾಡಿರಲಿಲ್ಲ. ಕೋತಿಯ ಅವಸರ ಕಂಡು, ನದಿಯಲ್ಲಿ ಇನ್ನೇನು ಇಳಿಯಬೇಕು ಎಂದು ಕಾಯುತ್ತಿದ್ದ ಕೋತಿಗೆ-

" ಕೋತಿಯೇ ಆ ಬಾಳೆ ಹಣ್ಣು ನಿನಗೆ ಸಿಗಲಾರದು. ಅದು ನೀರಿನಲ್ಲಿ ಬಹಳಷ್ಟು ಆಳದಲ್ಲಿ ಹೋಗಿದೆ " ಎಂದು

" ನೀನು ತೆಗೆಯಲು ಪ್ರಯತ್ನಿಸ ಬೇಡ " ಎಂದಿತು.

ಆಗ ಕೋತಿಯೂ " ಅಯ್ಯೋ ಅದು ನನ್ನ ಇಷ್ಟವಾದ ಹಣ್ಣು. ಅದು ನನಗೆ ಬೇಕೇ ಬೇಕು." ಎಂದು ಅಳತೊಡಗಿತು.

ಆಗ ಕಪ್ಪೆಯು " ನಿನಗೆ ಈಜು ಬರುವುದಿಲ್ಲ, ನಾನು ಹೋಗಿ ತೆಗೆದುಕೊಂಡು ಬರುತ್ತೇನೆ  ನೀನು ಅಳಬೇಡ " ಎಂದು ನದಿಗೆ ಇಳಿಯಲು ಸಿದ್ಧವಾಯಿತು. ತಕ್ಷಣವೇ ಕೋತಿಯು

" ನಿಲ್ಲು ನೀನು ಸುಳ್ಳು ಹೇಳುತ್ತಿರುವೆ. ನನ್ನ ಬಾಳೆ ಹಣ್ಣನ್ನು ನೀನು ತಿನ್ನಲು ಹೊಂಚು ಹಾಕಿರುವೆಯಾ ? ನಾನೇ ನೀರಿಗೆ ಜಿಗಿಯುತ್ತೇನೆ. " ಎಂದು ಕೋತಿ  ಹೇಳಿತು.  ಆಗ ಕಪ್ಪೆಯು

" ನೀನು ಈಜು ಬಾರದೇ,  ನೀರಿನಲ್ಲಿ ಮುಳುಗಿ ನಿನ್ನ ಪ್ರಾಣವನ್ನು ಕಳೆದುಕೊಳ್ಳುತ್ತೀಯಾ. ನಾನು ಖಂಡಿತವಾಗಿಯು ನೀನ್ನ

ಹಣ್ಣನ್ನು ತಿನ್ನುವುದಿಲ್ಲ. ನಿನಗೆ ತಂದುಕೊಡುವೆ.

ನಿಲ್ಲು..... ನೀರಿಗೆ ಜಿಗಿಯ ಬೇಡ." ಎಂದು ಕಪ್ಪೆ ಪರಿ ಪರಿಯಾಗಿ ಕೇಳಿಕೊಂಡಿತು.

ಆದರೂ ಕೋತಿಯು ಕಪ್ಪೆಯ ಮಾತನ್ನು ಕೇಳದೇ ನೀರಿಗೆ ಜಿಗಿಯಿತು. ಈಜು ಬಾರದೇ ಹಣ್ಣಿನ ಆಸೆಯಲ್ಲಿ ತನ್ನ ಪ್ರಾಣವನ್ನು ಕಳೆದುಕೊಂಡಿತು. ಕಪ್ಪೆಗೆ ಕೋತಿಯನ್ನು ರಕ್ಷಿಸಲು ಸಾಧ್ಯವಾಗದೆ ನೀರನ್ನೆ ನೋಡುತ್ತಾ ಕುಳಿತು ಬಿಟ್ಟಿತು.

ಮಂಜುಳಾ ಬಸವರಾಜ ಬಾದವಾಡಗಿ
೮ ನೇತರಗತಿ
ಸ.ಪ್ರೌ.ಶಾ, ಜಹಗೀರಗುಡದೂರ.


ಭಾನುವಾರ, ಫೆಬ್ರವರಿ 16, 2014

Kali-Kalisu Regional Conference Dharawad

ಶುಕ್ರವಾರ, ಜನವರಿ 24, 2014

ಬುಧವಾರ, ಜನವರಿ 22, 2014

ಹೊಸ ಪಯಣ

ನಮ್ಮ ಮುಂದಿನ ಪಯಣ ಹೊಸತನದಿಂದ ಕೂಡಿರಲಿದೆ.ಕಾರಣ ನಮ್ಮ ಶಿಕ್ಷಕರೊಂದಿಗೆ ಅತಿಥಿಗಳಿಗು ನೇರವಾಗಿ ನಮ್ಮ ಈ ಬ್ಲಾಗ್ ಪ್ರವೇಶ ನೀಡುತ್ತಿದ್ದೇವೆ. ಮಕ್ಕಳ ಶಿಕ್ಷಣ ಸಂಬಂಧದಂತೆ ಬರಹಗಳನ್ನು ನೀರಿಕ್ಷಿಸುತ್ತೇವೆ.

ಭಾನುವಾರ, ಜನವರಿ 12, 2014

ಬುಧವಾರ, ಜನವರಿ 1, 2014

ಸ್ವಾಗತ

         ನವ ವರುಷಕೆ ಸ್ವಾಗತ

                            ಈ ವರುಷ ಹೊಸತನ್ನು

                                                      ಮಾಡೋಣ

ಮಂಗಳವಾರ, ಡಿಸೆಂಬರ್ 31, 2013

ಹೊಸ ವರುಷ ಆಗಮನ

ಹಳೇಯ ವರುಷವನ್ನು 
ಹಿಂದೆ ಬಿಟ್ಟು
ಹೊಸ ವರುಷದ
 ಆಗಮನಕ್ಕೆ
 ಎಲ್ಲರಿಗೂ ಹೊಸತನ್ನು ನೀಡಲಿ
 ಎಂದು ಬಯಸುವ 
ಹಾಗೂ 
ನಿರಂತರ ಹೊಸತನ್ನೇ 
ಯೋಚಿಸುವ, ಸಾಧಿಸುವ 
ಹಾದಿ ನಿಮ್ಮದಾಗಲಿ 
ಎಂದು ಹಾರೈಸುತ್ತೇವೆ. 


ವನ್ಯ ಜೀವಿಗಳಿಗೆ ನಮ್ಮ ಪತ್ರ

೨೦೧೨ ರಲ್ಲಿ ನಮ್ಮ ವನ್ಯ ಜೀವಿಗಳು ನೀಡಿದ ಸಂದೇಶಗಳಿಂದಾಗಿ ನಾವು ನಮ್ಮ ಶಾಲೆಯಲ್ಲಿ ಈ ಕುರಿತು ಗಂಭೀರವಾಗಿ ಚರ್ಚೆ ನಡೆಸಿ, ಸದ್ಯ ನಾವು ನಮ್ಮ ಶಾಲೆಯ ಗಿಡ-ಮರಗಳಲ್ಲಿ ನೀರಿನ ಬಟ್ಟಲುಗಳನ್ನು, ಕಾಳುಗಳನ್ನು ತಮಗಾಗಿ ಮೀಸಲು ಇಟ್ತಿದ್ದೇವೆ. ನಮ್ಮ ಊರಿನ ಹಿರಿಯ ಧರ್ಮಪ್ಪಜ್ಜ ಯಾವಾಗಲೂ ಅತ್ಯಂತ ಖಾಳಜಿಯಿಂದ ನೀರನ್ನು ವಿನಿಯೋಗಿಸಲು ಅವು ಸಣ್ಣ ಸಣ್ನ ಸಸಿಗಳಿಗೆ ಹಾಕುತ್ತಾ ಸೂಕ್ಷ್ಮತೆಯನ್ನು ವಹಿಸುತ್ತಿದ್ದಾನೆ. ನಮ್ಮನ್ನು ನಾವು ಇದರಲ್ಲಿ ತೊಡಗಿಸಿಕೊಂಡಿದ್ದೇವೆ. 


                                                                                                                      ಇಂತಿ ನಿಮ್ಮ 
                                                                                                                    ಶಾಲಾ ಮಕ್ಕಳು


ನೀರು

ಮಂಡ ನೆ : ಕುಮಾರಿ ಭಾಗ್ಯ
ವಿಷಯ : ನೀರು
ತರಗತಿ ಗೋಷ್ಠಿ - ೦೬

                     ನಾವು ನಮ್ಮ ಶಾಲೆಯ ಪಠ್ಯಗಳಲ್ಲಿ, ಶಿಕ್ಷಕರು ಪಾಠಗಳಲ್ಲಿ ಹೇಳಿದಂತೆ ನಮಗೆ ನೀರು ದ್ರವ ರೂಪದಲ್ಲಿ ಇದೆ ಎನ್ನುವುದನ್ನು ನಾವೆಲ್ಲ ಅಭ್ಯಾಸ ಮಾಡಿದ್ದೇವೆ. ನೀರು ಪ್ರತಿಯೊಬ್ಬ ಮನುಷ, ಪ್ರಾಣಿ, ಪಕ್ಷಿ, ಗಿಡ-ಮರಗಳಿಂದ ಹಿಡಿದು ಎಲ್ಲವುಅದಕ್ಕೂ ನೀರು ಅತ್ಯಂತ ಅವಶ್ಯಕ. ನೀರಿಲ್ಲದೆ ಯಾರು ಬದುಕೋದಕ್ಕೆ ಆಗುವುದೇ ಇಲ್ಲ. ಮಳೆಯ ಕಾರಣ ಭೂಮಿಗೆ ಬರುವ ನೀರು ಕೆರೆ, ಭಾವಿ, ಹಳ್ಲ, ಕೊಳ್ಳಗಳ ಮಖಾಂತರ ಮತ್ತೇ ಹಾವಿಯಾಗಿ ಮೋಡವಾಗಿ ಸಾಗಿ ಮಳೆಯನ್ನು ಸುರಿಸುತ್ತದೆ. ಇದು ನಿರಂತರ ಪ್ರಕ್ರಿಯೆ. ನೀರು ಇಲ್ಲದೆ ಬದುಕುವುದೇ ಕಷ್ಟ. ಮಳೆ ಬರದೇ ಇದ್ದಾಗ ನಮ್ಮ ಊರಲ್ಲಿ ಗುರ್ಜಿ ಹಾಕುತ್ತಾರೆ. ಇದು ನಮ್ಮ ಜನರ ನಂಬಿಕೆಯಿಂದ ಮಳೆ ಬರಬಹುದು ಎಂಬ ಕಾರಣವು ಆಗಿದೆ.

ಶಿಕ್ಷಣ

ಮಂಡನೆ : ಕುಮಾರ ಅಮರೇಶ
ವಿಷಯ : ಶಿಕ್ಷಣ
ತರಗತಿ ಗೋಷ್ಠಿ - ೦೫

                      ಮಂಗನಿಂದ ಮಾನವನಾದ ಎಂದು ನಾವು ಇಂದು ನಮ್ಮ ಪಠ್ಯಗಳಲ್ಲಿ ಸಾಕಷ್ಟು ಬಾರಿ ಓದಿ ಅದನ್ನೇ ಪರೀಕ್ಷೆಗಳಲ್ಲಿ ಬರೆದು ಇದ್ದೇವೆ. ಹೌದು ನಾವು ಈ ನಮ್ಮ ಶಿಕ್ಷಣ ಪಡೆಯುವುದರ ಮುಖಾಂತರ ಅಂದು ಮಂಗನಿಂದ ಪ್ರಾರಂಭವಾಗಿದ್ದು ಇಂದು ಮಂಗಳಯಾನಕ್ಕೆ ಸಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಶಿಕ್ಷಣ ಪ್ರತಿಯೊಬ್ಬರಿಗೂ ಮುಖ್ಯವಾಗಿ ಮೂಲವಾಗಿ ಬೇಕು. ಶಿಕ್ಷಣದಿಂದಾಗಿ ನಾವು ಎಲ್ಲರು ಒಂದೆಡೆ ಕುಳಿತು ಕಲಿಯುವುದರ ಜೊತೆಗೆ, ಬೇರೆ ಬೇರೆ ಭಾಷೆಗಳ ಕಲಿಯುವಿಕೆಯಿಂದಾಗಿ ಜಗತ್ತಿನೊಡನೆ ನಮ್ಮನ್ನು ನಾವು ಹಂಚಿಕೊಳ್ಳುವ ಪ್ರಸಂಗ ಒದಗಿ ಬಂದಿದೆ. ಶಿಕ್ಷಣ ಶಿಕ್ಷಣದ ಕುರಿತು ಇನ್ನೂ ಸಾಕಷ್ಟು ವಿಚಾರಗಳನ್ನು ನಾವು ನಮ್ಮ ಕಲಿಯುವಿಕೆಯಿಂದ ಪಡೆಯಬಹುದಾಗಿದೆ.

ಮೂಢನಂಬಿಕೆ

ತರಗತಿ ಗೋಷ್ಠಿ - ೦೪
ವಿಷಯ : ಮೂಢನಂಬಿಕೆ
ಮಂಡನೆ : ಕುಮಾರ ಶಶಿಧರ

           ಮೂಢನಂಬಿಕೆ ನಾವು ನಮ್ಮ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾನೂ ಹೆಚ್ಚು ಆಚರಿಸುವಂಥ ಪದ್ಧತಿಗಳಾಗಿವೆ. ನಾವು ಯಾವುದೇ ಕೆಲಸಕ್ಕೆ ಹೋಗುವಾಗ ಬೆಕ್ಕು ಅಡ್ಡ ಬಂತು ಅಂತಾಂದರೆ,  ಹಲ್ಲಿ ಲೊಚಗುಟ್ಟಿದಾಗ, ಬಲ-ಎಡ ಕಣ್ಣು ಹಾರಿದಾಗ ಹೀಗೆ ನಾವು ಕಾರ್ಯದ ಕುರಿತು ಯೋಚಿಸದೆ ಅಯ್ಯೋ ಏನೋ ಆಗಿ ಹೋಗುತ್ತದೆ ಎಂಬ ಭಯದಲ್ಲಿ ನಮ್ಮ ಗುರಿಗಳತ್ತ ಗಮನವನ್ನೇ ನೀಡುವುದಿಲ್ಲ.

ಸಕಾಲ - ಜಹಗೀರಗುಡದೂರ


ಸಕಾಲ - ಪ್ರೌಢಶಾಲಾ ಮಕ್ಕಳಿಗಾಗಿ ಈ ಬಾರಿ ಪ್ರತಿಭಾ ಕಾರಂಜಿಯಲ್ಲಿ  ಸಕಾಲ ಕುರಿತು ನಾಟಕಗಳ ಸ್ಪ್ರರ್ದೆಗಳು.






ಆ ದಿನದ ನೆನಪು ....




                ೧-೧೦-೨೦೧೩ ರಂದು ನಡೆದ ನಮ್ಮ ಪ್ರೌಢಶಾಲೆಯ ಕಾರ್ಯಕ್ರಮದಲ್ಲಿ ವಿವಿಧ ರೀತಿಯ ಗಣ್ಯವ್ಯಕ್ತಿಗಳಿಂದ ಭಾಷಣ/ಚರ್ಚೆ/ಮಂಥನ ನಡೆದವು. ನಂತರ ಸಾಂಯಕಾಲ ೪.೦೦ ಘಂಟೆಗೆ ಶಾಲೆಯಿಂದ ಊರಿನಡೆಗೆ ಹೊರಟ ಮೆರವಣಿಗೆಯಲ್ಲಿ ಬಾಲಕಿಯರ ಡೊಳ್ಳುಕುಣಿತ ಹಾಗೂ ಗ್ರಾಮದ ಯುವಕರಿಂದ ಹೆಜ್ಜೆಕುಣಿತ ಮೆರವಣಿಗೆಯಲ್ಲಿ ಗಮನ ಸೆಳೆದವು. 

                   ನಂತರ ೭.೦೦ ಘಂಟೆಗೆ ವರ್ಷ ಪೂರ್ತಿ ನಡೆಸಿದ ಸಾಂಸ್ಕೃತಿಕ ವಿಷಯಗಳನ್ನು ಛಾಯಚಿತ್ರಗಳನ್ನು ಜನರಿಗೆ ಪ್ರದರ್ಶನವನ್ನಿಟ್ಟು ೨೫ ನಿಮಿಷದ ಮಕ್ಕಳ ಕಲಿಕೆಯ ಸಾಕ್ಷ್ಯಚಿತ್ರವನ್ನು ತೋರ್ಪಡಿಸಿದರು. ಇದು ನಮಗೆ ಹೆಮ್ಮೆಯ ವಿಷಯವಾಗಿತ್ತು. ಹಾಗೆ "ನಮ್ಮೂರ ಹಬ್ಬ" ನಾಟಕದ ಮೂಲಕ ಮೊಹರಂನ್ನು ನೆನಪಿಸುವಂತೆ ವಿದ್ಯಾರ್ಥಿಗಳು ಕಲಾ ಪ್ರದರ್ಶನವನ್ನು ನೈತಿಕ ಜೀವನದಂತೆ ನಟಿಸಿದರು. ಈ ನಾಟಕಕ್ಕೆ ವಿಷಯ ಸಂಗ್ರಹಣೆ ಮಾಡಿ ನಿರ್ದೇಶಿಸಿದ ಶಿಕ್ಷಕರ ಪಾತ್ರ ಮಹತ್ವದ್ದಾಗಿತ್ತು.

                   ಆ ಕಾರ್ಯಕ್ರಮದಲ್ಲಿ ಶ್ರೀಮತಿ ಅನುಪಮಾ ಪ್ರಕಾಶರವರು ನಮ್ಮೂಎಇನ ಚಿಕ್ಕ ಮಕ್ಕಳೊಂದಿಗೆ ಕುಳಿತುಕೊಂಡು ಮಾತನಾಡುವುದು ತುಂಭಾ ಆಶ್ಚರ್ಯಕರ ಸಂಗತಿಯಾಗಿತ್ತು. ಕೆಲವು ಸಮಯ ಮಳೆರಾಯನ ಆರ್ಭಟದಿಂದ ಕಾರ್ಯಕ್ರಮ ಅಸ್ಥವ್ಯಸ್ಥವಾಗಿತ್ತು. ಇದರಿಂದ ಜನರಲ್ಲಿ ಗೊಂದಲವಾಗಿ ಕಾರ್ಯಕ್ರಮವನ್ನು ಸ್ಥಳಾಂತರಿಸಲಾಯಿತು. ಇದು ನಾಟಕ ಶಿಕ್ಷಕರಾದ ಗುರುರಾಜ ಗುರುಗಳಿಗೆ ಬೇಸರವಾದ ಸಂಗತಿಯಾದರು ಕಾರ್ಯಕ್ರಮ ತುಂಭಾ ಅಚ್ಚುಕಟ್ಟಾಗಿ ನೆರವೇರಿತು. ಆಸೆಗಳು ನೂರಾರಿದ್ದು ನೆರವೇರಿಸುವ ಶಕ್ತಿಯಾದ ಶಿಕ್ಷಕ ವೃಂದಕ್ಕೆ ನಾವು ಯಾವಾಗಲು ಚಿರರುಣಿ.

ಧನ್ಯಾವಾದಗಳೊಂದಿಗೆ.

                                                                                                        ಕುಮಾರ ಯಮನೂರಪ್ಪ ಗಂಗೂರ
                                                                                                                            ಹಳೇ ವಿದ್ಯಾರ್ಥಿ

ಶುಕ್ರವಾರ, ಡಿಸೆಂಬರ್ 13, 2013

ಹೈದ್ರಾಬಾದ್ ಕರ್ನಾಟಕ

ಮಂಡನೆ : ಕುಮಾರಿ ಜಯಶ್ರೀ
ವಿಷಯ : ಹೈದ್ರಾಬಾದ್ ಕರ್ನಾಟಕ
ತರಗತಿ ಗೋಷ್ಠಿ - ೦೩

                 ಹೈದ್ರಾಬಾದ್ ಕರ್ನಾಟಕ ವಿಶೇಷ ತಿದ್ದುಪಡಿ ಕಲ್೦ ೩೭೧ ಜೆ ತಿದ್ದುಪಡಿ ನಮ್ಮ ಉತ್ತರದ ಜಿಲ್ಲೆಗಳಾದ ಬೀದರ್, ಗುಲ್ಬರ್ಗ, ರಾಯಚೂರ್, ಯಾದಗಿರಿ, ಬಳ್ಳಾರಿ ಹಾಗೂ ಕೊಪ್ಪಳಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿದ್ದಾರೆ. ಸ್ವಾತಂತ್ರ್ಯ ಪೂರ್ವದಲ್ಲಿ ಸಂಸ್ಥಾನಗಳೇನು ಇದ್ದವು ಅವು ಸ್ವಾತಂತ್ರ್ಯ ಭಾರತದಲ್ಲಿ ಒಂದಾದಾಗ ಹೈದ್ರಾಬಾದನ ನಿಜಾಮರೌ ವಿಲೀನಕ್ಕೆ ಒಪ್ಪಲಿಲ್ಲ. ತದ ನಂತರ ಉಕ್ಕಿನ ಮನುಷ್ಯ ಎಂದೇ ಕರೆಯಿಸಿಕೊಳ್ಳುವ ಸರ್ದಾರ್ ವಲ್ಲಭಬಾಯಿ ಪಾಟೇಲ್ ಅವರ ಆಗಮನದಿಂದ ವಿಲೀನಕ್ಕೆ ಒಪ್ಪಿ ಸ್ವಾತಂತ್ರ ಭಾರತದಲ್ಲಿ ಒಂದಾಯಿತು. ಆದರೆ ಕರ್ನಾಟಕ ರಾಜ್ಯದಲ್ಲಿ ಹಿಂದಿನಿಂದಲೂ ಅತ್ಯಂತ ಕಡೇಯ ಸ್ಥಾನದಲ್ಲಿ ಇದ್ದು ಬಂದಿರುವ ನಮ್ಮ ಈ ಭಾಗ ಹಲವಾರು ಹೋರಾಟಗಳಿಂದ ಸ್ಥಾನಮಾನ ಪಡೆಯಿತು ನಿಜ ಆದರೆ ಅಷ್ಟೇ ಕಾರ್ಯ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು, ನಾವು - ನೀವು ಎಲ್ಲರೂ ಶ್ರಮ ವಹಿಸಬೇಕು. ಹೀಗಾದಾಗ ಮಾತ್ರ ನಮ್ಮ ಭಾಗ ಹಿಂದೆಯಲ್ಲ ಮುಂದೆ ಬರಲು ಸಾಧ್ಯ.

ಮಂಗಳವಾರ, ಡಿಸೆಂಬರ್ 10, 2013

ಮಕ್ಕಳ ಕಾವ್ಯ

ಮಂಡ ನೆ : ಕುಮಾರ ಮಂಜುನಾಥ
ವಿಷಯ : ಮಕ್ಕಳ ಕಾವ್ಯ
ತರಗತಿ ಗೋಷ್ಠಿ - ೦೨

ಮಕ್ಕಳ ಕಾವ್ಯದ ಕುರಿತು ನಾನು ತಿಳೀಯಲು ಬಯಸಿದಾಗ ನಮ್ಮ ಕನ್ನಡದಲ್ಲಿ ಎಷ್ಟೇ ಪುರತನದಿಂದಲೂ ಸಾಹಿತ್ಯ ಬೆಳೆದು ಬಂದರು ಮಕ್ಕಳ ಕಾವ್ಯದ ಮೇಲೆ ಬರೆದಿದ್ದು ಅತ್ಯಂತ ಕಡಿಮೆಯೇ ಎಂದು ಹೇಳಬೇಕಾಗಿ ಬಂದಿದೆ. ಕಾರಣ ಹಿರಿಯರು ಹೇಳುತ್ತಿದ್ದ ಲಾಲಿ ಹಾಡು, ಜೋಗಳಪದಗಳನ್ನು ತಾಯಿಂದರು ತತ್ ಕ್ಷಣಕ್ಕೆ ಹಾಡುತ್ತಿದ್ದರು ಆದರೆ ಅದನ್ನು ರಚಿಸುವ ಕೆಲಸಕ್ಕೆ ಕೈ ಹಾಕಲಿಲ್ಲ. ಎಂಥೆಥ ಹಾಡಗಳನ್ನು ಕಟ್ಟಿ ಹಾಡಿದ ನಮ್ಮ ಹಿರಿಯರು ಮೌಖಿಕಕ್ಕೆ ಮಾತ್ರ ಕಾವ್ಯವನ್ನು ನಿಲ್ಲಿಸಿದರು. ಇದ್ದ ಕೆಲವು ಮಕ್ಕಳ ಕಾವ್ಯಗಳು ಅದ್ಭುತವಾದದ್ದನ್ನು ನಾವು ನಮ್ಮ ಹಿಂದಿನ ಪ್ರಾಥಮಿಕ ಪಠ್ಯಗಳಲ್ಲಿ ಕಾಣುತ್ತೇವೆ. ಗೋವಿನ ಹಾಡು ಎಂದೆಂದು ಮರೆಯುವುದಕ್ಕೆ ಸಾದ್ಯವೇ ಇಲ್ಲ.  

ಕನ್ನಡದಲ್ಲಿ ಮಕ್ಕಳ ಸಾಹಿತ್ಯ

ಮಂಡನೆ : ಕುಮಾರಿ ಶಶಿಕಲಾ
ವಿಷಯ : ಕನ್ನಡದಲ್ಲಿ ಮಕ್ಕಳ ಸಾಹಿತ್ಯ
ತರಗತಿ ಗೋಷ್ಠಿ -೦೧

ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಕುರಿತು ಹೇಳುವುದಾದರೆ ನಮ್ಮ ಕನ್ನಡದಲ್ಲಿ ಮಕ್ಕಳ ಸಾಹಿತ್ಯ ಸುಮಾರು ೨೦೦೦ ವರ್ಷಗಳ ಹಿಂದಿನಿಂದಲೂ ಬೆಳೆದು ಬಂದಿದ್ದೆ ಎಂದು ಇತಿಹಾಸಕಾರರು ಹೇಳುತ್ತಾರೆ. ನಾನು ಓದಿದ , ಕೇಳಿದ್ದು ಸ್ವಲ್ಪನೇ ಆದರೆ ಮಕ್ಕಳ ಸಾಹಿತ್ಯವನ್ನು ಕುರಿತು ಹೇಳುವಾಗ  ನಾವು ನಮ್ಮ ಮನೆಯಿಂದ ಹಿಡಿದು ಯಾವುದೇ ಮನೆಯನ್ನು ಗಮನಿಸಬಹುದು ಮಕ್ಕಳೀಗೆ ಉಟ ಮಾಡಿಸುವಾಗ ಮಗು ಅಳುವಾಗ ತಾಯಿ ಕಥೆಯನ್ನ್ ತನ್ನದೇ ಕಲ್ಪ್ನೆಯಲ್ಲಿ ಕಟ್ಟುತ್ತಾ ಹೋಗುತ್ತಾಳೆ ಅದು ರಂಜನೀಯವಾಗಿ ಮಗುವಿನ ಗಮನವನ್ನು ಸೆಳೆಯಲು ಅದು ಆ ಕಾಲ್ಪನಿಕ ಭಾವದಲ್ಲಿಯೇ ತೇಲಿಸುತ್ತಾ ತನ್ನ ಉಣ್ಣಿಸುವ ಕೆಲಸವನ್ನು ಪೂರೈಸುತ್ತಾಳೆ. ತಾಯಿ ಎಲ್ಲಿ ಕೇಳಿದ್ದಳು, ಕಥೆಗಳನ್ನು ಹೇಗೆ ಸೃಷ್ಟಿದಳು ಎಂದು ನಾವೆಲ್ಲಿಯೂ ಯೋಚಿಸಿಲ್ಲ ಹಾಗೇಯೇ ಅಜ್ಜ-ಅಜ್ಜಿ ಕಥೆಗಳನ್ನು ಹೇಳುವುದನ್ನು ನಾವೆಲ್ಲರೂ ಕೇಳಿದ್ದೇವೆ. ಇವರೆಲ್ಲರೂ ಶಾಲೆಯೇ ಓದಿರದಿದ್ದಾಗ ಹೇಗೆ ಕಥೆಗಳನ್ನೆಲ್ಲ ಹೇಳುತ್ತಿದ್ದಾರೆ ಎಂಬ ಯೋಚನೆಗಳು ಸಹಜವಾಗಿ ಮೂಡುತ್ತವೆ. 

ಶನಿವಾರ, ಡಿಸೆಂಬರ್ 7, 2013

HEJJEGALU Hejjekunitha video clip

ಸೋಮವಾರ, ಡಿಸೆಂಬರ್ 2, 2013

ಹೊಸ ಸಿ. ಡಿ ಕವರ್ ಪೇಜ್



ಸೋಮವಾರ, ನವೆಂಬರ್ 25, 2013

ಮಕ್ಕಳ ಹೆಜ್ಜೆಗಳು - ಸಾಕ್ಷ್ಯಚಿತ್ರ

ಮುಖಪುಟ

ಹಿಂಪುಟ


ಮಂಗಳವಾರ, ನವೆಂಬರ್ 19, 2013

ಗುಡದೂರಿನ ಮೊಹರಂ ಹಬ್ಬ


     ಮೊಹರಂ ಹಬ್ಬದಲ್ಲಿ  ನಾನು ನಮ್ಮ ಹೊಸಪೇಟೆಯಲ್ಲಿ ಇದ್ದು ರಾತ್ರಿಯೆಲ್ಲ ಗೆಳೆಯರೊಂದಿಗೆ ಊರಲ್ಲಿ ಎಲ್ಲೆಲ್ಲಿ ದೇವರನ್ನು ಕೂಡಿಸಿದ್ದಾರೆ ಅಲ್ಲೆಲ್ಲ ಹೋಗಿ ನಾಲ್ಕು ಹೆಜ್ಜೆ ಹಾಕಿ ಬರುತ್ತಿದ್ದೆವು. ಹಬ್ಬದ ಹಿನ್ನಲೆಯ ಕುರಿತು ಎಂದಿಗೂ ಗಂಭೀರವಾಗಿ ಆಲೋಚಿಸಿಯೇ ಇರಲಿಲ್ಲ. ರಂಗಭೂಮಿಯಲ್ಲಿ ತೊಡಗಿಕೊಂಡರು ಹಬ್ಬವನ್ನು ನಾನು ಯಾಕೆ ನನ್ನ ದೃಷ್ಟಿಯಲ್ಲಿ ನೋಡಲಿಲ್ಲ ಎಂದು ನನಗೆ ಗೊತ್ತಾಗಲಿಲ್ಲ. ನಮ್ಮ ಉತ್ತರ ಕರ್ನಾಟಕದ ಈ ಭಾಗಗಳೆಲೆಲ್ಲ ಹೆಚ್ಚು ಪ್ರಚಲಿತ ಹಾಗೂ ಹಿಂದೂ - ಮುಸ್ಲಿಂ ಎಂಬ ಬೇದವಿಲ್ಲದೆ ಆಚರಿಸುವ ಈ ಹಬ್ಬದ ಕುರಿತು ನಾವು ನಮ್ಮಲಿಯೇ ಎಂದಿಗೂ ಚರ್ಚಿಸಲಿಲ್ಲ. ಹಿರಿಯರು ಈ ಕುರಿತು ಎಂದಿಗೂ ಹೇಳಲಿಲ್ಲ. ಇಂದು ನಾವೇ ನಮ್ಮನ್ನು ಹುಡುಕಿಕೊಳ್ಳುವಾಗ ಇದೆಲ್ಲ ಯೋಚನೆಗಳು ಸುಳಿಯುತ್ತವೆ.  ನಮ್ಮ ಶಾಲೆಯಲ್ಲಿ ಕೈಗೊಂಡ ಐ.ಎಫ್.ಎ ನ ಕಲಿ-ಕಲಿಸು ವಿಭಾಗದಡಿಯಲ್ಲಿ ಮಕ್ಕಳ ಹೆಜ್ಜೆಗಳು ಜಾನಪದದತ್ತ...  ಯೋಜನೆಯನ್ನು ಹತ್ತು ತಿಂಗಳಗಳ ಕಾಲ ನಡೆಸಿದೆವು. ಮಕ್ಕಳ ಗಮನ ಮುಖ್ಯವಾಗಿ ಹೆಜ್ಜೆಕುಣಿತದಲ್ಲಿತ್ತು. ಹೆಜ್ಜೆ ಕುಣಿತವನ್ನು ಕಲಿಯಲಿಕ್ಕಾಗಿ ಅವರು ಪಟ್ಟ ಶ್ರಮ ನಾವೆಲ್ಲೂ ಪಡೆಯಲಿಕ್ಕೆ ಆಗಲೇ ಇಲ್ಲ ಅಥಾವ ಅಂಥಹ ಅವಕಾಶವೇ ದೊರಕಲಿಲ್ಲ ತಿಳಿಯಲಿಲ್ಲ. ಹಿರಿಯರೆಲ್ಲ ನಮ್ಮ ಮಾತಿಗೆ ಬೆಲೆ ಕೊಟ್ಟು ನಮ್ಮ ವಿದ್ಯಾರ್ಥಿಗಳಿಗೆ ಹೆಜ್ಜೆ ಕುಣಿತವನ್ನು ಕಲಿಸಿ ಕೊಟ್ಟರು. ಹಾಗೆಯೇ ಆಚರಣೆಗಳ ಕುರಿತಾಗಿ ಸೂಕ್ಷ್ಮ ವಿಚಾರಗಳನ್ನು ನಮ್ಮೆಲ್ಲ ಮಕ್ಕಳ ಮುಂದೆ ವಿವರವಾಗಿ ಬಿಚ್ಚಿಟ್ಟಾಗ ಅವರು ದೈವದ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಗೌರವದ ಪರಿಚಯ ನಮಗಾಯಿತು.

gururaj - Moharam
ಮೊಹರಂ  ಹಬ್ಬದ ಕತಲ್ ರಾತ್ರಿ ದಿನ ನಾನು ಜಹಗೀರ ಗುಡದೂರಿನ ಸಂಭ್ರಮವನ್ನು ಕಣ್ತುಂಬಿಕೊಂಡೆ. ಹರಕೆ ತಿರೀಸುವವರು, ದೀಡ್ ನಮಸ್ಕಾರ ಹಾಕುವವರು ಸಕ್ರೆ ಓದಿಸುವವರು, ಮನೆಗೆ -ಊರಿಗೆ ಬಂದ ಅತಿಥಿಗಳಿ ಬಿಡದೇ ಉಣ ಬಡಿಸುವ ಎಲ್ಲದರಲ್ಲೂ ಜನರ ತೊಡಗಿಕೊಳ್ಳುವಿಕೆ ನನಗೆ ಕಣ್ತುಂಬಿಕೊಳ್ಳುವ ರೀತಿಯಲ್ಲಿ ಭಾಸವಾಯಿತು. ಕಾರಣ ನಾನು  ಹಿಂದೆ ಈ ಊರನ್ನು ಇಲ್ಲಿನ ಜನರನ್ನು  ಹೀಗೆ  ಕಂಡಿರಲೇ ಇಲ್ಲ.  ಊರಿನ ಹಿರಿಯ ರಿವಾಯತ್ ಪದಗಳನ್ನು ಯುವಕರಿಗೆ ಹೇಳಿಕೊಡುವ  ಶ್ರೀಯುತ ಕನಕರಾಯ ರೆಡ್ಡಿಯವರು ಹಬ್ಬದ ಕುರಿತು ಹೇಳಿದಂತೆ ಕಳೇ ಕಟ್ಟಿರುವುದು ನನ್ನ ಮುಂದೆ ಇಂದು ಕಾಣಿಸುತ್ತಿತ್ತು. 

ಅಲೆ ಹಬ್ಬ ಬಂದು

ಮೂರು ತಿಂಗಳ ಮುಂಚೆ 

ಬದುಕು ಬಾಳೆವನೆಲ್ಲ ಬಿಡಸಿತ್ತ

ಬದುಕು ಬಾಳೆವನೆಲ್ಲ ಬಿಡಸಿತ್ತ

ತಂದೆ ತಾಯಿಗೆ ಸಿಟ್ಟು ತರಿಸಿತ್ತ

ತಂದೆ ತಾಯಿಗೆ ಸಿಟ್ಟು ತರಿಸಿತ್ತ

ಎಂದು ಪದಗಳನ್ನು ಹಾಡಿ ತಮ್ಮ ಕಾರ್ಯವನ್ನೆಲ್ಲ ಸಮಯಕ್ಕೆ ಸರಿಯಾಗಿ ಮುಗಿಸಿಕೊಂಡು ಬಂದು ಸೇರುವ ಈ ಯುವಕರು ಭಯ, ಭಕ್ತಿ ಹಿಡಿಸಿತು. ಇಂದಿನ ತಲೆಮಾರಿನವರಿಗೆ ಹಿರಿಯರ ಕುರಿತು, ನಂಬಿಕೆಯ ಕುರಿತು ಕಿಂಚಿತ್ತು ಗೌರವವನ್ನು ತೋರಿಸದೆ ಹೋಗುತ್ತಿರುವುದು. ಈ ಸಂಧರ್ಭಗಳಲ್ಲಿ ಸಹಜವಾಗಿಬಿಟ್ಟಿದೆ. ವೈಚಾರಿಕತೆ ಇರಲಿ ಆದರೆ ಇಡೀ ಪುರತನದಿಂದ ಬಂದಿರುವುದನ್ನು ನಾನು ಕಿತ್ತಿ ಹಾಕುತ್ತೇನೆ ಎಂದು ಹೋಗುವುದು ಸರಿಯಲ್ಲ. ಗೌರವಿಸಿ, ಪ್ರೀತಿಸಿ ಇಂಥಹ ಆಚರಣೆ ಪದಗಳು ಕುಣಿತ ಎಲ್ಲವೂ ಮುಂದೊಂದು ದಿನ ಹುಡುಕಿದರು ಸಿಗದಂತೆ ಕಾಣೆಯಾಗಿ ಹೋಗುತ್ತವೆ. ಹಳ್ಳಿಯಲ್ಲಿ ಮಾತ್ರ ಕಾಣುತ್ತಿರುವ ಈ ಆಚರಣೆಗಳು ಮುಂದೆ ಅವು ಇಲ್ಲದಂತೆ ಆಗುವ ಸ್ಥಿತಿ ಬರಬಹುದು.

ಹಬ್ಬವನ್ನು ಎಲ್ಲರೊಂದಿಗೆ ಬೆರೆತು ಆಚರಿಸಿದಾಗ ಮಾತ್ರ ನಮ್ಮದೆನ್ನುವ ಭಾವ ಕಾಣಲು ಸಾಧ್ಯ. ಇಡೀ ರಾತ್ರಿ ಕೂಣಿತವನ್ನು ನೋಡಲೇ ಕುಳಿತಿದ್ದ ನನಗೆ ಚಳಿಯೇ ಬಿಟ್ಟಂತೆ ಆಗಿತ್ತು. ನಾನು ಶಾಲೆಗೆ ಕರೆಯಿಸಿದಾಗ ಈ ಥರ ಕುಣಿಯದಿರುವ ಈ ಯುವಕರು ಇಂದು ಕಣ್ಣು ಬಿಟ್ಟಂತೆ ಬಿಟ್ಟು ಕುಳಿತುಕೊಳ್ಳುವ ಹಾಗೇ ಮಾಡಿದ್ದರು. ನಮ್ಮ ಶಿವಮಲ್ಲಪ್ಪ  ’ಗುರಾಜ್ ಸಾರ್ ನೀವು ಇನ್ನೂ ಮೂರು ದಿನದ ಸವಾಲ್ ಪದಗಳನ್ನು ನೋಡಬೇಕು ಸುತ್ತಲಿನ ಊರಿನವರು ಬಂದು ಹಾಡ್ತಾರೆ ’ ಎಂದು ಅವರೊಂದಿಗೆ ಬಿಸಿ ನೀರಿನ ಚಹಾದಂಥ ದ್ರವವನ್ನು ಹೊಟ್ಟೆಗೆ ಇಳಿಸಿಕೊಂಡು ಬೆಂಕಿಯ ಕೆಂಡವನ್ನು ನೋಡುತ್ತಾ ಊರಿನವರ ತಮಾಶೆಯ ಚೇಡಿಸುವ ಮಾತುಗಳನ್ನು ಆಲಿಸುತ್ತಾ ದೇವರ ಗುಡಿ ಎದುರಿನಲ್ಲಿ ಕುಳಿತೇ ಇದ್ದೆ. ಬೆಳಗಿನ ಸಂಬ್ರಮಕ್ಕೆ ಜನರೆಲ್ಲ ಸಿದ್ಧರಾಗಲು ನಾನು ಮುಖಕ್ಕೆ ನೀರನ್ನು ಬಡಿದು ತಯಾರಾದೆ. ಡೋಲಿಯ ಹೊತ್ತು ತಿರುಗುವ ಹೇಳಿಕೆಯನ್ನು ನೀಡುವುದು ಹೀಗೆ ಪ್ರತಿಯೊಂದನ್ನು ನೋಡುತ್ತಾ ಬೇಡಿಕೊಂಡವರು, ಫಲ ಪಡೆದವರು, ಬೇಡಿಕೊಳ್ಳುವವರು ಹೀಗೆ ಎಲ್ಲ ರೀತಿಯಲ್ಲಿ ಆ ಜಾಗ ತುಂಬಿ ಹೋಗಿತ್ತು. ಕಾಲಿಗೆ ನೀರು ಹಾಕುವುದು ಆಶೀರ್ವಾದ ಪಡೆಯುವುದು ಹೀಗೆ ಪ್ರತಿ ಹಂತದಲ್ಲೂ ಜನರ ಸಂಭ್ರಮ ಅವರ ಬಟ್ಟೆ, ಓಡಾಟ, ಮೊಗದಲ್ಲಿ ಸಂತೋಷಗಳೆಲ್ಲ ಸ್ಪಷ್ಟವಾಗಿ ಕಾಣುತ್ತಿದ್ದವು.


ದುಡಿಯಲಿಕ್ಕೆ ಹೋಗಿ ಮರಳಿ ಬಂದಿದ್ದ ಗೆಳೆಯರೆಲ್ಲ ತಾವು ತಂದಿದ್ದ ಬಾಟಲಿಗಳನ್ನು ಹೊಟ್ಟೆಗೆ ಇಳಸಿ ಬೇರಯದೇ ಆಕಾರ ತಳೆದಿರುವುದನ್ನು ಕಾಣಬಹುದಾಗಿತ್ತು. ಮಕ್ಕಳಲ್ಲಿ ಸಂಭ್ರಮವೇ ಬೇರೆ. ಮಾಲ್ದಿ, ಬಾಡೂಟ ಬೇರೆ ಬೇರೆ ಹಬ್ಬದ ತಿನಿಸುಗಳನ್ನು ತಿಂದು ಹಬ್ಬದಲ್ಲಿ ಬೆರೆತು ಹೋಗಿದ್ದರು. ಕೆಲೆವು ಮಹಿಳೆಯರಿಗೆ ಸಾಕಷ್ಟು ಕೆಲಸಗಳಿದ್ದರೆ ಇನ್ನೂ ಕೆಲವರಿಗೆ ಶೃಂಗಾರದಲ್ಲಿಯೇ ಹಬ್ಬವನ್ನು ಸವಿಯುತ್ತಿದ್ದರು. ಬೇಡಿಕೊಳ್ಳುವಲ್ಲಿ ಯಾರು ಹಿಂದೇಟು ಹಾಕುತ್ತಿರಲಿಲ್ಲ. ಎಲ್ಲರೂ ಹಬ್ಬದಲ್ಲಿ ಭಾಗುವಹಿಸುವಿಕೆ ಇದ್ದದ್ದನ್ನು  ನಾನು ಇಲ್ಲಿ ಕಾಣುತ್ತಿದ್ದೆ.

ಊರಿನ ಕುರಿತು ಹೇಲಿಕೆಯನ್ನು ಕೇಳುವಲ್ಲಿ ಹಿರಿಯರು ಹಾತೊರೆಯುವುದನ್ನು ಇಲ್ಲಿ ಕಾಣುತ್ತಿತ್ತು. ಅದು ಅವರ ಜವಾಬ್ದಾರಿಯು ಆಗಿತ್ತು. ಬರಬಹುದಾದ ಆಪತ್ತು, ಮಾಡಬೇಕಾದ ಕಾರ್ಯಗಳ ಕುರಿತು ಕೇಳಿದ ಹಿರಿಯರು ತೃಪ್ತಿಯ ಹೇಳಿಕೆಯನ್ನು ಪಡೆದು ನಂತರದಲ್ಲಿ ದೇವರನ್ನು ಮುಂದೆ ಸಾಗಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದರು. ಮುಸ್ಲಿಂರಿಗೆ ದುಃಖದ ಹಬ್ಬ ಆದ್ರೆ ಇಡೀ ಊರಲ್ಲಿ ಬೇರೆ ಹಬ್ಬಗಳಿಗೂ ಕೂಡದ ಜನರು ಮೋಹರಂನಲ್ಲಿ ತಪ್ಪದೆ ಸೇರುತ್ತಾರೆ. ಎರಡೆ ಕುಟುಂಬಗಳಿದ್ದ ಮುಸ್ಲಿಂರು ಇಂದು ಕುಟುಂಬ ವಿಂಗಡಣೆಯಿಂದಾಗಿ ಎಂಟು ಮನೆಗಳಾಗಿವೆ. ಆದರೂ ಹಬ್ಬಕ್ಕೆ ಎಲ್ಲೂ ಕುಂದು ಉಂಟಾಗದೇ ನಡೆಯಿಸಿಕೊಂಡು ಬಂದಿದ್ದಾರೆ ಊರಿನ ಹಿರಿಯರು. ನಾಟಕದ ಯೋಜನೆಯಿಂದಾಗಿ ಒಂದು ಹಬ್ಬದ ಪೂರ್ಣ ಹಿನ್ನಲೆಯನ್ನು ಜನರ ಪರಸ್ಪರ ಸೌಹಾರ್ದತೆಯನ್ನು ಕಣ್ಣಾರೆ ಕಾಣುವ ಅವಕಾಶ ಒಬ್ಬ ನಾಟಕಮೇಷ್ಟ್ರ ಆಗಿ ನಾನು ಕಂಡು ಕೊಂಡಿದ್ದೇನೆ. ನಮ್ಮ ವಿದ್ಯಾರ್ಥಿಗಳಿಗೆ, ಊರಿನೆಲ್ಲ ಸಮಸ್ತರಿಗೂ ನಾನು ಋಣಿಯಾಗಿದ್ದೇನೆ. ಮಹಾಂತೇಶ್, ಶಿವಮಲ್ಲಪ್ಪ, ಈರಣ್ಣ ಅಂಗಡಿ, ದತ್ತಾತ್ರೇಯ, ರಾಜಣ್ಣ ವಿಶೇಷವಾಗಿ ಶ್ರೀ ಕನಕರಾಯ ರೆಡ್ಡಿ ಅವರಿಗೆ ಧನ್ಯಾವಾದಗಳನ್ನು ತಿಳಿಸಲು ಇಚ್ಚಿಸುತ್ತೇನೆ. 

ಶುಕ್ರವಾರ, ನವೆಂಬರ್ 8, 2013

ಮೊಹರಂ



               ಜಾನಪದ ಹಳ್ಳಿಯ ಪ್ರಾಣ. ಅಧುನಿಕ ಶಿಕ್ಷಣವನ್ನು ಚಿಂತನೆಗೆ ಬಿಟ್ಟು ಜನರ  ಉಸಿರಿನೊಡನೆ ಬೆರೆತದ್ದು ಜಾನಪದ. ಆದರೆ ಇಂದು ನಾವು  ತಿಳಿದಂತೆ ಇದೆಯೇ ಎಂದು ಯೋಚಿಸುವಾಗ ಧನಾತ್ಮಕ ಹಾಗೂ ಋಣತ್ಮಕ ಎರಡು ಅಂಶಗಳು ಗೋಚರಿಸುತ್ತವೆ. ನಾನೊಂದು ಸಣ್ಣ ಹಳ್ಳಿಯಲ್ಲಿ ಶಿಕ್ಷಕನಾಗಿ ಕಾರ್ಯ ವಹಿಸುತ್ತಿರುವವ. ಇಂಥಹ ವಿಷಯಗಳು ಜಾಗತಿಕವಾಗಿ ಗಮನಿಸುವುದಕ್ಕಿಂತ ಸಾಮಾನ್ಯನಂತೆ ಕಾಣಲು ಬಯುಸುತ್ತೇನೆ. ಇಲ್ಲಿಯ ಜನರ ನಂಬಿಕೆಯಲ್ಲಿ ಆಧುನಿಕತೆ ಇಲ್ಲಿಯವರೆವಿಗೂ ಎಷ್ಟೇ ವಿಧದಲ್ಲಿ, ಯಾವುದೇ ರೀತಿಯಲ್ಲಿ ಪ್ರವೇಶ ಪಡೆದಿದ್ದರು ಅದು ಹಬ್ಬ ಹಾಗೂ ಆಚರಣೆಗಳಲ್ಲಿ ಎಲ್ಲವನ್ನು ಮೀರಿ ನಿಲ್ಲುತ್ತಿದೆ. ಮುಂದೆ ಬದಲಾವಣೆಗಳು ಕಾಣಬಹುದು, ಆದರೆ ಪ್ರಸ್ತುತವಾಗಿ ನಾವು ಕಾಣುವಾಗ ಸ್ಪಷ್ಟವಾಗಿದೆ. ಮೊಹರಂನ ಈ ದಿನಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ದಿನವೂ ಬಿಡದೆ ಸಂಘದ ಕೋಣೆಯಲ್ಲಿ ಸೇರಿ ಹೆಜ್ಜೆಕುಣಿತ, ರಿವಾಯಿತ್ ಪದಗಳನ್ನು ಬಿಡದೆ ಅಭ್ಯಾಸ ಮಾಡುತ್ತಿರುವ ಯುವಕರು ಅವರಿಗೆ ಮಾರ್ಗದರ್ಶನ ಮಾಡುತ್ತಿರುವ ಹಿರಿಯರನ್ನು ಕಂಡಾಗ ಮೂಲದ ಕೊಂಡಿಯ ಶಕ್ತಿಯ ಕುರಿತು ಅಶ್ಚಾರ್ಯವಾಗುತ್ತದೆ. 

                                                                                             ಮುಸ್ಲಿಂರ ಆಗಮನದಿಂದ ಅವರ ಸಾಂಸ್ಕೃತಿಕ ಹಾಗೂ ಧಾರ್ಮಿಕ ವಿಚಾರಗಳು ಎಲ್ಲ ರೀತಿಯಲ್ಲಿ ನಮ್ಮ ಜನರೊಟ್ಟಿಗೆ ಬೆರೆತವು. ಇಂದು ಹೇಗಾಗಿದೆಯೆಂದರೇ ಹಸೇನ್ ಹುಸೇನ್ ( ಪೀರ) ನು ಹಾಗೂ ಊರ ದ್ಯಾಮವ್ವ ಅಣ್ಣ ತಂಗಿ ಎಂದು ಮಾತನಾಡುವ ಹಿರಿಯರು ಧರ್ಮಗಳು ಭಿನ್ನ ಎಂದು ನೋಡುವ ಆ ಕುರಿತು ಮಾತನಾಡುವ ಪ್ರಸಂಗವೇ ಉದ್ಭವವಾಗಿಯೇ ಇಲ್ಲ. ಬಿನ್ನ ಸಮುದಾಯದ ಯುವಕರು ಒಂದೆಡೆ ಕಲೆತು ಹೆಜ್ಜೆ ಹಾಕುವ ಈ ಕ್ಷಣಗಳು ಮಧುರವೆಂದು ಹೇಳುತ್ತೇನೆ.

    ನಮ್ಮ ಜಹಗೀರಗುಡದೂರಿನ ಗ್ರಾಮದಿಂದ ಬದುಕಿಗಾಗಿ 
ದೂರದ ಮಂಗಳೂರು,ಉಡುಪಿ, ಬೆಂಗಳೂರು, ಗೋವ ಹೀಗೆ ನಾನಾ ಮಹಾ ನಗರಗಳಿಗೆ ಗುಳೆ ಹೊರಟು ಹೋಗಿ ದುಡಿಯುತ್ತಿರುವ ಹಲವು ಜನರಿದ್ದಾರೆ. ಆದರೆ ನಮ್ಮದೇ ಆಗಿ ಹೋಗಿರುವ ಈ ಮೊಹರಂನ ದಿನಗಳನ್ನು ತಪ್ಪಿಸಿಕೊಳ್ಳದೆ ಅಲಾವಿ ಸುತ್ತಾ ಒಂದು ಬಾರಿ ಹೆಜ್ಜೆ ಹಾಕದಿದ್ದರೆ ಸಮಾಧಾನವಿಲ್ಲ ಎಂದು ಊರಿಗೆ ಮರಳಿ ಬರುತ್ತಿದ್ದ ಯುವಕನ ಮಾತಿನಿಂದ ತಿಳಿದುಕೊಂಡೆ. ಹಬ್ಬದ ಸಂಭ್ರಮದ ಕಾವು ನಿಧಾನವಾಗಿ ಮೇಲೇರುತ್ತಿದೆ. ಮೊಹರಂನ ಕೊನೆಯ ಕತ್ತಲ ರಾತ್ರಿಯ ದಿನ ಹೆಜ್ಜೆಕುಣಿತದ ಆಟವನ್ನು ಸವಿಯಬೇಕು. ಒಬ್ಬ ನಾಟಕ ಶಿಕ್ಷಕನಾಗಿ ಇಂಥಹ ಕ್ಷಣಗಳನ್ನು ಆಸ್ವಾದಿಸುವುದು ಖುಷಿ ಕೊಡುತ್ತದೆ. ಸಂಭ್ರಮದ ಈ ದಿನಗಳನ್ನು ನಾನು ಅವರಂತೆಯೇ ಬದಕಲು ಇಚ್ಚಿಸುತ್ತೇನೆ.
                       


ಬುಧವಾರ, ನವೆಂಬರ್ 6, 2013

ಗ್ರಂಥಾಲಯ

ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಓದುವದರಲ್ಲಿ ಓದುಗನ ಮನಸ್ಸು ಪಕ್ಷಿಯಂತೆ ಸ್ವತಂತ್ರ ಉಡ್ಡಾಣದಲ್ಲಿ ಹಾರತಿರುತ್ತದೆ. ಗ್ರಂಥಾಲಯದಲ್ಲಿ ಓದುವ ಜನರು ಸಹಸ್ರಾರು ವಿಚಾರಗಳನ್ನು ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವ ಸಾಮಾರ್ಥ್ಯವನ್ನು ಹೊಂದಿರುತ್ತಾರೆ. ಓದುಗರ ಪ್ರತಿಭೆಯನ್ನು ಉದ್ಧೀಪನಗೊಳಿಸಿ ಸಾಮರ್ಥ್ಯವನ್ನು ಹೆಚ್ಚಿಸುತ್ತಾ, ಪುಸ್ತಕಗಳು ಜ್ಞಾನವನ್ನು ಹಂಚುತ್ತವೆ. ಪುಸ್ತಕದಲ್ಲಿ ಲೀನನಾಗುವ ಮನುಷ್ಯನಿಗೆ ಸಂಪೂರ್ಣವಾದ ಅವಕಾಶವನ್ನು ಗ್ರಂಥಾಲಯ ನೀಡುತ್ತದೆ. ಪುಸ್ತಕಗಳಿಲ್ಲದ ಮನೆ, ಗ್ರಂಥಾಲಯವಿಲ್ಲದ ಶಾಲೆ - ಕಾಲೇಜು,
ದೇವರಿಲ್ಲದ ಗುಡಿಯೆಂದು ಒಬ್ಬರು ವರ್ಣಿಸುತ್ತಾರೆ. ಪುಸ್ತಕದ ಉತ್ತಮ ಅಂಶಗಳ ಕುರಿತು ಎಲ್ಲರೂ ಸದಾ ಮಾತನಾಡುವಂತೆ ಆಗಬೇಕು. ಪುಸ್ತಕದಲ್ಲಿರುವ ಜ್ಞಾನ ಎಲ್ಲರಲ್ಲೂ ಬೆಳಕಿನಂತೆ ಹರಡಬೇಕು. ಪ್ರತಿದಿನ ಹೊಸ ಪುಸ್ತಕಗಳು ಹೊರಬರುತ್ತಲೇ ಇರುತ್ತವೆ. ಕೊಂಡು ಓದುಲು ಸಾಧ್ಯಾವಾಗದೆ ಇದ್ದಾಗ ನಾವು ಗ್ರಂಥಾಲಯದ ಸದ್ಬಳಕೆ ಸಂಪೂರ್ಣವಾಗಿ ಮಾಡಿಕೊಳ್ಳಬೇಕು. ನಾಗರಿಕತೆ, ಸಂಸ್ಕೃತಿ, ವಿಜ್ಞಾನ, ಭಕ್ತಿ, ಕಥೆ-ಕವನ, ಕಾವ್ಯ, ವಿಮರ್ಶೆ ಹೀಗೆ ನಾನಾ ತರಹದ ವಿಚಾರಗಳು ನಮ್ಮೊಳಗೆ ಹೊಯ್ದಾಡುತ, ಜ್ಞಾನ ವೃದ್ಧಿಯಾಗಲು ಸಾಧ್ಯ. 

               ಅದೇ ರೀತಿ ನಮ್ಮ ಊರು, ಬದುಕು, ಜೀವನ ದಿನನಿತ್ಯದ ಘಟನೆಗಳನ್ನು  ಇಟ್ಟುಕೊಂಡು ಹೊಸತನದ ಪುಸ್ತಕ ರಚಿಸುವಂಥ ವಾತವರಣ ನಾವು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಾಗಿದೆ. ನಾವು ನಮ್ಮದೇ ಪುಸ್ತಕವನ್ನು ಹೊರ ತರುವಲ್ಲಿ ಪ್ರಯತ್ನ ಮಾಡುತ್ತೇವೆ. 

ರವಿಕುಮಾರ ಬಾಳಪ್ಪ ಮುಶಿಗೇರಿ 
೧೦ ನೇ ತರಗತಿ 

ಗುರುವಾರ, ಅಕ್ಟೋಬರ್ 31, 2013

ರಾಜ್ಯೋತ್ಸವ ಪ್ರಶಸ್ತಿ



ಕೊಪ್ಪಳ ಜಿಲ್ಲೆಯ ಕುಷ್ಟಗಿಯವರಾದ ಶರಣಪ್ಪ ವಡಗೇರಿ ಜಾನಪದ ಕಲಾವಿದರಿಗೆ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.  ನಮ್ಮ ಎಲ್ಲ ಜಹಗೀರಗುಡದೂರಿನ ಮಕ್ಕಳು, ಶಿಕ್ಷಕರು ಹಾಗೂ ಗ್ರಾಮಸ್ಥರಿಂದ ಜೊತೆಗೆ ನನ್ನ ವಯುಕ್ತಿಕವಾಗಿ ಅಭಿನಂದನೆಗಳನ್ನು ತಿಳಿಸುತ್ತೇನೆ.